Puthila Parivara

Puthila Parivara Puthila Parivara is now trust & you are the backbone for us! let's come and join our team now online

ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ಬಹುವೇಗವಾಗಿ ಓಡಾಡುತ್ತಿದೆ.ನಾನು ಅರುಣಣ್ಣನ ಅಭಿಮಾನಿ ಎಂಬ ಹೆಸರಿನಲ್ಲಿ ಇರುವ ಸಂದೇಶ..ನೂರಕ್ಕೆ ನೂರು ಹೇಳಬ...
16/08/2026

ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ಬಹುವೇಗವಾಗಿ ಓಡಾಡುತ್ತಿದೆ.ನಾನು ಅರುಣಣ್ಣನ ಅಭಿಮಾನಿ ಎಂಬ ಹೆಸರಿನಲ್ಲಿ ಇರುವ ಸಂದೇಶ..ನೂರಕ್ಕೆ ನೂರು ಹೇಳಬಲ್ಲೆ ಅದು ಬರೆದಿರುವುದು ಅರುಣಣ್ಣನ ಅಭಿಮಾನಿಯು ಅಲ್ಲ ಹಿತೈಷಿಯೂ ಅಲ್ಲ..ಕಳೆದ 3-4 ವರ್ಷಗಳಿಂದ ಅರುಣಣ್ಣನನ್ನು ರಾಜಕೀಯವಾಗಿ ಮುಗಿಸಬೇಕೆಂದು ಪಣತೊಟ್ಟಿರುವ ತಂಡದ ಒಬ್ಬ ಸದಸ್ಯ.ಕಳೆದ ಚುನಾವಣೆಯಲ್ಲಿ ಪಕ್ಷದಿಂದ ಬಂದ ಕೋಟಿ-ಕೋಟಿ ಹಣ ಹೊಡೆದು ಮುಂದಿನ ಚುನಾವಣೆಯಲ್ಲಿ ಪುತ್ತಿಲರು ಪಕ್ಷೇತರವಾಗಿ ಚುನಾವಣೆಗೆ ನಿಂತಾಗ ಹಣ ದೋಚಲು ಸಿದ್ಧವಾಗಿ ನಿಂತಿರುವ ಒಬ್ಬ ಸ್ವಾರ್ಥಿ.

ಆತ 2023 ರ ಕೊಟೇಚಾ ಹಾಲ್ ನಲ್ಲಿ ನಡೆದ ಮೊದಲ ಕಾರ್ಯಕರ್ತರ ಸಭೆಯ ದಿನದ ತನಕ ಅಭಿಮಾನಿಯಾಗಿದ್ದರಬಹುದು..ಆದರೆ ನಂತರ ಕೆಲ ಸ್ವಾರ್ಥಿಗಳು ಅರುಣಣ್ಣನ ಜೊತೆಯಿದ್ದ ಪ್ರತಿಯೊಬ್ಬ ಕಾರ್ಯಕರ್ತನ ಮನೆ ಬಿಡದೆ ನಡು ರಾತ್ರಿಯಲ್ಲೂ ಮನ ಪರಿವರ್ತನೆ ಮಾಡಿದ ಸದಸ್ಯರಲ್ಲೊಬ್ಬ ಎಂಬುದು ಸ್ಪಷ್ಟ…ಕಾರಣ ಇಷ್ಟೆ ..ಅರುಣಣ್ಣನ ಅಭಿಮಾನಿಯಾದವ ಇಂತಹ ಬರಹಗಳನ್ನು ಬರೆಯಲು ಸಾಧ್ಯವೇ ಇಲ್ಲ..35-40 ವರ್ಷಗಳಲ್ಲಿ ಪಕ್ಷ,ಸಂಘಟನೆ ಮಾಡಿದ ಅನ್ಯಾಯವನ್ನು ಕಂಡವ ಯಾರೂ ಕೂಡ ಅಂತಹ ಲೇಖನ ಬರೆಯಲು ಸಾಧ್ಯವೇ ಇಲ್ಲ.

ಇಂತಹ ಲೇಖನ 2023 ರ ಮುಂಚೆ ಪುತ್ತಿಲರು ಬಿಜೆಪಿ ಅಭ್ಯರ್ಥಿ ಆಗಲೇಬಾರದೆಂದು ಕೆಲ ಹಿತಶತ್ರುಗಳು ಬರೆಸುತ್ತಿದ್ದರು..2023 ರ ನಂತರ ಬಂದ ಲೇಖನಗಳಿಗೆ ಲೆಕ್ಕವೇ ಇರಲಿಕ್ಕಿಲ್ಲ..2023 ರ ಚುನಾವಣೆ ಸಾಕ್ಷಿಯಾಯಿತು ಇಂತಹ ಯಾವುದೇ ಲೇಖನವನ್ನು ಕಾರ್ಯಕರತರು,ಹಿಂದೂ ಸಮಾಜ ಒಪ್ಪುವುದಿಲ್ಲವೆಂದು..ಕಾರಣ ನೂರಾರು ಫೇಕ್ ಅಕೌಂಟ್ಗಳು,ಅಸಭ್ಯ ಪೋಸ್ಟರ್ಗಳು,ಲೇಖನಗಳು,ವಿಡಿಯೋಗಳು,ಪ್ರೆಸ್ ಮೀಟ್ ಗಳು,ಕುತಂತ್ರಗಳು,ಹಣದ ಆಮಿಷಗಳು,ವಾಮಾಚಾರಗಳು..ಇಂತಹ ಸವಾಲುಗಳ ಸಂದರ್ಭದಲ್ಲೂ ಕಾರ್ಯಕರ್ತರು,ಹಿಂದೂ ಸಮಾಜ ಪುತ್ತಿಲರ ಜೊತೆ ನಿಂತದ್ದು ಇತಿಹಾಸ..ಕಾರಣ ಆ ವ್ಯಕ್ತಿ ಚುನಾವಣಾ ಸಮಯದಲ್ಲಿ ಹುಟ್ಟಿಕೊಂಡ ಅಣಬೆಯಾಗಿರಲಿಲ್ಲ..ಆ ವ್ಯಕ್ತಿ 4 ದಶಕಗಳಿಂದ ಪುತ್ತೂರಿನ ಗಲ್ಲಿ ಗಲ್ಲಿಯಲ್ಲೂ ಹಿಂದೂ ಸಮಾಜದ ಕಷ್ಟದ ಸಮಯದಲ್ಲಿ ಜೊತೆ ನಿಂತಿದ್ದ ಎಂಬುದು ಪುತ್ತೂರಿನ ಪ್ರತಿಯೊಬ್ಬ ಹಿಂದುವಿಗೂ ಗೊತ್ತಿತ್ತು.

ನಿನ್ನೆ ಬರೆದ ಲೇಖನ ಷೇರ್ ಮಾಡುತ್ತಿರುವ ಮಹಾನುಭಾವರುಗಳೇ..2023 ರ ಚುನಾವಣೆಯ ಮೊದಲು ಹಾಗೂ ನಂತರ ನೀವು ಪುತ್ತಿಲರಿಗಾಗಿ ದುಡಿದ್ದೀರಾ?ಪಕ್ಷದಲ್ಲಿ ಜವಾಬ್ದಾರಿ ಕೊಡುವಂತೆ ಪಕ್ಷದ ಹಿರಿಯರಲ್ಲಿ ಕೇಳಿಕೊಂಡಿದ್ದೀರಾ?ಅಶೋಕ್ ರೈ ಎಂಬ ಕಾಂಗ್ರೆಸ್ ನಾಯಕನನ್ನು ಸೋಲಿಸಲು ಪುತ್ತಿಲರಿಂದ ಮಾತ್ರ ಸಾಧ್ಯ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿದ್ದೀರಾ?ಚುನಾವಣೆ ಸಮಯದಲ್ಲಿ ಪಕ್ಷ ಪುತ್ತಿಲರಿಗೆ ಮಾಡಿದ ದ್ರೋಹವನ್ನು ಪ್ರಶ್ನಿಸಿದ್ದಿರಾ?ಹಿಂದೂ ಕಾರ್ಯಕರ್ತರಿಗೆ 3 ವರ್ಷದಿಂದ ಆದ ಅನ್ಯಾಯದ ವಿರುದ್ಧ ಹೋರಾಡಿದ್ದೀರಾ?

