ನಮ್ಮ ಬಿರ್ವೆರ್ ಉಡುಪಿ

  • Home
  • Oman
  • Muscat
  • ನಮ್ಮ ಬಿರ್ವೆರ್ ಉಡುಪಿ

ನಮ್ಮ ಬಿರ್ವೆರ್ ಉಡುಪಿ "ಒಂದೇ ಜಾತೀ ಒಂದೇಮತ ಒಂದೇ ದೇವರು."
🙏🙏🙏💛💛💛🌹🌹🌹
ಜೈ ಬಿರುವೆ.🦁🦁🐯🐯🐯🦁

🌹 ನಮ್ಮ ಸಮಾಜದ ಹೆಮ್ಮೆ 🌹ರಾಜ್ಯ ಪೊಲೀಸ್ ಇಲಾಖೆಯ 2025–2026 ನೇ ಸಾಲಿನ ಪ್ರತಿಷ್ಠಿತ ಡಿಜಿ-ಐಜಿಪಿ ಕಮೆಂಡೇಶನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾದ ನಮ...
24/06/2026

🌹 ನಮ್ಮ ಸಮಾಜದ ಹೆಮ್ಮೆ 🌹

ರಾಜ್ಯ ಪೊಲೀಸ್ ಇಲಾಖೆಯ 2025–2026 ನೇ ಸಾಲಿನ ಪ್ರತಿಷ್ಠಿತ ಡಿಜಿ-ಐಜಿಪಿ ಕಮೆಂಡೇಶನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾದ ನಮ್ಮ ಪ್ರೀತಿಯ ಶ್ರೀಯುತ ಮಂಜುನಾಥ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐🎉

ನಿಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಶಿಸ್ತು ಹಾಗೂ ಸಮಾಜಮುಖಿ ಸೇವೆಗೆ ಸಂದ ಈ ಗೌರವ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇವೆ.

ಅಭಿನಂದನೆಗಳು ಸರ್...! 💐🏅👏

"ಸಾಧನೆಗೆ ಗೌರವ ಸಿಕ್ಕಾಗ, ಸಮಾಜಕ್ಕೂ ಹೆಮ್ಮೆ ಹೆಚ್ಚುತ್ತದೆ."

💐👏🏆

ಜಾತಿ, ಮತ, ಧರ್ಮಗಳ ಎಲ್ಲೆಗಳನ್ನು ಮೀರಿ ಮಾನವೀಯತೆಯನ್ನೇ ಪರಮ ಧರ್ಮವೆಂದು ನಂಬಿದ ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ...
24/06/2026

ಜಾತಿ, ಮತ, ಧರ್ಮಗಳ ಎಲ್ಲೆಗಳನ್ನು ಮೀರಿ ಮಾನವೀಯತೆಯನ್ನೇ ಪರಮ ಧರ್ಮವೆಂದು ನಂಬಿದ ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ತಮ್ಮ ಬದುಕಿನ ಮಾರ್ಗದರ್ಶಕವಾಗಿಸಿಕೊಂಡು, ಸಮಾಜದ ಒಳಿತಿಗಾಗಿ ಬಿರುವೆರ್ ಕುಡ್ಲ ಎಂಬ ಬಲಿಷ್ಠ ಸಂಘಟನೆಯನ್ನು ಕಟ್ಟಿದ ಅಪರೂಪದ ನಾಯಕ ಉದಯ್ ಪೂಜಾರಿ.

ಸಮಾಜದ ಕಷ್ಟಕಾರ್ಪಣ್ಯಗಳಿಗೆ ಮರುಗುವ ಹೃದಯ ವೈಶಾಲ್ಯ, ನೋವುಂಡವರ ಕಣ್ಣೀರನ್ನು ಒರೆಸುವ ಕರುಣೆ, ಸಂಕಷ್ಟದಲ್ಲಿರುವವರಿಗೆ ಆಸರೆಯಾಗುವ ಮಾನವೀಯತೆ ಇವರ ವ್ಯಕ್ತಿತ್ವದ ಬಹುದೊಡ್ಡ ಶಕ್ತಿ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ಅನೇಕ ಕುಟುಂಬಗಳ ಬದುಕಿನಲ್ಲಿ ಆಶಾಕಿರಣವಾಗಿ ಬೆಳಗಿದ್ದಾರೆ.

