ನಾವು ಹೊಲಯರು - ಚಲವಾದೇರು

  • Home
  • India
  • Mandya
  • ನಾವು ಹೊಲಯರು - ಚಲವಾದೇರು

ನಾವು ಹೊಲಯರು - ಚಲವಾದೇರು The Holaya's 👨‍🌾
Original Inhabitants of Kannada Country 👥
Creators of Ancient Farming Culture 🌾

26/05/2026

ಹಿಂಗೆ ಪುಂಗಿ ಪುಂಗಿನೆ ನಿಮ್ಮದೇ ಸಮುದಾಯದ ಜನ‌ ನಿಮ್ಮಂಥ ನಾ(ಲಾ)ಕರಿಗೆ ಕಿಮ್ಮತ್ತು ಕೊಡದೆ ಇರೋದು.

FYI ಸಾಮಾನ್ಯವಾಗಿ ಸುಡುಗಾಡು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರತ್ತೆ. ಅಪರೂಪಕ್ಕೆ ದಕ್ಷಿಣ ಹಾಗೂ ಪಶ್ಚಿಮದಲ್ಲಿರತ್ತೆ. ಸುಡುಗಾಡು ಗುರುತು ಮಾಡೋದು ಜಲಮೂಲ ಹಾಗೂ ಒಳ್ಳೆ ಗಾಳಿ ಬೆಳಕು ಇದ್ದಕಡೆಗೆ ಮಾತ್ರ. ಯಾಕೆಂದರೆ ಹೆಣಗಳನ್ನ ಹೂಳೋದಾಗಲಿ, ಸುಡೋದಾಗಲಿ ಮಾಡಿದಾಗ ಅವು ಸರಿಯಾಗಿ ಕೊಳೆಯೋದಕ್ಕೆ ಅಥವಾ ಬೇಯೋದಕ್ಕೆ ಬೇಕಿರೋದು ಇದೇ ಅಂಶಗಳು. ಶುಚಿ ಕಾರ್ಯ ಸಂಸ್ಕಾರ ಶಾಸ್ತ್ರಗಳಿಗೆ ಜಲಮೂಲ ಇರಲೇಬೇಕು.

ಭಾರತೀಯ ನೆಲೆ ವಾಸ್ತು ಅಥವಾ ಗ್ರಾಮ ವಾಸ್ತು ವಿನ್ಯಾಸದ ಪ್ರಕಾರಾನೂ ಇದೇ ಇರೋದು. ದಕ್ಷಿಣ ದಿಕ್ಕು ಯಾವಾಗಲೂ ಎತ್ತರವಾಗಿರಬೇಕು. ಜಲಮೂಲಗಳು ಉತ್ತರ ಅಥವಾ ಪೂರ್ವದಲ್ಲಿರಬೇಕು. ಸ್ಮಶಾನವಾಸಿ ಎನಿಸಿಕೊಂಡ ಶಿವ ದಕ್ಷಿಣಾ ಮೂರ್ತಿ, ಎಂದರೆ ದಕ್ಷಿಣ ಮುಖ ಮಾಡಿ ಉತ್ತರ ದಿಕ್ಕಿನಲ್ಲಿ ಕುಳಿತವನು. ತಥಾಗತ ಶಯನ ಬುದ್ದ, ಶ್ರೀಮನ್ ನಾರಾಯಣರಲ್ಲೆ ದಕ್ಷಿಣಕ್ಕೆ ತಲೆಹಾಕಿ ಮಲಗಿರೋದು, ವೃಷಭ ನೆಲೆಯಾಗಿರೋದಿ, ಸಪ್ತಮಾತೃಕೆ/ತಾಯಾಳಿಕೆ ಪರಂಪರೆ ನೆಲೆಗೊಂಡಿರೋದು ದಕ್ಷಿಣದಲ್ಲಿಯೆ. ಚಾಲುಕ್ಯರ ತವರು ನೆಲೆ, ಪುಲಗೆರೆ ಇರೋದು ಸಹ ಬೆಳ್ವೊಲನಾಡು ಸೀಮೆಯ ದಕ್ಷಿಣ ದಿಕ್ಕಿನಲ್ಲಿಯೆ.

ಇದೇ ಕಾರಣಕ್ಕೆ ೧೧ನೇ ಶತಮಾನದಲ್ಲಿ ನಯಸೇನ ತನ್ನ ಧರ್ಮಾಮೃತದಲ್ಲಿ ಇವರನ್ನ ದಕ್ಷಿಣಾಚಾರ್ಯರು ಎಂದಿರೋದು.

ಹೇಳಿಕೊಳ್ಳೋಕೆ ನಮಗೆ ಬೇಕಾದಷ್ಟು ಚೆಂದದ ಇತಿಹಾಸ ಪರಂಪರೆ ಇದೆ. ಇಷ್ಟಿದ್ರೂ ಅದ್ಯಾವ ಕಾರಣಕ್ಕೆ ಹೀಗೆ ಸಗಣಿ ತಿನ್ನೋ ಕೆಲಸ ಮಾಡ್ತಿರೋ ಗೊತ್ತಿಲ್ಲ. ಎಲ್ರು ತಮ್ಮ ಹಿರಿಮೆಗರಿಮೆ ಹೇಳ್ಕೊಂಡು ಬೆಳೆಯೋ ಕಡೆ ಹೆಜ್ಜೆ ಹಾಕಿದ್ರೆ ನಿಮ್ಮಂಥ ಪುಂಗ್ಲಿಗಳು ಮಾತ್ರ ಇಲ್ದೆ ಇರೋದನ್ನೆಲ್ಲಾ ಹೇಳ್ಕೊಂಡು ಪಾತಾಳಕ್ಕೆ ಇಳಿಯೋ ಕೆಲಸ ಮಾಡ್ತಿದ್ದೀರ!

ಇನ್ನೂ ಅದೆಷ್ಟು ದಿನ ಈ ತರ ಇಲ್ದೆ ಇರೋದನ್ನೆಲ್ಲಾ ಪುಂಗ್ತಾ ನಿಮ್ಮ ಜನಗಳ ಮನಸ್ಸಲ್ಲಿ ಕೀಳರಿಮೆ ಬಿತ್ತಿ ನಿಮ್ಮ ಬೆಳೆ ಬೆಳ್ಕೊತೀರಾ?

