ಸೇವಾ ಕನ್ನಡಿಗರು

ಸೇವಾ ಕನ್ನಡಿಗರು ಶ್ರಮದ ಒಂದು ಅಂಶ ಧರ್ಮಕ್ಕೆ.
ತನು ಮನ ಧನ ಸಹಾಯ ಮಾಡಿ ಪ್ರೋತ್ಸಾಹಿಸಿ ಬೆಳೆಸಿ ,ಜೀವಂತವಾಗಿರುವ ಜೀವಗಳಿಗೆ ನೀವೇ ದೇವರುಗಳು..
(1)

📚👗 ಸೇವಾ ಕನ್ನಡಿಗರ ಟ್ರಸ್ಟ್ ವತಿಯಿಂದ ಪುಸ್ತಕ ಹಾಗೂ ವಸ್ತ್ರ ವಿತರಣೆ ಕಾರ್ಯಕ್ರಮ 👗📚ಶಿಕ್ಷಣ ಮತ್ತು ಸಂಸ್ಕಾರಯುತ ಸಮಾಜ ನಿರ್ಮಾಣದ ಸಂಕಲ್ಪದೊಂದಿ...
18/06/2026

📚👗 ಸೇವಾ ಕನ್ನಡಿಗರ ಟ್ರಸ್ಟ್ ವತಿಯಿಂದ ಪುಸ್ತಕ ಹಾಗೂ ವಸ್ತ್ರ ವಿತರಣೆ ಕಾರ್ಯಕ್ರಮ 👗📚
ಶಿಕ್ಷಣ ಮತ್ತು ಸಂಸ್ಕಾರಯುತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ, ಸೇವಾ ಕನ್ನಡಿಗರ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ ಹಾಗೂ ಹೆಣ್ಣು ಮಕ್ಕಳಿಗೆ ವಸ್ತ್ರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಮಾಜ ಚಿಂತಕರು, ಪರಿಸರ ಪ್ರೇಮಿಗಳು ಹಾಗೂ ಗೋಸೇವಕರಾದ ಶ್ರೀಯುತ ಶ್ರೀ ಅಹೋರಾತ್ರರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ಪುಸ್ತಕಗಳು ಮತ್ತು ವಸ್ತ್ರಗಳನ್ನು ವಿತರಿಸಲಿದ್ದಾರೆ.
📅 ದಿನಾಂಕ: 19-06-2026 (ಶುಕ್ರವಾರ)
🕝 ಸಮಯ: ಮಧ್ಯಾಹ್ನ 2:30
📍 ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ (ಜಿ.ಬಿ.ಎಸ್ ನಗರ), ಯಲಹಂಕ, ಬೆಂಗಳೂರು
ಅಕ್ಷರದಾನದೊಂದಿಗೆ ವಸ್ತ್ರದಾನ – ಮಕ್ಕಳ ಕನಸುಗಳಿಗೆ ರೆಕ್ಕೆ ನೀಡೋಣ..! ❤️
🙏 ಸರ್ವರಿಗೂ ಆತ್ಮೀಯ ಸ್ವಾಗತ