ಪಕ್ಷದಲ್ಲಿ ಚುನಾವಣೆ ಸೋತ ಯಾವೊಬ್ಬ ನಾಯಕನೂ ಕ್ಷೇತ್ರದಲ್ಲಿ ಓಡಾಡದೆ ಮನೆಯಲ್ಲೇ ಇರೋದು ಸಾಮಾನ್ಯ..ಮತ ಹಾಕಿದ ಮತದಾರರ ಸಂಪರ್ಕವೇ ಇಟ್ಟುಕೊಳ್ಳೋದಿಲ್ಲ…ಮತ್ತೆ ಸಂಪರ್ಕ ಮಾಡೋದು ಮುಂದಿನ ಚುನಾವಣೆ ಸಮಯದಲ್ಲೇ..ಇಂತಹ ನಾಯಕರ ನಡುವೆ ಇಲ್ಲೊಬ್ಬ ಸೋತ ಮರುದಿನದಿಂದ ಇಂದಿನ ವರೆಗೂ ದಿನದ 24 ಗಂಟೆಯೂ ಕಾರ್ಯಕರತರೊಂದಿಗೆ,ಮತ ಹಾಕಿದ ಮತದಾರರ ಕಷ್ಟ-ಸುಖದಲ್ಲಿ ತಾನೂ ಒಬ್ಬನ್ನಾಗಿ ನಿಂತದ್ದು ನಮ್ಮ ನಾಯಕ ಅರುಣ್ ಕುಮಾರ್ ಪುತ್ತಿಲ.

ಪಕ್ಷದಲ್ಲಿ ಸೋತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ರವರು ಚುನಾವಣೆಯ ಸಂದರ್ಭದಲ್ಲಿ ನಾನು ದಿವಸದ 24 ಗಂಟೆಯೂ ಕಾರ್ಯಕರ್ತರ ಜೊತೆ ನಿಲ್ಲುತ್ತೇನೆ ಎಂದವರು ಇಂದು ಎಲ್ಲಿದ್ದಾರೆ?ಮಾಜಿ ಶಾಸಕ ಮಟ್ಟಂದೂರು ಇಂದು ಎಷ್ಟು ಕಾರ್ಯಕರ್ತರ ಕಷ್ಟದ ಸಮಯದಲ್ಲಿ ಜೊತೆ ನಿಂತಿದ್ದಾರೆ?ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರಿನಲ್ಲಿ ಎಷ್ಟು ಬಾರಿ ಕಾರ್ಯಕರ್ತರ ಜೊತೆ ನಿಂತಿದ್ದಾರೆ?ಹೇಳುತ್ತಾ ಹೋದರೆ ಇನ್ನೂ ಹಲವು ಹೆಸರುಗಳಿವೆ..(20 ಜನ ಟ್ರ್ಯಾಕ್ ನಲ್ಲಿ ಇರುವವರು)

ಇಂದು ಲೇಖನ ಷೇರ್ ಮಾಡುತ್ತಿರುವ ಮಂಡಲದ ಇಬ್ಬರು ನೂತನ ಅಧ್ಯಕ್ಷರುಗಳ ಹಾದಿಯಾಗಿ…ಪಂಚಾಯತ್ ಸದಸ್ಯನ ವರೆಗೂ ನಿಮಗೆ ರಾಜ್ಯಾಧಕ್ಷ ವಿಜಯೇಂದ್ರ,ಅಂದಿನ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ ವಿ,ಸತೀಶ್ ಕುಂಪಲ,ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್,ಮಂಡಲ ಅಧ್ಯಕ್ಷರುಗಳಾಗಿದ್ದ ಸಾಜ ರಾಧಾಕೃಷ್ಣ ಆಳ್ವ,ಜಗನ್ನಿವಾಸ ರಾವ್ ಇವರ ಸಮ್ಮುಖದಲ್ಲಿ ನಡೆದ ಮೀಟಿಂಗ್ ನಲ್ಲಿ ಪುತ್ತಿಲರಿಗೆ ಏನು ಮಾತು ಕೊಟ್ಟಿದ್ದರು ಎಂದು?ವಿಜಯೇಂದ್ರ ಇವರ ಬೆಂಗಳೂರಿನ ಮನೆಯಲ್ಲಿ ನಡೆದ ಮೀಟಿಂಗ್ನಲ್ಲಿ ಎಂಪಿ ಚುನಾವಣೆಯ ಸಹ ಪ್ರಭಾರಿ ಪುತ್ತಿಲರಿಗೆ ನೀಡಬೇಕು,60:40 ಅನುಪಾತದಲ್ಲಿ ಪುತ್ತಿಲ ಪರಿವಾರ(60)ಹಾಗೂ ಪಕ್ಷ (40) ಶೇಕಡಾ ಜವಾಬ್ದಾರಿ ಹಂಚಿಕೊಳ್ಳಬೆಕು..ಪುತ್ತಿಲರಿಗೆ 2024 ರ ಡಿಸೆಂಬರ್ ಒಳಗಾಗಿ ರಾಜ್ಯ ಬಿಜೆಪಿಯ ಉನ್ನತ ಹುದ್ದೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದಲೇ ಸ್ಪರ್ಧಿಸುವ ಅವಕಾಶ ನೀಡುವ ಬಗ್ಗೆ ಮಾತುಕತೆ ನಡೆದಿತ್ತು..ಎಂಪಿ ಚುನಾವಣೆ ನಡೆದು 1.5 ವರ್ಷ ಕಳೆದರೂ ಪುತ್ತಿಲರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡದಾಗ ಇಂದು ಲೇಖನ ಷೇರ್ ಮಾಡುತ್ತಿರುವ ಮಹಾನುಭಾವರ ಬಾಯಿಗೆ ಬೀಗ ಹಾಕಿತ್ತಾ?ಇಂದು ನೀವು ಮತ್ತೆ ಅಪಪ್ರಚಾರ ಪ್ರಾರಂಭ ಮಾಡಿದ್ದೀರಿ.ಅಪಪ್ರಚಾರದ ಅಂತ್ಯ ನಾವು ಮಾಡಲಿದ್ದೇವೆ.

ಮಾರ್ತರಿಂದ ಹಿಡಿದು ಕಟ್ಟ ಕಡೆಯ ಕಾರ್ಯಕರ್ತನಿಗೆ ಪಕ್ಷದಲ್ಲಿ ಜವಾಬ್ದಾರಿ ಸಿಗುವಂತೆ ಮಾಡಿದ ನಾಯಕನೊಬ್ಬ ರಾಜ್ಯದಲ್ಲಿ ಇದ್ದರೆ ಅದು ಪುತ್ತಿಲ ಮಾತ್ರ..ಆದರೆ ನಮ್ಮಂತಹ ಕಾರ್ಯಕರ್ತರಿಗೆ ಯಾವುದೇ ಜವಾಬ್ದಾರಿಯ ಅಪೇಕ್ಷೆ ಇರಲಿಲ್ಲ..ಪ್ರತಿಯೊಬ್ಬ ಕಾರ್ಯಕರ್ತನ ಮನಸ್ಸಿನಲ್ಲಿ ಹಿಂದೆಯೂ..ಮುಂದೆಯೂ ಇರೋದು ನಮ್ಮ ನಾಯಕನಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು,ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸಲು ಆ ವ್ಯಕ್ತಿ ಕ್ಷೇತ್ರದ ಶಾಸಕನಾಗಬೇಕೆಂದು..ಇಷ್ಟು ಬಿಟ್ಟರೆ ದೇವದುರ್ಲಬ ಕಾರ್ಯಕರ್ತರಿಗೆ ಯಾವ ಆಸೆಯೂ ಇಲ್ಲ ಅಪೇಕ್ಷೆಯೂ ಇಲ್ಲ..