ಅಲ್ಲೂ ಜಾತೀಯತೆ ಇದೆ, ಅದ್ರೆ ನಾಡು ನುಡಿ, ಸ್ವಾಭಿಮಾನ, ತನ್ನಾಳ್ವಿಕೆ ಅಂತ ಬಂದ್ರೆ ಎಲ್ಲಾ ಮರೆತು ಒಂದಾಗ್ತಾರೆ.ನಾವು ನಮ್ಮ ಜನರನ್ನ ನಾಡು ನುಡಿ ...
06/05/2026

ಅಲ್ಲೂ ಜಾತೀಯತೆ ಇದೆ, ಅದ್ರೆ ನಾಡು ನುಡಿ, ಸ್ವಾಭಿಮಾನ, ತನ್ನಾಳ್ವಿಕೆ ಅಂತ ಬಂದ್ರೆ ಎಲ್ಲಾ ಮರೆತು ಒಂದಾಗ್ತಾರೆ.
ನಾವು ನಮ್ಮ ಜನರನ್ನ ನಾಡು ನುಡಿ ಕೇಂದ್ರಿತ ಸಿದ್ದಾಂತಗಳ ಮುಂದಾಳುಗಳಾಗಿ, ನಾಡು ನುಡಿ ಕೇಂದ್ರಿತ ರಾಜಕಾರಣದ ರೂವಾರಿಗಳಾಗಿ ಅನ್ನೋದು ಇದೇ ಕಾರಣಕ್ಕೆ. ಅದೇ ನಾಡು ನುಡಿ ನೆಲದ ಸಿದ್ದಾಂತಗಳೇ ನಮ್ಮ ಪೂರ್ವಜರನ್ನ ಅರಸರನ್ನಾಗಿಸಿದ್ದು, ನಮ್ಮ ಕುಲ ಕರಳುಬಳ್ಳಿಗಳನ್ನು ಉದ್ದರಿಸಿದ್ದು.
ಆದಿ ಕನ್ನಡಿಗರು ನೆಲ ನಾಡು ನುಡಿಯನ್ನ ಕಾಪಾಡಿದ್ರೆ, ನಾಡು ನುಡಿ ಆದಿ ಕನ್ನಡಿಗರನ್ನ ಕಾಪಾಡಲಿದೆ. ನಾಡು ನುಡಿ ನೆಲದ ಸಿದ್ದಾಂತ ಎಂದರೆ ಅದು ಸಾಮರಸ್ಯ ಸಮತ್ವದ ಸಿದ್ದಾಂತವೇ ಆಗಿದೆ.
ಸಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ಗೆಲ್ಲೋದು ಸಾಮಾನ್ಯ ವಿಚಾರವಲ್ಲ!

ಮೊದಲು ಲಿಂಗ ಕಟ್ದೋರು ನಾವೆ, ಮೊದಲು ಕಿತ್ತಾಕ್ದೋರು ನಾವೆ (ಮಂಟೇಸ್ವಾಮಿ ಪ್ರಸಂಗ)
28/04/2026

ಮೊದಲು ಲಿಂಗ ಕಟ್ದೋರು ನಾವೆ, ಮೊದಲು ಕಿತ್ತಾಕ್ದೋರು ನಾವೆ (ಮಂಟೇಸ್ವಾಮಿ ಪ್ರಸಂಗ)

ವಚನಕಾರರು ಎಂದೂ ಹೊಲಯ ಮಾದಿಗರನ್ನು ನಿಂದಿಸಿದ್ದಿಲ್ಲ. ಇನ್ನೂ ಬಸವಣ್ಣ, ತಾನು ಹುಟ್ಟಿದ್ದೇ ಹೊಲಯ ಮಾದಿಗರಿಗೆ ಎಂಬಂತೆ ವಚನ ರಚಿಸಿರುವಾಗ ಅದಕ್ಕೆ‌...
20/04/2026

ವಚನಕಾರರು ಎಂದೂ ಹೊಲಯ ಮಾದಿಗರನ್ನು ನಿಂದಿಸಿದ್ದಿಲ್ಲ. ಇನ್ನೂ ಬಸವಣ್ಣ, ತಾನು ಹುಟ್ಟಿದ್ದೇ ಹೊಲಯ ಮಾದಿಗರಿಗೆ ಎಂಬಂತೆ ವಚನ ರಚಿಸಿರುವಾಗ ಅದಕ್ಕೆ‌ ವಿರೋಧಬಾಸವಾಗಿ ಹೊಲಯ ಮಾದಿಗ ಪದದ ಅರ್ಥಗಳನ್ನು ಕೆಡಿಸುವಂತೆ ವಚನ ರಚಿಸಿದ್ದಾರೆ ಎಂದರೆ ಅದನ್ನು ಪ್ರಮಾಣಿಕರಿಸುವುದು ಹೇಗೆ?

"ಪುಲಸು ತಿಂಬವನೆ ಪುಲಯ ಕೊಲ್ಕಾರನೆ ಮಾದಿಗ" ಎಂದಿದ್ದ ಕನ್ನಡದ ಒಂದು ಆಡುಮಾತಿನ ಸಾಲು/ ಜಾನಪದ ನಾಣ್ನುಡಿಯೇ ತಿರುಚಲ್ಪಟ್ಟು ಈಗ ವಚನದಂತಾಗಿದೆ. ಅಷ್ಟಕ್ಕೂ ಇದು ಬಸವಣ್ಣನ ವಚನವೇ ಅಲ್ಲ. ಬಸವಣ್ಣನ ಕಾಲದ ಕನ್ನಡ ಭಾಷೆ, ಲಕ್ಷಣ, ವ್ಯಾಕರಣ, ಪದ ಬಳಕೆ ಇತ್ಯಾದಿಗಳನ್ನು ಪರಿಗಣಿಸಿದರೆ, ಇದೊಂಸು ನವ ವಚನ. ಬಹುಶಃ ೧೪-೧೫ನೆ ಶತಮಾನದ ನಂತರದಲ್ಲಿ ಬಸವಣ್ಣರ ಹೆಸರಿನಲ್ಲಿ ಹೊಸದಾಗಿ ಸೇರ್ಪಡೆಯಾದ ವಚನ?ವಿರಬಹುದು. ಹೊಲಸು (ಮಾಂಸ) ತಿಂಬವರಿಗೆಲ್ಲ ಹೊಲಯರೆಂದಾಗಿದ್ದರೆ, ಕ್ಷತ್ರಿಯರ ಸಹಿತ ಮಾಂಸ ತಿನ್ನುವ ಎಲ್ಲಾ ವರ್ಣ ಜಾತಿಗಳೂ ಹೊಲಯರೆನಿಸಿಕೊಳ್ಳುತ್ತಿದ್ದರು. ಅಷ್ಟಕ್ಕೂ ಹೊಲಯರ ಪಾರಂಪರಿಕ ಆಹಾರ ಸಂಸ್ಕೃತಿಯಲ್ಲಿಯು ಸಹ ಸಸ್ಯಪಲಾರವೇ ಪ್ರಧಾನ. ನಮ್ಮ ದೈವಗಳಿಗೆ ಮೊದಲು ಪಲಾರದ ಎಡೆ, ನಂತರವೇ ಬಾಡಡಿಗೆ.

