02/06/2026
ಕೆ.ಅಣ್ಣಮಲೈ ಯವರ ರಾಜಕೀಯದಲ್ಲಿನ ಅಚ್ಚರಿಯ ಬದಲಾವಣೆ ಈಗ ಪ್ರಸ್ತುತ ಪ್ರಶ್ನಾರ್ಥಕ ಸುದ್ದಿ..!?
ಮೋದಿ ಜೀಯವರ ಕಾರ್ಯ ವೈಖರಿಗೆ ಮನಸೋತು ದೇಶ ಕಟ್ಟುವ,ನಾಡು ಬೆಳೆಸುವ ಸಲುವಾಗಿ ದೇಶದ ಬಲಿಷ್ಠ ಪಕ್ಷ ಭಾ.ಜಾ.ಪ ದಲ್ಲಿ ಉನ್ನತ ಸ್ಥಾನಮಾನ ಗಳೊಂದಿಗೆ ದುಡಿದ "ದಕ್ಷ ಐ.ಪಿ.ಎಸ್ ಅಧಿಕಾರಿ ಕೆ.ಅಣ್ಣಮಲೈ".
ಪ್ರಸ್ತುತ ರಾಜಕೀಯದಲ್ಲಿ ಪಕ್ಷೇತರ ನಾಗಿ ಬದಲಾಗಿ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿರುವ ಸುದ್ದಿ..!?
ಸಂಘ ಮತ್ತು ಸಂಘಟನಾತ್ಮಕ ಕೆಲಸದ ಮೇಲೆ ಒಲವು ತೋರಿ ಹಿಂದುತ್ವದ ಸೇವಕನಾಗಿ ಯಾವುದೇ ಹುದ್ದೆ ಅಧಿಕಾರ ಸ್ಥಾನಮಾನ ಇಲ್ಲದೇ ಹಿಂದುತ್ವಕ್ಕಾಗಿ ಪಕ್ಷದಲ್ಲಿ ಕಾರ್ಯಕರ್ತರ ಸಾಮ್ರಾಟನಾಗಿ ದುಡಿದ "ಅರುಣ್ ಕುಮಾರ್ ಪುತ್ತಿಲ".
ಇಬ್ಬರು ನಿಷ್ಠಾವಂತ ನಾಯಕರು ಉದ್ದೇಶ ಒಂದೇ ಸನಾತನ, ಸಂಸ್ಕೃತಿ,ಸಿದ್ಧಾಂತ ದೇಶದ ಹಿತ ಕಾರ್ಯಕರ್ತರ ಜೊತೆಗಿನ ಒಡನಾಟ ಆದರೆ ಇಂತಹ ಸೇವಕರಿಗೆ ಪಕ್ಷದೊಳಗಿನ ಒಳ ರಾಜಕೀಯ ಒಪ್ಪಂದ ಸರಿ ಹೋಗುವುದಿಲ್ಲ ಎನ್ನುವುದು ಮತ್ತೆ ಸಾಬೀತು ಆಯಿತು..
ಕಾರ್ಯಕರ್ತರ ನಾಯಕನನ್ನು ನಿರ್ಲಕ್ಷ್ಯಿಸಿದ ಮಾತೃ ಪಕ್ಷದ ನಿಲುವಿಗೆ ಈಗ ಅಣ್ಣಮಲೈ ನಿರ್ಧರಿಸಿದ ತೀರ್ಮಾನವನ್ನು ಪುತ್ತಿಲರು ಕಾರ್ಯಕರ್ತರ ಆಶಯದಂತೆ ಅಂದೇ ಕೈಗೊಂಡರು ಆದರೆ ಇಂದು ಶುಭ ಹಾರೈಸುತ್ತಿರುವ ಕೈಗಳೇ ಪುತ್ತಿಲರಿಗೆ ಅಂದು ಅವಮಾನ ಮಾಡುವಷ್ಟು ಕೆಳ ಮಟ್ಟಕ್ಕೆ ಇಳಿದಿತ್ತು.
ಪಕ್ಷದಲ್ಲಿ ಸ್ಥಾನಮಾನ ಸ್ಫರ್ಧಿಸುವ ಅವಕಾಶ ಎಲ್ಲವನ್ನು ಕಲ್ಪಿಸಿದ ನಾಯಕನ ಈ ನಿರ್ಧಾರಕ್ಕೆ ತಕ್ಷಣ ಪಕ್ಷದ ಹೈಕಮಾಂಡ್ ನಾಯಕರುಗಳು ಇದೀಗ ಮನವೊಲಿಸುವ ಕಡೆ ಹೆಜ್ಜೆ ಹಾಕುತ್ತಿದ್ದಾರೆ.ಆದರೆ ಇದೇ ಬೆಳವಣಿಗೆ ಪುತ್ತೂರಿನ ರಾಜಕೀಯದಲ್ಲಿ ನಡೆದಾಗ ಕಾರ್ಯಕರ್ತರಿಗಾಗಿ ಹಗಲಿರುಳು ಪಕ್ಷಕ್ಕಾಗಿ ಹಿಂದುತ್ವಕ್ಕಾಗಿ ನಿರಂತರ 35 ವರುಷಗಳಿಂದ ನಿಸ್ವಾರ್ಥವಾಗಿ ದುಡಿದ ಅರುಣ್ ಕುಮಾರ್ ಪುತ್ತಿಲರ ಪರವಾಗಿ ಯಾಕೆ ಮನವೊಲಿಕೆ ಇಲ್ಲವಾಯಿತು..?? ಮನ್ನಣೆ ನೀಡುವ ಪ್ರಯತ್ನಗಳು ಸಾಧ್ಯ ಆಗದೇ ಹೋಯಿತು..??