ಅಂದು ಕೊಟೆಚಾದಲ್ಲಿ ನಡೆದ ಸಭೆಯಿಂದ ಹಿಡಿದು ಇಂದಿನ ವರೆಗೂ ಕಾರ್ಯಕರ್ತರು ಏನು ಹೇಳುತ್ತಾರೋ ಅದನ್ನೇ ಕಾರ್ಯರೂಪಕ್ಕೆ ತಂದಿರೋ ನಾಯಕನೊಬ್ಬ ಇದ್ದರೆ ಅದು ನಮ್ಮ ನಾಯಕ ಪುತ್ತಿಲ.ನಾಳೆಯೂ ಆ ನಾಯಕನಿಗೆ ಸೂಕ್ತ ಸ್ಥಾನಮಾನ ಸಿಗದೇ,ಪಕ್ಷದಲ್ಲಿ ಅವಕಾಶ ಕೊಡದೇ ಇದ್ದಲ್ಲಿ ಕಾರ್ಯಕರ್ತರಿಗೆ ಹಿಂದುತ್ವದ ಹೆಸರಲ್ಲಿ ಗೆಲ್ಲಿಸುವ ತಾಕತ್ತು ಇದೆ.

ನಮ್ಮ ಉದ್ದೇಶ ಸ್ಪಷ್ಟ ಇದೆ.ಕಾರ್ಯಕರ್ತರಿಂದ ಪಕ್ಷವೇ ಹೊರತು..ಪಕ್ಷದಿಂದ ಕಾರ್ಯಕರ್ತನಲ್ಲ..

ಅಶೋಕ್ ರೈಗಳ ಉದ್ದೇಶ ಹಿಂದುತ್ವದ ಭದ್ರಕೋಟೆಯನ್ನು ಛಿದ್ರ ಮಾಡೋದು..

ನಮ್ಮ ಉದ್ದೇಶ ಕಾಂಗ್ರೆಸ್ ಶಾಸಕ ಅಶೋಕ್ ರೈ ಗಳನ್ನು ಸೋಲಿಸಿ ಹಿಂದುತ್ವ ಗೆಲ್ಲಿಸೋದು..

ಆದರೆ ಪಕ್ಷದ ಉದ್ದೇಶ ಏನು?ಪುತ್ತಿಲರಿಗೆ ಟಿಕೆಟ್ ತಪ್ಪಿಸಿ ಬಿಜೆಪಿ ಸೋಲಿಸೋದು…ಪುತ್ತಿಲರು ಮತ್ತೆ ಪಕ್ಷೇತರ ನಿಲ್ಲುವಂತೆ ಮಾಡಿ ಬಿಜೆಪಿ ಸೋಲಿಸಿದ ಅನ್ನೋ ಹಣೆಪಟ್ಟಿ ಕಟ್ಟಿ ಕಾಂಗ್ರೆಸ್ ನ ಶಾಸಕ ಅಶೋಕ್ ರೈ ಗಳನ್ನು ಗೆಲ್ಲಿಸೋದು..ಅಲ್ಲವೇ?

ಈ ಮೇಲಿನ ಮಾತು ಅಪಪ್ರಚಾರ ಎಂದು ಬರೆಯುವ ಬದಲು ಪಕ್ಷದಲ್ಲಿ ಪುತ್ತಿಲರಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ಕಾರ್ಯ ಮಾಡಿ..ನಮ್ಮದು ಕೂಡ ಕಾಂಗ್ರೆಸ್ ಶಾಸಕ ಅಶೋಕ್ ರೈ ಗಳನ್ನು ಸೋಲಿಸೋದೆ ಅಂತಿಮ ಉದ್ದೇಶ ಅನ್ನೋದನ್ನ ಕಾರ್ಯಕರ್ತರಿಗೆ ಮನವರಿಕೆ ಮಾಡಿ.

ಭಾಗ-2 ….coming soon …!!!!

14/08/2026

ಅಕ್ರಮ ಸಕ್ರಮ ಮಂಜೂರಾತಿ ಆದ ಕಡತಗಳಿಗೆ ಹಕ್ಕುಪತ್ರ ಹಾಗೂ ಪಹಣಿ, 94C ಅರ್ಜಿಗಳನ್ನು ತುರ್ತು ವಿಲೇವಾರಿ ಪೌತಿ ಖಾತೆ ಸಮಸ್ಯೆ ಪರಿಹಾರ ಕ್ಕೆ ತಹಸೀಲ್ದಾರ್ ಭೇಟಿ ಮಾಡಿದೆವು.

ಪುತ್ತೂರು ತಾಲೂಕಿನ ಸಾರ್ವಜನಿಕರು ಎದುರಿಸುತ್ತಿರುವ ಅಕ್ರಮ–ಸಕ್ರಮ ಹಾಗೂ 94C ಅರ್ಜಿಗಳ ವಿಲೇವಾರಿ ವಿಳಂಬ, ಜೊತೆಗೆ ಪೌತಿ ಖಾತೆ ಬದಲಾವಣೆಯಲ್ಲಿನ ಸಮಸ್ಯೆಗಳ ಕುರಿತು ಪುತ್ತೂರು ತಾಲೂಕಿನ ತಹಶೀಲ್ದಾರ್‌ರನ್ನು ಭೇಟಿ ಮಾಡಿ ಚರ್ಚಿಸಲಾಯಿತು.

ಅಕ್ರಮ -ಸಕ್ರಮ ಸಮಿತಿ ಯಲ್ಲಿ ಮಂಜೂರಾದ ಕಡತ ಗಳಿಗೆ 3ವರ್ಷ ದಲ್ಲಿ ಈವರೆಗೂ ಅಂದಾಜು 25ಕಡತ ಗಳಿಗೆ ಹಕ್ಕುಪತ್ರ ಮತ್ತು ಪಹಣಿ ನೀಡಿರುತ್ತಿರಿ. ಉಳಿದ ಕಡತ ಗಳಿಗೆ 3ವರ್ಷದಲ್ಲಿ ಹಕ್ಕು ಪತ್ರ ಹಾಗೂ ಪಹಣಿ ವನ್ನು ನೀಡದೆ ಇರುವುದರಿಂದ ಕೃಷಿಕರಿಗೆ ಬೆಳೆ ವಿಮೆ, ಕೃಷಿ ಸಾಲ ಪಡೆಯಲು ಅನಾನುಕೂಲ ವಾಗಿದ್ದು ಈ ಸಮಸ್ಸೆ ಯನ್ನು ಈ ಕೂಡಲೇ ಬಗೆಹರಿಸದಿದ್ದಲ್ಲಿ ಕೃಷಿ ಕರನ್ನು ಮತ್ತು ಪಲಾನುಭವಿಗಳನ್ನು ಸೇರಿಸಿಕೊಂಡು ಪುತ್ತಿಲ ಪರಿವಾರದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು . ಎಂದು ಎಚ್ಚರಿಸಲಾಯಿತು. ಮತ್ತು ಕೆಲವು ಗ್ರಾಮಗಳಲ್ಲಿ ಇರುವ ದೊಡ್ಡ್ ಸರ್ವೇ ನಂಬರ್ ನ ಪೋಡಿ ಸಮಸ್ಸೆಯನ್ನು ಬಗೆಹರಿಸಲು ಸೂಚಿಸಲಾಯಿತು.