"ಪುಲಸು ತಿಂಬವನೆ ಪುಲಯ,
ಕೊಲ್ಕಾರನೆ ಮಾದಿಗ" ಎಂದರೆ ಹೊಲಗೇಯ್ದು ಹುಲುಸಾಗಿ ಬೆಳೆದು, ಬಾಳ್ವೆ ನಡೆಸುವವರು ಹೊಲಯರು, ಗೊಲಾಕಾರಿಕೆ, ಎಂದರೆ ಹೈನ (ಪಶುಪಾಲನೆ) ಮಾಡಿ ಬಾಳುವವನು ಮಾದಿಗ ಎಂದು.

ಈಗಲೂ ಕನ್ನಡ ಹಾಗು ತುಳುವಿನಲ್ಲಿ ಹುಲುಸು ಎಂಬುದಕ್ಕೆ ಹೆಚ್ಚಾಗು, ಸಮೃದ್ಧಿಯಾಗು ಎಂಬ ಅರ್ಥಗಳಿವೆ. ಕುಂದಗನ್ನಡದಲ್ಲಿ‌ ಹೊಲ್ಯ ಎಂದರೆ ಭತ್ತ/ನೆಲ್ಲು ಎಂಬ ಅರ್ಥಬಿದೆ.
'ಕೊಲ್ಕಾರಿಕೆ' ಎಂದರೆ ನೆಲೆ ಪಶುಪಾಲನೆಗೆ ನಮ್ಮಲ್ಲಿರುವ ಅಪ್ಪಟ ಕನ್ನಡದ ಸಮಾನಾರ್ಥಕ ಪದ.

ವಚನವೆಂಬಂತೆ ಹರಿಬಿಟ್ಟಿರುವ ಈ ಹೊಸ ವಚನದ ಅಜ್ಞಾನವನ್ನು ಈ ವಚನದ ಮೂಲಕ ಸ್ವಲ್ಪ ಶಮನಗೊಳಿಸುವ.....

"ಹೊಲಸು ತಿಂಬವ ಹೊಲಯನೆಂದಿರಿ,
ಆದರೆ ಬೆಳೆದು ಬೇಯಿಸಿ ತಿನ್ನುವುದನು ಜಗತ್ತಿಗೆ ಕಲಿಸಿದವ ಹೊಲಯನಲ್ಲವೆ ?

ತಾಯಿಗೆ ಬಯ್ದವ ಹೊಲಯನೆಂದಿರಿ, ಆದರೆ ತಾಯಾದಿ ದೈವವ ಆರಾಧಿಸುವ ಮಾತೃಪ್ರಧಾನ ಸಂಸ್ಕೃತಿ ಹುಟ್ಟುಹಾಕಿದವ ಹೊಲಯರಲ್ಲವೆ ?

ಅಪ್ಪನಿಗೆ ಹೊಡೆದವ ಹೊಲಯನೆಂದಿರಿ, ಹಿರಿಯರ ಗೌರವಿಸಿ, ಸತ್ತ ಹಿರಿಯರನಾರಾಧಿಸುವ ಸಂಸ್ಕೃತಿ ಹೊಲಯರದ್ದಲ್ಲವೆ ?

ಜ್ಞಾನಿಯ ಕೊಂದವ ಹೊಲಯನೆಂದಿರಿ, ಆದರೆ ಜ್ಞಾನವ ಕೂಡಿಸುವವ ಹೊಲಯರಿಂದಲ್ಲವೆ ತಂತ್ರ ಉಪನಿಷತ್ ವೇದ ?

ಮಾತು ತಪ್ಪಿದವ ಹೊಲಯನೆಂದಿರಿ, ಆದರೆ ಕೊಟ್ಟ ಮಾತಿಗೆ ಕಟ್ಟುಬಿದ್ದು ಪಾತಾಳಕ್ಕಿಳಿದ ಬಲಿ ಚಕ್ರವರ್ತಿ ಹೊಲಯನಲ್ಲವೆ ?

ಕೆಡುಕು ಮಾಡಿದವ ಹೊಲಯನೆಂದಿರಿ, ಆದರೆ ರಾಜನಿಷ್ಠೆಗೆ ಧರ್ಮನಿಷ್ಠೆಗೆ ಹೆಸರಾಗಿ ನಿಂತ ನಾಡಕಾಳಗ ತುರಕಾಳಗಗಳ ವೀರಗಲ್ಲಗಳು ಹಲವು ಇರುವುದು ಹೊಲಯರ ಹೆಸರಿನಲ್ಲಲ್ಲವೆ ? ಹೊಳೆಗೆ ಬಲಿಯಾಗಿ ನೀರಿನೊಳು ಊರಿನವರಿಗೆ ದಾರಿ ಮಾಡಿಕೊಟ್ಟವ ಹೊಲಯನಲ್ಲವೆ ? ಕೆರೆಗೆ ಹಾರವಾದ ಶ್ರವಣ ಹೊಲಯನಲ್ಲೆ ?

ಕೆಡವುವವನು ಹೊಲಯನೆಂದಿರಿ, ಆದರೆ ಊರ ಕಟ್ಟಿದ ಮೊದಲಿಗನೇ ಹೊಲಯನಲ್ಲವೆ ?

ಸಂಸ್ಕೃತಿ ಹೀನ ಹೊಲಯನೆಂದಿರಿ, ಆದರೆ ಆದಿವಂಶಕ್ಕೆ ಆದಿಯೇ ಹೊಲಯನಲ್ಲವೆ ? ಅವನು ಮೊದಲು ಕೈ ಮುಗಿದ ಆದಿತ್ಯನಿಗೆ ಈಗ ಇಡೀ ಜಗತ್ತೆ ಕೈ ಮುಗಿದು ಹೊಲಯನಾದೀತ ?

ಹೊಲಯ ಹೆಂಗಸ ಹೊಲತಿ ಎಂದು ಜರಿದಿರಿ, ಆದರೆ ತಾವು ಕೈ ಮುಗಿವ ಲೋಕದ ಸಕಲ ಮಾತೃದೈವಗಳು ಹೊಲಯರ ಪರಂಪರೆಯವೆಂಬುದ ಮರೆತಿರೆ ? ಆ ಗಾಯಿತ್ರಿಯೇ ಜಗತ್ತಿಗಾದಿ ಹೊಲತಿ ಎಂಬುದ ಮರೆತಿರೆ ?

