Arya Charitable Trust

Arya Charitable Trust Arya Charitable Trust A registered non-profit organization dedicated to social service

*ವಾತ್ಸಲ್ಯ ಉಡುಪಿ ಜಿಲ್ಲೆ* *ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ), ಉಡುಪಿ,*  *ಆರ್ಯ ಚಾರಿಟೇಬಲ್‌ ಟ್ರಸ್ಟ್,* *ರಕ್ತ ಕೇಂದ್ರ ಕೆ.ಎಂ.ಸಿ ಮಣಿಪ...
02/07/2026

*ವಾತ್ಸಲ್ಯ ಉಡುಪಿ ಜಿಲ್ಲೆ*
*ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ), ಉಡುಪಿ,*
*ಆರ್ಯ ಚಾರಿಟೇಬಲ್‌ ಟ್ರಸ್ಟ್,*
*ರಕ್ತ ಕೇಂದ್ರ ಕೆ.ಎಂ.ಸಿ ಮಣಿಪಾಲ.*

*5 ನೇ ವರ್ಷದ*

🩸 *ಸ್ವಯಂ ಪ್ರೇರಿತ ರಕ್ತದಾನ ಶಿಬಿರ* 🩸

ದಿನಾಂಕ :- *05-07-2026 ಆದಿತ್ಯವಾರ*
ಸ್ಥಳ :- *ರಕ್ತ ಕೇಂದ್ರ ಕೆ.ಎಂ.ಸಿ ಮಣಿಪಾಲ*

ಸಮಯ :- *ಬೆಳ್ಳಿಗೆ 8.30 ರಿಂದ ಮಧ್ಯಾಹ್ನ 1.00 ರವರೆಗೆ*


ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲ್ಲಿದು ರಕ್ತದಾನವನ್ನು ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸೋಣ ಎಂದು ವಿನಂತಿಸಿಕೊಳ್ಳುತೇವೆ.❤️🙏

🩸*DONATE BLOOD SAVE LIFE*🩸

ತಾಯಿಯ ಹಾರೈಕೆ..ನಮ್ಮ ಪ್ರತಿಯೊಂದು ಕಾರ್ಯಕ್ರಮ, ಪ್ರತಿಯೊಂದು ಲೈವ್ ಹಾಗೂ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ನಿಸ್ವಾರ್ಥವಾಗಿ ನಿಂತಿರುವ ಕೆಲ ಹೃದಯ...
19/06/2026

ತಾಯಿಯ ಹಾರೈಕೆ..
ನಮ್ಮ ಪ್ರತಿಯೊಂದು ಕಾರ್ಯಕ್ರಮ, ಪ್ರತಿಯೊಂದು ಲೈವ್ ಹಾಗೂ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ನಿಸ್ವಾರ್ಥವಾಗಿ ನಿಂತಿರುವ ಕೆಲ ಹೃದಯಗಳು ಇರುತ್ತವೆ. ಅಂತಹ ಅಮೂಲ್ಯ ವ್ಯಕ್ತಿತ್ವಗಳಲ್ಲಿ ಆಶಾ ಲತಾ ಸುರೇಶ್ ದಂಪತಿಗಳು ಪ್ರಮುಖರು.

62 ಕಿ.ಮೀ ದೂರದಿಂದ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ, ತಮ್ಮ ಮಕ್ಕಳನ್ನು ನಮ್ಮ ಕಾರ್ಯಕ್ರಮಗಳಿಗೆ ಕಳುಹಿಸಿ, ನಮ್ಮ ಕನಸುಗಳಿಗೆ ಬೆಂಬಲವಾಗಿ, ಕುಟುಂಬದ ಸದಸ್ಯರಂತೆ ಸದಾ ನಮ್ಮೊಂದಿಗೆ ನಿಂತಿದ್ದಾರೆ. ಅವರ ಈ ಪ್ರೀತಿ, ವಿಶ್ವಾಸ ಮತ್ತು ನಿರಂತರ ಬೆಂಬಲವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಇಂತಹ ಹೃದಯವಂತ ದಂಪತಿಗಳನ್ನು ಸ್ಮರಿಸುವುದು, ಗೌರವಿಸುವುದು ಮತ್ತು ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ನಿಮ್ಮ ಈ ಪ್ರೀತಿ ಮತ್ತು ಆಶೀರ್ವಾದ ನಮ್ಮ ಪಯಣಕ್ಕೆ ಸದಾ ಶಕ್ತಿಯಾಗಿರಲಿ. ಹೃದಯಪೂರ್ವಕ ಧನ್ಯವಾದಗಳು. 🙏❤️