ಬಿರುವೆರ್ ಕುಡ್ಲ ಸಂಘಟನೆಯ ಮೂಲಕ ಯುವಜನತೆಯನ್ನು ಒಗ್ಗೂಡಿಸಿ, ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ರಕ್ತದಾನ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ನೆರವು, ಬಡ ಮತ್ತು ನಿರ್ಗತಿಕರ ಸಹಾಯ ಸೇರಿದಂತೆ ಹಲವು ಮಾನವೀಯ ಕಾರ್ಯಗಳ ಮೂಲಕ ಸಂಘಟನೆಯನ್ನು ಜನಸಾಮಾನ್ಯರ ವಿಶ್ವಾಸದ ಪ್ರತೀಕವನ್ನಾಗಿ ರೂಪಿಸಿದ್ದಾರೆ.

ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯ ಉಳಿವಿನ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರು, ಯುವ ಪೀಳಿಗೆಗೆ ಸಮಾಜಸೇವೆ ಹಾಗೂ ಸಂಸ್ಕೃತಿ ಪ್ರೇಮದ ಮೌಲ್ಯಗಳನ್ನು ಬಿತ್ತುವ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರ ಸರಳತೆ, ಸಜ್ಜನಿಕೆ, ನಾಯಕತ್ವದ ಗುಣಗಳು ಹಾಗೂ ಎಲ್ಲರನ್ನು ಆತ್ಮೀಯವಾಗಿ ಬೆಸೆಯುವ ವ್ಯಕ್ತಿತ್ವವು ಅವರನ್ನು ಜನಮನದ ನಾಯಕನನ್ನಾಗಿ ಮಾಡಿದೆ.

ಸಂಘಟನೆಯ ಯಶಸ್ಸಿನ ಹಿಂದೆ ಉದಯ್ ಪೂಜಾರಿ ಅವರ ದೂರದೃಷ್ಟಿ, ಪರಿಶ್ರಮ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಅಡಗಿದೆ. ಸಮಾಜದ ಪ್ರತಿಯೊಬ್ಬರ ನೋವನ್ನು ತಮ್ಮ ನೋವೆಂದು ಭಾವಿಸಿ ಸ್ಪಂದಿಸುವ ಅವರು, ಸೇವೆಯ ಮೂಲಕವೇ ನಿಜವಾದ ಸಂತೋಷ ಸಿಗುತ್ತದೆ ಎಂಬುದನ್ನು ತಮ್ಮ ಕಾರ್ಯಗಳಿಂದ ಸಾಬೀತುಪಡಿಸಿದ್ದಾರೆ.

ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಸೇವೆ, ಸೌಹಾರ್ದತೆ ಮತ್ತು ಸಾಮಾಜಿಕ ಕಳಕಳಿಯ ಪ್ರತೀಕವಾಗಿ ಗುರುತಿಸಿಕೊಂಡಿರುವ ತುಳುನಾಡ ಮಾಣಿಕ್ಯ ಉದಯ್ ಪೂಜಾರಿ ಅವರ ಸಮಾಜಮುಖಿ ಸೇವೆಗಳು ಇನ್ನಷ್ಟು ವಿಸ್ತಾರಗೊಂಡು, ಇನ್ನಷ್ಟು ಜನರ ಬದುಕಿಗೆ ಬೆಳಕಾಗಲಿ ಎಂಬುದು ತುಳುನಾಡಿನ ಜನತೆಯ ಹಾರೈಕೆ. 🌹🙏🌺
Best wishes from
TEAM PUNYABHOOMI
🙏🙏🙏🔥🔥❣️❣️

ಉಡುಪಿ ಭಾಗದಲ್ಲಿ ಮಾತೃಹೃದಯಿಯಾಗಿ ಎಲ್ಲರ ಮನ-ಮನಗಳಲ್ಲಿ ಕೇಳಿಬರುವ ಹೆಸರು ಗೀತಾಂಜಲಿ ಸುವರ್ಣ..ಮನುಷ್ಯನ ಬದುಕಿನ ನಿಜವಾದ ಸಾರ್ಥಕತೆ ತನ್ನಷ್ಟಕ್ಕ...
24/06/2026

ಉಡುಪಿ ಭಾಗದಲ್ಲಿ ಮಾತೃಹೃದಯಿಯಾಗಿ ಎಲ್ಲರ ಮನ-ಮನಗಳಲ್ಲಿ ಕೇಳಿಬರುವ ಹೆಸರು ಗೀತಾಂಜಲಿ ಸುವರ್ಣ..

