20/02/2026
ಹುಲಿ ಸತ್ತು ಒಂದು ವರ್ಷವಾಯಿತು, ಹುಲಿ ಹಂತಕರು ಸಿಗಲಿಲ್ಲ! ಆದರೆ ನಿಂದಕರು ಸಿಕ್ಕರು !!
18/02/2025
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ ಜಲಾಶಯದ ಹಿನ್ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದ ಗಂಡು ಹುಲಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ಮಾಡುವಾಗ ಕುತ್ತಿಗೆ ಬಳಿಯಲ್ಲಿದ್ದ ಗಾಯದ ಗುರುತುಗಳನ್ನು ಗುಂಡೇಟು ಎಂದು ಅನುಮಾನ ವ್ಯಕ್ತಪಡಿಸಿದ ನಮ್ಮ ತಂಡ ಸರಿಯಾದ ತನಿಖೆ ಮಾಡುವಂತೆ ಆಗ್ರಹಿಸಿತ್ತು.
ಹುಲಿ ಗುಂಡೇಟಿನಿಂದ ಸತ್ತಿರಬಹುದು ಎನ್ನುವ ಸುದ್ದಿ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿ ಕೊನೆಗೆ ಅರಣ್ಯ ಸಚಿವರ ಗಮನಕ್ಕೂ ಬಂದು ತನಿಖೆ ಮಾಡಿ ಹತ್ತು ದಿನಗಳ ಒಳಗಾಗಿ ವರದಿ ಸಲ್ಲಿಸಲು ಆದೇಶವನ್ನು ಸಹ ಮಾಡಿದ್ದರು.
ಗುಂಡೇಟಿನ ಬಗ್ಗೆ ನಾವು ಅನುಮಾನ ವ್ಯಕ್ತಪಡಿಸಿದ್ದರೂ ಕೊನೆಗೆ FSL ಹಾಗು ಇಲಾಖೆಯ ತನಿಖಾ ವರದಿಗಳೆ ಅಧಿಕೃತವಾಗುತ್ತವೆ.
FSL ಗೆ ಕಳುಹಿಸಿದ ಸ್ಯಾಂಪಲ್ಗಳು ನೆಗೆಟೀವ್ ವರದಿ ನೀಡಿದ್ದವು, ಹುಲಿ ಕಳೇಬರ ನೀರಿನಲ್ಲಿ ಬಿದ್ದು 24-36 ಗಂಟೆಗಳಾಗಿದ್ದು,ಕೊಳೆಯುವ ಹಂತಕ್ಕೆ ಹೋಗಿದ್ದರಿಂದ ಸ್ಯಾಂಪಲ್ಗಳಲ್ಲಿ ಗನ್ ಪೌಡರ್ ಅಥವಾ ಸೀಸದ ಅಂಶಗಳನ್ನು ಪತ್ತೆ ಮಾಡುವುದು ಕಷ್ಟ ಎಂದು ವರದಿ ಬಂದಿತ್ತು. ಗುಂಡೇಟು ಬಿದ್ದಂತೆ ಕಂಡು ಬಂದಿದ್ದ ಮಾಂಸದ ತುಂಡುಗಳಲ್ಲಿ ಲೋಹದ ಚೂರುಗಳು ಸಹ ಪತ್ತೆ ಆಗಲ್ಲಿಲ್ಲ.
FSL ವರದಿ ನೆಗೆಟೀವ್ ಬಂದ ಕಾರಣ ಅರಣ್ಯ ಇಲಾಖೆ ಒಂದಷ್ಟು ತನಿಖೆ ಅಂತ ಮಾಡಿ ಕೇಸ್ ಕ್ಲೋಸ್ ಮಾಡಿತ್ತು.
ನಮ್ಮ ತಂಡದವರು ಹುಲಿ ಗುಂಡೇಟಿನಿಂದ ಸತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ ಕಾರಣದಿಂದ ರಾಜ್ಯಾದ್ಯಂತ ಸುದ್ದಿಯಾಯಿತು, ಸಚಿವರು ತನಿಖೆಗೂ ಆದೇಶ ಮಾಡಿದರು. ಆದರೆ
ಈ ಘಟನೆಯ ಬಗ್ಗೆ ವನ್ಯಜೀವಿ ಸಂರಕ್ಷರು ಪರಿಸರವಾದಿಗಳು ಎಂದು ಹೇಳಿಕೊಳ್ಳುವ ಕೆಲವರು ಜಾಲತಾಣಗಳಲ್ಲಿ ಹಾಗು ಪತ್ರಿಕೆಗಳಲ್ಲಿ ನಮ್ಮ NGO ಬಗ್ಗೆ ಬಾಯಿಗೆ ಬಂದಂತೆ ಬರೆದರು.
