Sankalpa Trust Sirsi

Sankalpa Trust Sirsi Contact information, map and directions, contact form, opening hours, services, ratings, photos, videos and announcements from Sankalpa Trust Sirsi, Non-Governmental Organization (NGO), 285/2 , Near suvarna bank Head office TSS Road, Sirsi.

ಇಂದು ದಿನಾಂಕ 01-08-2025 ರಂದು ಸಿದ್ದಾಪುರದ ತಾಲೂಕಾ ಆಸ್ಪತ್ರೆಯಲ್ಲಿ  ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರ...
01/08/2025

ಇಂದು ದಿನಾಂಕ 01-08-2025 ರಂದು ಸಿದ್ದಾಪುರದ ತಾಲೂಕಾ ಆಸ್ಪತ್ರೆಯಲ್ಲಿ ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ತಾಲೂಕ ಆಸ್ಪತ್ರೆ ಸಿದ್ದಾಪುರ, ಗ್ರೀನ್ ಕೇರ್ (ರಿ.) ಶಿರಸಿ ಮತ್ತು ಸಂಕಲ್ಪ ಟ್ರಸ್ಟ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ "ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರ" ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸಿದ್ದಾಪುರ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರಾದ ಡಾ. ಪ್ರಕಾಶ್ ಪುರಾಣಿಕ್, ರೋಟರಿ ಆಸ್ಪತ್ರೆಯ ನೇತ್ರ ತಜ್ಞರಾದ ಶ್ರೀ ಡಾ. ಎ. ಜಿ. ವಸ್ತ್ರದ ಅವರು ಮತ್ತು ಎಲ್ಲಾ ಗಣ್ಯರು ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ. ಪ್ರಕಾಶ್ ಪುರಾಣಿಕ್ ಅವರು ಮಾತನಾಡಿ ಸಿದ್ದಾಪುರ ತಾಲೂಕಿನಲ್ಲಿ ತುಂಬಾ ಫಲಾನುಭವಿಗಳು ಇದ್ದಾರೆ ಇಂಥ ಶಿಬಿರಗಳು ಈ ತಾಲೂಕಿನಲ್ಲಿ ಹೆಚ್ಚು ಹೆಚ್ಚು ನಡೆಸಬೇಕೆಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಾಪುರ ತಾಲೂಕು ಆಸ್ಪತ್ರೆಯ ನಿವೃತ್ತ ನೇತ್ರಾಧಿಕಾರಿಗಳಾದ ಶ್ರೀ ಗುರುದತ್ ಮಂಗಳೂರು, ಸಂಕಲ್ಪ ಟ್ರಸ್ಟ್ ಶಿರಸಿಯ ಅಧ್ಯಕ್ಷರಾದ ಕುಮಾರ್ ಪಟಗಾರ, ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಗಿರೀಶ್ ದಾರೇಶ್ವರ್, ಸಿದ್ದಾಪುರ ತಾಲೂಕ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಸುರೇಶ್ ತಲ್ವಾರ್ ಉಪಸ್ಥಿತರಿದ್ದರು. ಗ್ರೀನ್ ಕೇರ್ (ರಿ.) ಶಿರಸಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಿತೇಂದ್ರ ಕುಮಾರ ತೋನ್ಸೆಯವರು ಮಾತನಾಡಿ ಆರೋಗ್ಯ ಸಂಬಂಧಿ ಯಾವುದೇ ಶಿಬಿರಗಳಲ್ಲಿ ನಾವು ಕೈಜೋಡಿಸುವುದಾಗಿ ತಿಳಿಸಿದರು. ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿ ಶ್ರೀ ಗಿರೀಶ್ ಧಾರೇಶ್ವರ ಮತ್ತು ಸಿದ್ದಾಪುರ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಶ್ರೀ ಗುರುದತ್ ಮಂಗಳೂರು ಅವರು ಕಣ್ಣಿನ ಆರೋಗ್ಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಕಲ್ಪ ಟ್ರಸ್ಟಿನ ಕಾರ್ಯದರ್ಶಿಗಳಾದ ಅಕ್ಷಯ್ ಅಂಬಿಗೇರ್, ಗ್ರೀನ್ ಕೇರ್ ಸಂಸ್ಥೆಯ ಕಚೇರಿ ನಿರ್ವಾಹಕರಾದ ಶ್ರೀಮತಿ ಅಪ್ಸಾನಾ, ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ 140 ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ 65 ಶಿಬಿರಾರ್ಥಿ ಗಳನ್ನು ಆಯ್ಕೆ ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಲು ರೋಟರಿ ಆಸ್ಪತ್ರೆಗೆ ಆಸ್ಪತ್ರೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗಲಾಯಿತು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:03/07/2025    ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಹುಲದೇವನಸರ ಶಾಲೆಯ...