ಕಳೆದ 2023 ರ ವಿಧಾನ ಸಭೆ ಚುನಾವಣೆಯ ವಾಸ್ತವ ಅರಿಯದೇ ಪುತ್ತೂರಿನ ಬಿ.ಜೆ.ಪಿ ಗಾಗಿ ಕಾರ್ಯಕರ್ತರ ಒಮ್ಮತ ವಿಲ್ಲದ ಅಭ್ಯರ್ಥಿಯ ಪರವಾಗಿ ಕ್ಯಾಂಪೈನ್ ಮಾಡಿದ ಬಲಿಷ್ಠ ನಾಯಕರಾದ ಯೋಗಿ ಜೀ ಮತ್ತಿತರ ಜೊತೆ ಅಣ್ಣಮಲೈ ಯವರು ಕೂಡ ಒಬ್ಬರು ಆದರೆ ಎಂದಿಗೂ ಇದನ್ನು ಪ್ರಶ್ನೆ ಮಾಡಿದ ಕಾರ್ಯಕರ್ತರು ನಾವಲ್ಲ ನಮಗೆ ಬೇಸರವು ಇಲ್ಲ ಯಾಕೆಂದರೆ ರಾಷ್ಟ್ರ ಮಟ್ಟದ ನಾಯಕರ ಮೇಲಿನ ಗೌರವ ನಂಬಿಕೆ.
ಪುತ್ತೂರಿನ ಅಧಿಕಾರದ ದಾಹಕ್ಕೆ ಕಡೆಗಣಿಸಿದ ಸ್ವಾರ್ಥಿಗಳ ನಿರ್ಧಾರಕ್ಕೆ ಬೇಸತ್ತು ಕಾರ್ಯಕರ್ತರು ನೀಡಿದ ಕಾಲದ ಉತ್ತರ ಪಕ್ಷೇತರ.
ಉತ್ತಮ ನಾಯಕತ್ವದ ಗುಣವನ್ನು ಹತ್ತಿಕ್ಕುವ ಪ್ರಯತ್ನವೇ..!! ಏನೆಂದು ತಿಳಿಯದು ಆದರೆ ತನ್ನದೇ ಪಕ್ಷದ ನಾಯಕರು ಅಭಿನಂದನೆಗಳೊಂದಿಗೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸುತ್ತಿರುವುದು ವಿಪರ್ಯಾಸ. 'ಬಿಟ್ಟು ಹೋಗುವವರ,ಹೊಸ ಪಕ್ಷ ಕಟ್ಟುವವರ ಜೊತೆ ಈ ಬಾರಿ ಸಿದ್ಧಾಂತ ಗಟ್ಟಿಯಾಗಿ ಎದ್ದು ನಿಂತಿದೆ ಅನ್ನುವುದಂತು ನಮಗೆ ಸ್ಪಷ್ಟವಾಯಿತು.
ಶುಭವಾಗಲಿ ಅಣ್ಣಮಲೈ ಜೀ ನಿಮ್ಮ ನಿರ್ಧಾರಕ್ಕೆ ನಾಳೆ ಇನ್ನಷ್ಟು ಉನ್ನತ ಸ್ಥಾನಮಾನಗಳ ವಾಗ್ದಾನ ಪಕ್ಷದಿಂದ ಬರಬಹುದು ಆದರೆ ನಿಮ್ಮ ರಾಜೀನಾಮೆಯ ಹಿಂದಿರುವ ಅದೇ ನೋವು ಇದಾಗಲೇ ಪುತ್ತೂರಿನ ಕಾರ್ಯಕರ್ತರ ಮನಸ್ಸಿಗೆ ತಟ್ಟಿ ಹೋಗಿ ಮೂರು ವರುಷಗಳೇ ಕಳೆದು ಹೋಗಿದೆ.
ಸಿದ್ಧಾಂತಗಳನ್ನೆ ಒಟ್ಟುಗೂಡಿಸಿ ಹಿಂದುತ್ವದ ಗಟ್ಟಿತನ ದೊಂದಿಗೆ ತಮಿಳುನಾಡು ರಾಜಕೀಯದ ಭವಿಷ್ಯದಲ್ಲಿ ದೇಶದ ಹಿತಕ್ಕಾಗಿ ಜನಜೀವನದ ಗೆಲುವಿಗಾಗಿ ಸದಾ ಸೇವಕನಾಗಿ ಮುಂದುವರೆಯಿರಿ ಎಂಬುದೇ ನಮ್ಮ ಆಶಯ.🚩