Negilayogi Samaja Seva Trust

Negilayogi Samaja Seva Trust This trust has been formed by like minded people in 2007 for the upbringing of vokkaliga clansmen

Some of the major activities By Negilayogi
a) Negilayogi Carrier Guidence and Training
b) Negilayogi Murudeshwara Creative PU College
c) Negilayogi Murudeshwara Vokkaliga Vadhu varara Mahithi Kendra
d) Negilayogi vividodehsa Sauharda Sahakara Niyamitha
e) Negilayogi Bhagya Monthly Magazine
f) Negilayogi yearly Calender
g) Negilayogi IT Wings
h) Negilayogi Entrepreneur net work
i) Free Mysuru D

asara Jambusavari Vikshane
j) Negilayogi Doctors Yellow Pages Book
k) Negilayogi Engineer Yellow Pages
m) Negilayogi Kusti Develpment wing

ಬಾನುವಾರ ಬೆಳಿಗ್ಗೆ 10.00 ಗಂಟೆಗೆ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ನೇಗಿಲಯೋಗಿ ಮರುಳೆಶ್ವರ ಸೇವಾ ಭವನ ಜಯನಗರ/ಕೆ. ಜಿ. ಕೊಪ್ಪಲು ಇಲ್...
02/06/2024

ಬಾನುವಾರ ಬೆಳಿಗ್ಗೆ 10.00 ಗಂಟೆಗೆ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ನೇಗಿಲಯೋಗಿ ಮರುಳೆಶ್ವರ ಸೇವಾ ಭವನ ಜಯನಗರ/ಕೆ. ಜಿ. ಕೊಪ್ಪಲು ಇಲ್ಲಿ ನಡೆದ ರಾಜ್ಯ ಮಟ್ಟದ ಪದಾಧಿಕಾರಿಗಳ ಒಂದು ದಿನದ ಕಾರ್ಯಗಾರದ ಚಿತ್ರ. ಕಾರ್ಯಗಾರದಲ್ಲಿ ಬಾಗವಹಿಸಿದ್ದ ಅತಿಥಿ ಗಳಾದ ಶ್ರೀ ಎ.ಏನ್. ಪ್ರಕಾಶ್ ಗೌಡರು ಐಪಿಎಸ್ ಪೊಲೀಸ್ ಅದೀಕ್ಷಕರು ಮಂಗಳೂರು, ಡಾ. ಬಾಲಕೃಷ್ಣೆಗೌಡರು ಎಮ್ ಎಸ್ Ortho ವ್ಯವಸ್ಥಾಪಕ ನಿರ್ದೇಶಕರು ಅವಂತ್ ಬಿ ಕೆ ಜಿ ಆಸ್ಪತ್ರೆ, ಡಾ. ಶುಶ್ರುತ್ ನ್ಯೂರೋ ಸರ್ಜನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಶಾಂತವೇರಿ ಗೋಪಾಲ ಗೌಡ ಮೆಮೋರಿಯಲ್ ಆಸ್ಪತ್ರೆ,ಶ್ರೀ ನಾರಾಯಣ ಗೌಡರು ಅಧ್ಯಕ್ಷರು ಮೈಸೂರು ಹೋಟೆಲ್ ಓನರ್ಸ್ ಅಸೋಸಿಯೇಶನ್ ಹಾಗೂ ಎಲ್ಲಾ ಶಾಖೆಗಳ ಅಧ್ಯಕ್ಷರು, ಕಾರ್ಯದರ್ಶಿ ಗಳು,ಪದಾಧಿಕಾರಿಗಳಿಗೆ ಧನ್ಯವಾದಗಳು Shobha Ramesh ,Manjegowda MB Rajya Vakkaligara Sangha Ravikumar DasappaVishwanathgowda Cdvishwanathಕೋ.ಪು. ಗುಣಶೇಖರ್ Indresh Embee Ramesh Pooja Shamiyana Boregowda