02/06/2026

"ಸೇವಾ ಕನ್ನಡಿಗರ ಟ್ರಸ್ಟ್ ವತಿಯಿಂದ ಆತ್ಮೀಯರಾದ ಶ್ರೀನಿವಾಸ್ ಜಿ ಅವರ ಪುತ್ರ ಚಿರಂಜೀವಿ ಯಶ್ ರಾಮ್ ಅವರ ಜನ್ಮದಿನವನ್ನು ನಮ್ಮ ಭವ್ಯ ಸನಾತನ ಧರ್ಮದ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರಕಾರ ಅತ್ಯಂತ ಸಾರ್ಥಕವಾಗಿ ಆಚರಿಸಲಾಯಿತು. ಪಾಶ್ಚಾತ್ಯ ಅನುಕರಣೆಯ ನಡುವೆ ನಮ್ಮ ಮಣ್ಣಿನ ಪರಂಪರೆಯನ್ನು ಎತ್ತಿಹಿಡಿದ ಈ ಅಪೂರ್ವ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಗಮಿಸಿ, ಮಗುವನ್ನು ಹರಸಿ ಹಾರೈಸಿದ ಎಲ್ಲಾ ಬಂಧು-ಮಿತ್ರರಿಗೂ ಹಾಗೂ ಹಿರಿಯರಿಗೂ ನಮ್ಮ ಹೃದಯಪೂರ್ವಕ ಧನ್ಯವಾದಗಳು. ಸಮಾಜಕ್ಕೆ ಸನ್ಮಾರ್ಗ ತೋರುವ ಇಂತಹ ಶ್ರೇಷ್ಠ ಸಾಂಸ್ಕೃತಿಕ ಕಾರ್ಯಗಳು ಮುಂದಿನ ದಿನಗಳಲ್ಲೂ ಸದಾ ಮುಂದುವರಿಯಲಿ."

12/05/2026

ರಾಜಾಜಿನಗರದ 5ನೇ ಬ್ಲಾಕ್‌ನಲ್ಲಿರುವ 'ದ ಗರ್ಲ್ಸ್ ಕಲೆಕ್ಷನ್' ಬಟ್ಟೆ ಮಳಿಗೆಗೆ ಭೇಟಿ ನೀಡಲಾಯಿತು. ಈ ಮಳಿಗೆಯಲ್ಲಿ ಇರಿಸಲಾಗಿರುವ ಗೋಮಾತೆಯ ಆಕಾರದ ಹುಂಡಿಯಲ್ಲಿ ಶೇಖರಣೆಯಾದ ಹಣವನ್ನು ಮಳಿಗೆಯ ಮಾಲೀಕರು ಅತ್ಯಂತ ಪ್ರೀತಿಯಿಂದ ನಮ್ಮ ಟ್ರಸ್ಟ್‌ನ ಸೇವಾ ಕಾರ್ಯಗಳಿಗಾಗಿ ಹಸ್ತಾಂತರಿಸಿದ್ದಾರೆ.
​ಪ್ರತಿ ಬಾರಿಯೂ ಹುಂಡಿ ತುಂಬಿದಾಗ ಮರೆಯದೆ ಸೇವಾ ಕನ್ನಡಿಗರ ಟ್ರಸ್ಟ್‌ಗೆ ನೀಡಿ, ಸಮಾಜದ ಒಳಿತಿಗಾಗಿ ಕೈಜೋಡಿಸುತ್ತಿರುವ ರಾಮಚಂದ್ರ ಅಣ್ಣ ಅವರಿಗೆ ನಮ್ಮ ಟ್ರಸ್ಟ್ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಈ ಗೋಸೇವೆ ಮತ್ತು ಸಮಾಜಮುಖಿ ಕಳಕಳಿ ಇತರರಿಗೆ ಮಾದರಿಯಾಗಲಿ.
​ಧನ್ಯವಾದಗಳೊಂದಿಗೆ,
ಸೇವಾ ಕನ್ನಡಿಗರು ಟ್ರಸ್ಟ್

11/04/2026

ರಾಜಾಜಿನಗರದ ಒಂದನೇ ಬ್ಲಾಕ್‌ನಲ್ಲಿರುವ 'ನಮ್ಮ ಗರ್ಲ್ಸ್ ಕಲೆಕ್ಷನ್' ಮಾಲೀಕರಾದ ಮಂಜುನಾಥ್ ರವರ ಸಮಾಜಸೇವೆ ನಿಜಕ್ಕೂ ಶ್ಲಾಘನೀಯ. ತಾವು ಪಡುವ ಶ್ರಮದ ಒಂದು ಅಂಶ ಧರ್ಮಕಾರ್ಯಕ್ಕೆ ಬಳಕೆಯಾಗಲಿ ಎಂಬ ಉದಾತ್ತ ಧ್ಯೇಯದೊಂದಿಗೆ, ಪ್ರತಿದಿನ ಶೇಖರಿಸಿದ 'ಗೋವಿನ ಹುಂಡಿ'ಯನ್ನು ಸತತ ಮೂರನೇ ಬಾರಿಗೆ ಸೇವಾ ಕನ್ನಡಿಗರ ಟ್ರಸ್ಟ್ (ರಿ) ಗೆ ಹಸ್ತಾಂತರಿಸಿದ್ದಾರೆ.
​ಮಂಜುನಾಥ್ ರವರ ಈ ನಿಸ್ವಾರ್ಥ ಸೇವಾ ಮನೋಭಾವಕ್ಕೆ ಸೇವಾ ಕನ್ನಡಿಗರ ಟ್ರಸ್ಟ್ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಿಮ್ಮ ಈ ಸೇವೆ ಹೀಗೆಯೇ ನಿರಂತರವಾಗಿ ಸಾಗಲಿ. ಪ್ರಭು ಶ್ರೀರಾಮಚಂದ್ರನು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಕಲ ಸುಖ-ಶಾಂತಿ, ಐಶ್ವರ್ಯ ನೀಡಿ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇವೆ.

ನೀವು ಸಹ ಸೇವಾ ಕನ್ನಡಿಗರ ಟ್ರಸ್ಟ್ ಮೂಲಕ ಸಮಾಜದ ಸೇವೆ ಮಾಡಲು ಇಚ್ಛಿಸಿದರೆ, ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ:
📞 7019873494

04/02/2026

ಸೇವಾ ಕನ್ನಡಿಗರು ಸಂಘಟನೆ ವತಿಯಿಂದ
ಹರಿ ಓಂ 🙏
ಎಲ್ಲಾ ದೇಶಭಕ್ತರಿಗೂ ನಮಸ್ಕಾರ.
ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಕೆಂಪಾಪುರದಲ್ಲಿ ಧೈರ್ಯವಾಗಿ ಧ್ವನಿ ಎತ್ತಿದ ಸುರೇಶ್ ಅವರ ಹೋರಾಟ ಎಲ್ಲರಿಗೂ ತಿಳಿದಿರುವ ವಿಚಾರ. ವಿಚಾರಣೆಯ ನೆಪದಲ್ಲಿ 10 ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಲ್ಪಟ್ಟ ಸಂದರ್ಭದಲ್ಲೂ, ನಂತರ ಬೇಲಿನ ಮೂಲಕ ಹೊರಬಂದ ಬಳಿಕವೂ ಸೇವಾ ಕನ್ನಡಿಗರ ಟ್ರಸ್ಟ್ ಅವರ ಕುಟುಂಬದೊಂದಿಗೆ ನಿಂತು “ನಾವಿದ್ದೇವೆ” ಎಂಬ ಧೈರ್ಯ ತುಂಬಿದ ಕಾರ್ಯ ನಿಜಕ್ಕೂ ಶ್ಲಾಘನೀಯ.
ಆ ಕಠಿಣ ಹತ್ತು ದಿನಗಳಲ್ಲಿ ಕುಟುಂಬಕ್ಕೆ ಸಾಂತ್ವನ ನೀಡುವುದು, ನಂತರ ವೆಚ್ಚ ಭಾರವನ್ನು ಹೊತ್ತು ಸನ್ಮಾನಿಸುವುದು—ಇವೆಲ್ಲವೂ ಒಂದು ಸಂದೇಶ ನೀಡುತ್ತದೆ:
👉 ಹಿಂದುತ್ವ, ಧರ್ಮ ಕಾರ್ಯ ಇಲ್ಲಿ ಅಂತ್ಯವಾಗುವುದಿಲ್ಲ.
ಸತೀಶ್ ಅವರು ಮತ್ತಷ್ಟು ಸದೃಢವಾಗಿ ನಿಂತು ಮುಂದಿನ ದಿನಗಳಲ್ಲಿ ಧರ್ಮ ಕಾರ್ಯಗಳನ್ನು ಇನ್ನೂ ಬಲವಾಗಿ ನಡೆಸಲಿ ಎಂಬ ಶುಭಾಶಯದೊಂದಿಗೆ ಈ ಸೇವೆಗೆ ಕೈಜೋಡಿಸಿದ ಎಲ್ಲಾ ದಾನಿಗಳು, ಸೇವಕರು ಹಾಗೂ ಟ್ರಸ್ಟ್ ಸದಸ್ಯರಿಗೆ ಹೃದಯಪೂರ್ವಕ ಕೃತಜ್ಞತೆಗಳು 🙏
🙏 ದೇವರು ಸುರೇಶ್ ಅವರ ಕುಟುಂಬಕ್ಕೆ ಇನ್ನಷ್ಟು ಶಕ್ತಿ, ಧೈರ್ಯ ಮತ್ತು ಆಶೀರ್ವಾದ ನೀಡಲಿ.
🙏 ಮುಂದಿನ ದಿನಗಳಲ್ಲಿ ಇಂತಹ ಧರ್ಮ ಮತ್ತು ಸಮಾಜ ಸೇವಾ ಕಾರ್ಯಗಳು ಇನ್ನಷ್ಟು ಬಲವಾಗಿ ಮುಂದುವರಿಯಲಿ.
ಧರ್ಮೋ ರಕ್ಷತಿ ರಕ್ಷಿತಃ
🚩 ಜೈ ಹಿಂದೂ – ಜೈ ಭಾರತ 🚩
#ಸೇವಾಕನ್ನಡಿಗರು #ರಾಷ್ಟ್ರರಕ್ಷಣಾಪಡೆ #ಅಕ್ರಮಬಾಂಗ್ಲಾವಲಸಿಕೆರೆಕರ್ನಾಟಕಬಿಟ್ಟುತೊಲಗಿರಿ We Support Puneeth Kerehalli Nagendrappa Shiroor