19/06/2026

ತಾಯಿಯ ಹಾರೈಕೆ

ನಿಮ್ಮ ಜೊತೆ ಸದಾ ಆರ್ಯ ಸಂಸ್ಥೆ ಹಾಗೂ ನಾವಿದ್ದೇವೆ

ರಾಜೇಶ್ಉದ್ಯಮಿ ಜೊತೆಗೆ ತಾನು ಮಾಡುವ ಸಮಾಜ ಮುಖಿ ಕೆಲಸ ಎಲ್ಲೂ ಸಹ ಹೇಳದೆ ತಾನಾಯಿತು ತನ್ನ ಕೆಲಸ ಆಯಿತು ಅನ್ನೋ ನಿಸ್ವಾರ್ಥ ಮನಸಿನವರು.ಆರ್ಯ ಸಂಸ್...
19/06/2026

ರಾಜೇಶ್
ಉದ್ಯಮಿ ಜೊತೆಗೆ ತಾನು ಮಾಡುವ ಸಮಾಜ ಮುಖಿ ಕೆಲಸ ಎಲ್ಲೂ ಸಹ ಹೇಳದೆ ತಾನಾಯಿತು ತನ್ನ ಕೆಲಸ ಆಯಿತು ಅನ್ನೋ ನಿಸ್ವಾರ್ಥ ಮನಸಿನವರು.

ಆರ್ಯ ಸಂಸ್ಥೆ ಯ ಪ್ರತಿಯೊಂದು ಕೆಲಸದಲ್ಲೂ ಮುಂಚೂಣಿಯಲ್ಲಿರುವ ಮಹಾ ಧಾನಿ ... ಶುಭವಾಗಲಿ

19/06/2026

ಸ್ವರ್ಗ ಆಶ್ರಮ ಕೊಳಲಗಿರಿ ಉಡುಪಿ ಒಮ್ಮೆ ಭೇಟಿ ನೀಡಿ... ಸ್ವರ್ಗ ದ ಅನುಭವ ನಿಮಗೆ ಸಿಗುತ್ತೆ

ಡಾಕ್ಟರ್ ಹೋಮ್ ಫೌಂಡೇಶನ್ (ರಿ.) ಹಾಗೂ ಸ್ವರ್ಗ ಆಶ್ರಮ, ಕೊಳಲಗಿರಿ ಇದರ ರೂವಾರಿಯಾಗಿರುವ ಡಾ. ಶಶಿಕಿರಣ್ ಅವರು ಸಮಾಜ ಸೇವೆಯಲ್ಲಿ ತಮ್ಮದೇ ಆದ ವಿಶ...
16/06/2026

ಡಾಕ್ಟರ್ ಹೋಮ್ ಫೌಂಡೇಶನ್ (ರಿ.) ಹಾಗೂ ಸ್ವರ್ಗ ಆಶ್ರಮ, ಕೊಳಲಗಿರಿ ಇದರ ರೂವಾರಿಯಾಗಿರುವ ಡಾ. ಶಶಿಕಿರಣ್ ಅವರು ಸಮಾಜ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಈಗಾಗಲೇ ಅದೆಷ್ಟೋ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ಮಹತ್ತರ ಕಾರ್ಯವನ್ನು ತಮ್ಮ ತಂಡದ ಮೂಲಕ ಯಶಸ್ವಿಯಾಗಿ ನಡೆಸಿದ್ದು, ಅನೇಕ ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸಮಾಜದ ದುರ್ಬಲ ವರ್ಗದವರ ನೆರವಿಗೆ ಸದಾ ಸ್ಪಂದಿಸುವ ಇವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ.

ನಿರಾಶ್ರಿತರು, ಬಡವರು ಹಾಗೂ ಅಗತ್ಯವಿರುವವರಿಗೆ ವಿವಿಧ ರೀತಿಯ ನೆರವು, ಮಾನವೀಯ ಸೇವೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಕೊಡುಗೆ ಅಪಾರವಾಗಿದೆ.

ಇವರ ಸಮಾಜಮುಖಿ ಹಾಗೂ ಮಾನವೀಯ ಸೇವೆಯನ್ನು ಗುರುತಿಸಿ, ಆರ್ಯ (ರಿ.) ಉಡುಪಿ ಇದರ 5ನೇ ವಾರ್ಷಿಕೋತ್ಸವ ಹಾಗೂ ಅದರ ಅಂಗ ಸಂಸ್ಥೆಯಾದ ಆರ್ಯ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಗುತ್ತಿದೆ.