ಮನುಷ್ಯನ ಬದುಕಿನ ನಿಜವಾದ ಸಾರ್ಥಕತೆ ತನ್ನಷ್ಟಕ್ಕೆ ತಾನು ಬದುಕುವುದರಲ್ಲಿ ಅಲ್ಲ, ಬೇರೆಯವರ ಬದುಕಿಗೆ ಬೆಳಕಾಗುವುದರಲ್ಲಿ ಇದೆ. ಈ ಮಾತಿಗೆ ಜೀವಂತ ಉದಾಹರಣೆಯಾಗಿ ಉಡುಪಿ ಭಾಗದಲ್ಲಿ ಜನಮನಗಳಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಗೀತಾಂಜಲಿ ಸುವರ್ಣ. ಮಮತೆ, ಕರುಣೆ, ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಅನೇಕ ಜನರ ಬದುಕಿನಲ್ಲಿ ಆಶಾಕಿರಣವಾಗಿ ಮೂಡಿರುವ ಅವರು, ಅಕ್ಷರಶಃ ಮಾತೃಹೃದಯಿಯಾಗಿ ಗುರುತಿಸಿಕೊಂಡಿದ್ದಾರೆ.

ತನ್ನದೇ ನೋವು, ಸಂಕಷ್ಟಗಳು ಮತ್ತು ಜೀವನದ ಸವಾಲುಗಳ ನಡುವೆಯೂ ಬೇರೆಯವರ ನೋವಿಗೆ ಸ್ಪಂದಿಸುವ ಅವರ ಹೃದಯ ವೈಶಾಲ್ಯ ನಿಜಕ್ಕೂ ಅಪರೂಪ. ಯಾರಿಗಾದರೂ ಕಷ್ಟ ಬಂದಿದೆ ಎಂದರೆ ಅದು ತಮ್ಮ ಮನೆಯ ಸಮಸ್ಯೆಯೇ ಎಂಬ ಭಾವನೆಯೊಂದಿಗೆ ನೆರವಿನ ಹಸ್ತ ಚಾಚುವ ಗುಣ ಅವರದು. ಸಂಕಷ್ಟದಲ್ಲಿರುವ ಕುಟುಂಬಗಳು, ಅನಾರೋಗ್ಯದಿಂದ ಬಳಲುತ್ತಿರುವವರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರು ಹಾಗೂ ಆಸರೆಯಿಲ್ಲದ ಅನೇಕ ಜೀವಗಳಿಗೆ ಅವರು ಧೈರ್ಯದ ಮಾತು, ಸಾಂತ್ವನದ ಸ್ಪರ್ಶ ಮತ್ತು ಸಹಾಯದ ನೆರಳಾಗಿ ನಿಂತಿದ್ದಾರೆ.

ಗೀತಾಂಜಲಿ ಸುವರ್ಣ ಅವರ ವ್ಯಕ್ತಿತ್ವದ ದೊಡ್ಡ ವಿಶೇಷತೆ ಎಂದರೆ, ಅವರು ಮಾಡುವ ಸೇವೆಯಲ್ಲಿ ಯಾವುದೇ ಪ್ರಚಾರದ ಹಂಬಲವಿಲ್ಲ. ಮೌನವಾಗಿ, ನಿಸ್ವಾರ್ಥವಾಗಿ ಮತ್ತು ಮಾನವೀಯತೆಯ ನೆಲೆಯಲ್ಲಿ ನಡೆಯುವ ಅವರ ಕಾರ್ಯಗಳು ಅನೇಕ ಜನರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ. ಅವರ ಒಂದು ಸಾಂತ್ವನದ ಮಾತು, ಒಂದು ಪ್ರೋತ್ಸಾಹದ ನುಡಿ ಮತ್ತು ಒಂದು ಸಹಾಯದ ಕೈ ಅನೇಕ ಕುಟುಂಬಗಳಿಗೆ ಬದುಕುವ ಶಕ್ತಿಯಾಗಿದೆ.

ಸಮಾಜದ ನೋವುಗಳಿಗೆ ಸ್ಪಂದಿಸುವ ಹೃದಯ, ಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸುವ ಮಮತೆ, ಎಲ್ಲರನ್ನೂ ಸಮಾನವಾಗಿ ಕಾಣುವ ಮಾನವೀಯತೆ ಮತ್ತು ನೊಂದವರ ಮುಖದಲ್ಲಿ ನಗು ಮೂಡಿಸುವ ತವಕ – ಇವೆಲ್ಲವೂ ಗೀತಾಂಜಲಿ ಸುವರ್ಣ ಅವರನ್ನು ಸಮಾಜದಲ್ಲಿ ವಿಶಿಷ್ಟ ವ್ಯಕ್ತಿತ್ವವಾಗಿ ಗುರುತಿಸುವಂತೆ ಮಾಡಿವೆ. ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಹಲವಾರು ಕುಟುಂಬಗಳ ಆಶಾಕಿರಣ, ಅನೇಕರ ಆತ್ಮವಿಶ್ವಾಸದ ಮೂಲ ಮತ್ತು ಸಮಾಜಕ್ಕೆ ಸ್ಪೂರ್ತಿಯ ಚೇತನ.

"ತಾಯಿಯ ಮಮತೆ ರಕ್ತ ಸಂಬಂಧಕ್ಕೆ ಮಾತ್ರ ಸೀಮಿತವಲ್ಲ; ಸಮಾಜದ ಪ್ರತಿಯೊಂದು ನೋವಿಗೂ ಮಿಡಿಯುವ ಹೃದಯವೇ ನಿಜವಾದ ಮಾತೃಹೃದಯ. ಅಂತಹ ಅಪರೂಪದ ಹೃದಯದ ಹೆಸರು ಗೀತಾಂಜಲಿ ಸುವರ್ಣ." 🌹🙏🏻

ಅವರ ಸೇವಾ ಪಯಣ ಇನ್ನಷ್ಟು ಯಶಸ್ವಿಯಾಗಲಿ, ಮಾನವೀಯತೆಯ ದೀಪವಾಗಿ ಇನ್ನಷ್ಟು ಜನರ ಬದುಕನ್ನು ಬೆಳಗಿಸಲಿ ಎಂಬುದು ಎಲ್ಲರ ಹಾರೈಕೆ. ✨
Best wishes from.
TEAM PUNYABHOOMI

ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದರ್ಶನ ಪಾತ್ರಿ ದೈವಾಧೀನ..ಬೋಳ ಮಲ್ಲಿಗೆ ಗರಡಿ ಎಂಬ ಖ್ಯಾತಿ ಹೊಂದಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಬೋಳದಲ...
24/06/2026

ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದರ್ಶನ ಪಾತ್ರಿ ದೈವಾಧೀನ..

ಬೋಳ ಮಲ್ಲಿಗೆ ಗರಡಿ ಎಂಬ ಖ್ಯಾತಿ ಹೊಂದಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಬೋಳದಲ್ಲಿ ಚೆನ್ನಯ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಲ್ಲೊಟ್ಟೆ ರಮೇಶ್ ಸುವರ್ಣ ರವರು ತಾ- 21/06/2026 ರ ರವಿವಾರ ಅಸೌಖ್ಯದಿಂದ ನಿಧನರಾದರು.