14/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:03/07/2025 ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಹುಲದೇವನಸರ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿಸಲಾಯಿತು. ತರಕಾರಿಗಳು ಆರೋಗ್ಯಕರ ಜೀವನಶೈಲಿಗೆ ಅವಶ್ಯಕ. ತರಕಾರಿಗಳಲ್ಲಿ ವಿಟಮಿನ್ ಎ, ಸಿ, ಕೆ, ಪೊಟ್ಯಾಸಿಯಮ್, ಫೋಲೇಟ್ ಮುಂತಾದ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ತರಕಾರಿಗಳಲ್ಲಿರುವ ವಿವಧ ಪೋಷಕಾಂಷಗಳನ್ನು ಮಕ್ಕಳಿಗೆ ತಿಳಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಎಲ್.ಪಿ.ಎಸ್‌ ಹುಲದೇವನಸರ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ಜಗದೀಶ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಇವರು ಸರ್ಕಾರಿ ಪ್ರಾಥಮಿಕ ಶಾಲೆ ಹುಲದೇವನಸರ ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ತರಕಾರಿಗಳಲ್ಲಿರುವ ವಿವಧ ಪೋಷಕಂಷಗಳ ಮಾಹಿತಿಯ ಜೊತೆಗೆ ಸಣ್ಣಪುಟ್ಟ ಗಾಯಗಳು, ಸುಟ್ಟಗಾಯಗಳು, ಕಡಿತಗಳು, ಮೂಗೇಟುಗಳು ಮತ್ತು ಇತರ ಸಣ್ಣ ಸಮಸ್ಯೆಗಳಿಗೆ ತಕ್ಷಣದ ಚಿಕಿತ್ಸೆಯನ್ನು ಒದಗಿಸಲು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸಹಾಯಕವಾಗಿದೆ ಎಂದು ತಿಳಿಸಿಕೊಟ್ಟರು.
ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ವನಿತಾ ಜಗದೀಶ ಗೌಡ, ಶ್ರೀಮತಿ ಆಶಾ.ಎಸ್.‌ ಗೌಡ ,ಶಿಕ್ಷಕರಾದ ಶ್ರೀಮತಿ ಕಲ್ಯಾಣಿ ಭಂಡಾರಿ ಇವರು ಉಪಸ್ಥಿತರಿದ್ದರು. ಮುಖ್ಯೋಪಾದ್ಯಯರಾದ ಶ್ರೀ ಶಾಂತರಾಮ ನಾಯ್ಕ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:03/07/2025  ರಂದು  ಶಿರಸಿ ತಾಲೂಕಿನ ಎಚ್.ಪಿ.ಎಸ್‌ ದಾನಂದಿ ಶಾಲೆ...
14/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:03/07/2025 ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ದಾನಂದಿ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿಸಲಾಯಿತು. ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಮುಖ್ಯ. ಅವುಗಳಲ್ಲಿ ವಿಟಮಿನ್‌ಗಳು, ಖನಿಜಗಳು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ವಿವಿಧ ಬಣ್ಣದ ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಸಾವಯವ ತರಕಾರಿಗಳನ್ನು ಬೆಳೆದು ಸೇವಿಸುವುದರಿಂದ ಆರೋಗ್ಯವನ್ನು ಉತ್ತಮವಗಿ ಕಾಪಾಡಿಕೊಳ್ಳ ಬಹುದು. ಅವು ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳಿಂದ ಮುಕ್ತವಾಗಿರುತ್ತವೆ. ಸ್ಥಳೀಯ ತರಕಾರಿಗಳನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು ಮತ್ತು ಅವು ತಾಜಾವಾಗಿರುತ್ತವೆ, ಎನ್ನುವುದು ಸಂಸ್ಥೆಯ ಉದ್ದೇಶ ವಾಗಿದೆ.
ಎಚ್.ಪಿ.ಎಸ್‌ ದಾನಂದಿ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ಮಲ್ಲೇಶ್ವರ ಕೊರವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು, ಇವರು ಶಾಲೆಗೆ ಅಗತ್ಯವಿರುವ ತರಕಾರಿಗಳ ಬೀಜ ಮತ್ತು ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯನ್ನು ನೀಡಿದ್ದಕ್ಕೆ ಬಹಳ ಉಪಯುಕ್ತವಾಗಿದೆ ಎಂದು ಸಂಕಲ್ಪ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು..

ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಇವರು ಸರ್ಕಾರಿ ಪ್ರಾಥಮಿಕ ಶಾಲೆ ದಾನಂದಿ ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿ, ತರಕಾರಿಗಳ ಬಗ್ಗೆ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಬಳಸುವುದು ಹೇಗೆ ಎನ್ನುವ ಮಾಹಿತಿಯನ್ನು ನೀಡಿದರು.ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಅತಿ ಮುಖ್ಯವಾದ ಸಂಗತಿ ಎಂದು ಹೇಳಿದರು.