24/08/2023

ದಿನಾಂಕ 26.8.2023 ಶನಿವಾರದಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ವೈದ್ಯರ ದಿನಾಚರಣೆ ಸಮಾರಂಭ ಆಯೋಜಿಸಿದ್ದು ಎಲ್ಲ ಕುಲಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ ಇಂತಿ ನೇಗಿಲ ಯೋಗಿ ಸಮಾಜ ಸೇವೆ ಟ್ರಸ್ಟ್ ಮೈಸೂರು

ಇಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್  ಮತ್ತು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದವರು ಆಯೋಜಿಸಿದ್ದ ನೇಗಿಲಯೋಗಿ ಮರುಳಸಿದ್ಧೇಶ್ವರ ವಧುವರ...
13/08/2023

ಇಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮತ್ತು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದವರು ಆಯೋಜಿಸಿದ್ದ ನೇಗಿಲಯೋಗಿ ಮರುಳಸಿದ್ಧೇಶ್ವರ ವಧುವರರ ಸಮಾವೇಶದಲ್ಲಿ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ನ್ಯೂರೋ ಝೋನ್ ವ್ಯವಸ್ಥಾಪಕ ನಿರ್ದೇಶಕರು, ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲೂ ಖ್ಯಾತರಾಗಿರುವ ನ್ಯೂರೋಲೊಜಿಸ್ಟ್ ಡಾ ಸುಶ್ರುತ್ ಮುಖ್ಯ ಅತಿಥಿಯಾಗಿ ಆಗಮಿಸಿ ಸೇರಿದ್ದ ಯುವ ಜನತೆಗೆ ಹಾಗೂ ಅವರ ಬಂಧುಗಳಿಗೆ ಶುಭ ಹಾರೈಸಿದರು. ಅವರೊಂದಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಗೌಡರು ಹಾಗೂ ಬಿಬಿಎಂಪಿಯ ಜಂಟಿ ಆಯುಕ್ತರಾದ ಶ್ರೀ ಲೋಕನಾಥ್ ಅವರು ಹಾಜರಿದ್ದರು.

ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀಮತಿ ಶೋಭಾ ರಮೇಶ್, ಮತ್ತು ನೇಗಿಲಯೋಗಿ ಸಂಘದ ಮಂಡ್ಯ ಜಿಲ್ಲಾಧ್ಯಕ್ಷರಾದ ಶ್ರೀ ಎ ಸಿ ರಮೇಶ್, ರಾಮನಗರ ಜಿಲ್ಲಾಧ್ಯಕ್ಷರಾದ ಪಟೇಲ್ ಸಿ ರಾಜು, ಪಾಂಡವಪುರ ತಾಲೂಕು ಅಧ್ಯಕ್ಷರಾದ ಶ್ರೀ ಎಸ ಮಲ್ಲಿಕಾರ್ಜುನಗೌಡ ಹಾಗೂ ಕನಕಪುರ ತಾಲೂಕು ಅಧ್ಯಕ್ಷರಾದ ಶ್ರೀ ಕಾಡೇಗೌಡರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Vishwanathgowda CdvishwanathManjegowda MB Rajya Vakkaligara SanghaRavikumar Dasappa ಕೋ.ಪು. ಗುಣಶೇಖರ್ K Harish GowdaK HarishGowdru AbhimaniBalagaK Harish Gowdru
# mysore

ನೇಗಿಲಯೋಗಿ ಮಹಿಳಾ ವೇದಿಕೆಯಿಂದ   ಕುಟುಂಬ ಸಮ್ಮಿಲನಗಳ ಮುಖಾಂತರ ಪರಿಚಯ ಹಾಗೂ ಕ್ರೀಡಾ                ಆಯೋಜನೆಯಂದಿಗೆ ಬಹಳ ಅರ್ಥಪೂರ್ಣ ಕಾರ್ಯಕ...
10/08/2023