ಶ್ರೀಯುತರು ದಿ. ಬಾಬು ಪೂಜಾರಿ ಹಾಗೂ ದಿ. ಅಪ್ಪಿ ಪೂಜಾರ್ತಿಯವರ 5 ಜನ ಗಂಡು ಮಕ್ಕಳು ಹಾಗೂ 1 ಹೆಣ್ಣು ಮಗಳಲ್ಲಿ 4ನೇಯವರಾಗಿ ಬೋಳ ಗ್ರಾಮದಲ್ಲಿ ಜನಿಸಿ ಬಾಲ್ಯದಿಂದಲೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಭಕ್ತರಾಗಿ ಬೋಳ ಮಲ್ಲಿಗೆ ಗರಡಿ, ಕಲ್ಯಾ ಗರಡಿ, ಮುಂಡೂರು ಗರಡಿಯಲ್ಲಿ ಚಾಕಿರಿ ಮಾಣಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇವರ ಭಕ್ತಿಗೊಳಿದ ಬೈದರ್ಕಳರು ಜೀರ್ಣೋದ್ಧಾರಗೊಂಡ ನೂತನ ಬೋಳ ಮಲ್ಲಿಗೆ ಗರಡಿಯಲ್ಲಿ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುವ ಯೋಗವನ್ನು ನೀಡಿದರು. ಅಷ್ಟು ಮಾತ್ರವಲ್ಲದೆ ಶ್ರೀಯುತರು ಸಾಮಾಜಿಕ ಕೆಲಸ ಕಾರ್ಯದಲ್ಲೂ ಆಸಕ್ತಿ ಹೊಂದಿದ್ದು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ(ರಿ.), ಬೋಳದಲ್ಲಿ ಗೌರವ ಸದಸ್ಯರಾಗಿ, ಬಿಲ್ಲವ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀಯುತರು ತಮ್ಮ ಧರ್ಮ ಪತ್ನಿಯಾದ ಸುಜಾತ ಹಾಗೂ ರಕ್ಷಿತ್ ಮತ್ತು ಸುರಕ್ಷ ಎಂಬ ಮಕ್ಕಳ ಸಹಿತವಾಗಿ ಅಪಾರ ಬಂಧು ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಸಂಘಟನಾ ಚತುರ, ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಸಕ್ರಿಯ ಸೇವಾ ಸೇನಾನಿ, ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಮ...
23/06/2026

ಸಂಘಟನಾ ಚತುರ, ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಸಕ್ರಿಯ ಸೇವಾ ಸೇನಾನಿ, ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಮನ ಗೆದ್ದಿರುವ ಮನೋಜ್ ಎನ್. ಸಾಲ್ಯಾನ್.

ಸದಾ ನಗುಮೊಗದೊಂದಿಗೆ ಎಲ್ಲರೊಂದಿಗೆ ಬೆರೆತು ಬಾಳುವ ವಿಶೇಷ ಗುಣ, ಸ್ನೇಹಪರ ವ್ಯಕ್ತಿತ್ವ ಹಾಗೂ ಸೇವಾ ಮನೋಭಾವದಿಂದ ಜನಮನ ಗೆದ್ದಿರುವ ಮನೋಜ್ ಎನ್. ಸಾಲ್ಯಾನ್ ಅವರು ಸಮಾಜದ ಹೆಮ್ಮೆಯ ವ್ಯಕ್ತಿತ್ವ.ಯಾವುದೇ ಕೆಲಸವನ್ನು ನೀಡಿದರೆ ಚಾಚು ತಪ್ಪದೆ ನಿಭಾಯಿಸುವ ಚಲಗಾರ,ತನ್ನ ಸರಳತೆ, ಸಮಯಪ್ರಜ್ಞೆ ಹಾಗೂ ಕಾರ್ಯನಿಷ್ಠೆಯಿಂದ ಎಲ್ಲರ ಮನ ಗೆದ್ದ ವ್ಯಕ್ತಿತ್ವ. ಜವಾಬ್ದಾರಿಯನ್ನು ಹೊತ್ತರೆ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಛಲ ಮತ್ತು ಶ್ರಮ ಇವರ ವಿಶೇಷತೆ.

ತಾನಾಯಿತು ತನ್ನ ಪಾಡಾಯಿತು ಎನ್ನುವ ಈ ಸ್ವಾರ್ಥಮಯ ಜಗದಲಿ,ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನಿಸ್ವಾರ್ಥವಾಗಿ ದುಡಿಯುವ ಇವರ ವ್ಯಕ್ತಿತ್ವ ನಿಜಕ್ಕೂ ಅಪರೂಪದದ್ದು.ಇತರರ ನೋವಿಗೆ ಸ್ಪಂದಿಸುವ ಮಾನವೀಯ ಹೃದಯ, ಸಮಾಜದ ಒಳಿತಿಗಾಗಿ ಸದಾ ತುಡಿವ ಸೇವಾ ಮನೋಭಾವ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಸರಳ ಸ್ವಭಾವ ಇವರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
ಇಂತಹ ಮಹನೀಯ ವ್ಯಕ್ತಿತ್ವವು ಸಮಾಜಕ್ಕೆ ಸದಾ ಪ್ರೇರಣೆಯಾಗಿರಲಿ.
ತಮ್ಮ ನಾಯಕತ್ವ, ಸಂಘಟನಾ ಕೌಶಲ್ಯ ಹಾಗೂ ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದಲ್ಲಿ ಮಾದರಿಯಾಗಿರುವ ನೀವು ಇನ್ನಷ್ಟು ಯಶಸ್ಸು, ಗೌರವ ಮತ್ತು ಜನಸೇವೆಯ ಅವಕಾಶಗಳನ್ನು ಪಡೆಯಲಿ. ನಿಮ್ಮ ಸೇವಾ ಪಯಣ ನಿರಂತರವಾಗಿ ಸಾಗುತ್ತಾ ಸಮಾಜಕ್ಕೆ ಪ್ರೇರಣೆಯಾಗಲಿ.