ಅಕ್ರಮ–ಸಕ್ರಮ ಯೋಜನೆಯಡಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿರುವ ಅರ್ಜಿದಾರರು ತಮ್ಮ ಅರ್ಜಿಗಳ ವಿಲೇವಾರಿಗಾಗಿ ಕಾಯುತ್ತಿರುವ ಪರಿಸ್ಥಿತಿ ಇದೆ. ಅದೇ ರೀತಿ, ಕರ್ನಾಟಕ ಭೂ ಕಂದಾಯ ಕಾಯ್ದೆಯ 94C ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳೂ ಹಲವು ಕಡೆಗಳಲ್ಲಿ ಬಾಕಿ ಉಳಿದಿದ್ದು, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅಗತ್ಯ ದಾಖಲೆಗಳ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಆದ್ದರಿಂದ ಅಕ್ರಮ–ಸಕ್ರಮ ಮತ್ತು 94C ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಅರ್ಹ ಅರ್ಜಿದಾರರ ಅರ್ಜಿಗಳನ್ನು ನಿಯಮಾನುಸಾರ ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ತಹಶೀಲ್ದಾರ್‌ರಿಗೆ ಮನವಿ ಮಾಡಲಾಯಿತು.ಕುಟುಂಬದ ಸದಸ್ಯರ ನಿಧನದ ನಂತರ ಜಮೀನು ಹಾಗೂ ಆಸ್ತಿಗಳ ಪೌತಿ ಖಾತೆ ಮಾಡಿಸಿಕೊಳ್ಳಲು ಸಾರ್ವಜನಿಕರು ಎದುರಿಸುತ್ತಿರುವ ವಿಳಂಬ ಮತ್ತು ಕಚೇರಿ ಮಟ್ಟದ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯಲಾಯಿತು. ಅರ್ಹ ಪ್ರಕರಣಗಳಲ್ಲಿ ಪೌತಿ ಖಾತೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಯಿತು.

14/08/2026
 #ಪುತ್ತೂರಿಗೆ_ಅಭ್ಯರ್ಥಿ_ಆಯ್ಕೆಯ_ಮಾನದಂಡಗಳು_ಮತ್ತು_ಪುತ್ತಿಲರ_ರಾಜಕೀಯ_ಪ್ರಸ್ತುತತೆ.************************ಪ್ರಜಾಪ್ರಭುತ್ವದಲ್ಲಿ ಚುನಾವ...
11/08/2026

#ಪುತ್ತೂರಿಗೆ_ಅಭ್ಯರ್ಥಿ_ಆಯ್ಕೆಯ_ಮಾನದಂಡಗಳು_ಮತ್ತು_ಪುತ್ತಿಲರ_ರಾಜಕೀಯ_ಪ್ರಸ್ತುತತೆ.
************************
ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಯಶಸ್ಸು ಕೇವಲ ಪಕ್ಷದ ಜನಪ್ರಿಯತೆಯ ಮೇಲೆ ಅವಲಂಬಿತವಾಗಿರುವುದಿಲ್ಲ. ಅಭ್ಯರ್ಥಿಯ ಆಯ್ಕೆಯೇ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅದಕ್ಕಾಗಿ ರಾಷ್ಟ್ರೀಯ ಪಕ್ಷಗಳು ಸಾಮಾನ್ಯವಾಗಿ ಹಲವು ರಾಜಕೀಯ, ಸಾಮಾಜಿಕ, ಸಂಘಟನಾತ್ಮಕ ಮತ್ತು ಚುನಾವಣಾ ಮಾನದಂಡಗಳನ್ನು ಪರಿಗಣಿಸುತ್ತವೆ.
1. #ಗೆಲ್ಲುವ_ಸಾಮರ್ಥ್ಯ ( )
ಅತ್ಯಂತ ಪ್ರಮುಖ ಮಾನದಂಡವೆಂದರೆ ಗೆಲ್ಲುವ ಸಾಧ್ಯತೆ.
ಪಕ್ಷಗಳು ಸಾಮಾನ್ಯವಾಗಿ ಈ ಪ್ರಶ್ನೆಗಳನ್ನು ಕೇಳುತ್ತವೆ ,ಅಭ್ಯರ್ಥಿಗೆ ವೈಯಕ್ತಿಕ ಜನಬೆಂಬಲ ಇದೆಯೇ? ಪಕ್ಷದ ಮತಬ್ಯಾಂಕ್‌ಗೆ ಹೆಚ್ಚುವರಿ ಮತಗಳನ್ನು ಸೆಳೆಯುವ ಸಾಮರ್ಥ್ಯ ಇದೆಯೇ? ಎದುರಾಳಿಯನ್ನು ಸೋಲಿಸುವ ಶಕ್ತಿ ಇದೆಯೇ? ಬಹುತೇಕ ರಾಷ್ಟ್ರೀಯ ಪಕ್ಷಗಳಲ್ಲಿ ಇದೇ ಮೊದಲ ಮಾನದಂಡವಾಗಿರುತ್ತದೆ.
2. #ಜನಸಂಪರ್ಕ_ಮತ್ತು_ಜನಪ್ರಿಯತೆ
ಒಬ್ಬ ಅಭ್ಯರ್ಥಿ ಚುನಾವಣೆಯ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವವನಾಗಿರಬಾರದು.ಪಕ್ಷಗಳು ಸಾಮಾನ್ಯವಾಗಿ ಗಮನಿಸುವ ಅಂಶಗಳು ,ಜನರಿಗೆ ಸುಲಭವಾಗಿ ಲಭ್ಯನಾಗಿದ್ದಾನೆಯೇ?ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸುತ್ತಾನೆಯೇ?ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾನೆಯೇ?
ಕ್ಷೇತ್ರದಲ್ಲಿ ಸದಾ ಸಕ್ರಿಯನಾಗಿದ್ದಾನೆಯೇ?
3. #ಸಂಘಟನಾ_ಸಾಮರ್ಥ್ಯ
ಪಕ್ಷದ ಸಂಘಟನೆಯನ್ನು ಕಟ್ಟುವ ನಾಯಕನಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ.
ಅಭ್ಯರ್ಥಿಯಾದವನು ಕಾರ್ಯಕರ್ತರನ್ನು ಒಗ್ಗೂಡಿಸಬಹುದೇ?ಬೂತ್ ಮಟ್ಟದ ಜಾಲವಿದೆಯೇ?ಚುನಾವಣಾ ಯಂತ್ರವನ್ನು ಪರಿಣಾಮಕಾರಿಯಾಗಿ ನಡೆಸಬಹುದೇ?
4. #ಸ್ವಚ್ಛ_ಸಾರ್ವಜನಿಕ_ಇಮೇಜ್
ರಾಷ್ಟ್ರೀಯ ಪಕ್ಷಗಳು ಸಾಮಾನ್ಯವಾಗಿ ಅಭ್ಯರ್ಥಿಯ ಸಾರ್ವಜನಿಕ ಪ್ರತಿಷ್ಠೆಯನ್ನು ಪರಿಗಣಿಸುತ್ತವೆ.ಪ್ರಾಮಾಣಿಕತೆ ,ವೈಯಕ್ತಿಕ ನಡತೆ ,ಭ್ರಷ್ಟಾಚಾರದ ಆರೋಪಗಳ ಸ್ವರೂಪ ,ಸಾಮಾಜಿಕ ಗೌರವಇವುಗಳೆಲ್ಲವೂ ಅಭ್ಯರ್ಥಿಯ ಸ್ವೀಕಾರಾರ್ಹತೆಯನ್ನು ಪ್ರಭಾವಿಸುತ್ತವೆ.
5. #ಸಮಾಜದ_ವಿವಿಧ_ವರ್ಗಗಳಲ್ಲಿ_ಸ್ವೀಕಾರಾರ್ಹತೆ
ಒಬ್ಬ ಅಭ್ಯರ್ಥಿ ತನ್ನ ಸಮುದಾಯದಲ್ಲಿ ಮಾತ್ರವಲ್ಲ, ಇತರ ಸಮುದಾಯಗಳಲ್ಲಿಯೂ ಸ್ವೀಕಾರಾರ್ಹನಾಗಿರುವುದು ಮುಖ್ಯ.ಇದು ವಿಶೇಷವಾಗಿ ಬಹುಸಾಮಾಜಿಕ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಬಹುದು.
6. #ಕ್ಷೇತ್ರದ_ಸಮಸ್ಯೆಗಳ_ಅರಿವು
ಅಭ್ಯರ್ಥಿಗೆ ಕೃಷಿ,ಉದ್ಯೋಗ,ಶಿಕ್ಷಣ,ಆರೋಗ್ಯ,ಮೂಲಸೌಕರ್ಯ,ಸ್ಥಳೀಯ ಆಡಳಿತ ಈ ವಿಷಯಗಳಲ್ಲಿ ಸ್ಪಷ್ಟ ಅರಿವು ಮತ್ತು ಪರಿಹಾರ ದೃಷ್ಟಿಕೋನ ಇರಬೇಕು.
8. #ಪಕ್ಷಾತೀತ_ಸ್ಪಂದನೆ
ಇಂದಿನ ಮತದಾರರು ಕೇವಲ ಪಕ್ಷದ ಕಾರ್ಯಕರ್ತರನ್ನು ಮಾತ್ರ ಭೇಟಿ ಮಾಡುವ ನಾಯಕರಿಗಿಂತ, ಎಲ್ಲರಿಗೂ ಲಭ್ಯರಾಗುವ ನಾಯಕರನ್ನು ಹೆಚ್ಚು ಮೆಚ್ಚುವ ಪ್ರವೃತ್ತಿ ಕಂಡುಬರುತ್ತದೆ.ಆದ್ದರಿಂದ ಎಲ್ಲರೊಂದಿಗೆ ಬೆರೆಯುವ ಸ್ವಭಾವ ,ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಮಾನ ಪಾಲ್ಗೊಳ್ಳುವಿಕೆ ಸಂಕಷ್ಟದಲ್ಲಿ ಪಕ್ಷಭೇದವಿಲ್ಲದೆ ನೆರವು ಇವು ಅಭ್ಯರ್ಥಿಯ ಜನಪ್ರಿಯತೆಯನ್ನು ಹೆಚ್ಚಿಸಬಹುದು.
9. #ಮಾಧ್ಯಮ_ಮತ್ತು_ಸಾರ್ವಜನಿಕ_ಸಂವಹನ
ಇಂದಿನ ರಾಜಕೀಯದಲ್ಲಿ ಅಭ್ಯರ್ಥಿಗೆ ಉತ್ತಮ ಸಂವಹನ ಕೌಶಲ್ಯ,,ಸಾಮಾಜಿಕ ಮಾಧ್ಯಮ ಬಳಕೆ,,ಮಾಧ್ಯಮದೊಂದಿಗೆ ಸಮತೋಲನದ ಸಂಬಂಧ ಇದ್ದರೆ ಅದು ಹೆಚ್ಚುವರಿ ಬಲವಾಗಬಹುದು.
10. #ದೀರ್ಘಕಾಲೀನ_ನಾಯಕತ್ವದ_ಸಾಮರ್ಥ್ಯ
ರಾಷ್ಟ್ರೀಯ ಪಕ್ಷಗಳು ಕೆಲವೊಮ್ಮೆ ಕೇವಲ ಮುಂದಿನ ಚುನಾವಣೆಯಲ್ಲ, ಮುಂದಿನ 10–15 ವರ್ಷಗಳ ನಾಯಕತ್ವವನ್ನೂ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತವೆ.