ಶಿಕ್ಷಕರಾದ ಶ್ರೀಮತಿ ನಾಗವೇಣಿ ಹೆಗಡೆ, ಶ್ರೀಮತಿ ನಾಗವೇಣಿ ಗೌಡ ಇವರು ಉಪಸ್ಥಿತರಿದ್ದರು . ಮುಖ್ಯೋಪಾದ್ಯಯರಾದ ಶ್ರೀಮತಿ ಗೀತಾಂಜಲಿ ಭಟ್‌ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:28/06/2025   ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ದಮ್ಮನಬೈಲ ಶಾ...
14/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:28/06/2025 ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ದಮ್ಮನಬೈಲ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿಸಲಾಯಿತು. ತರಕಾರಿ ಎಂದರೆ ಸಾಮಾನ್ಯವಾಗಿ ಊಟಕ್ಕೆ ಬಳಸುವ ಸಸ್ಯಗಳ ಭಾಗಗಳು. ಅವುಗಳನ್ನು ಬೇಯಿಸಿ ಅಥವಾ ಹಸಿಯಾಗಿ ತಿನ್ನಬಹುದು. ತರಕಾರಿಗಳಲ್ಲಿ ಜೀವಸತ್ವಗಳು, ಖನಿಜಗಳು ಇರುತ್ತವೆ, ತರಕಾರಿಗಳು ಆರೋಗ್ಯಕರ ಆಹಾರದ ಪ್ರಮುಖ ಭಾಗವಾಗಿದೆ. ತರಕಾರಿಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಕರ ಪ್ರಯೋಜನಗಳಿವೆ. ಇವುಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು, ಮತ್ತು ಕೆಲವು ರೀತಿಯ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ತರಕಾರಿಗಳು ದೃಷ್ಟಿ, ಮೂಳೆಗಳು ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು, ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. .ತರಕಾರಿಗಳ ಮಹತ್ವಗಳನ್ನು ಅರಿಯಬೇಕು ಎನ್ನುವ ಉದ್ದೇಶದಿಂದ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಮಾಡಲಾಯಿತು.
ಎಚ್.ಪಿ.ಎಸ್‌ ದಮ್ಮನಬೈಲ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀಮತಿ ಇಂದಿರಾ ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ನವೀನ ಶೆಟ್ಟಿಯವರು ಮಾತನಾಡಿ ಹೊರಗಿನ ಜಂಕ್‌ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದನ್ನು ಬಿಟ್ಟು ತರಕಾರಿಗಳನ್ನು ಹಚ್ಚಾಗಿ ಸೇವಿಸಿ ಆರೋಗ್ಯವನ್ನುಸರಿಯಾಗಿ ನೋಡಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು.
ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಇವರು ಸರ್ಕಾರಿ ಪ್ರಾಥಮಿಕ ಶಾಲೆ ದಮ್ಮನಬೈಲ ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ನಮ್ಮ ಆರೋಗ್ಯ ಹದಗೆಡುವ ಮೊದಲು ಆಹಾರ ಪದ್ದತಿಯಲ್ಲಿ ಶಿಸ್ತು ರೂಡಿಸಿಕೊಳ್ಳಬೇಕು, ದೇಹ ಮತ್ತು ಮನಸ್ಸು ಶಾಂತವಾಗಿರುವಂತೆ ನೋಡಿಕೊಂಡು ದುಶ್ಚಟಗಳಿಂದ ದೂರವಿದ್ದು ಸಕಾರಾತ್ಮಕ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ಪೂರ್ಣಿಮಾ, ಶ್ರೀಮತಿ ಜ್ಯೋತಿ, ಮುಖ್ಯೋಪಾದ್ಯಯರಾದ ಶ್ರೀಮತಿ ಗೀತಾ ಪಾವಸ್ಕರ್‌, ಶಿಕ್ಷಕರಾದ ಶ್ರೀಮತಿ ದಿವ್ಯ, ಶ್ರೀಮತಿ ಸಂಧ್ಯಾ, ಶ್ರೀಮತಿ ಗೀತಾ ಲಮಾಣಿ ಇವರು ಉಪಸ್ಥಿತರಿದ್ದರು .ಶಿಕ್ಷಕಿ ಶ್ರೀಮತಿ ಸಂಧ್ಯಾ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:27/06/2025   ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಶಿವಳ್ಳಿ ಶಾಲ...
14/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:27/06/2025 ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಶಿವಳ್ಳಿ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಮುಖ್ಯ. ಅವುಗಳಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ನಾರಿನಂಶ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಇವುಗಳು ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುವುದಲ್ಲದೆ, ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ತರಕಾರಿಗಳಲ್ಲಿನ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ವಿಟಮಿನ್‌ಗಳು ಮತ್ತು ಖನಿಜಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ತರಕಾರಿಗಳ ಮಹತ್ವಗಳನ್ನು ಅರಿಯಬೇಕು ಎನ್ನುವ ಉದ್ದೇಶದಿಂದ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಮಾಡಲಾಯಿತು.
ಎಚ್.ಪಿ.ಎಸ್‌ ಶಿವಳ್ಳಿ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ಶಂಕರ ದೇವಾಡಿಗ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು. ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಅವರು ಸರಕಾರಿ ಪ್ರಾಥಮಿಕ ಶಾಲೆ ಶಿವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು.ಮಕ್ಕಳಿಗೆ ತರಕಾರಿಗಳ ಬಗ್ಗೆ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಬಳಸುವುದು ಹೇಗೆ ಎನ್ನುವ ಮಾಹಿತಿಯನ್ನು ನೀಡಿದರು. ಮಕ್ಕಳ ಪೋಷಕರು,ಎಸ್.ಡಿ.ಎಂ.ಸಿ ಸದಸ್ಯರು ಎಲ್ಲರೂ ಒಗ್ಗೂಡಿ ಶಾಲೆಯಲ್ಲಿ ತರಕಾರಿಯ ಕೈತೋಟ ಮಾಡಲು ನೆರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ, ಸದಸ್ಯರಾದ ಶ್ರೀ ಮಂಜುನಾಥ ಪೂಜಾರಿ ,ಶ್ರೀ ಗಣಪತಿ ನಾಯ್ಕ ,ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು .

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:27/06/2025 ರಂದು  ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಮಾವಿನಕೊಪ್ಪ ಶ...
09/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:27/06/2025 ರಂದು ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಮಾವಿನಕೊಪ್ಪ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿಸಲಾಯಿತು. ತರಕಾರಿಗಳು ಪ್ರಕೃತಿಯ ಅಮೂಲ್ಯವಾದ ಕೊಡುಗೆಗಳಾಗಿವೆ. ಇವುಗಳು ನಮ್ಮ ದೈನಂದಿನ ಜೀವನದಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತವೆ. ತರಕಾರಿಗಳು ಶಾರೀರಿಕ ಆರೋಗ್ಯವನ್ನು ಉತ್ತಮವಾಗಿರಿಸಲು ನೆರವಾಗುತ್ತವೆ, ಇವುಗಳಲ್ಲಿ ಹಾರ್ಮೋನ್ಸ್‌ ಸಮತೋಲನ ಹೊಂದಲು ಮತ್ತು ಪೋಷಕಾಂಶಗಳನ್ನು ಹೆಚ್ಚಿಸಲು ಅಗತ್ಯವಿರುವ ಪೋಷಕಾಂಶಗಳು ಸಮೃಧ್ದ ವಾಗಿ ದೊರೆಯುತ್ತದೆ. ತರಕಾರಿ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಾಡಿ ಮತ್ತು ವಚನ ವ್ಯವಸ್ಥೆಯನ್ನು ಸುಧಾರಿಸುತ್ತದೆ.ತರಕಾರಿಗಳ ಮಹತ್ವಗಳನ್ನು ಅರಿಯಬೇಕು ಎನ್ನುವ ಉದ್ದೇಶದಿಂದ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಮಾಡಲಾಯಿತು.
ಎಲ್.ಪಿ.ಎಸ್‌ ಮಾವಿನಕೊಪ್ಪ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ದಯಾನಂದ ಚೆನ್ನಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು. ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಮಾವಿನಕೊಪ್ಪ ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಯನ್ನು ಹೇಗೆ ಬಳಸುವುದು ಎಂಬ ಮಾಹಿತಿಯ ಜೊತೆಗೆ ತರಕಾರಿಗಳು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿರಬೇಕು. ಇವುಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದ್ದರಿಂದ, ಪ್ರತಿದಿನ ಸಾಕಷ್ಟು ತರಕಾರಿಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ, ಸದಸ್ಯರಾದ ಶ್ರೀ ಮರಮೇಶ್ವರ ಮಡಿವಾಳ , ಶ್ರೀಮತಿ ವೀಣಾ ಭಟ್ , ಮುಖ್ಯೋಪಾದ್ಯಯರಾದ ಶ್ರೀಮತಿ ಲಕ್ಷ್ಮೀ ನಾಗರಾಜ ಬಸವನಗೌಡ, ಶಿಕ್ಷಕರಾದ ಶ್ರೀಮತಿ ಸೀತಾ ಮಡಿವಾಳ, ಅಡುಗೆ ಸಹಾಯಕರು, ಸಂಸ್ಥೆಯ ಸದಸ್ಯರಾದ ಅಕ್ಷಯ ಅಂಬಿಗೇರ ಮತ್ತು ನಮೃತಾ ಪೂಜಾರಿ ಇವರು ಉಪಸ್ಥಿತರಿದ್ದರು . ಮುಖ್ಯೋಪಾದ್ಯಾಯರಾದ ಶ್ರೀಮತಿ ಲಕ್ಷ್ಮೀ ನಾಗರಾಜ ಬಸವನಗೌಡ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:27/06/2025   ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಪುರ ಶಾಲೆಯಲ್...