19/01/2026

🕉️ ಹರಿ ಓಂ 🙏
ಸೇವಾ ಕನ್ನಡಿಗರು ಟ್ರಸ್ಟ್ ವತಿಯಿಂದ ಜನವರಿ ತಿಂಗಳ ಮತ್ತೊಂದು ಸೇವಾ ಕಾರ್ಯವನ್ನು ನಾವು ಶ್ರಮದ ಸೇವೆಯಾಗಿ, ಧರ್ಮದ ಅಂಶವಾಗಿ ಯಶಸ್ವಿಯಾಗಿ ನೆರವೇರಿಸಿದ್ದೇವೆ.
ಸೇವಾ ಕನ್ನಡಿಗರು ಟ್ರಸ್ಟ್ ಸದಸ್ಯರು ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ. ಅದೇ ಹಾದಿಯಲ್ಲಿ ನಾವು ಈ ಸೇವೆಯನ್ನು ಮುಂದುವರೆಸುತ್ತಿದ್ದೇವೆ.
ಇದೇ ಸಂದರ್ಭದಲ್ಲಿ, ಕೊಡಗು ಜಿಲ್ಲೆಯ ಕುಶಾಲನಗರದ ಮಧು ಎಂಬ ವ್ಯಕ್ತಿಯು ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ,
ತಾವು ಸುಮಾರು ಒಂದು ವರ್ಷದಿಂದ AVN (Avascular Necrosis) ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇನೆಂದು ತಿಳಿಸಿದರು.
ನಾನು ಹಲವು ವರ್ಷಗಳಿಂದ ಹಿಂದೂ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸ್ವಯಂಸೇವಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ನನ್ನ ಆಸ್ಪತ್ರೆಯ ಚಿಕಿತ್ಸಾ ಖರ್ಚಿಗೆ ನಿಮ್ಮ ಟ್ರಸ್ಟ್‌ನಿಂದ ಸಾಧ್ಯವಾದಷ್ಟು ಸಹಾಯ ಮಾಡಬಹುದೇ ಎಂದು ವಿನಂತಿಸಿಕೊಂಡರು.
ಈ ವಿಷಯವನ್ನು ಸೇವಾ ಕನ್ನಡಿಗರು ಟ್ರಸ್ಟ್ ಸದಸ್ಯರ ಮುಂದೆ ಇಡಲಾಗಿದ್ದು, ಎಲ್ಲ ಸದಸ್ಯರೂ ಒಮ್ಮತದಿಂದ ಆ ಹಿಂದೂ ಸಹೋದರನಿಗೆ ಸಹಾಯ ಮಾಡಲು ನಿರ್ಧರಿಸಿದೆವು
ಅದರಂತೆ ಇಂದು ಮಧು ಅವರನ್ನು ಸೇವಾ ಕನ್ನಡಿಗರು ಟ್ರಸ್ಟ್ ಕಚೇರಿಗೆ ಕರೆಸಿ, ಚಿಕಿತ್ಸೆಗಾಗಿ ಅಗತ್ಯವಿರುವ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಈ ಸೇವಾ ಕಾರ್ಯಕ್ಕೆ ಸೇವಾ ಕನ್ನಡಿಗರು ಟ್ರಸ್ಟಿನ ಸೇವೆ ಹಾಗೂ ಸಹೃದಯ ದಾನಿಗಳ ಸಹಕಾರ ದೊರೆತಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಧರ್ಮಾಧಾರಿತ ಸೇವೆಗಳಿಗೆ ಜನರು ನಮ್ಮೊಡನೆ ಕೈಜೋಡಿಸಬೇಕಾಗಿ ನಿಮ್ಮಲ್ಲಿ ವಿನಂತಿ 👏