ಪ್ರಾಯೋಗಿಕವಾಗಿ, ಅನೇಕ ಪಕ್ಷಗಳು ಆಂತರಿಕ ಸಮೀಕ್ಷೆಗಳು (Internal Surveys) ,ಬೂತ್ ಮಟ್ಟದ ವರದಿಗಳು ,ಗುಪ್ತಚರ ಮತ್ತು ರಾಜಕೀಯ ಪ್ರತಿಕ್ರಿಯೆಗಳು,ಸ್ಥಳೀಯ ಮುಖಂಡರ ಅಭಿಪ್ರಾಯ ,ಸಾಮಾಜಿಕ ಸಮೀಕರಣಗಳು ಹಿಂದಿನ ಚುನಾವಣಾ ಅಂಕಿಅಂಶಗಳು ಅಭ್ಯರ್ಥಿಯ ಆರ್ಥಿಕ ಮತ್ತು ಸಂಘಟನಾ ಸಂಪನ್ಮೂಲಗಳು , ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಒಬ್ಬ ಆದರ್ಶ ಅಭ್ಯರ್ಥಿಯಲ್ಲಿ ಈ ಗುಣಗಳ ಸಮತೋಲನ ಇದ್ದರೆ, ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಅವರು ಬಲವಾದ ಆಯ್ಕೆಯಾಗಬಹುದು.
ಗೆಲ್ಲುವ ಸಾಮರ್ಥ್ಯ ,ಜನಪ್ರಿಯತೆ ,ಜನರೊಂದಿಗೆ ನಿರಂತರ ಸಂಪರ್ಕ ,ಸಂಘಟನಾ ನಾಯಕತ್ವ ,ಪಕ್ಷದ ಮೇಲಿನ ಬದ್ಧತೆ ,ಉತ್ತಮ ಸಾರ್ವಜನಿಕ ಇಮೇಜ್,ಎಲ್ಲ ಸಮುದಾಯಗಳ ಸ್ವೀಕಾರ ,ಕ್ಷೇತ್ರದ ಸಮಸ್ಯೆಗಳ ಅರಿವು ,ಅಭಿವೃದ್ಧಿಯ ಸ್ಪಷ್ಟ ದೃಷ್ಟಿಕೋನ ,ಪ್ರಬುದ್ಧ ಮತ್ತು ಸಮತೋಲಿತ ನಡವಳಿಕೆ ಇತ್ಯಾದಿಗಳು ಇರಬೇಕು.
ಆದ್ದರಿಂದ ರಾಷ್ಟ್ರೀಯ ಪಕ್ಷಗಳು "ಗೆಲ್ಲುವ ಸಾಮರ್ಥ್ಯ , ಜನವಿಶ್ವಾಸ , ಸಂಘಟನಾ ಬಲ , ಪಕ್ಷದ ಬದ್ಧತೆ" ಎಂಬ ನಾಲ್ಕು ವಿಷಯಗಳ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಆದರೆ ಪ್ರಾಯೋಗಿಕ ರಾಜಕೀಯದಲ್ಲಿ ಸ್ಥಳೀಯ ಸಾಮಾಜಿಕ ಸಮೀಕರಣಗಳು, ಪಕ್ಷದ ಆಂತರಿಕ ರಾಜಕೀಯ, ಚುನಾವಣಾ ತಂತ್ರ, ಮೈತ್ರಿಗಳು ಮತ್ತು ಕಾಲಾನುಸಾರ ಬದಲಾಗುವ ಪರಿಸ್ಥಿತಿಗಳೂ ಅಭ್ಯರ್ಥಿ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಅಂತಿಮವಾಗಿ, ಉತ್ತಮ ಅಭ್ಯರ್ಥಿ ಎಂದರೆ ಪಕ್ಷಕ್ಕೆ ಮಾತ್ರವಲ್ಲ, ಕ್ಷೇತ್ರದ ಜನರಿಗೂ ವಿಶ್ವಾಸ ಮೂಡಿಸುವ ನಾಯಕ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಆಯ್ಕೆಯ ನಿಜವಾದ ಯಶಸ್ಸು, ಈ ಎರಡರ ನಡುವೆ ಸಮತೋಲನ ಸಾಧಿಸುವುದರಲ್ಲಿದೆ.

