11/06/2024
ದಿನಾಂಕ 8/06/2024 ಮತ್ತು 9/06/2024 ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲಾ ಕ್ರೀಡಾಂಗಣ,ದ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ(ರಿ.), ಸುಮಧುರ ಫೌಂಡೇಶನ್(ರಿ.), ದ ಆರ್ಟ್ ಆಫ್ ಲಿವಿಂಗ್ ಟ್ರಸ್ಟ್ (ರಿ.), ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ(ರಿ.), ಡ್ರೀಮ್ ಫೌಂಡೇಶನ್ ಟ್ರಸ್ಟ್(ರಿ.) ಇವರುಗಳ ಸಂಯುಕ್ತಾಶ್ರಯದಲ್ಲಿ *"ಸುಮಧುರ ಕಪ್ 2024"* ಅನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಅಧ್ಯಕ್ಷರು, ಆಧ್ಯಾತ್ಮಿಕ ಮಾರ್ಗದರ್ಶಕರು ಆದ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿರವರು ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಯುಕ್ತರು ಶ್ರೀಮತಿ ಡಾ||ನಾಗ ಲಕ್ಷ್ಮಿ ಚೌಧರಿರವರು , ಜೀವನ ಕಲಕುಂಡಲ ಸಿ ಎಸ್ ಆರ್ ಮುಖ್ಯಸ್ಥರು ಸುಮಧುರ ಗ್ರೂಪ್ಸ್, ಪ್ಯಾರ ಓಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಚೆರ್ಮೆನ್ ಶ್ರೀಯುತ ಸತ್ಯನಾರಾಯಣರವರು , ಹೇಮ ಮಾಲಿನಿ ನೀಡಮನುರಿ ಮಾನೇಜಿಂಗ್ ಡೈರೆಕ್ಟರ್ ಚಾಂಪಿಯನ್ ಗ್ರೂಪ್ಸ್ , ಕೆಪಿಎಸ್ಇ ಮೆಂಬರ್ ಆದ ಶ್ರೀಮತಿ ಮಂಗಳ ಶ್ರೀಧರ್ ರವರು , ಅಮೆಯ ಮೆಡಿಕಲ್ ಡೈರೆಕ್ಟರ್ ಆಫ್ ಟೊಕ್ಯೋ ಪ್ಯಾರ ಒಲಂಪಿಕ್ಸ್ ನ ಶ್ರೀಯುತ ಗೋಪಿನಾಥ್ ಕೆ ರವರು , ಮ್ಯಾನೇಜಿಂಗ್ ಟ್ರಸ್ಟಿ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯವರು, ಶ್ರೀಯುತ ಮಾದೇಶ್ ಚಂದ್ರ ಅಧ್ಯಕ್ಷರು ಕರ್ನಾಟಕ ವೀಲ್ಹ್ ಚೇರ್ ರಗ್ಬೈ ಅಸ್ಸೋಸಿಯೇಷನ್ರವರು, ಶ್ರೀಯುತ ತಿಪ್ಪೇಸ್ವಾಮಿ- ಮ್ಯಾನೇಜಿಂಗ್ ಟ್ರಸ್ಟಿ ಪರಿಶ್ರಮ ದಿವ್ಯಾಂಗ ಸ್ಫೋರ್ಟ್ಸ್ ಅಕಾಡೆಮಿ(ರಿ.), ಶ್ರೀಯುತ ಮಂಜುನಾಥ್- ಟ್ರಸ್ಟಿ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ(ರಿ.),ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಶ್ರೀಹರ್ಷರವರು ಮತ್ತು ಕರ್ನಾಟಕ ಬಿ ತಂಡದ ಕ್ಯಾಪ್ಟನ್ ನಿವೇದಿತ ಡಿ ಎಚ್ ರವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಮಧುರ ಕಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳಾ ತಂಡದ ಸ್ಪರ್ಧಿಗಳು - ವೀಣಾ .ಎಸ್ , ಗಂಗ್ ಮಂಡೆಲ್, ಕಮಲ, ರುಥ್ .ಎ, ಪ್ರಸಿದ್ಧ .ಎ, ಕಾಮಾಕ್ಷಿ, ಈರಮ್ಮ, ಆರತಿ ಸುರೇಶ್ ಪವಾರ್, ಜಯಶ್ರೀ, ರೂಪ ಮತ್ತು ಅನಂತಲಕ್ಷ್ಮಿರವರುಗಳು ಸ್ಪರ್ಧಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ,ಸ್ಪರ್ಧಿಸಿದಂತಹ ಹುಡುಗರ ತಂಡ -ಜೆಪಿ ರಂಜನ್, ವಿಲ್ಸನ್ ಹಾಲಿ, ದೇವರಾಜ್, ಆದಿಲ್,ಮಂಜುನಾಥ್,ಮುಜಾಯಿದ್,ಸೈಯದ್,ವಿಜಯ್, ಇಮ್ರಾನ್,ನಟರಾಜ್
ಕರೀಂ ಮತ್ತೆ ಹರೀಶ ಮಾಲಿಂಗಣ್ಣ ಗುಬ್ಬಿ ಮತ್ತು ಮಾಲಿಂಗಣ್ಣರವರುಗಳು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.