ಹೊಲತಿ ರಜಸ್ವಲೆ ಆದವಳೆಂದಿರಿ, ರಜಸ್ವಲೆಯಾಗದೆ ನಿಮ್ ಹುಟ್ಟು ಅವ್ವೆಯ ಬಸಿರಲಿ ನೆಟ್ಟಲಾಗಿತ್ತೆ ?

ಹೊಲಯ ಹೊರಗಿರಬೇಕೆಂದಿರಿ, ನಿಮ್ಮ ಮನೆಯ ದೇವರ ಕೋಣೆಯೊಳು ನಗುತಿದ್ದ ಪರಯ್ಯ ಪರಮೇಶ್ವರ ಹೊಲಯರಲ್ಲವೆ ?

ಮುಂಜಾನೆದ್ದು ಹೊಲಯನ ಮುಖ ಕಾಣದಿರೆಂದಿರಿ, ಆದರೆ ಮುಂಜಾನೆ ಎದ್ದು ಅವನೆದುರು ಕೈಮುಗಿದು ನಿಲ್ಲುವಿರಲ್ಲ ಆ ಹನುಮ ಹೊಲಯನಲ್ಲವೆ ?

ಹೊಲಗೇರಿಗೆ ಕಾಲಿಡಬೇಡಿ ಎಂದಿರಿ, ಆದರೆ ಅದೇ ಹೊಲಗೇರಿಯತ್ತ ತಲೆ ಹಾಕಿ ಮಲಗಿರುವ ತಥಾಗತ ಬುದ್ದ, ಶ್ರೀಮನ್ ನಾರಾಯಣನ ಆರಾಧಿಸುವಿರಲ್ಲ? ಶಿವನ‌ ಕಣ್ಗಾವಲು, ಸಪ್ತಮಾತೃಕೆ, ಶ್ರೀ ನಂದಿಯ ಆಸ್ಥಾನವೆ ಹೊಲಗೇರಿಯಲ್ಲವೆ? ಹಿರಿಯರನ್ನು ಆರಾಧಿಸುವ ಸಂಸ್ಕೃತಯಾನುಸಾರ ಭಾರತದಾದ್ಯಂತ ತಲೆ ಎತ್ತ ದೇವಾಲಯಗಳಿಗೆ ನುಗ್ಗುವಿರಲ್ಲ, ಅವು ಹೊಲಗೇರಿಗಳಲ್ಲವೆ ?

ಜಗತ್ತಿದು ಹೊಲೆಮಾದಿಗರ ಬಸಿರು, ನೆಲವೆಲ್ಲ ಹೊಲಯ ಪುಲಸ್ತ್ಯನ ಭಿಕ್ಷೆ, ಜಲವೆಲ್ಲ ಹೊಲಯ ನೀರುಗಂಟಿ ಅಗಸ್ತ್ಯನ ಭಿಕ್ಷೆ, ಮಣ್ಣಿಗೆ ನೀರೆರೆದು ಅನ್ನ ಬೆಳೆದು ತಿಂದವರೆಲ್ಲ ಇಂದು ನೆಲ ಕಂಡು ಹೊಲಸೆನ್ನುತ್ತಿರುವರಲ್ಲ ಹರಹರ! ಹರಿಹರ! ಇವರ ತಲೆಯೊಳು ಬರಿಗೊಬ್ಬರವ ಹಸನ್ಮಾಡಿ ಮೂರ್ಕಾಳ ಬಿತ್ತಿ ಆರ್ಕಾಳು ಬೆಳೆಯುವಂತೆ ಹೊಲಬು ಕೊಡಯ್ಯ ಬೆಟ್ಟದ ಮಾದಯ್ಯ....
ಗುರು ಮಹಾಂತ ಮಲ್ಲಯ್ಯ...

ಹೊಲಯರೋ ನಾವು ಹೊಲಯರೋ, ಛಲಬಿಡದ ಛಲವಾದೇರೋ.....

ತಾಯಿ ಭೂತಾಯಿ...
ಹರನೆಂದರೆ ನೇಗಿಲು...
ಹರಿಯೆಂದರೆ ಹರಿವ ನೀರು...
ನೊಗಕ್ಕೆ ಹೆಗಲು ಕೊಟ್ಟೆವು ಮೊದಲು..,
ಕೋಣೆತ್ತುಗಳ ಕಟ್ಟಿದೆವು ಬದಲು...,
ಬೈರವನೆಂಬ ಬೀಜ ಬಿತ್ತಿ,
ಅನ್ನ ಬೆಳೆವ ಅರಿವುಗಳಿಸಿದವ ಹೊಲಯ,
ಅದುವೆ ಆದಿ ಬೇಸಾಯಕೆ,
ಹೊನ್ನ ಬಿತ್ತೆವು ಹೊಲಕ್ಕೆಲ್ಲ ಅನ್ನ ಬೆಳೆವೆವು ಜಗಕ್ಕೆಲ್ಲ!"

- #ಹುಲಿಹೊನ್ನ

135ನೇ ಅಂಬೇಡ್ಕರ್ ಜಯಂತಿ 🙏
14/04/2026

135ನೇ ಅಂಬೇಡ್ಕರ್ ಜಯಂತಿ 🙏

https://youtu.be/ZCPmD1f0Rww?si=x2hZQX7VOua8q7Ekಪುಲಕೇಶಿ ವಿಜಯೋತ್ಸವದ ಈ ಸುದಿನ‌, ಕನ್ನಡ ಕುಲಕೋಟಿ ತಿಳಿದುಕೊಳ್ಳಲೇಬೇಕಾದ ಪುಲಕೇಶಿ ಅರ...
04/04/2026

https://youtu.be/ZCPmD1f0Rww?si=x2hZQX7VOua8q7Ek

ಪುಲಕೇಶಿ ವಿಜಯೋತ್ಸವದ ಈ ಸುದಿನ‌, ಕನ್ನಡ ಕುಲಕೋಟಿ ತಿಳಿದುಕೊಳ್ಳಲೇಬೇಕಾದ ಪುಲಕೇಶಿ ಅರಸರ ಬಗೆಗಿನ 13 ರೋಚಕ ಸತ್ಯಗಳು ಇವು.

