06/24/2022
ರಾಜ್ಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೋವಿಡ್ ಹಾಗೂ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಶ್ಲಾಘಿಸಿದರು.
ರಾಜಭವನದಲ್ಲಿ ಇಂದು NTT ಡಾಟಾ ಸಂಸ್ಥೆಯು ನೀಡಿದ 37 ಲಕ್ಷ ಮೌಲ್ಯದ ವಾಹನ ಹಾಗೂ ರೆಡ್ ಕ್ರಾಸ್ ಸಂಸ್ಥೆ ಕೇಂದ್ರ ಕಚೇರಿ, ನವದೆಹಲಿಯಿಂದ ಬಂದಂತಹ ಕೋವಿಡ್ ತಪಾಸಣಾ ವಾಹನವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಈ ವಾಹನಗಳು ರಾಜ್ಯದ ತುಂಬೆಲ್ಲ ಸಂಚರಿಸಿ ಜನರ ಸೇವೆಗೆ ಅನಿಯಾಗಲಿ ಎಂದು ಶುಭ ಹಾರೈಸಿದರು.