ಹುಲಿ ಮರಣೋತ್ತರ ಪರೀಕ್ಷೆಗೆ ಹುಲಿ ತಜ್ಞರು ಬರಬೇಕಿತ್ತು, ಅದರ ಬದಲಿಗೆ ಹಾವು ಹಿಡಿಯುವವರನ್ನು ಕರೆಸಿ ಕೆಲಸ ಮುಗಿಸಿದ್ದಾರೆ ಎಂದರು.
ನಮ್ಮ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಹುಲಿ ತಜ್ಞರು ಇರಬಹುದು, ಅವರು ಪ್ರತಿ ಹುಲಿ ಸತ್ತಾಗ ಬಂದು ಕುಳಿತುಕೊಳ್ಳುವುದು ಕಷ್ಟ ಆಗಬಹುದು. ಎರಡು ಗಂಡು ಹುಲಿಗಳ ಕದನ, ಉರುಳು, ವಯಸ್ಸಾಗಿ ಸತ್ತರೆ ಅಥವಾ ಇತರ ನೈಸರ್ಗಿಕ ಕಾರಣದಿಂದ ಹುಲಿ ಮೃತಪಟ್ಟರೆ ಹುಲಿ ತಜ್ಞರು ಕಾರಣ ಊಹಿಸಬಹುದು.ಗುಂಡೇಟು. ವಿಷಪ್ರಾಶನದಂದಹ ವರದಿಗಳನ್ನು FSL ನೀಡಬೇಕು
ನಿಂದಕರ ಬಗ್ಗೆ
2018ರಲ್ಲಿ ಸಾಗರ ವಿಭಾಗದಲ್ಲಿ (Division) ನೆಡುತೋಪು ಹಗರಣ ನಡೆದಿತ್ತು, ಗಿಡ ನೆಡಲು ಲಕ್ಷ ಗುಂಡಿ ತೆಗೆದಿರೋದಾಗಿ ಲೆಕ್ಕ ತೋರಿಸಿ ಅವ್ಯವಹಾರ ಮಾಡಲಾಗಿತ್ತು. ಈ ಕುರಿತು ತನಿಖೆಗೂ ಆದೇಶವಾಗಿತ್ತು, ನಮ್ಮನ್ನು 'ಹಾವು ಹಿಡಿವವರು' ಎಂದು ಕರೆದ ಪ್ರಸಿದ್ಧ ಪರಿಸರವಾದಿಗಳು,ಆಗ ನಡೆದ ಹಗರಣದಲ್ಲಿ ಆರೋಪಿಗಳ ಬೆನ್ನಿಗೆ ನಿಂತು ಅಕ್ರಮದ ಪರವಾಗಿ ಸಾಕ್ಷ್ಯ ನುಡಿದ್ದಿದ್ದರು!
ವನ್ಯಜೀವಿ ಸಂರಕ್ಷಣೆ ನೆಪ ಇಟ್ಟುಕೊಂಡು ವಿದೇಶಿ ಹಣ ಪಡೆಯುತ್ತಿದ್ದಾರೆ ಎಂದು ಬೇರೆಯವರ ಬಗ್ಗೆ ಬೊಬ್ಬೆ ಹೊಡೆಯುವ ಇವರು, ತಮ್ಮ ಖಾತೆಗೆ ಫಾರಿನ್ ಫಂಡ್ ಬಂದ ವಿಷಯ ಯಾರಿಗೂ ಗೊತ್ತಾಗಬಾರದು ಎಂದು,ಬೇರೊಬ್ಬರ ಬ್ಯಾಂಕ್ ಖಾತೆಯ ಮುಖಾಂತರ ವಿದೇಶಿ ಹಣ ತಮ್ಮ ಕೈ ಸೇರುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು.