ನೇಗಿಲಯೋಗಿ ಮಹಿಳಾ ವೇದಿಕೆಯಿಂದ ಕುಟುಂಬ ಸಮ್ಮಿಲನಗಳ ಮುಖಾಂತರ ಪರಿಚಯ ಹಾಗೂ ಕ್ರೀಡಾ ಆಯೋಜನೆಯಂದಿಗೆ ಬಹಳ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ನಮ್ಮ ಕುಲಬಾಂಧವರಾದ ಗಣ್ಯರು ಮಂಗಳೂರು ಜಿಲ್ಲಾ ಆಯುಕ್ತರಾದ ಪ್ರಕಾಶ್ ಗೌಡ್ರು, ದೇವರಾಜ ವಲಯದ ಎಸಿಪಿಗಳಾದ ಶಾಂತಮಲ್ಲಪ್ಪನವರು, ಹಾಗೂ ನಮ್ಮ ಇಲಾಖೆಯ ಘಟಕ ವ್ಯವಸ್ಥಾಪಕರಾಗಿ ನಿವೃತ್ತರಾದ ಲಕ್ಷ್ಮಣ್ ಗೌಡ ಅವರ ದಂಪತಿಗಳು ಹಾಗೂ ಅವರ ಮಗನಾದ ದೀಪಕ್ ವಲಯ 55ರ ಆರ್ ಟಿ ಓ ಅಧಿಕಾರಿಗಳು, ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರವರು ಇನ್ನು ಅನೇಕ ಅಧಿಕಾರಿಗಳು ಉದ್ಯಮಿಗಳು ಹಾಗೂ ಸ್ವಾಭಿಮಾನಿ ನೇಗಿಲ ಯೋಗಿ ಬಂಧುಗಳು ಮಾಜಿ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಮಾನಸ ಡಾ. ಸುಶ್ರುತ ಆಗಮಿಸಿದ್ದರು ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್ ಕಾವಲು ಪಡೆ ಅಧ್ಯಕ್ಷರಾದ ಮೋಹನ್ ಕುಮಾರ್ ಗೌಡ್ರು, ಲಯನ್ ದೇವೇಗೌಡರು ,ಮೈಸೂರು ಚಾಮರಾಜನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿಯಾದ ಚೇತನ್, ಮಂಜೇಗೌಡರು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು , ಮಾದೇಶ್ ರವರು KSRTC ಸೊಸೈಟಿ ಅಧ್ಯಕರುಇನ್ನು ಅನೇಕ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬಾ ಯಶಸ್ವಿಯಾಗಿ ಕಾರ್ಯಕ್ರಮದ ರೂವಾರಿಗಳಾದ ಎಲ್ಲಾ ಮಹಿಳಾ ಕಾರ್ಯಕಾರಿ ಸದಸ್ಯರಿಗೂ ನಮ್ಮ ಧನ್ಯವಾದಗಳು. 🙏💐🙏. Vishwanathgowda Cdvishwanath Ravikumar Dasappa ಕೋ.ಪು. ಗುಣಶೇಖರ್ Manjegowda MB Rajya Vakkaligara Sangha Thejaswi Boregowda

ನಮ್ಮ ಸಮುದಾಯದ, ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರಾದಂತ ಡಾ. ಎಂ.ಸಿ. ಸುಧಾಕರ್ ರವರನ್ನು  ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಮೈಸೂರು ಅಧ್...
10/06/2023