💐 ನಿಮ್ಮ ಸೇವಾ ಪಯಣ ಇನ್ನಷ್ಟು ವಿಸ್ತರಿಸಿ ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸುತ್ತೇವೆ. 💐 Shashi Shetty

ಸಮಾಜ ಸೇವೆಯನ್ನೇ ತನ್ನ ಜೀವನದ ಧ್ಯೇಯವಾಗಿಸಿಕೊಂಡಿರುವ ಪಚ್ಚಿ ಪ್ರಸನ್ನ ಅವರು, ಮಣಿಪಾಲ ವಾತ್ಸಲ್ಯ ಉಡುಪಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಅನೇಕ...
16/06/2026

ಸಮಾಜ ಸೇವೆಯನ್ನೇ ತನ್ನ ಜೀವನದ ಧ್ಯೇಯವಾಗಿಸಿಕೊಂಡಿರುವ ಪಚ್ಚಿ ಪ್ರಸನ್ನ ಅವರು, ಮಣಿಪಾಲ ವಾತ್ಸಲ್ಯ ಉಡುಪಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಅನೇಕ ಜನಪರ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದಾರೆ. ಈಗಾಗಲೇ ಅದೆಷ್ಟೋ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಸ್ವಂತ ಸೂರು ಒದಗಿಸುವ ಮಹತ್ತರ ಕಾರ್ಯವನ್ನು ತಮ್ಮ ತಂಡದ ಮೂಲಕ ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಅಷ್ಟೇ ಅಲ್ಲದೆ, ರಕ್ತದಾನ ಮಹಾದಾನ, ತುರ್ತು ನೆರವು, ಮಾನವೀಯ ಸೇವೆ ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರ ಬದುಕಿನಲ್ಲಿ ಆಶಾಕಿರಣವಾಗಿ ನಿಂತಿದ್ದಾರೆ. ಅವರ ನಿಸ್ವಾರ್ಥ ಸೇವೆ, ಸಮಾಜದ ಮೇಲಿನ ಕಾಳಜಿ ಹಾಗೂ ಮಾನವೀಯ ಮೌಲ್ಯಗಳಿಗೆ ನೀಡಿದ ಕೊಡುಗೆ ನಿಜಕ್ಕೂ ಶ್ಲಾಘನೀಯವಾಗಿದೆ.

ಇವರ ಸಮಾಜಮುಖಿ ಸೇವೆಯನ್ನು ಗುರುತಿಸಿ, ಆರ್ಯ (ರಿ.) ಉಡುಪಿ ಇದರ 5ನೇ ವಾರ್ಷಿಕೋತ್ಸವ ಹಾಗೂ ಅದರ ಅಂಗ ಸಂಸ್ಥೆಯಾದ ಆರ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು

💐 ನಿಮ್ಮ ಸೇವಾ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. Pacchi Manipal ವಾತ್ಸಲ್ಯ ಉಡುಪಿ ಜಿಲ್ಲೆ

ವಿಶೇಷ ಕಾರ್ಯಕ್ರಮದಲ್ಲಿ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಹಾಗೂ ಕಾಮಿಡಿ ಕಿಲಾಡಿಗಳು ರನ್ನರ್-ಅಪ್ ಪ್ರಶಸ್ತಿ ಪುರಸ್ಕ...
15/06/2026

ವಿಶೇಷ ಕಾರ್ಯಕ್ರಮದಲ್ಲಿ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಹಾಗೂ ಕಾಮಿಡಿ ಕಿಲಾಡಿಗಳು ರನ್ನರ್-ಅಪ್ ಪ್ರಶಸ್ತಿ ಪುರಸ್ಕೃತರಾದ ನಮ್ಮ ಆತ್ಮೀಯರಾದ ದೀಕ್ಷಾ ಬ್ರಹ್ಮಾವರ ಅವರಿಗೆ ಸನ್ಮಾನ

Address

Arya Raj Tower 2 Nd Floor Near City Bus Stand Opposite
Udupi
576101

Website

Alerts

Be the first to know and let us send you an email when Arya Charitable Trust posts news and promotions. Your email address will not be used for any other purpose, and you can unsubscribe at any time.

Shortcuts

Share