08/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:27/06/2025 ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಪುರ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ತರಕಾರಿಗಳು ಆರೋಗ್ಯಕ್ಕೆ ಬಹಳ ಮುಖ್ಯ. ಇವುಗಳಲ್ಲಿ ಅನೇಕ ಪೋಷಕಾಂಶಗಳು ಇರುತ್ತವೆ, ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಶಾಲೆಯ ಮಕ್ಕಳಿಗೆ ಪೋಷಕಾಂಶಗಳ ಬಗ್ಗೆ ತಿಳಿಸಲಾಯಿತು . ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಮಾಡಲಾಯಿತು.
ಎಚ್.ಪಿ.ಎಸ್‌ ಪುರ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ವಿಶ್ವನಾಥ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಯನ್ನು ಹೇಗೆ ಬಳಸುವುದು ಎಂಬ ಮಾಹಿತಿಯ ಜೊತೆಗೆ ತರಕಾರಿಗಳು ಜೀವಸತ್ವಗಳು, ಖನಿಜಗಳು ಮತ್ತು ನಾರಿನಾಂಶದ ಅತ್ಯುತ್ತಮ ಮೂಲವಾಗಿದೆ. ಇವುಗಳು ದೇಹದ ಕಾರ್ಯನಿರ್ವಹಣೆಗೆ ಅತ್ಯಗತ್ಯ. ತರಕಾರಿಗಳಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ರೋಗಗಳು ಬರದಂತೆ ತಡೆಯುತ್ತದೆ, ಎಂಬ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀ ಮನೋರಾಯರು, ಮುಖ್ಯೋಪಾದ್ಯಯರಾದ ಶ್ರೀಮತಿ ಕಲ್ಪನಾ ನಾಯ್ಕ,ಶಿಕ್ಷಕರಾದ ಶ್ರೀಮತಿ ಸುಧಾ ಕಲ್ಲಿಮಾರ್, ಶ್ರೀಮತಿ ರೋಹಿಣಿ ಬಿ.ಪಿ, ಸಂಸ್ಥೆಯ ಸದಸ್ಯರಾದ ಅಕ್ಷಯ ಅಂಬಿಗೇರ ಮತ್ತು ನಮೃತಾ ಪೂಜಾರಿ ಇವರು ಉಪಸ್ಥಿತರಿದ್ದರು .ಶಿಕ್ಷಕಿ ಶ್ರೀಮತಿ ರೋಹಿಣಿ ಬಿ.ಪಿ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:26/06/2025 ರಂದು ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಹೆಬ್ಬಳ್ಳಿ ಶಾಲ...
05/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:26/06/2025 ರಂದು ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಹೆಬ್ಬಳ್ಳಿ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿಸಲಾಯಿತು. ಹೆಚ್ಚಿನ ಜನರು ತರಕಾರಿಗಳನ್ನು ಅವುಗಳ ರುಚಿ ಮತ್ತು ವಿನ್ಯಾಸದಿಂದಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಭಾವಿಸುತ್ತಾರೆ. ಆದಾಗ್ಯೂ, ಸಾಕಷ್ಟು ಪೋಷಕಾಂಶಗಳು ಮತ್ತು ವಿಟಮಿನ್ ಪಡೆಯಲು ದೈನಂದಿನ ಆಹಾರದಲ್ಲಿ ತರಕಾರಿಗಳನ್ನು ಸೇರಿಸಿಕೊಳ್ಳಬೇಕು .
ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿ ತರಕಾರಿಗಳನ್ನು ಸೇರಿಸುವುದರಿಂದ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.ಅದಕ್ಕಾಗಿ ಶಾಲೆಯಲ್ಲಿ ನೈಸರ್ಗಿಕವಾಗಿ ರಾಸಾಯನಿಕ ಗೊಬ್ಬರಗಳಿಲ್ಲದೆ ತರಕಾರಿಗಳನ್ನು ಬೆಳೆಯಬೇಕು ಎನ್ನುವ ಉದ್ದೇಶದಿಂದ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಮಾಡಲಾಯಿತು.
ಎಲ್.ಪಿ.ಎಸ್‌ ಹೆಬ್ಬಳ್ಳಿ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ಸಂತೋಷ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಹೆಬ್ಬಳ್ಳಿ ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ವಿತರಣೆ ಮಾಡಿದರು. ನಮ್ಮ ಆರೋಗ್ಯ ಹದಗೆಡುವ ಮೊದಲು ಆಹಾರ ಪದ್ದತಿಯಲ್ಲಿ ಶಿಸ್ತು ರೂಡಿಸಿಕೊಳ್ಳಬೇಕು, ದೇಹ ಮತ್ತು ಮನಸ್ಸು ಶಾಂತವಾಗಿರುವಂತೆ ನೋಡಿಕೊಂಡು ದುಶ್ಚಟಗಳಿಂದ ದೂರವಿದ್ದು ಸಕಾರಾತ್ಮಕ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ಸಂತೋಷ ,ಎಸ್.ಡಿ.ಎಂ.ಸಿ, ಸದಸ್ಯರಾದ ಶ್ರೀಮತಿ ಶಮ್ ಶಹದ್ ,ಶಿಕ್ಷಕರಾದ ಶ್ರೀಮತಿ ಮನೋರಮಾ ನಾಯ್ಕ ಮತ್ತು ರಮಾ ನಾಯ್ಕ ಇವರು ಉಪಸ್ಥಿತರಿದ್ದರು .ಶಿಕ್ಷಕಿ ಮುಖ್ಯೋಪಾದ್ಯಾಯರಾದ ಶ್ರೀಮತಿ ಚಂದ್ರಕಲಾ ಶೆಟ್ಟಿಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:26/06/2025 ರಂದು  ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಇಸಳೂರು ಶಾಲೆಯ...
04/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ

ದಿನಾಂಕ:26/06/2025 ರಂದು ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಇಸಳೂರು ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳು ಆರೋಗ್ಯಕ್ಕೆ ಬಹಳ ಮುಖ್ಯ. ಇವುಗಳಲ್ಲಿ ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಇವುಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿ ಹೆಚ್ಚುವುದು, ಹೃದಯದ ಆರೋಗ್ಯ ಸುಧಾರಿಸುವುದು, ತೂಕ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಿಸುವುದು ಮತ್ತು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಮುಂತಾದ ಪ್ರಯೋಜನಗಳು ಇವೆ. ಇದರಿಂದ ತರಕಾರಿಯ ಸೇವನೆ ದಿನನಿತ್ಯ ಅಗತ್ಯ ಎನ್ನುವ ಉದ್ದೇಶದಿಂದ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಮಾಡಲಾಯಿತು.
ಎಚ್.ಪಿ.ಎಸ್‌ ಇಸಳೂರು ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೇಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕುಮಾರ ಪಟಗಾರ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಇಸಳೂರು ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ತರಕಾರಿಗಳ ಮಹತ್ವಗಳ ಜೊತೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹೇಗೆ ಬಳಸುವುದು ಮತ್ತು ಯಾವಾಗ ಬಳಸುವುದು ಎನ್ನುವುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೇಟ್ ಮತ್ತು ಶಿವಾನಂದ ಮಳಗಿ. ಶಿಕ್ಷಕರಾದ ಶ್ರೀಮತಿ ಸಂಧ್ಯಾ ಶಾನಭಾಗ, ಶ್ರೀಮತಿ ಕರುಣಾ ಶೇಟ್‌, ಶ್ರೀಮತಿ ಮಂಗಲಾ ರಾಯ್ಕರ್‌, ಶ್ರೀಮತಿ ವಿದ್ಯಾ ಇವರು ಉಪಸ್ಥಿತರಿದ್ದರು .ಶಿಕ್ಷಕಿ ಮುಖ್ಯೋಪಾದ್ಯಾಯರಾದ ಶ್ರೀಮತಿ ಅಂಜನಾ ಪಾವಸ್ಕರ್ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ದಿನಾಂಕ:26/06/2025  ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಬೊಪ್ಪನಳ್ಳಿ ಶಾಲೆಯಲ...
03/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ದಿನಾಂಕ:26/06/2025 ಶಿರಸಿ ತಾಲೂಕಿನ ಎಚ್.ಪಿ.ಎಸ್‌ ಬೊಪ್ಪನಳ್ಳಿ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿಸಲಾಯಿತು. ತರಕಾರಿಗಳನ್ನು ಪ್ರತಿದಿನಾ ಸೇವಿಸುವುದರಿಂದ,ನಾವು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬಹುದು.ಅವುಗಳು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಷಗಳನ್ನು ಒದಗಿಸುತ್ತವೆ ಮತ್ತು ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ.ತರಕಾರಿಗಳು ಪ್ರಕೃತಿಯ ಅಮೂಲ್ಯವಾದ ಕೊಡುಗೆಗಳಾಗಿವೆ,ಅವುಗಳ ಸದುಪಯೋಗಗಳನ್ನು ಬಲಸಿಕೊಳ್ಳಬೇಕೆಂಬುವುದರ ಅರಿವನ್ನು ಮೂಡಿಸುವ ಉದ್ದೇಶ ಕಾರ್ಯಕ್ರಮದಾಗಿತ್ತು.