#ಮುಖ್ಯವಾಗಿ_ಯಾವುದೇ_ಪಕ್ಷವು_ಅಭ್ಯರ್ಥಿಯ_ಬಗ್ಗೆ_ಪಕ್ಷವು_ತನ್ನನ್ನು_ತಾನೇ_ಕೇಳಿಕೊಳ್ಳಬೇಕಾದ_ಪ್ರಶ್ನೆಗಳು:
• ಈ ಅಭ್ಯರ್ಥಿ ಕಳೆದ ಐದು ವರ್ಷಗಳಲ್ಲಿ ಜನರಿಗಾಗಿ ಏನು ಮಾಡಿದ್ದಾರೆ?
• ಜನರು ಅವರನ್ನು ಚುನಾವಣೆಯ ಸಮಯದಲ್ಲಿ ಮಾತ್ರ ನೋಡಿದ್ದಾರೆಯೇ, ಅಥವಾ ವರ್ಷಪೂರ್ತಿ ನೋಡಿದ್ದಾರೆಯೇ?
• ಅವರ ಸೇವೆಯ ಲಾಭ ಎಷ್ಟು ಗ್ರಾಮಗಳಿಗೆ ತಲುಪಿದೆ?
• ಜನರ ಸಮಸ್ಯೆಗಳಿಗೆ ಅವರು ಸ್ವತಃ ಧ್ವನಿಯಾಗಿದ್ದಾರೆಯೇ?
• ಕಾರ್ಯಕರ್ತರು ಅವರನ್ನು ನಾಯಕ ಎಂದು ಒಪ್ಪುತ್ತಾರೆಯೇ?
• ವಿರೋಧ ಪಕ್ಷದ ಸಾಮಾನ್ಯ ಮತದಾರರೂ ಅವರ ವೈಯಕ್ತಿಕ ನಡತೆಯನ್ನು ಗೌರವಿಸುತ್ತಾರೆಯೇ?
• ಸಂಕಷ್ಟದ ಸಮಯದಲ್ಲಿ ಜನರು ಮೊದಲಿಗೆ ನೆನಪಿಸಿಕೊಳ್ಳುವ ವ್ಯಕ್ತಿ ಇವರೇನಾ?
ಈ ಸಾಮಾನ್ಯ ಮಾನದಂಡಗಳ ಬೆಳಕಿನಲ್ಲಿ ಪುತ್ತೂರು ಕ್ಷೇತ್ರವನ್ನು ಪರಿಶೀಲಿಸಿದರೆ, ಅರುಣ್ ಕುಮಾರ್ ಪುತ್ತಿಲರ ಹೆಸರೂ ರಾಜಕೀಯ ಚರ್ಚೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತದೆ.

1. #ಗೆಲ್ಲುವ_ಸಾಮರ್ಥ್ಯವೇ_ಮೊದಲ_ಮಾನದಂಡ

ರಾಷ್ಟ್ರೀಯ ಪಕ್ಷಗಳು ಸಾಮಾನ್ಯವಾಗಿ ಮೊದಲಿಗೆ ಕೇಳುವ ಪ್ರಶ್ನೆ:"ಈ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾನೆಯೇ?"ಪುತ್ತೂರಿನ ಸಂದರ್ಭದಲ್ಲಿ, 2023ರ ಚುನಾವಣೆಯ ನಂತರವೂ ಪುತ್ತಿಲರು ಗಮನಾರ್ಹ ಜನಬೆಂಬಲ ಹೊಂದಿದ್ದಾರೆ ಎಂಬ ಅಭಿಪ್ರಾಯ ರಾಜಕೀಯ ವಲಯದದಲ್ಲಿ ವ್ಯಕ್ತವಾಗಿದೆ. ಅವರ ವೈಯಕ್ತಿಕ ಪ್ರಭಾವವು ಚುನಾವಣಾ ಸಮೀಕರಣಗಳ ಮೇಲೆ ಪರಿಣಾಮ ಬೀರಬಹುದು ಎಂಬ ವಿಶ್ಲೇಷಣೆಗಳೂ ನಡೆದಿವೆ. ಇದರಿಂದ, ಪುತ್ತಿಲ ಅವರನ್ನು "ಗೆಲ್ಲುವ ಸಾಮರ್ಥ್ಯ" ಎಂಬ ಮಾನದಂಡದ ಚರ್ಚೆಯಲ್ಲಿ ಪರಿಗಣಿಸುವುದು ಸಹಜವೇ ಆಗುತ್ತದೆ..

2. ೊತೆಗೆ_ಇರುವ_ನಾಯಕತ್ವ
ಒಬ್ಬ ನಾಯಕನ ನಿಜವಾದ ಬಲ ಚುನಾವಣಾ ಸಭೆಗಳಲ್ಲಿ ಅಲ್ಲ; ಜನರ ದೈನಂದಿನ ಬದುಕಿನಲ್ಲಿರುತ್ತದೆ.
ಪುತ್ತಿಲ ಅವರು ಗ್ರಾಮಗಳಿಗೆ ಭೇಟಿ ನೀಡುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ರಾಜಕೀಯ ಗುರುತಿನ ಪ್ರಮುಖ ಅಂಶಗಳಾಗಿವೆ. ಈ ದೃಷ್ಟಿಯಿಂದ, "ಜನರಿಗೆ ಲಭ್ಯನಾಗಿರುವ ನಾಯಕ" ಎಂಬ ಮಾನದಂಡಕ್ಕೆ ಅವರು ಹೊಂದಿಕೊಳ್ಳುತ್ತಾರೆ ಎಂಬುದನ್ನು ಬಹುತೇಕ ಎಲ್ಲರೂ ಹೇಳುತ್ತಾರೆ.

3. #ಸಂಘಟನಾ_ಶಕ್ತಿ
ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬೂತ್ ಮಟ್ಟದಿಂದ ಕಾರ್ಯನಿರ್ವಹಿಸುವ ಸಂಘಟನೆ ಅತ್ಯಗತ್ಯ.
ಪುತ್ತಿಲ ರೊಂದಿಗೆ ಕಾರ್ಯನಿರ್ವಹಿಸುವ ಕಾರ್ಯಕರ್ತರ ಜಾಲ ಹಾಗೂ ಸ್ಥಳೀಯ ಮಟ್ಟದ ಬೆಂಬಲವು ಅವರ ಸಂಘಟನಾ ಸಾಮರ್ಥ್ಯದ ಸೂಚಕವೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.. ಆದರೆ ಇದರ ವ್ಯಾಪ್ತಿ ಮತ್ತು ಪರಿಣಾಮದ ಬಗ್ಗೆ ವಿಭಿನ್ನ ರಾಜಕೀಯ ಅಭಿಪ್ರಾಯಗಳೂ ಇವೆ.

4. #ಜನಪ್ರಿಯತೆ_ಮತ್ತು_ವಿಶ್ವಾಸ
ಪ್ರಚಾರದಿಂದ ಜನಪ್ರಿಯತೆ ಪಡೆಯಬಹುದು.ಆದರೆ ವಿಶ್ವಾಸವನ್ನು ನಿರಂತರ ಸಾರ್ವಜನಿಕ ಬದುಕಿನಿಂದ ಮಾತ್ರ ಗಳಿಸಬಹುದು.ಪುತ್ತಿಲ ರು ರಾಜಕೀಯ ಏರಿಳಿತಗಳ ನಡುವೆಯೂ ಅವರು ಜನರ ಸಂಪರ್ಕವನ್ನು ಉಳಿಸಿಕೊಂಡಿದ್ದಾರೆ. ಇದರಿಂದ ವೈಯಕ್ತಿಕ ವಿಶ್ವಾಸದ ಬಂಡವಾಳವನ್ನು ನಿರ್ಮಿಸಿಕೊಂಡಿದ್ದಾರೆ ಎಂಬುದು ಅವರ ಕಾರ್ಯಕ್ರಮಗಳಿಗೆ ಸೇರುವ ಜನಸಂದಣಿಯಿಂದ ಗೊತ್ತಾಗುತ್ತದೆ.

5. #ಪಕ್ಷದ_ದೃಷ್ಟಿಕೋನ_ಮತ್ತು_ಸ್ಥಳೀಯ_ವಾಸ್ತವ
ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಸ್ಥಳೀಯ ಜನಾಭಿಪ್ರಾಯ ಮತ್ತು ಸಂಘಟನೆಯ ಪ್ರತಿಕ್ರಿಯೆಯನ್ನೂ ಪರಿಗಣಿಸುತ್ತವೆ.ಪುತ್ತೂರಿನಂತಹ ರಾಜಕೀಯವಾಗಿ ಸಕ್ರಿಯ ಕ್ಷೇತ್ರದಲ್ಲಿ, ಕಾರ್ಯಕರ್ತರ ವಿಶ್ವಾಸ, ಸ್ಥಳೀಯ ನಾಯಕತ್ವ ಮತ್ತು ಅಭ್ಯರ್ಥಿಯ ಸ್ವೀಕಾರಾರ್ಹತೆ ಪ್ರಮುಖ ಅಂಶಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಪುತ್ತಿಲರ ಪಾತ್ರವು ಚರ್ಚೆಗೆ ಒಳಗಾಗುವುದು ಅಸಾಮಾನ್ಯವಲ್ಲ.