Are you ready to uncover the hidden secrets of the Chalukya Empire?In this video, we dive deep into the fascinating and untold history of the great Chalukyan...

03/04/2026

A name erased by comfort, restored by fire. Hebbaramma didn’t negotiate with discrimination—she burned through it. Temple doors opened not by permission, but by sacrifice.



Hebbaramma story, Brahmani sacrifice, anti caste reform India, temple entry history, Holaya inclusion, Pulayan History, Hindu reform figures, Sati Devi parallel, fire ritual sacrifice, social equality roots, indigenous reform narratives

02/04/2026

ನಮ್ಮ ಹೆಬ್ಬಾರೆ ಗುಡ್ಡರ ಮುಂದಾಳತ್ವದಲ್ಲಿ ಅದ್ದೂರಿಯಾಗಿ ನಡೆವ ಕರ್ನಾಟಕ ಅತಿ ದೊಡ್ಡ ಕೊಂಡೋತ್ಸವ, ಉಜ್ಜನಿ ಚೌಡಮ್ಮನ ಹಬ್ಬ.
ಇದೇ ಮೊದಲ‌ ವರ್ಷ ನಾನು ಮಂಡ್ಯದ ಗೆಳೆಯರೊಬ್ಬರ ಜೊತೆ ಬೇಟಿ ನೀಡಿದ್ದು.‌ ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡೆ.‌ ಊರೊಂದು ಜಾತಿ ಬೇಧ ಮರೆತು ಒಂದಾದಾಗ ಆ ಊರ ಹಬ್ಬದ ಅಂದ ಚೆಂದದ ರಂಗು ಅದೆಷ್ಟು ಹೆಚ್ಚಬಹುದು ಅನ್ನೋದಕ್ಕೆ ಉಜ್ಜನಿ‌ಯ ಚೌಡಮ್ಮ ಹೆಬ್ಬಾರಮ್ಮರ ಹಬ್ಬ ಜೀವಂತ ಸಾಕ್ಷಿ. ಇದೇ ರೀತಿ ಎಲ್ಲಾ ವಿಚಾರಗಳಲ್ಲಿಯೂ ಹಳ್ಳಿ ಜನರು ಒಂದಾದರೆ ಪ್ರತಿ ಊರನ್ನು ಪ್ರಗತಿಯತ್ತ ಹೆಜ್ಜೆ ಇಡುವಂತೆ ಮಾಡುವುದು ಕಷ್ಟದ ಕೆಲಸವೇನಲ್ಲ.

ಜೈ ಚೌಡಮ್ಮ ಜೈ ಹೆಬ್ಬಾರಮ್ಮ

ನಮ್ಮ ಹನುಮ ಜಯಂತಿಯ ಶುಭಾಶಯಗಳು
02/04/2026

ನಮ್ಮ ಹನುಮ ಜಯಂತಿಯ ಶುಭಾಶಯಗಳು

ಹೊಲೈಕುಲದ ಮುತ್ತು ಹನುಮ!

ಕರ್ನಾಟದ ಕಿಸುಕಾಡಿನ (ಕಿಷ್ಕಿಂದೆ) ಕೂಸು, ಕನ್ನಡಿಗ ಹನುಮ, ಶಕ್ತಿ ಭಕ್ತಿ ಸಾಮರ್ಥ್ಯಗಳಿಗೆ ಹೆಸರುವಾಸಿಯಾದವನು.
ಕನ್ನಡಿಗರು ಆರಾಧಿಸುವ ಕನ್ನಡಿಗ ಹನುಮ ರಾಮನ ಬಂಟನೂ ಅಲ್ಲ, ರಾಮನ ಗುಲಾಮನೂ ಅಲ್ಲ.

ನಮ್ಮ ನಮ್ಮ ಐಕಾನ್‌ಗಳನ್ನು ನಾವು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಯಾರೋ ಇನ್ನಾರದೂ ಲಾಭಕ್ಕಾಗಿ ನಮ್ಮ ಪೂರ್ವಜರ ಚಿತ್ರಣವನ್ನು ಇನ್ಯಾರದೋ ಬಂಟರಂತೆ ಗುಲಾಮರಂತೆ ಬಿಂಬಿಸಿ ಕಥೆ ಎಣೆದು ಅದನ್ನು ಪವಿತ್ರವಾದ ಮಹಾಕಥನ ಎಂದು ಬಿಂಬಿಸುವುದರ ಹಿಂದೆ ದೊಡ್ಡ ಷಡ್ಯಂತ್ರಗಳಲ್ಲದೇ ಬೇರೇನೂ ಇಲ್ಲ.

ಇಂಥ ಸಂಗತಿಗಳ ಮೂಲಕವೇ ಕನ್ನಡಿಗರನ್ನು ಇಷ್ಟು ಕಾಲ ಸ್ವತಂತ್ರರಾಗಿ ಬಾಳಲಾಗದಂತಾಗಿದೆ. ನಮ್ಮ ಐಕಾನ್ ಒಬ್ಬನನ್ನು ಶ್ರೀ ರಾಮನ ಗುಲಾಮ, ಶ್ರೀರಾಮನ ಬಂಟನೆಂದೇ ಇಲ್ಲಸಲ್ಲದ ಕಥೆಗಳ ಎಣೆದು, ಈಗ ಕನ್ನಡಿಗರನ್ನೂ ಸಹ ಅದೇ ಉತ್ತರದವರ ಗುಲಾಮರನ್ನಾಗಿ ತಯಾರು ಮಾಡುವ ಕೆಲಸ ಕೆಲಸ ನಡೆಯುತ್ತಿದೆ.

ಈ ದುರಂತ ತಪ್ಪಬೇಕಾದರೆ ಇರುವುದೊಂದೇ ದಾರಿ. ಅದೇ ನಮ್ಮ ಹನುಮನನ್ನು ಪರದೇಸಿಗಳು ಎಣೆಯುವ ಕಟ್ಟು ಕಥೆಗಳ ಕೂಪದಿಂದ ಮೇಲೇಳಿಸುವುದು.

ಗಾರುಡಿಕೆ, ಎಂದರೆ ಕಾವಲು ಪಡೆ (Guarding) ಪರಂಪರೆಯ ನಾಯಕ ಹನುಮ. ಆತ ಬೋರೇದೇವರಂತೆ ಲಿಂಗ (ಯೋನಿ - ಪಾಣಿ) ಆರಾಧಿಸುವ ತಂತ್ರಿಯೂ ಹೌದು. ಅವನು ಆದಿ ಯೋಗಿಯೂ ಹೌದಯು. ಆಳುವ ರಾಣಿ, ರಾಜರಿಂದಿಡಿಡು, ತನ್ನದೇ ಮನೆಯ ಹೆಂಗಸು ಮಕ್ಕಳ ರಕ್ಷಣೆಗೆ ಕಾವಲು ನಿಲ್ಲುವ ಪ್ರತಿಯೊಬ್ಬ ಗಂಡೂ ಸಹ ಹನುಮನೆ.