ಇನ್ನು ರಾಜ್ಯ ಅಥವಾ ದೇಶದ ಯಾವುದೇ ಭಾಗದಲ್ಲಿ ಹುಲಿ ಚಿರತೆ ಆನೆ ಕಾಟಿಗಳಂತಹ ವನ್ಯಜೀವಿಗಳು ಸತ್ತರೆ ಹಾಗು ಕಳ್ಳಬೇಟೆಗಾರರು ಸಿಕ್ಕಿಬಿದ್ದರೆ ಜಾಲತಾಣಗಳಲ್ಲಿ ದಿಡೀರ್ ಅಂತ ವ್ಯಕ್ತಿಯೊಬ್ಬರು ಪ್ರತ್ಯಕ್ಷವಾಗಿ PCCF APCCF CCF DCF NTCA WCCB FOREST MINISTER WILDLIFE PROTECTION ACT FOREST ACT ಎಂದೆಲ್ಲ ಇಂಗ್ಲೀಷ್ ಹಾಗು ಕನ್ನಡದಲ್ಲಿ ಭಾಷಣ ಬಿಗಿಯುವುದನ್ನು ನೋಡಿರಬಹುದು, ಇವರ ಪ್ರಕಾರ,ತಾವು ಮಾಡುವುದು ಮಾತ್ರ wildlife Conservation and Forest protection ಅಂತೆ, ಬೇರೆಯವರದ್ದು ಚಿಪ್ಪು ಕೆರೆಯುವ ಕೆಲಸವಂತೆ. ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿ ಬಳಸಿಕೊಳ್ಳುವ ಇವರು ಬೇರೆಯವರ ಕಾಲೆಳೆಯುವುದರಲ್ಲೆ ತಮ್ಮ ಜೀವನದ ಬಹುಪಾಲು ಆಯಸ್ಸನ್ನು ಕಳೆದಾಗಿದೆ. ಪ್ರಶ್ನೆ ಮಾಡಿದವರ ಕಮೆಂಟ್ ಗಳಿಗೆ ಉತ್ತರ ಕೊಡುವುದಿಲ್ಲ,ಬದಲಾಗಿ ಪಶ್ನಿಸಿದವರ ಕಮೆಂಟ್ ಗಳನ್ನು ತಕ್ಷಣ ಡಿಲೀಟ್ ಮಾಡುತ್ತಾರೆ.
ಇವರ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಬಳಸಿಕೊಂಡು ಕಾನೂನು ಹೋರಾಟ ಮಾಡಿ ಇವರು ಎಷ್ಟು ಕೇಸುಗಳನ್ನು ಗೆದ್ದಿದ್ದಾರೆ ಗೊತ್ತಿಲ್ಲ.
ನಾವು Wildlife sanctuary ಒಳಗೆ ಇದ್ದುಕೊಂಡು ಅರಣ್ಯ ಇಲಾಖೆಯ ಒಂದೆರಡು ಬೀಟ್ ಅಥವಾ ಸೆಕ್ಷನ್ ಗಳಲ್ಲಿನ ಅಕ್ರಮಗಳನ್ನು ಪತ್ತೆ ಮಾಡುವುದೇ ಕಷ್ಟದ ಕೆಲಸ, ಅಂತಹದರಲ್ಲಿ ಸಿಟಿಯ AC ರೂಮಿನ ಸೋಫಾದಲ್ಲಿ ಕುಳಿತು ಯಾರೋ ಕೊಡುವ ಚೂರು ಪಾರು ಮಾಹಿತಿ ಪಡೆದು, ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲದೆ ರಾಜ್ಯ ಹಾಗು ದೇಶದ ವನ್ಯಜೀವಿ ಸಂರಕ್ಷಣೆ ಬಗ್ಗೆ ಮಾತನಾಡುವುದನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಜನ ಇವರನ್ನು ಸೋಫಾ Conservationist ಎಂದೇ ಕರೆಯುತ್ತಾರೆ, ಏನೇ ಆಗಲಿ ಇವರ ವಯಸ್ಸಿಗೆ ಮಾತ್ರ ನಾವು ಬೆಲೆ ಕೊಡಲೇ ಬೇಕು.
ಇತ್ತೀಚಿನ ಕೆಲವು ಘಟನೆಗಳ ಬಗ್ಗೆ ಹೇಳುವುದಾದರೆ,
ವನ್ಯಜೀವಿಗಳ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದವರು, ವನ್ಯ ಜೀವಿಗಳನ್ನು ಬಳಸಿಕೊಂಡು ದಂದೆ ಮಾಡುವವರಿಂದ ಹಣ ಪಡೆದು,ಇತರರ ವಿರುದ್ಧ ಸಾಲು ಸಾಲು ಸುಳ್ಳುಗಳನ್ನು ಬರೆಯುವ ಇವರಿಗೆ ಹಸಿ ಹಸಿ ಸುಳ್ಳುಗಳೆ ಬಂಡವಾಳ, ಹಣ ನೀಡಿದರೆ ಬೇರೆಯವರು ಬರೆದ ಪೋಸ್ಟ್ ಹಾಗು ವೀಡಿಯೋಗಳನ್ನು ತಿರುಚಿ ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸಿ ಜನರನ್ನು ಎತ್ತಿ ಕಟ್ಟಬಲ್ಲ ಕುಖ್ಯಾತರೂ ಇಲ್ಲಿದ್ದಾರೆ!
(ಕಳೆದ ವರ್ಷ ಹುಲಿ ಸತ್ತಾಗ ಬರೆದ ಪೋಸ್ಟನ್ನು Facebook ನೆನಪಿಸಿತು)
✍️ನಾಗರಾಜ್ ಬೆಳ್ಳೂರು
Nisarga conservation Trust