Best Wishes From
TEAM PUNYABHOOMI 🌹🙏🏻

ನುಡಿಮುತ್ತುಸತ್ಯೋಗು ಪುದರ್ ಆಯ್ನಾರ್ ನಂಬಿನಕ್ಷೆಗ್ ಇಂಬುನು ಕೊರ್ಪಿನಾರ್ ತುಳುನಾಡುಡ್ ಮಲ್ಲಾತಿಗೆಡ್ ಮೆರೆಪುನಾರ್ ಕಷ್ಟನ್ ಕಾರ್ಣಿಕಡ್ ದೂರ ಮನ್...
23/06/2026

ನುಡಿಮುತ್ತು

ಸತ್ಯೋಗು ಪುದರ್ ಆಯ್ನಾರ್ ನಂಬಿನಕ್ಷೆಗ್ ಇಂಬುನು ಕೊರ್ಪಿನಾರ್ ತುಳುನಾಡುಡ್ ಮಲ್ಲಾತಿಗೆಡ್ ಮೆರೆಪುನಾರ್ ಕಷ್ಟನ್ ಕಾರ್ಣಿಕಡ್ ದೂರ ಮನ್ಸುನ ತುಡರ್ ಈರ್ ಅಜ್ಜ.....

🙏ಸ್ವಾಮಿ ಕೊರಗಜ್ಜ🙏

ಅಗ್ನಿವೀ‌ರ್ ಜೆಡಿ ಹುದ್ದೆಗೆ ಬೈಂದೂರಿನ ಸ್ವಸ್ತಿಕ್ ಪೂಜಾರಿ ಆಯ್ಕೆ..ಭಾರತೀಯ ಸೇನೆಯ ಅಗ್ನಿವೀರ್ ಜೆಡಿ ಹುದ್ದೆಗೆ ಬೈಂದೂರು ತಾಲೂಕು ಯಡ್ತರೆ ಗ್ರ...
23/06/2026

ಅಗ್ನಿವೀ‌ರ್ ಜೆಡಿ ಹುದ್ದೆಗೆ ಬೈಂದೂರಿನ ಸ್ವಸ್ತಿಕ್ ಪೂಜಾರಿ ಆಯ್ಕೆ..

ಭಾರತೀಯ ಸೇನೆಯ ಅಗ್ನಿವೀರ್ ಜೆಡಿ ಹುದ್ದೆಗೆ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಸ್ವಸ್ತಿಕ್ ಪೂಜಾರಿ ಆಯ್ಕೆಯಾಗಿದ್ದಾರೆ. ಇವರು ಕಾಳುಸೀತು ಮನೆ ನಾಕಟ್ಟೆ ಇಲ್ಲಿನ ನಿವಾಸಿ ಹೊನ್ನಪ್ಪ ಪೂಜಾರಿ ಮತ್ತು ಸೀತು ಪೂಜಾರಿ ಅವರ ಪುತ್ರ.

ನಮ್ಮ ಪಸಂದ್ರೊನು ಪೊರ್ಲು ದೀಪಿನವು ನಮ್ಮ ಜಬದಾರಿ.ಪಸಂದ್ರದ ಮಲ್ಲ ಇಂಬು ಪಂಡ ಅವು ಕಡಲ್...ಕಡಲ್‌ನ್ ದೇವೆರ್‌ಲಕ ನಮ  ತೂವೊಂದು ಬೈದ...ಅಂಚಿನ ಕಡಲ...
23/06/2026

ನಮ್ಮ ಪಸಂದ್ರೊನು ಪೊರ್ಲು ದೀಪಿನವು ನಮ್ಮ ಜಬದಾರಿ.
ಪಸಂದ್ರದ ಮಲ್ಲ ಇಂಬು ಪಂಡ ಅವು ಕಡಲ್...
ಕಡಲ್‌ನ್ ದೇವೆರ್‌ಲಕ ನಮ ತೂವೊಂದು ಬೈದ...
ಅಂಚಿನ ಕಡಲ್‌ದ ಬರಿ ಇನಿ ಕೋಡೆಡ್ ಕಜವುಡ್ ದಿಂಜಿದ್ ಪೋತುಂಡು..