ರಾಮನೊಡನೆ ಮಾಡಿಕೊಂಡ ಒಪ್ಪಂದದ ತಪ್ಪಿಗೆ ಇಡೀ ತನ್ನ ಜನರನ್ನೆಲ್ಲ ರಾಮರಾವಣರ ಯುದ್ದದಲ್ಲಿ ಬಲಿಕೊಡುವ ಕಿಸುಕಾಡಿನ ಹನುಮನು, ಗಂಡರನ್ನು ಕಳೆದುಕೊಂಡು ವಿಧವೆಯರಾಗಿದ್ದ ಹೆಂಗಸರು, ಮಕ್ಕಳು, ಆ ಹನುಮನಿಗೆ ಬಯ್ಯುವ, ಗೋಳಾಡುವ ಕೆಲವು ಜನಪದ ಸಾಲುಗಳು ನೆನಪಿವೆ. ಈ ಪ್ರಸಂಗ ಅಂತಿಂತದ್ದಲ್ಲ. ಈ ಬೈಗುಳಗಳಿಗೆಲ್ಲಾ ಮರುಮಾತಾಡದೆ ತಲೆತಗ್ಗಿಸಿ ನಿಲ್ಲುವ ಹನುಮ, ಊರ ಹೆಂಗಸರಲ್ಲಿ ಕ್ಷಮೆ ಯಾಚಿಸಿ, ಊರಾಚೆಯ ಊರಿನ‌ ಉತ್ತರ ಗಡಿಯಲ್ಲಿ ನಿಂತು ತನ್ನೂರನು ಕಾಯುವ ಶಪಥಗಯ್ಯುತ್ತಾನೆ.

ಹಾಗೆಯೇ ನಮಗೆ ಹನುಮರೆಂದರೆ ಒಬ್ಬನೇ ಅಲ್ಲ. ಇದು ಕಿಸುಕಾಡು ಹನುಮನ‌ ದುರಂತ ಕಥೆ. ಈತನೇ ರಾಮನೆಂಬ ಪರರಾಜ್ಯದ ರಾಜನೊಂದಿಗೆ ಅದಾವುದೋ ಅನಿವಾರ್ಯಕ್ಕೆ ಒಪ್ಪಂದ ಮಾಡಿಕೊಂಡು ತನ್ನ‌ ರಾಜ್ಯದ ಜನರನ್ನೆಲ್ಲ ಬಲಿಯಿಟ್ಟು, ತನ್ನೂರ ಹೆಂಗಸರ ವಿಧವೆ ಮಾಡಿದವ.

ಕರ್ನಾಟಕದಾದ್ಯಂತ ಹನುಮ ಪರಂಪರೆಗಳಿವೆ. ಶಾಕ್ತ ಪರಂಪರೆಯನ್ನು ಮೂಲವಾಗಿಸಿಕೊಂಡ ದ್ರಾವಿಡ ಪರಂಪರೆಗಳಲ್ಲಿ ಲೆಕ್ಕವಿಲ್ಲದಷ್ಟು ಬಂಟ ದೇವರುಗಳ ಪರಂಪರೆ ಇವೆ. ಅಂತಹ ಶಾಕ್ತ-ಬಂಟ ದೇವರುಗಳ ಪರಂಪರೆಗಳಲ್ಲಿ ಹನುಮನೂ ಸಹ ಒಬ್ಬನೆ.

ತಮಿಳರಲ್ಲಿ ಮಾತ್ರ ಇಂದು ಕಾಣ‌ಸಿಗುವ ಕಂದಸ್ವಾಮಿ/ಮುರುಗ ದೇವರ ಪರಂಪರೆ, ಹಿಂದೆ ಕನ್ನಡಿಗರಲ್ಲೂ ಚೆನ್ನ/ಚೆನ್ನಿಗ/ಚೆಲುವ/ಶರ್ವ/ ಇತ್ಯಾದಿ ಹೆಸರುಗಳಲ್ಲಿ ಇತ್ತು. ಅದು ಮಧ್ಯಕಾಲೀನ ಯುಗದಲ್ಲಿ‌ ವೈಷ್ಣವಕರಣಕ್ಕೆ ಬಲಿಯಾಗಿ ಮಾರ್ಪಾಡಾಗಿದೆ. ಆದರೆ ಕನ್ನಡಿಗರಲ್ಲಿ, ತಮಿಳರಂತೆ ಕೇವಲ‌ ಕಂದಸ್ವಾಮಿ/ಮುರುಗ ದೇವರ ಪರಂಪರೆ ಅಷ್ಟೇ ಅಲ್ಲದೆ ಬಹಳಷ್ಟು ಬಂಟ ದೈವಗಳ ಪರಂಪರೆ ಇದ್ದು ಅವುಗಳ ಪೈಕಿ, ಹನುಮನೂ‌ ಒಬ್ಬ. ಮಾತೃದೇವತೆಯ ಬಂಟ ದೈವ.

ಮಂಡ್ಯದ ಮುತ್ತತ್ತಿ, ರಾಮನಗರದ ಅಯ್ಯನಗುಡಿ‌ (ಕೆಂಗಲ್), ಹದ್ದಿನಕಲ್ಲು, ಗಾಳಿಕೆರೆ ಆಂಜನೇಯ, ಹುಚ್ಚರಾಯ, ಇವುಗಳೆಲ್ಲ ಇಂಥವೇ ಸ್ಥಳೀಯ ಗಾರುಡಿಕೆ (guarding) ಪರಂಪರೆಯ ಬಂಟ ದೈವಗಳೇ ಹೊರತು, ಅದ್ಯಾರೋ ರಾಮನೆಂಬುವನ ಗುಲಾಮನಾಗಲಿ, ಬಂಟನಾಗಲಿ‌ ಅಲ್ಲವೇ ಅಲ್ಲ.