ಎಚ್.ಪಿ.ಎಸ್‌ ಬೊಪ್ಪನಳ್ಳಿ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಮಾಲತಿ ನಾಯ್ಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಕುಮಾರ ಪಟಗಾರ ರವರ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಬೊಪ್ಪನಳ್ಳಿ ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ತರಕಾರಿಗಳು ನಮ್ಮ ಆರೋಗ್ಯಕ್ಕೆ ಅನಗತ್ಯ. ಅವುಗಳನ್ನು ಪ್ರತಿದಿನ ಸೇವಿಸುವುದರಿಂದ, ನಾವು ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಸೀತಾರಮ ಭಟ್ಟ, ಶ್ರೀ ಕೃಷ್ಣ ಮೂರ್ತಿ ಹೆಗಡೆ, ಶಿಕ್ಷಕರಾದ ಶ್ರೀಮತಿ ಮಂಗಳ ಗೌರಿ, ಶ್ರೀಮತಿ ಶ್ವೇತಾ ನಾಯ್ಕ್‌ ಅಡುಗೆ ಯವರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಶ್ವೇತಾ ನಾಯ್ಕ್‌ ಇವರು ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ ಶಿರಸಿ ತಾಲೂಕಿನ ಎಲ್.ಪಿ.ಎಸ್‌ ನಾರಾಯಣಗುರುನಗರ ಶಾಲೆಯಲ್ಲಿ ಸಂಕಲ್ಪ ಟ್ರಸ್...
03/07/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮ
ಶಿರಸಿ ತಾಲೂಕಿನ ಎಲ್.ಪಿ.ಎಸ್‌ ನಾರಾಯಣಗುರುನಗರ ಶಾಲೆಯಲ್ಲಿ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ದಿನಾಂಕ:25/06/2025 ರಂದು ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಮಹತ್ವಗಳು, ತರಕಾರಿಗಳನ್ನು ಬೆಳೆಸುವ ರೀತಿಯ ಬಗ್ಗೆ ತಿಳಿಸಲಾಯಿತು. ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳು ರಾಸಾಯನಿಕ ಗೊಬ್ಬರಗಳಿಂದ ಬೆಳೆದಿರುತ್ತವೆ, ಅವುಗಳು ಆರೋಗ್ಯಕ್ಕೆ ಬೇಕಾದ ಶಕ್ತಿಗಳನ್ನು ಒದಗಿಸುವುದಿಲ್ಲ, ಮನೆಯಿಂದ ಗೊಬ್ಬರಗಳನ್ನು ತಂದು ಶಾಲೆಯಲ್ಲಿ ನೈಸರ್ಗಿಕವಾಗಿ ತರಕಾರಿಗಳನ್ನು ಬೆಳೆದು ಅದರಿಂದ ಶಾಲೆಯಲ್ಲಿ ಮಾಡಿದ ಮಧ್ಯಾಹ್ನ ದ ಬಿಸಿ ಊಟವನ್ನು ಸೇವಿಸಿದರೆ ದೇಹಕ್ಕೆ ಬೇಕಾದ ಒಳ್ಳೆಯ ಪ್ರೋಟೀನ್‌, ಶಕ್ತಿ ಸಿಗುತ್ತದೆ ಎಂದು ಶಾಲೆಯ ಮಕ್ಕಳಿಗೆ ಮನವರಿಕೆ ಮಾಡಿದರು.
ಎಲ್.ಪಿ.ಎಸ್‌ ನಾರಾಯಣಗುರುನಗರ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ದೀಪಮಾಲಾ ನಾಯ್ಕ್‌ ಅವರು ಅಧ್ಯಕ್ಷತೆ ಯನ್ನು ವಹಿಸಿದ್ದರು.
ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಕುಮಾರ ಪಟಗಾರ ರವರ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಾರಾಯಣಗುರುನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ಮಕ್ಕಳ ಪೋಷಕರು,ಎಸ್.ಡಿ.ಎಂ.ಸಿ ಅಧ್ಯಕ್ಷರು,ಸದಸ್ಯರು ಎಲ್ಲರೂ ಒಗ್ಗೂಡಿ ಶಾಲೆಯಲ್ಲಿ ತರಕಾರಿಯ ಕೈತೋಟ ಮಾಡಲು ನೆರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ನಾಗವೇಣಿ ಗಡ್ಡದ, ಶಿಕ್ಷಕರಾದ ಶ್ರೀಮತಿ ಸುಮಾ ದೇವಮಾನೆ, ಶ್ರೀ ಪ್ರದೀಪ ನಾಯ್ಕ್, ಶ್ರೀಮತಿ ಗೀತಾ ಎಸ್ ನಾಯ್ಕ್ ಮತ್ತು ಶ್ರೀಮತಿ ಪುಷ್ಪಾ ಷೇಟ್‌ ಇವರುಉಪಸ್ಥಿತರಿದ್ದರು.. ಶಿಕ್ಷಕಿ ಮುಖ್ಯೋಪಾದ್ಯಾಯರಾದ ಶ್ರೀಮತಿ ದೀಪಮಾಲಾ ನಾಯ್ಕ್‌ ಇವರು ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಮಾವಿನಸರ ಶಾಲೆಯಲ್ಲಿ ದಿನಾಂಕ:24/06/2025 ರಂದು ಆಯುಷ್‌ ಜ್ನಾನ ಕಾರ್ಯ...