ನಮ್ಮ ಸಮುದಾಯದ, ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರಾದಂತ ಡಾ. ಎಂ.ಸಿ. ಸುಧಾಕರ್ ರವರನ್ನು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಮೈಸೂರು ಅಧ್ಯಕ್ಷರಾದ ಶ್ರೀ ರವಿಕುಮಾರ್, ಬೆಂಗಳೂರು ಅಧ್ಯಕ್ಷರಾದ ಶ್ರೀ ಕೆ.ಗಿರಿಯಪ್ಪ, ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಮತ್ತು ಪದಾಧಿಕಾರಿಗಳಾದ ಶ್ರೀ ಪುಟ್ಟಸ್ವಾಮಿಗೌಡ, ಶ್ರೀ ಮಾದಯ್ಯ,ಶ್ರೀ ಇಂದ್ರೇಶ್, ಶ್ರೀ ತೇಜಸ್ವಿ, ಶ್ರೀ ಅನೂಪ್ ಗೌಡ ಹಾಗೂ ಹಲವಾರು ನಮ್ಮ ಸಂಸ್ಥೆಯ ಸದಸ್ಯರು ಸೇರಿ ಗೌರಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಸನ್ಮಾನಿಸಿದ ಸಂದರ್ಭ. ಮಾನ್ಯ ಸಚಿವರಿಗೆ ದೇವರು ಒಳ್ಳೆಯದು ಮಾಡಲೆಂದು ಹಾರೈಸುತ್ತೇವೆ ಮತ್ತು ಅವರು ನಮ್ಮ ನಾಡಿಗೂ, ನಮ್ಮ ಸಮುದಾಯಕ್ಕೂ ಅತ್ಯುತ್ತಮ ಸೇವೆಸಲ್ಲಿಸಲೆಂದು ಆಶಿಸುತ್ತೇವೆ.
ಹಾಗೂ ನಮ್ಮ ಸಮುದಾಯದ ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಶ್ರೀ ಲೋಕನಾಥ್ ರವನ್ನು ಕೂಡ ನೇಗಿಲಯೋಗಿಯ ಪದಾಧಿಕಾರಿಗಳೆಲ್ಲ ಸೇರಿ ಉಭಯ ಕುಶಲೋಪರಿ ಹಂಚಿಕೊಂಡ ಸಂತಸದ ಸಂದರ್ಭ. Ravikumar Dasappa Balakrishna RamannaK Girish Anup Gowda Akshay Rao M Indresh Embee

ನೇಗಿಲಯೋಗಿ ಬಂಧುಗಳ ಗಮನಕ್ಕೆದಿನಾಂಕ 05.06.2023 ಸೋಮವಾರದಂದು ಮಧ್ಯಾಹ್ನ 2.30ಕ್ಕೆ  ಪಾಂಡವಪುರದ ನೇಗಿಲಯೋಗಿ ಕಛೇರಿಯಲ್ಲಿ ಸಭೆಯನ್ನು ನಡೆಸಲಾಗಿ...
07/06/2023

ನೇಗಿಲಯೋಗಿ ಬಂಧುಗಳ ಗಮನಕ್ಕೆ

ದಿನಾಂಕ 05.06.2023 ಸೋಮವಾರದಂದು ಮಧ್ಯಾಹ್ನ 2.30ಕ್ಕೆ ಪಾಂಡವಪುರದ ನೇಗಿಲಯೋಗಿ ಕಛೇರಿಯಲ್ಲಿ ಸಭೆಯನ್ನು ನಡೆಸಲಾಗಿತ್ತು.ಈ ಸಭೆಗೆ ಡಿ.ರವಿಕುಮಾರ್ ರವರು ಹಾಗೂ ಇತರರು ಕೂಡ ಭಾಗವಹಿಸಿದ್ದರು.

ಸಭೆಯಲ್ಲಿ ಸಾಧಕರಿಗೆ ಅಭಿನಂದನೆ ಹಾಗೂ ಕಛೇರಿ ಉದ್ಘಾಟನಾ ಸಮಾರಂಭದ ಖರ್ಚು ವೆಚ್ಚವನ್ನು ಮಂಡಿಸಲಾಯಿತು.

ಹಾಗೂ ಶಾಖೆಯು ನಿರಂತರವಾಗಿ ಕಾರ್ಯ ನಿರ್ವಹಿಸಲು ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.

ನವೋದಯ ಶಾಲಾ ಪ್ರವೇಶ ಪರೀಕ್ಷಾರ್ಥಿಗಳಿಗೆ ಕಛೇರಿಯಲ್ಲಿ ಈವಾರದಿಂದಲೇ ತರಬೇತಿ ಆರಂಭಿಸಲು ತೀರ್ಮಾನಿಸಲಾಯಿತು.ಹಾಗೂ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯನ್ನು ಕೂಡ ಇದೇ ಸಂದರ್ಭದಲ್ಲಿ ನೇಮಿಸಲಾಯಿತು.

ಕಛೇರಿಗೆ ಸಿಬ್ಬಂದಿಯೊಬ್ಬರನ್ನು ನೇಮಿಸಲಾಯಿತು.

ವಧು ವರರ ಮಾಹಿತಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳುವವರಿಗೆ ಶುಲ್ಕವನ್ನು ನಿಗದಿಪಡಿಸಲಾಯಿತು.