ಕನಿಷ್ಠ ಪಕ್ಷ 13-14ನೇ ಶತಮಾನದವರೆಗೂ ನರ್ಮದೆಯಿಂದ ದಕ್ಷಿಣಕ್ಕೆ ರಾಮನ‌ ಹೆಸರಿನ ಅರಸರಾಗಲಿ, ಗುಡಿಗಳಾಗಲಿ ಇಲ್ಲವೇ ಇಲ್ಲ ಎಂಬಷ್ಟಿದ್ದವೆನ್ನಬಹುದು. ಆದರೆ ಅದಾವ ಬದಲಾವಣೆ ಆ ಕಾಲದಲ್ಲಾಯಿತೋ ಏನೋ ಕಾಣೆ. ಮೊದಲಿಗೆ ಹನುಮ ರಾಮರ ನಡುವೆ ಇದ್ದ ಒಪ್ಪಂದದ ಸಂಬಂಧ‌ ಮರೆಯಾಗಿ, ಒಡೆಯಾ-ಬಂಟನ‌ ಆಯಾಮ‌ ಸೃಷ್ಟಿಸಲಾಯಿತು. ನಂತರ ಎಲ್ಲಾ ಪ್ರಾಂತ್ಯದ ಹನುಮಕಲ್ಲುಗಳನ್ನು ಪ್ರತ್ಯೇಕ ಗಾರುಡಿಕೆಯ ವೀರಗಲ್ಲುಗಳೆಂದು ಪರಿಗಣಿಸದೇ, ಅದೆಲ್ಲಾ ರಾಮಾಯಣದ ಕಿಸುಕಾಡಿನ (ಕಿಷ್ಕಿಂದೆ) ಹನುಮನೇ ಎಂದು‌ ಜನರಲೈಸ್ (ಸಾಮಾನ್ಯೀಕರಣ) ಮಾಡಲಾಯಿತು. ಇದರ ಮೂಲಕ ಅದಾರ ಪ್ರೇರೇಪಣೆ ಇಂದಲೋ‌ ಏನೋ, ರಾಜರು ಹನುಮಕಲ್ಲುಗಾಳಿದ್ದ ಸ್ಥಳಗಳ ಗುರುತಿಸಿ ರಾಮನ ಗುಡಿಗಳನ್ನು ಕಟ್ಟಿಸುವ ಹೊಸ ಪ್ರಯತ್ನವನ್ನೂ ನಡೆಸಿಯೇ ಬಿಟ್ಟರು!

ಅಲ್ಲಿಯವರೆಗೂ ದಕ್ಷಿಣದಲ್ಲಿ ರಾಮ‌ ಎಂದರೆ ರಾಜನಿಗಿದ್ದ ಒಂದು ಪಟ್ಟದ ಹೆಸರಾಗಿತ್ತು. ಈಗಲೂ ಅದರ ಕುರುಹುಗಳಾಗಿ ಹಳೆಮೈಸೂರು ಭಾಗಗಳಲ್ಲಿ ಹಳೆ ರಾಜರ ಕೆತ್ತನೆಗಳನ್ನು ದೇವಾಲಯಗಳಲ್ಲಿ‌ ನೋಡಬಹುದು.‌ ಅಷ್ಟೇ ಯಾಕೆ? ಪಂಡರಾಪುರದಲ್ಲಿ ವಿಠ್ಠಲನ ಹೆಸರಲ್ಲಿ‌ ಮೆರೆಸೊ ಮೂರ್ತಿ, ಹೊಯ್ಸಳರ ಪ್ರೇರೇಪಣೆಯಿಂದ ಸ್ಥಾಪನೆಯಾಗಿದ್ದ ಕರ್ನಾಟ ಸಾಮ್ರಾಜ್ಯದ ಹೆದ್ದೊರೆ (ತುಂಗಾಬದ್ರ) ಹೊಳೆಯ ದಡದಲ್ಲಿದ್ದ ಮಂಟಪದಲ್ಲಿದ್ದ ಹೊಯ್ಸಳ ಅರಸ ವಿಷ್ಣುವರ್ಧನನ ಕಲ್ಲಿನ‌ ಪ್ರತಿಮೆ!

ರಾಮ ರಾಮ ಎಂಬಂತೆ ಇಷ್ಟೆಲ್ಲಾ ಸಾಂಪ್ರದಾಯಿಕ ದುರಂತಗಳು‌ ನಡೆದಮೇಲದು ರಾಜನ ಪಟ್ಟವಾಗಿ ಉಳಿಯದೆ, ನೇರವಾಗಿ ಅಯೋಧ್ಯೆಯ ರಾಮನಿಗೆ ಸಂಬಂಧಿಸಿದ್ದೆಂಬಂತೆ ಅರ್ಥ ಕಲ್ಪಿಸಿಕೊಳ್ಳುವ ದುರಂತ ಯುಗಕ್ಕೆ ಕಾಲಿಟ್ಟೆವು.

ಈಗ ಇದೆಲ್ಲ ಗೋಜುಗೋಜಲಾಗಿ ಜನರ ತಲೆಕೆಡಿಸುತ್ತಿರುವುದಂತು ನಿಜ.