🙏 ಸೇವೆಯೇ ಧರ್ಮ, ಧರ್ಮವೇ ಶಕ್ತಿ
ಅಗತ್ಯವಿರುವ ಸಹೋದರನಿಗೆ ಕೈಹಿಡಿಯುವುದು ನಮ್ಮ ಕರ್ತವ್ಯ.
ಇಂತಹ ಸೇವಾ ಕಾರ್ಯಗಳಿಗೆ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.
🕉️ ಹರಿ ಓಂ 🙏
ಸೇವಾ ಕನ್ನಡಿಗರು ರಾಷ್ಟ್ರ ರಕ್ಷಣಾ ಪಡೆ Santhosh Karthal Dayanand Sakleshpura We Support Puneeth Kerehalli

04/01/2026

ಸೇವಾ ಕನ್ನಡಿಗರು ಟ್ರಸ್ಟ್ ವತಿಯಿಂದ ನಮ್ಮ Chethan Kumar P ಅವರ ಊರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಅಳಿಲು ಸೇವೆ ನೀಡಿರುವ ಸೇವಾ ಕನ್ನಡಿಗರು ಟ್ರಸ್ಟ್

03/01/2026

ಜೈ ಶ್ರೀರಾಮ್ 🙏
ಸೇವಾ ಕನ್ನಡಿಗರು ಟ್ರಸ್ಟ್‌ನ ಎಲ್ಲಾ ಆತ್ಮೀಯ ಸದಸ್ಯರಿಗೆ ಹೃದಯಪೂರ್ವಕ ನಮಸ್ಕಾರ.
ಸೇವೆಯೇ ಧರ್ಮ ಎಂಬ ಭಾವನೆಯೊಂದಿಗೆ, ಸೇವಾ ಕನ್ನಡಿಗರು ಟ್ರಸ್ಟ್ ವತಿಯಿಂದ ಗೋಶಾಲೆ ಸ್ವಚ್ಛತಾ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಪವಿತ್ರ ಕಾರ್ಯಕ್ಕೆ ನೇತೃತ್ವ ನೀಡುತ್ತಿರುವವರು ನಮ್ಮ ಟ್ರಸ್ಟ್‌ನ ಗೌರವಾಧ್ಯಕ್ಷರು,
ಮಾಜಿ ಯೋಧರಾದ ಜಯರಾಮ್ ಕೃಷ್ಣಪ್ಪರವರು – ರಾಷ್ಟ್ರಸೇವೆಯ ನಂತರವೂ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ಪ್ರೇರಣಾತ್ಮಕ ವ್ಯಕ್ತಿತ್ವ.
ಗೋಸೇವೆ ಮಹಾಸೇವೆ.
ಬನ್ನಿ, ಎಲ್ಲರೂ ಕೈಜೋಡಿಸಿ ಈ ಪುಣ್ಯಕಾರ್ಯವನ್ನು ಯಶಸ್ವಿಗೊಳಿಸೋಣ.
ನಮ್ಮ ಸೇವೆಯಿಂದ ಸಮಾಜಕ್ಕೂ, ಸಂಸ್ಕೃತಿಗೂ ಹೊಸ ಶಕ್ತಿ ತುಂಬೋಣ.
ಜೈ ಗೋಮಾತೆ 🐄 | ಜೈ ಸೇವಾ ಕನ್ನಡಿಗರು 🇮🇳