ನಮ್ಮ ತಾಲ್ಲೂಕಿನ ಐಎಎಸ್.ಅಧಿಕಾರಿಗಳಾದ ಎಸ್.ಆರ್. ಉಮಾಶಂಕರ್ ರವರು ಕರ್ನಾಟಕ ಸರ್ಕಾರದಲ್ಲಿ ಅತ್ಯುನ್ನತ ಸ್ಥಾನಕ್ಕೆ ನೇಮಕಗೊಂಡಿರುವುದರಿಂದ ಅವರನ್ನು ಆಹ್ವಾನಿಸಿ ತವರು ಸನ್ಮಾನ ಮಾಡಲು ತೀರ್ಮಾನಿಸಲಾಯಿತು.

ಕೋ.ಪು. ಗುಣಶೇಖರ್ಕೋ.ಪು.ಗುಣಶೇಖರ್
ಪಾಂಡವಪುರ

ಶ್ರೀಯುತ ಡಿ ಎನ್ ಚನ್ನವೀರಪ್ಪ ರವರು ಮತ್ತು ಬೆಂಗಳೂರಿನ  ಅಗ್ರಹಾರ ದಾಸರಹಳ್ಳಿಯಲ್ಲಿ ಸ್ಥಾಪಿಸಿರುವ ಸಿ ವಿ ಗುರುಕುಲ ಕಾಲೇಜಿನ ಸಂಸ್ಥಾಪಕರು ಮತ್ತ...
06/06/2023

ಶ್ರೀಯುತ ಡಿ ಎನ್ ಚನ್ನವೀರಪ್ಪ ರವರು ಮತ್ತು ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ಸ್ಥಾಪಿಸಿರುವ ಸಿ ವಿ ಗುರುಕುಲ ಕಾಲೇಜಿನ ಸಂಸ್ಥಾಪಕರು ಮತ್ತು ಹಾಲಿಕಾರ್ಯದರ್ಶಿಯಾಗಿರುವ ಚನ್ನವೀರಪ್ಪನವರು ದಿನಾಂಕ ಐದು-ಆರು 2023 ರಂದು ನಮ್ಮ ನೇಗಿಲ ಯೋಗಿ ಕಚೇರಿಗೆ ಭೇಟಿ ನೀಡಿ ನಮ್ಮ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಉದ್ದೇಶ ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿದು ಮತ್ತು ನಮ್ಮ ಕುಲಬಾಂಧವರ ಅಭಿವೃದ್ಧಿಗೆ ಏನೆಲ್ಲ ಕಾರ್ಯಗಳನ್ನ ಮಾಡಬಹುದು ಮತ್ತು ಅಭಿವೃದ್ಧಿಪಡಿಸಬಹುದು ಎಂಬುದನ್ನ ಚಿಂತನ ಮಂಥನ ಮಾಡಿ ನಮ್ಮ ಜೊತೆ ಇದ್ದು ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡುವುದಾಗಿ ಸೂಚಿಸಿರುತ್ತಾರೆ ಅವರಿಗೆ ನಮ್ಮ ನೇಗಿಲ ಯೋಗಿ ಸಮಾಜ ಸೇವೆ ಟ್ರಸ್ಟ್ ನ ಪರವಾಗಿ ಅಭಿನಂದನೆಗಳು 💐🤝🏻.

ರಾಮನಗರ ಜಿಲ್ಲಾ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮಾಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹೆಚ್. ಸಿ. ಬಾಲಕೃಷ್ಣ ರವರನ್ನು ಅಭಿನಂದಿಸ...
06/06/2023

ರಾಮನಗರ ಜಿಲ್ಲಾ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮಾಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹೆಚ್. ಸಿ. ಬಾಲಕೃಷ್ಣ ರವರನ್ನು ಅಭಿನಂದಿಸಲಾಯಿತು.
ಅಭಿನಂದನ ಸಂದರ್ಭದಲ್ಲಿ ನೇಗಿಲ ಯೋಗಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಆರ್. ಕೆ. ಬೈರಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ತಿಮ್ಮೆ ಗೌಡರು ಟಿ., ಖಜಾಂಚಿ ರವಿ, ಉಪಾಧ್ಯಕ್ಷರು ಶಿವರಾಮಯ್ಯ, ಪತ್ರಿಕಾ ಕಾರ್ಯದರ್ಶಿ ರೂಪೇಶ್ ಕುಮಾರ್, ಕನಕಪುರ ತಾಲೂಕು ಅಧ್ಯಕ್ಷರಾದ ಕಾಡೆಗೌಡರು, ಗೌರವಾಧ್ಯಕ್ಷ ಚಿಕ್ಕೆಂಪೆಗೌಡರು, ಜಿಲ್ಲಾ ಸಮಿತಿಯ ಸದಸ್ಯರುಗಳಾದ ರಾಜೇಂದ್ರ , ಪ್ರಕಾಶ್ , ಹಾಜರಿದ್ದರು HC Balakrishna

https://youtu.be/fLGeWRn6QPUನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಮೈಸೂರು ಹಾಗೂ ಮಂಡ್ಯ ಜಿಲ್ಲಾ ಶಾಖೆ ಅವರ ವತಿಯಿಂದ ವಯಸ್ಸು ಸಹಜ ನಿವೃತ್ತಿ ಹ...
06/06/2023

https://youtu.be/fLGeWRn6QPU
ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಮೈಸೂರು ಹಾಗೂ ಮಂಡ್ಯ ಜಿಲ್ಲಾ ಶಾಖೆ ಅವರ ವತಿಯಿಂದ ವಯಸ್ಸು ಸಹಜ ನಿವೃತ್ತಿ ಹೊಂದಿದ ಚಾಮ ಉಮೇಶ್ ಬಾಬು ರವರಿಗೆ ಅಭಿನಂದನ ಸಮಾರಂಭವನ್ನು ಮಂಡ್ಯ ನಗರದ ರೈತ ಸಭಾಂಗಣದ ಆವರಣದಲ್ಲಿ ನೆರವೇರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯ ಜಿಲ್ಲಾ ಅಪಾರ ಜಿಲ್ಲಾಧಿಕಾರಿ ಡಾ. ಎಚ್ ಎಲ್ ನಾಗರಾಜುರವರು ನೆರವೇರಿಸಿದರು . ಇನ್ನು ಕಾರ್ಯಕ್ರಮದಲ್ಲಿ ನೇಗಿಲ ಯೋಗಿ ಸಮಾಜ ಸೇವ ಟ್ರಸ್ಟ್ ಅಧ್ಯಕ್ಷರಾದ ಎಸಿ ರಮೇಶ್ ರವರು ಡಿ ರವಿಕುಮಾರ್ ಅವರು ಕಿಲಾರ ಕೃಷ್ಣೇಗೌಡ ಅನನ್ಯ ಟ್ರಸ್ಟ್ ಅನುಪಮಾ ಬಿಜೆಪಿ ಮುಖಂಡ ಶಿವಣ್ಣ ಚಂದ್ಗಾಲು ಡಾ. ನಾರಾಯಣ್ ಶ್ರೀಮತಿ ನೀನಾ ಪಟೇಲ್ ಸೇರಿದಂತೆ ಅಭಿಮಾನಿಗಳು ಭಾಗವಹಿಸಿದರು Ravikumar Dasappa ಕೋ.ಪು. ಗುಣಶೇಖರ್ Manjegowda MB Rajya Vakkaligara Sangha Indresh Embee

ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಮೈಸೂರು ಹಾಗೂ ಮಂಡ್ಯ ಜಿಲ್ಲಾ ಶಾಖೆ ಅವರ ವತಿಯಿಂದ ವಯಸ್ಸು ಸಹಜ ನಿವೃತ್ತಿ ಹೊಂದಿದ ಚಾಮ ಉಮೇಶ್ ಬಾಬು...

ಮೈಸೂರಿನ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೇಗಿಲಯೋಗಿ ಭವನದಲ್ಲಿ ಮಹಿಳೆಯರಿಗೆ ಮಾನಸಿಕ ಆರೋಗ್ಯ ಮತ್ತು ಪ್ರಾಮುಖ್ಯತೆ ಕುರಿತ ...
02/06/2023

ಮೈಸೂರಿನ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೇಗಿಲಯೋಗಿ ಭವನದಲ್ಲಿ ಮಹಿಳೆಯರಿಗೆ ಮಾನಸಿಕ ಆರೋಗ್ಯ ಮತ್ತು ಪ್ರಾಮುಖ್ಯತೆ ಕುರಿತ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಖ್ಯಾತ ಮನೋವೈದ್ಯರಾದ ಶ್ರೀಯುತ ಡಾ. ರವೀಶ್ ರವರು ಭಾಗವಹಿಸಿ ಹಲವಾರು ರೀತಿಯ ಮಾಹಿತಿಯನ್ನು ತಿಳಿಸಿದರು . ಈ ಸಂದರ್ಭದಲ್ಲಿ ಮಹಿಳಾ ಸದಸ್ಯರೊಂದಿಗ ಸಂವಾದವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶ್ರೀಮತಿ ಶೋಭಾ ರವರು ವಹಿಸಿದ್ದರು .ಈ ಸಂದರ್ಭದಲ್ಲಿ ಹಲವಾರು ಮಹಿಳೆಯರು ಉಪಸ್ಥಿತರಿದ್ದು ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.

ನೂತನ ಕೃಷಿ ಸಚಿವರಾದ ಶ್ರೀ ಚಲುವರಾಯಸ್ವಾಮಿ ಅವರನ್ನು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನಿಂದ ಹಾರ್ದಿಕವಾಗಿ ಅಭಿನಂದಿಸಲಾಯಿತು. ಟ್ರಸ್ಟ್ ನ ಸಂಸ್...
31/05/2023

ನೂತನ ಕೃಷಿ ಸಚಿವರಾದ ಶ್ರೀ ಚಲುವರಾಯಸ್ವಾಮಿ ಅವರನ್ನು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನಿಂದ ಹಾರ್ದಿಕವಾಗಿ ಅಭಿನಂದಿಸಲಾಯಿತು. ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀ ಡಿ ರವಿಕುಮಾರ್, ಮಂಡ್ಯ ಜಿಲ್ಲಾಧ್ಯಕ್ಷರಾದ ಶ್ರೀ ಎ ಸಿ ರಮೇಶ್, ನಿವೃತ್ತ ಕಾರ್ಯಪಾಲಕ ಅಭಿಯಂತರ ರಾದ ಶ್ರೀ ಬಸವರಾಜೇಗೌಡ, ಚಲನಚಿತ್ರ ನಿರ್ಮಾಪಕರಾದ ಅನುಪ್ ಗೌಡ, ಉದ್ಯಮಿಗಳಾದ ಇಂದ್ರೇಶ್, ನಂದೀಶ್, ಶಶಾಂಕ್ ಮತ್ತಿತರರು ಭಾಗವಹಿಸಿದ್ದರು

https://public.app/video/sp_fui43aoyocyscPlus points for DKS1. President of the party.usually president of the party wil...
16/05/2023

https://public.app/video/sp_fui43aoyocysc

Plus points for DKS
1. President of the party.usually president of the party will be cm
2 He is a trouble shooter of congress party and as solved so many problems.
3. Organised good amount of protest like Mekedatu,Bharath JODO ,PayCM etc
4. Played an important role in success of bharath jodo.
5. Suffered a lot due to working for the development of congress and safe guard the interest of big wigs of congress.
6 Moola congress man
7. Sacrificed posts so many times,
8. As spent lot of money for organizing congress.
9. worked hard to bring out wrong doings of bjp.
10. He campaigned a lot in this election , while siddu worked in his constituency to save him self.
11. During siddarammiah CM ship congress lost the government.
12 siddus contributions to congress development is very less than when compared to DKS .
13.This time he as won with a huge margin in Vokkaliga belt

Address

No. 122, Adichunchanagiri Road, 3rd Cross, Opp. Court Building, K G Koppal, Jayanagar
Mysore
570023

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm
Sunday 9am - 6pm

Telephone

+919972778659

Alerts

Be the first to know and let us send you an email when Negilayogi Samaja Seva Trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Negilayogi Samaja Seva Trust:

Share