ನಮ್ಮಲ್ಲಿ ಹಲವರಿಗೆ ಹನುಮ ಅಚ್ಚುಮೆಚ್ಚಿನ ದೈವ.‌ ಅದರಲ್ಲೂ ಕಟ್ಟುಮಸ್ತಾಗಿ ಇರಬಯಸುವ ಜಗಜಟ್ಟಿಯಂತಹ ಗಂಡುಗಳಿಗೆ ಹನುಮ ಎಂದರೆ ಶಕ್ತಿ ಭಕ್ತಿ. ಆದರೆ ರಾಮ??? I mean ನಮ್ಮ‌ ಅರಸರ ರಾಮ-ಪಟ್ಟದ ಬಗ್ಗೆ ಹೇಳ್ತಿಲ್ಲ, ಅಯೋಧ್ಯೆಯ ರಾಮನ ಬಗ್ಗೆ ಹೇಳ್ತಿದ್ದೇನೆ. ಇಂಥಹ ಎಷ್ಟೋ ಯುವಕರ ಮನದಾಳದಲ್ಲಿ, ಹನುಮ ಅಚ್ಚಿಳಿದಷ್ಟು ರಾಮ ಅಚ್ಚಿಳಿದಿರುವುದಿಲ್ಲ.‌ ಹನುಮನ ಜೊತೆ ರಾಮನೂ ಫ್ರೀ ಸಿಕ್ಕಿದನೆಂಬಂತೆ, ಹೆಸರಿಗೆ ರಾಮನನ್ನೂ ಹನುಮನ ಜೊತೆ ಉಳಿಸಿಕೊಳ್ಳುವ ಅನಿವಾರ್ಯತೆ ಹನುಮನನ್ನು ಆರಾಧಿಸುವವರಿಗೆ! ಕಾರಣ ಹೂವಿನ‌ ಜೊತೆ ನಾರೂ ಸ್ವರ್ಗ ಸೇರಿತು ಅನ್ನೋ ಹಾಗೆ ಹನುಮ ಸುತ್ತ ಎಣೆದಿರುವ ಬೊಗಳೆ ಕಥೆಗಳಲ್ಲಿ‌ ಹನುಮನು ರಾಮನ‌ ಬಂಟ, ಗುಲಾಮ! ಆದರೆ ಸೂಕ್ಷ್ಮ ಸತ್ಯಗಳು ಅರ್ಥವಾಗುತ್ತಾ ಹೋದಂತೆ ಈ ಗೊಂದಲಗಳು ಉಳಿಯುವುದಿಲ್ಕ. ಮೊರದಲ್ಲಿ ರಾಗಿ ಸೂಸುತ್ತಾ ಕಲ್ಲಾ ಆಯ್ದು ಆಚೆಗೆ ಎಸೆಯು ಪ್ರಸಂಗದಂತೆ, ನಮ್ಮ ಆರಾಧ್ಯದೈವದ ನಿಜಸ್ವರೂಪದ ದರ್ಶನ ನಮಗಾಗುವುದು ಕಂಡಿತ. ದಶಾವತಾರದ ಕಥನವೇ ಹೇಳುವಂತೆ ರಾಮಾವತಾರಕ್ಕಿಂತ ವಾನರಾವತಾರ ಹಳತು ಹಾಗೂ ಹಿರಿಯದು. ರಾಮನ ಪರಂಪರೆಯು ದಕ್ಷಿಣದಲ್ಲಿ ಇತ್ತೀಚೆಗೆ ಆವರಿಸಿಕೊಂಡರೆ, ಹನುಮನ ಪರಂಪರೆಯು ಉತ್ತರದಲ್ಲಿ ಅಲ್ಲಿ ನಾಗರಿಕತೆ ಕಟ್ಟಿದ್ದ ದ್ರಾವಿಡರಿದ್ದ ಕಾಲದಲ್ಲೇ ಇತ್ತು.

ಇಂಥಹ ಎಷ್ಟೋ ಜನರ ಗೊಂದಲಕ್ಕೆ ತೆರೆ ಎಳೆಯಬೇಕೆಂದೇ ಇಷ್ಟೆಲ್ಲಾ ಬರೆಯಬೇಕಾಯಿತು. ಎಲ್ಲಾ ಹನುಮರೂ ಒಂದೇ ಅಲ್ಲ. ಹನುಮನು ರಾಮನ ಬಂಟನೂ ಅಲ್ಲ,‌ ಗುಲಾಮನೂ‌ ಅಲ್ಲ. ಹನುಮನನ್ನು ಒಪ್ಪುವ ಮಾತ್ರಕ್ಕೆ ಅಯೋಧ್ಯೆಯ ರಾಮನನ್ನೂ‌ ಒಪ್ಪಬೇಕೆಂದೇನೂ ಇಲ್ಲ.‌ ಇಷ್ಟನ್ನು ಅರ್ಥ ಮಾಡಿಕೊಂಡರೆ ಸಾಕು. ಸಾಮುದಾಯಿಕವಾಗಿ ನಮ್ಮ ಜನರಿಗೂ ಗೊಂದಲದಿಂದ ಮುಕ್ತಿ. ಭಾಷಿಕ ಜನರಾಗಿ ಕನ್ನಡಿಗರೂ ಸಹ ಬೌದ್ಧಿಕವಾಗ ಸ್ವತಂತ್ರರಾಗಿ, ಉತ್ತರದವರ ಗುಲಾಮಗಿರಿಯ ಅಳಿಸಿಹಾಕಬಹುದು.

20/03/2026

ಕಲ್ಯಾಣಿ ಚಾಲುಕ್ಯರ ಸೋಮೇಶ್ವರ ಅರಸರು ಬರೆದ ಮನಸೋಲ್ಲಾಸದಲ್ಲಿ ತಡಕು ಎಂಬ ಪದದ ಉಲ್ಲೇಖವಿದ್ದು, ಅದರ ಅರ್ಥ ಮಾಂಸ ಎಂದಾಗಿದೆ. ಹಾಗಾಗಿ ಹೊಸ್ತೊಡಕು ಎಂದರೆ ಬಹುಶಃ ವರ್ಷದ ಮೊದಲ ತಡಕು ಅಥವಾ ಹೊಸ ತಡಕು ಎಂದುಬರ ರೂಪಾಂತರವಾಗಿರಬಹುದು. ಚಾಲುಕ್ಯರ ನಂತರದ ಕಾಲದಲ್ಲಿ ಈಗಿನ ಉತ್ತರ ಕರ್ನಾಟಕದಲ್ಲಿ ಸಸ್ಯಾಹಾರ ಹೆಚ್ಚು ಪ್ರಚಾರಗೊಂಡ ಕಾರಣವೋ ಏನೊ, ಅಲ್ಲಿ ಈ ಹಬ್ಬ ಹೆಸರುವಾಸಿಯಾಗಲಿಲ್ಲ. ಆದರೆ ಲಿಂಗಾಯತರು ಹಾಗೂ ಬ್ರಾಹ್ಮಣು ಹೊರತುಪಡಿಸಿ ಈ ಭಾಗದ ಎಲ್ಲಾ ಕನ್ನಡ ಸಮುದಾಯಗಳು ಸಂಕ್ರಾಂತಿ ಹಾಗೂ ಉಗಾದಿಯ ಮಾರನೆಯ ದಿನ “ಕರಿ” ಎಂದು ಹೊಸ್ತೊಡಕಿನಂತೆಯೇ ಔತಣ ಮಾಡುವುದುಂಟು. ಹೀಗೆ ಹೊಸ್ತೊಡಕು - ಕರಿ ಕೇವಲ ದಕ್ಷಿಣ ಕರ್ನಾಟಕದ ಹಬ್ಬವಾಗಿರದೆ ಅಖಂಡ ಕರ್ನಾಟಕ ಹೆಗ್ಗುರುತು ಆಗಿದೆ.

ಚಿತ್ರ ಕಲ್ಪನೆ - ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಮಹಾರಸರ ಹೊಸ್ತೊಡಕು ಔತಣಕೂಟ

Address

Karasawadi
Mandya
571401

Alerts

Be the first to know and let us send you an email when ನಾವು ಹೊಲಯರು - ಚಲವಾದೇರು posts news and promotions. Your email address will not be used for any other purpose, and you can unsubscribe at any time.

Share