28/06/2025

ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಶಿರಸಿ ತಾಲೂಕಿನ ಎಲ್.ಪಿ.ಎಸ್‌ ಮಾವಿನಸರ ಶಾಲೆಯಲ್ಲಿ ದಿನಾಂಕ:24/06/2025 ರಂದು ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿಸಲಾಯಿತು. ತರಕಾರಿಗಳು ಪ್ರಕೃತಿಯ ಅಮೂಲ್ಯವಾದ ಕೊಡುಗೆಗಳಾಗಿವೆ. ಇವುಗಳು ನಮ್ಮ ದೈನಂದಿನ ಜೀವನದಲ್ಲಿ ಅತೀ ಪ್ರಮುಖ ಪಾತ್ರ ವಹಿಸುತ್ತವೆ. ತರಕಾರಿಗಳು ಶಾರೀರಿಕ ಆರೋಗ್ಯವನ್ನು ಉತ್ತಮವಾಗಿರಿಸಲು ನೆರವಾಗುತ್ತವೆ, ಇವುಗಳಲ್ಲಿ ಹಾರ್ಮೋನ್ಸ್‌ ಸಮತೋಲನ ಹೊಂದಲು ಮತ್ತು ಪೋಷಕಾಂಶಗಳನ್ನು ಹೆಚ್ಚಿಸಲು ಅಗತ್ಯವಿರುವ ಪೋಷಕಾಂಶಗಳು ಸಮೃಧ್ದ ವಾಗಿ ಲಭ್ಯವಿದೆ. ತರಕಾರಿ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಾಡಿ ಮತ್ತು ವಚನ ವ್ಯವಸ್ಥೆಯನ್ನು ಸುಧಾರಿಸುತ್ತದೆ.ತರಕಾರಿಗಳ ಮಹತ್ವಗಳನ್ನು ಅರಿಯಬೇಕು ಎನ್ನುವ ಉದ್ದೇಶದಿಂದ ಸಂಕಲ್ಪ ಟ್ರಸ್ಟ್ (ರಿ.) ಶಿರಸಿ ವತಿಯಿಂದ ಆಯುಷ್‌ ಜ್ನಾನ ಕಾರ್ಯಕ್ರಮವನ್ನು ಮಾಡಲಾಯಿತು.
ಎಲ್.ಪಿ.ಎಸ್‌ ಮಾವಿನಸರ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಮಹೇಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಸಂಕಲ್ಪ ಟ್ರಸ್ಟ್ನ ಅಧ್ಯಕ್ಷರಾದ ಕುಮಾರ ಪಟಗಾರ ಇವರು ಸರ್ಕಾರಿ ಪ್ರಾಥಮಿಕ ಶಾಲೆ ಮಾವಿನಸರ ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಗಳನ್ನು‌ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನುವಿತರಣೆ ಮಾಡಿದರು. ನಮ್ಮ ಆರೋಗ್ಯ ಹದಗೆಡುವ ಮೊದಲು ಆಹಾರ ಪದ್ದತಿಯಲ್ಲಿ ಶಿಸ್ತು ರೂಡಿಸಿಕೊಳ್ಳಬೇಕು, ದೇಹ ಮತ್ತು ಮನಸ್ಸು ಶಾಂತವಾಗಿರುವಂತೆ ನೋಡಿಕೊಂಡು ದುಶ್ಚಟಗಳಿಂದ ದೂರವಿದ್ದು ಸಕಾರಾತ್ಮಕ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಿಲ್ಪಾ ಮಹೇಂದ್ರ ಶ್ರೀಮತಿ ಶಶಿಕಲಾ ರಾಘವೇಂದ್ರ ದೇವಾಡಿಗ ಉಪಸ್ಥಿತರಿದ್ದರು.ಕಾರ್ಯಕ್ರಮದ ಅತಿಥಿಗಳಾಗಿ ಎಲ್.ಪಿ.ಎಸ್‌ ಮಾವಿನಸರ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ನಾಗವೇಣಿ ನಾಯಕ ಇವರು ಉಪಸ್ಥಿತರಿದ್ದರು

Address

285/2 , Near Suvarna Bank Head Office TSS Road
Sirsi
541402

Website

Alerts

Be the first to know and let us send you an email when Sankalpa Trust Sirsi posts news and promotions. Your email address will not be used for any other purpose, and you can unsubscribe at any time.

Share