03/01/2026

ಸಂಕ್ರಾಂತಿ ಹಬ್ಬ – ಸೇವೆಯ ಸಂಭ್ರಮ
ಸೇವಾ ಕನ್ನಡಿಗರ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ
ಅಯೋಧ್ಯೆ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಡುಪುಗಳನ್ನು ವಿತರಿಸಲಾಯಿತು.
ಮಕ್ಕಳ ಮುಖದಲ್ಲಿನ ನಗು, ಅವರೊಂದಿಗೆ ಕಳೆದ ಕ್ಷಣಗಳು
ನಮ್ಮ ಹೃದಯ ತುಂಬಿದ ಸಂತೋಷ ಮತ್ತು ತೃಪ್ತಿಯ ಅನುಭವವನ್ನು ನೀಡಿತು.
ಸೇವೆ ಎನ್ನುವುದು ಕೇವಲ ಕೊಡುವುದಲ್ಲ,
ಮಕ್ಕಳ ಜೊತೆ ಸಮಯ ಹಂಚಿಕೊಳ್ಳುವುದು,
ಅವರ ಭವಿಷ್ಯಕ್ಕೆ ಆಶಾವಾದ ನೀಡುವುದೇ ನಿಜವಾದ ಹಬ್ಬದ ಅರ್ಥ.
ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ
ಟ್ರಸ್ಟಿನ ಎಲ್ಲಾ ಸದಸ್ಯರಿಗೆ ಹಾಗೂ ಸಹಕರಿಸಿದ ದಾನಿಗಳಿಗೆ
ಹೃತ್ಪೂರ್ವಕ ಧನ್ಯವಾದಗಳು
ಸೇವೆಯೇ ನಮ್ಮ ಸಂಸ್ಕೃತಿ – ಸಂಸ್ಕೃತಿಯೇ ನಮ್ಮ ಶಕ್ತಿ
#ಸೇವಾ_ಕನ್ನಡಿಗರ_ಟ್ರಸ್ಟ್
#ಸಂಕ್ರಾಂತಿ_ಸೇವೆ
#ಮಕ್ಕಳ_ನಗು
#ಸೇವೆಯ_ಹಬ್ಬ