6. #ಅಭಿವೃದ್ಧಿಯ_ದೃಷ್ಟಿಕೋನ
ಅಭಿವೃದ್ಧಿ ಎಂದರೆ ಕೇವಲ ದೊಡ್ಡ ಯೋಜನೆಗಳಲ್ಲ.ಒಂದು ಕ್ಷೇತ್ರದ ಅಭಿವೃದ್ಧಿಯನ್ನು ಅಳೆಯಬೇಕಾದರೆ:ಪ್ರತಿಯೊಂದು ಪಂಚಾಯತ್,ಪ್ರತಿಯೊಂದು ಗ್ರಾಮ,ರೈತ,ಯುವಕರು,ಮಹಿಳೆಯರು,ಹಿರಿಯ ನಾಗರಿಕರುಇವರ ಬದುಕಿನಲ್ಲಿ ಆಗಿರುವ ಬದಲಾವಣೆಯನ್ನು ನೋಡಬೇಕು.ಗ್ರಾಮಗಳಿಗೆ ಆದ್ಯತೆ ನೀಡುವ ನಾಯಕತ್ವವನ್ನು ಕೆಲ ಮತದಾರರು ಹೆಚ್ಚು ಮಹತ್ವದಿಂದ ನೋಡುವ ಸಾಧ್ಯತೆಯಿದೆ. ಪುತ್ತಿಲ ರು ತೀರಾ ಸಾಮಾನ್ಯ ವ್ಯಕ್ತಿಗೂ ರಿಚೇಬಲ್ ಆಗಿದ್ದಾರೆ.

#ಪುತ್ತೂರು_ರಾಜಕೀಯದ_ಮೂಲ_ಪ್ರಶ್ನೆ
ಪುತ್ತೂರಿನ ಮತದಾರರು ಇಂದು ಕೇಳುತ್ತಿರುವ ಪ್ರಶ್ನೆ ಕೇವಲ:"ಯಾವ ಪಕ್ಷ?"ಎಂಬುದಲ್ಲ.ಅದರ ಜೊತೆಗೆ,"ಯಾವ ನಾಯಕ?"ಎಂಬ ಪ್ರಶ್ನೆಯೂ ಅಷ್ಟೇ ಪ್ರಮುಖವಾಗಿದೆ.ಜನರ ನಡುವೆ ನಿರಂತರವಾಗಿ ಕಾಣಿಸಿಕೊಳ್ಳುವ, ಸುಲಭವಾಗಿ ಲಭ್ಯವಾಗುವ, ಪಕ್ಷದ ಗಡಿಗಳನ್ನು ಮೀರಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವವನ್ನು ಮತದಾರರು ಹೆಚ್ಚು ಮೆಚ್ಚುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಯಾವುದೇ ರಾಷ್ಟ್ರೀಯ ಪಕ್ಷದ ದೃಷ್ಟಿಯಿಂದ ಅಭ್ಯರ್ಥಿಯ ಆಯ್ಕೆ ಎಂದರೆ ಕೇವಲ ಪಕ್ಷನಿಷ್ಠೆಯ ಪ್ರಶ್ನೆಯಲ್ಲ; ಅದು ಗೆಲ್ಲುವ ಸಾಮರ್ಥ್ಯ, ಜನವಿಶ್ವಾಸ, ಸಂಘಟನಾ ಬಲ ಮತ್ತು ಸಾರ್ವಜನಿಕ ಸ್ವೀಕಾರ ಎಂಬ ಅಂಶಗಳ ಸಮತೋಲನವಾಗಿದೆ.

ಈ ಸಾಮಾನ್ಯ ಮಾನದಂಡಗಳನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಹಿನ್ನೆಲೆಯಲ್ಲಿ ಅನ್ವಯಿಸಿದಾಗ, ಅರುಣ್ ಕುಮಾರ್ ಪುತ್ತಿಲರ ಹೆಸರು ರಾಜಕೀಯ ಚರ್ಚೆಯಲ್ಲಿ ಪ್ರಮುಖವಾಗಿ ಕೇಳಿಬರುವುದು ಸಹಜವೆಂದು ಒಂದು ಅಭಿಪ್ರಾಯವಿದೆ. ಆದರೆ ಅಂತಿಮವಾಗಿ, ಅಭ್ಯರ್ಥಿಯಾಗಿ ಯಾರು ಜನರ ವಿಶ್ವಾಸವನ್ನು ಹೆಚ್ಚು ಗಳಿಸುತ್ತಾರೆ ಎಂಬುದನ್ನು ನಿರ್ಧರಿಸುವುದು ಮತದಾರರೇ.
ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಶ್ಲೇಷಣೆಗಿಂತ ಜನರ ತೀರ್ಪೇ ಅಂತಿಮ.
#ಕುಮಾರ_ಸುಬ್ರಹ್ಮಣ್ಯ_ಮುಳಿಯಾಲ.

ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದಲ್ಲಿ ರೋಡ್ ಮಾರ್ಜಿನ್ 25 ಮೀಟರ್ ಬಿಡದೆ ಬಿಲ್ಡಿಂಗ್ ಕಟ್ಟಲು ಬಿಡದ ಹೈವೇಯವರು ಈಗ ರಾಷ್ಟ್ರೀಯ ಹೆದ್ದಾರಿ ಸುಬ್ರಹ...
10/08/2026

ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದಲ್ಲಿ ರೋಡ್ ಮಾರ್ಜಿನ್ 25 ಮೀಟರ್ ಬಿಡದೆ ಬಿಲ್ಡಿಂಗ್ ಕಟ್ಟಲು ಬಿಡದ ಹೈವೇಯವರು ಈಗ ರಾಷ್ಟ್ರೀಯ ಹೆದ್ದಾರಿ ಸುಬ್ರಹ್ನಣ್ಯ ಕ್ರಾಸ್ ಪಕ್ಕ ಹೇಗೆ 75 ಮೀಟರ್ ಬಿಡದೆ… ಸ್ಥಳಿಯಾಡಳಿತ,ಪುಡಾ,ರಾಷ್ಟ್ರೀಯ ಹೆದ್ದಾರಿ ಇಲಾಖೆ,ಜಿಲ್ಲಾಧಿಕಾರಿಗಳು,ಪುತ್ತೂರು ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳು,ಸಂಸದರು ಹೇಗೆ ಪರ್ಮಿಷನ್ ಕೊಟ್ಟಿದ್ದಾರೆ ಪರಿಶೀಲಿಸಿ..


ಅರುಣ್ ಕುಮಾರ್ ಪುತ್ತಿಲ ಅವರು ನಿಜವಾಗಿಯೂ ಟ್ರಾಕ್ ಲ್ಲಿ ಇಲ್ವೇ? 1. ಪುತ್ತಿಲರು ಬಿಜೆಪಿಗೆ ಏನಾದ್ರು ಬೈದ್ರ?-ಇಲ್ಲ2.ಪುತ್ತಿಲರು ಮೋದಿಯನ್ನು ಅಮ...
10/08/2026

ಅರುಣ್ ಕುಮಾರ್ ಪುತ್ತಿಲ ಅವರು ನಿಜವಾಗಿಯೂ ಟ್ರಾಕ್ ಲ್ಲಿ ಇಲ್ವೇ?

