21/10/2025
ಇಂದು ಡಾ. ಬಿ.ಎಸ್. ಅಜಯ್ ಕುಮಾರ್ ರವರ ಸಾರಥ್ಯ ದ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆ ವತಿಯಿಂದ ಅಂತರ್ಧ್ವನಿ ನಾಯಕತ್ವ ಅಭಿಯಾನ ಕಾರ್ಯ ಕ್ರಮ ನಡೆಸಲಾಯಿತು
ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ಬಿ ಎಸ್ ಅಜಯ್ ಕುಮಾರ್ ರವರು ಮಾತನಾಡುತ್ತ, ಜನರ ಅಭಿವೃದ್ಧಿ ಆರ್ಥಿಕ ಬದಲಾವಣೆ ಯಿಂದ ಉದ್ಯೋಗ ಸೃಷ್ಟಿ ಯಿಂದ ಸಾಧ್ಯವೇ ಹೊರತು ಅನಗತ್ಯ ಉಚಿತ ಸವಲತ್ತು ಗಳಿಂದ ಅಲ್ಲ
ಹಾಗಾಗಿ ನಾವು ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕ ವಾಗಿ ಯೋಚಿಸ ಬೇಕಾಗಿದೆ
ನಮ್ಮ ಅಂತರ್ಧ್ವನಿ ವೇದಿಕೆ ಮೂಲಕ ಈ ಅಂಶ ಗಳ ಬಗ್ಗೆ ಆರ್ಥಿಕ ಬದಲಾವಣೆ ಗೆ ಬೇಕಾದ ಯೋಜನೆ ಗಳ ಬಗ್ಗೆ, ಪ್ರಶ್ನಿಸುವ ಮನೋಭಾವ ಬೆಳೆಸುವ,ನಾಯಕತ್ವ ದ ಬಗ್ಗೆ ನಿರಂತರ ವಾಗಿ ಯೋಜನೆ ರೂಪಿಸಲಾಗುವುದು
ಹಾಗೂ ಈ ಪ್ರದೇಶದಲ್ಲಿ ಸ್ಥಳೀಯ ಉದ್ಯೋಗ ಸೃಷ್ಟಿಗೆ ಪೂರಕ ಯೋಜನೆ ರೂಪಿಸಿ ಜನರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮುಂದಿನ ದಿನಗಳಲ್ಲಿ ನಡೆಸಲಾ ಗುವುದು
ಮುಖ್ಯ ವಾಗಿ ಮಹಿಳೆಯರಿಗೆ ಒಕ್ಕೂಟಗಳ ಮೂಲಕ ಆರ್ಥಿಕ ಶಕ್ತಿ ತುಂಬಿ ಅವರನ್ನು ಮುಖ್ಯ ವಾಹಿನಿಗೆ ತರುವ ಯೋಜನೆ ರೂಪಿಸಲಾಗುವುದು ಈ ಮೂಲಕ ಗುಂಡ್ಲುಪೇಟೆ ತಾಲೂಕಿನ ಜನರ ಅಭಿವೃದ್ಧಿ ಗೆ ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು.