14/09/2025
#ಸೀರತ್_ಅಭಿಯಾನದ_ಪ್ರಯುಕ್ತ_ರಕ್ತದಾನ_ಶಿಬಿರ
ಜಮಾತ್ ಇಸ್ಲಾಮಿ ಹಿಂದ್ ಮಾನವಿ ವತಿಯಿಂದ " ನ್ಯಾಯದ ಹರಿಕಾರ ಪೈಗಂಬರ್ ಮೊಹಮ್ಮದ್(ಸ. ಅ )" ಸೀರತ್ ಅಭಿಯಾನದ ಪ್ರಯುಕ್ತ ರಕ್ತದಾನ ಶಿಬಿರವನ್ನು ನಗರದ ಆರೋಗ್ಯ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಆಸ್ಪತ್ರೆಯ ವೈದ್ಯರಾದ ಡಾ. ಆಸಿಫ್ ಎಂ.ಎಸ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ಡಾ. ರೋಹಿಣಿ ಮಾನ್ವಿಕರ್ ಅವರು ಮಾತನಾಡಿ ರಕ್ತದಾನ ಮಹಾದಾನವಾಗಿದ್ದು ಒಬ್ಬರ ಜೀವವನ್ನು ಉಳಿಸುವಂತಹ ಕೆಲಸವನ್ನು ರಕ್ತದಾನದಿಂದ ಮಾಡಬಹುದೆಂದು ಹೇಳಿದರು. ನಂತರ ಕಾರ್ಯಕ್ರಮದ ಮಹತ್ವವನ್ನು ಕುರಿತು ಅಬ್ದುಲ್ ರೆಹಮಾನ್ ಸಾಬ್ ಅಧ್ಯಕ್ಷರು ಜಮಾತ್ ಇಸ್ಲಾಮೀ ಹಿಂದ್ ಮಾನ್ವಿ ಹಾಗೂ ಸಜ್ಜಲಿ ಮಾಸ್ಟರ್ ಕಾರ್ಯದರ್ಶಿ ಜಮಾತ್ ಇಸ್ಲಾಮಿ ಹಿಂದ್ ಅವರು ಮಾತನಾಡಿದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಎಂ.ಎ.ಎಚ್ ಮುಖೀಮ್ ಅವರು ಮಾತನಾಡಿದರು. ಉಮರ್ ಫಾರೂಕ್ ದೇವರಮನಿ ನಿರೂಪಿಸಿದರು. ಜನಾಬ್ ಕರೀಂ ಖಾನ್ ಸಾಬ್, ಸೈಯದ್ ಅಕ್ಬರ್ ಪಾಷಾ ಸಾಬ್, ದಾವುದ್ ಸಿದ್ಧಿಕಿ ಸಾಬ್, ಅಬ್ದುಲ್ ರೌಫ್ ಸಾಬ್, ಎ. ಕೆ ಜಾಗಿರ್ದಾರ್ ಸಾಹೇಬ್, ಇಮ್ತಿಯಾಜ್ ವಕೀಲರು, ನಾಸಿರ್ ಅಲಿ ಅಧ್ಯಕ್ಷರು ಸ್ವಾಲಿಡಾರಿಟಿ ಯೂಥ್ ಮೊಮೆಂಟ್ ಮಾನ್ವಿ, ಅಜಿಂ ಅಧ್ಯಕ್ಷರು ಎಸ್ಐಒ ಮಾನ್ವಿ, ಸಮೀರ್ ಪಾಷಾ, ಆರ್ಷದ್ ಸಾಹೇಬ್ ಇನ್ನು ಮುಂತಾದವರು ಉಪಸ್ಥಿತರಿದ್ದರು.