1. ಪುತ್ತಿಲರು ಬಿಜೆಪಿಗೆ ಏನಾದ್ರು ಬೈದ್ರ?
-ಇಲ್ಲ

2.ಪುತ್ತಿಲರು ಮೋದಿಯನ್ನು ಅಮಿತ್ ಷಾ ಅವರನ್ನು ಏನಾದ್ರು ಟೀಕಿಸಿದ್ರಾ?
-ಇಲ್ವಲ್ಲ

3.ಪುತ್ತಿಲರು ಪುತ್ತೂರು ಬಿಜೆಪಿ ನಾಯಕರನ್ನು ಯಾರನ್ನಾದ್ರು ಟೀಕಿಸಿದ್ರಾ?
-ಇಲ್ಲ

4 ಪುತ್ತಿಲರು RSSನ ಹಿರಿಯರನ್ನು ಯಾರನ್ನಾದ್ರೂ ನಿಂದಿಸಿದ್ರಾ?
-ಇಲ್ಲ

5 ಪುತ್ತಿಲರು ಲೋಕಸಭೆಯಲ್ಲಿ ನರೇಂದ್ರ ಮೋದಿಯ ವಿರುದ್ಧ ಕಾಂಗ್ರೆಸ್ಸಿಗೆ ಏನಾದ್ರು ಮತಯಾಚನೆ ಮಾಡಿದ್ರ?
-ಇಲ್ಲ

6 ಪುತ್ತಿಲರು ಅನ್ಯಧರ್ಮದವರ ಜೊತೆ ಸೇರಿಕೊಂಡು ಹಿಂದೂ ಧರ್ಮದ ವಿರುದ್ಧ ಪಿತೂರಿ ಏನಾದ್ರು ಮಾಡಿದ್ರ?
-ಛೇ ಹಾಗೇನಿಲ್ಲ

7 ಪುತ್ತಿಲರು ಹಿಂದೂ ದೇವರಿಗೆ ಏನಾದ್ರು ಅಪಹಾಸ್ಯ ಮಾಡಿದ್ರ?
- ಇಲ್ಲ ಆ ತರಹದ ಘಟನೆ ನಡೆದಿಲ್ಲ.

8 ಪುತ್ತಿಲರಿಗೆ ಮತ್ತು ಈಗಿನ ನಮ್ಮ ಸಂಸದ ಚೌಟರಿಗೆ ಏನಾದ್ರು ಜಗಳ ಆಗಿದಾ?
- ಇಲ್ಲ

9 ಪುತ್ತಿಲರು ಕಾಂಗ್ರೇಸ್ ಪಕ್ಷ ಏನಾದ್ರು ಸೇರುವ ಚಿಂತನೆಯಲ್ಲಿ ಇದ್ದಾರೆಯೇ?
-ಇಲ್ಲ

10 ಪುತ್ತಿಲರು ಏನಾದ್ರು ಅಶೋಕ್ ರೈಗಳ ಬ್ಯುಸಿನೆಸ್ ಪಾರ್ಟ್ನರಾ?
-ಹೇ ಇಲ್ಲಪ್ಪ

11 ಪುತ್ತಿಲರು ನೇತ್ರಾವತಿ ತಿರುವು ಯೋಜನೆ ಏನಾದ್ರು ಕೈಗೆತ್ತಿಕೊಂಡಿದ್ದಾರೆಯೇ?
- ಛೇ ಇಲ್ಲ.

12 ಪುತ್ತಿಲರು ಬಿಜೆಪಿ ಪಕ್ಷ ಸೇರಿದ್ದಾರೆಯೇ?
- ಹೌದು ಲೋಕಸಭೆಯ ಸಮಯದಲ್ಲಿ ಮತ್ತೆ ಬಿಜೆಪಿ ಪಕ್ಷ ಸೇರಿದ್ದಾರೆ.

13 ಪುತ್ತಿಲರು ಏನಾದ್ರು ಏಕಾಂಗಿಯೇ? ಅವ್ರಿಗೆ ಜನ ಬೆಂಬಲ ಇಲ್ವೇ?
-ಜನ ಬೆಂಬಲ ಉತ್

14 ಪುತ್ತಿಲರು ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ರಾ?
- ಹೌದು ಭಾಗವಹಿಸಿದ್ದಾರೆ.

15. ಪುತ್ತಿಲರು ಸಮಾಜ ಸೇವೆ ಮಾಡ್ತಾ ಇದ್ದಾರೆಯೇ?
- ಹೌದು

16 ಪುತ್ತಿಲರು ಧಾರ್ಮಿಕ ಕಾರ್ಯಕ್ರಮ ಮಾಡಿದ್ರ?
- ಹೌದು ಸೀತಾರಾಮ ಕಲ್ಯಾಣೋತ್ಸವ, ನಾಗಮಂಡಲ, ವರಮಹಾಲಕ್ಷ್ಮಿ ಹಬ್ಬ ಇತ್ಯಾದಿ

ಇಷ್ಟೆಲ್ಲ ಇದ್ರೂ ಪುತ್ತಿಲ ಅವ್ರು ಟ್ರಾಕ್ ಲ್ಲಿ ಇಲ್ಲ ಅಂತ ಅನಿಸೋದು ಯಾಕೆ? 'ಮೋದಿಜಿಯ ಮನ್ ಕೀ ಬಾತ್ ಕೇಳಿದೆ' ಅಂತ ಪಟ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದವರು ಮಾತ್ರ ಟ್ರಾಕಲ್ಲಿ ಇರೋದಾ? ಬಿಜೆಪಿಯಲ್ಲಿ ಕರೆಂಟ್ ಕಂಬವನ್ನು ನಿಲ್ಲಿಸಿದ್ರು ಪುತ್ತೂರಲ್ಲಿ ಗೆಲ್ಲೋತ್ತೆ ಅನ್ನೋ ಸ್ಥಿತಿಯಿಂದ ಸದ್ಯಕ್ಕೆ ಯಾರು ನಿಂತರು ಗೆಲ್ಲೋದು ಕಷ್ಟ ಅನ್ನೋ ದುಸ್ಥಿತಿಗೆ ಬಿಜೆಪಿಯನ್ನು ತಂದು ನಿಲ್ಲಿಸಿದ್ದು ಯಾರು? ಈಗ ಪುತ್ತೂರಿನ ಬಿಜೆಪಿ ನಾಯಕರು ಅನಿಸಿಕೊಂಡವರು ಅಲ್ವೇ?

ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಮುಂದಿನ ಚುನಾವಣೆಯ ಒಳಗೆ ಒಗ್ಗಟ್ಟಾಗದೆ ಇದೆ ರೀತಿ ಟ್ರಾಕ್ ಬಗ್ಗೆ ಚಿಂತೆ ಮಾಡ್ತಾ, ನಂಜಿ ಕಾರ್ತಾ ಇದ್ರೆ ಚುನಾವಣೆ ಮುಗಿದ ಮೇಲೆ ಟ್ರಾಕ್ ಬದಿಯಲ್ಲಿ ಚಾಪೆ ಹಾಕಿ ಎಲ್ಲರೂ ಒಟ್ಟಿಗೆ ಕೂರಬೇಕಾದೀತು ಎಚ್ಚರ. ಎಲ್ಲರೂ ಒಗ್ಗಟ್ಟಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಚುನಾವಣೆ ಎದುರಿಸಿ ಗೆಲ್ಲಲಿ ಅನ್ನೋದು ಅಸಂಖ್ಯಾತ ಕಾರ್ಯಕರ್ತರ ಮಹದಾಸೆ....

🖊️ ಸಚಿನ್ ಜೈನ್ ಹಳೆಯೂರು.

07/08/2026

ಮಾತಾಂಧನ ಕ್ರೂರ ಕೃತ್ಯಕ್ಕೆ ಸಹೋದರಿ ಸೌಮ್ಯ ಭಟ್ ಬಲಿಯಾಗಿ ಇಂದಿಗೆ 29 ವರ್ಷ.

*ಸಹೋದರಿ ನಿನ್ನ ನೆನಪು ಸದಾ ನಮ್ಮ ಮನದಲ್ಲಿ*

ಓಂ ಶಾಂತಿ 🙏🏻🙏🏻

Address

Subhadra Hall Mukrampady Darbe
Puttur
574202

Alerts

Be the first to know and let us send you an email when Puthila Parivara posts news and promotions. Your email address will not be used for any other purpose, and you can unsubscribe at any time.

Contact The Organization

Send a message to Puthila Parivara:

Shortcuts

Share