01/01/2026

ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೇವಾ ಕಾರ್ಯ 🌾🙏
ಸೇವಾ ಕನ್ನಡಿಗರು ಟ್ರಸ್ಟ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಂದು ಅರ್ಥಪೂರ್ಣ ಹಾಗೂ ಮಾನವೀಯ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಹಿಂದೂ ಹೋರಾಟಗಾರರೂ, ಸಮಾಜ ಸೇವಕರೂ ಆದ ಶ್ರೀ ಸಂತೋಷ ಕರ್ತಾಳ್ ಅವರು ನಡೆಸುತ್ತಿರುವ “ಅಯೋಧ್ಯ” ಶಾಲೆಯಲ್ಲಿ, ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ 40 ಮಕ್ಕಳಿಗೆ ಕರ್ನಾಟಕದ ಸಂಪ್ರದಾಯದ ಉಡುಗೆ-ತೊಡುಗೆಗಳನ್ನು ವಿತರಿಸಲಾಯಿತು.
ಈ ಮಹತ್ವದ ಸೇವಾ ಕಾರ್ಯಕ್ಕೆ ಅಗತ್ಯವಾದ ಉಡುಗೆಗಳನ್ನು
ಗರ್ಲ್ ಕಲೆಕ್ಷನ್ ಸಂಸ್ಥೆಯ ಮಾಲೀಕರಾದ ಹಾಗೂ ಸಮಾಜ ಸೇವಕರಾದ
ಶ್ರೀ ರಾಮಚಂದ್ರ ಮತ್ತು ಶ್ರೀ ಲಕ್ಷ್ಮಣ್ ನರುಗನಹಳ್ಳಿ ಅವರು ಉಡುಗೆಯನ್ನು ಟ್ರಸ್ಟ್ ಗೆ ನೀಡಿರುತ್ತಾರೆ.
ಅವರಿಗೆ ಸೇವಾ ಕನ್ನಡಿಗರು ಟ್ರಸ್ಟ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏
ಇದೇ ಸಂದರ್ಭದಲ್ಲಿ ಸೇವಾ ಕನ್ನಡಿಗರು ಟ್ರಸ್ಟ್ ವತಿಯಿಂದ ಆ ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಯಿತು. ಇದರಿಂದ ಮಕ್ಕಳಿಗೆ ಹಬ್ಬದ ಸಂಭ್ರಮ ಇನ್ನಷ್ಟು ಸಂತೋಷದಾಯಕವಾಗಲಿದೆ.
ಅದೇ ರೀತಿ, ಸೇವಾ ಕನ್ನಡಿಗರು ಟ್ರಸ್ಟ್ ಸದಸ್ಯರಾದ ಶ್ರೀ ನಂದೀಶ್ ಅವರ ಸಹಕಾರದಿಂದ ಮಕ್ಕಳಿಗೆ ನೋಟ್ಬುಕ್‌ಗಳನ್ನು ಕೂಡ ನೀಡಲಾಯಿತು.ಇದು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಒಂದು ಮಹತ್ವದ ಹೆಜ್ಜೆಯಾಗಿದೆ.
📅 ದಿನಾಂಕ: 30-01-2025
📍 ಸ್ಥಳ: ಅಯೋಧ್ಯ ಶಾಲೆ
ಈ ಸೇವಾ ಕಾರ್ಯವನ್ನು ಮಕ್ಕಳಿಗೆ ನೇರವಾಗಿ ತಲುಪಿಸುವ ಸಲುವಾಗಿ ನಾವು ಸ್ಥಳಕ್ಕೆ ತೆರಳಿ ಮಕ್ಕಳಿಗೆ ನಾವು ತೆಗೆದುಕೊಂಡು ಹೋದಂತಹ ವಸ್ತುಗಳನ್ನು ನೀಡಲಾಯಿತು.
ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಿದಂತಹ ಎಲ್ಲಾ ಸೇವಾ ಕನ್ನಡಿಗರ ಟ್ರಸ್ಟ ಸದಸ್ಯರಿಗೂ ಹೃದಯಪೂರ್ವಕ ಧನ್ಯವಾದಗಳು.

ಶ್ರಮದ ಒಂದು ಅಂಶ ಧರ್ಮಕ್ಕಾಗಿ.
ಸೇವೆ ನಮ್ಮ ಧರ್ಮ – ಸೇವೆಯೇ ನಮ್ಮ ಶಕ್ತಿ.

#ಸೇವಾಕನ್ನಡಿಗರು


#ಕರ್ನಾಟಕ
#ಬೆಂಗಳೂರು

Address

Nelamangala
562123

Website

Alerts

Be the first to know and let us send you an email when ಸೇವಾ ಕನ್ನಡಿಗರು posts news and promotions. Your email address will not be used for any other purpose, and you can unsubscribe at any time.

Share