ಉಂದೇ ಐತಾರ 28 ತೇದಿಗ್ ನಮ್ಮ ಕಡಲ್‌ದ ಬರಿತ ಕಜವುನು ದೆತ್ತ್‌ದ್ ಪೊರ್ಲು ಮಲ್ಪುಗ...

ಬಲೆ ತುಲುವ ಬಂಧುಲೆ ನಮ್ಮ ಕಡಲ್‌ನ್ ನಮ ಪೊರ್ಲು ದೀಕ....

📢 ಬೀಚ್ ಕ್ಲೀನಿಂಗ್ ಡ್ರೈವ್ 📅 28-06-2026 (ಐತಾರ) 📍 ಪಣಂಬೂರು ಬೀಚ್ ⏰ ಬೆಳ್ಳಗ್ಗೆ 8:00 ಗಂಟೆ 💙🌊

 #ಭಾವಪೂರ್ಣ_ಶ್ರದ್ಧಾಂಜಲಿ.🙏🏽💐ಬಾರ್ಕೂರು ನಾಗರಮಠ ನಾರಾಯಣ ಬಂಗೇರ ವಿಧಿವಶ..ಯಶವಂತಪುರ ಸೇವಾದಳದ ಸಂಚಾಲಕರಾದ ಶ್ರೀ ಕೃಷ್ಣ ಬಂಗೇರ ಅವರ ತಂದೆಯವರಾದ...
23/06/2026

#ಭಾವಪೂರ್ಣ_ಶ್ರದ್ಧಾಂಜಲಿ.🙏🏽💐

ಬಾರ್ಕೂರು ನಾಗರಮಠ ನಾರಾಯಣ ಬಂಗೇರ ವಿಧಿವಶ..

ಯಶವಂತಪುರ ಸೇವಾದಳದ ಸಂಚಾಲಕರಾದ ಶ್ರೀ ಕೃಷ್ಣ ಬಂಗೇರ ಅವರ ತಂದೆಯವರಾದ ಶ್ರೀ ನಾರಾಯಣ ಬಂಗೇರ ನಾಗರಮಠ ಬಾರ್ಕೂರು ಅವರುಇಂದು ದೈವಾಧೀನರಾದರು ತಿಳಿಸಲು ವಿಷಾಧಿಸುತ್ತೇವೆ..
ಹಲವಾರು ವರ್ಷಗಳ ಕಾಲ ನಾರಾಯಣ ಬಂಗೇರ ಅವರು ಬೆಣ್ಣೆಕುದ್ರು ಶ್ರೀ ಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನದ ದೈವ ಪಾತ್ರಿ ಯಾಗಿ ಸೇವೆ ಸಲ್ಲಿಸಿರುತ್ತಾರೆ.

ಮೃತರ ಅಂತಿಮ‌ ವಿಧಿವಿಧಾನಗಳು ನಾಳೆ‌ ಬೆಳಿಗ್ಗೆ ಅವರ ಸ್ವಗೃಹದಲ್ಲಿ ಜರಗಲಿದೆ..

ಅಗಲಿದ ಹಿರಿಯರ ಆತ್ಮಕ್ಕೆ ಸದ್ಗತಿ‌ ಸಿಗಲಿ. ಕುಟಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅನುಗ್ರಹಿಸಲಿ.🙏💐

#ಓಂ_ಶಾಂತಿ.🙏💐

23/06/2026

ಸ್ವರ : ಪ್ರತ್ಯುಷಾ ಪೂಜಾರಿ ಪುತ್ತೂರು ಹರಿ ಓಂ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳುತ್ತಾರೆ..

Address

Muscat
Muscat
123

Telephone

+96878234272

Website

Alerts

Be the first to know and let us send you an email when ನಮ್ಮ ಬಿರ್ವೆರ್ ಉಡುಪಿ posts news and promotions. Your email address will not be used for any other purpose, and you can unsubscribe at any time.

Share