ಜೈ ಮಾರುತಿ ಸೇವಾ ಟ್ರಸ್ಟ್ ರಿ ಮಂಡ್ಯ Jai Maruthi Seva Trust R Mandya

  • Home
  • India
  • Mandya
  • ಜೈ ಮಾರುತಿ ಸೇವಾ ಟ್ರಸ್ಟ್ ರಿ ಮಂಡ್ಯ Jai Maruthi Seva Trust R Mandya

ಜೈ ಮಾರುತಿ ಸೇವಾ ಟ್ರಸ್ಟ್  ರಿ ಮಂಡ್ಯ Jai Maruthi Seva Trust R Mandya ಸಾರ್ವಜನಿಕ ಸೇವೆ Public service

ಹರೇ ಕೃಷ್ಣ 24.05.2026 ನೇ ಭಾನುವಾರ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ವತಿಯಿಂದ ಹತ್ತನೇ ತರಗತಿಯ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತೀರ್ಣ ...
03/06/2026

ಹರೇ ಕೃಷ್ಣ 24.05.2026 ನೇ ಭಾನುವಾರ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ವತಿಯಿಂದ ಹತ್ತನೇ ತರಗತಿಯ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತೀರ್ಣ ಆದ ಎಲ್ಲ ವಿದ್ಯಾರ್ಥಿಗಳಿಗೂ ಸನ್ಮಾನ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ

03/06/2026

ಹರೇ ಕೃಷ್ಣ 24.05.2026 ನೇ ಭಾನುವಾರ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ವತಿಯಿಂದ ವಿ.ವಿ.ನಗರ ಹದಿನೆಂಟನೆಯ ತಿರುವು ವಿಶ್ವೇಶ್ವರಯ್ಯ ನಗರ ಮಂಡ್ಯ ಇಲ್ಲಿ ಬಾಲಗೋಕುಲದ ಹಾಗೂ ದ್ವಿತೀಯ ಪಿ.ಯು.ಸಿ.,ಹತ್ತನೇ ತರಗತಿಯ ಮಕ್ಕಳಿಂದ ಮಾತೃ ವಂದನ ಪಿತೃ ವಂದನ ಕಾರ್ಯಕ್ರಮದಲ್ಲಿ ಮಕ್ಕಳಿಂದ ತಂದೆ ತಾಯಿಯರ ಪಾದಪೂಜೆ ನಡೆಯಿತು ಭಗವದ್ಗೀತೆಯ ಮೂರನೆಯ ಅಧ್ಯಾಯವನ್ನೂ ಸಾಮೂಹಿಕವಾಗಿ ಪಾರಾಯಣ ಮಾಡಲಾಯಿತು ಬಾಲಗೋಕುಲದ ತಾಯಿಯರು ತಮ್ಮ ಮನೆಗಳಿಂದ ಅಡುಗೆ ಮಾಡಿ ಕೊಂಡು ಬಂದು ಮಕ್ಕಳಿಗೆ ಕೈ ತುತ್ತು ತಿನ್ನಿಸಿದರು. ವಿ.ವಿ.ನಗರ ಕಲ್ಲಹಳ್ಳಿ, ರಾಮನಹಳ್ಳಿ, ಹೊಸಹಳ್ಳಿ ಗ್ರಾಮದ ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು. ಸಿ ಯಲ್ಲಿ ಉತ್ತೀರ್ಣ ಆದ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು ಬಾಲಗೋಕುಲದ ಮಕ್ಕಳಿಗೆ ತಾಯಂದಿರಿಗೆ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇದರ ಸದಸ್ಯರಾದ ಎಲ್ಲರಿಗೂ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಮನಹಳ್ಳಿಯ ಸುನಿಲ್ ರವರಿಗೂ, ನಂದೀಶ್ ರವರಿಗೂ, ಗುರುಗಳಾದ ಮಂಜುಳ ಮಾತಾಜಿ, ರೂಪ ಮಾತಾಜಿ ಯವರಿಗೂ, ಪೋಷಕರಿಗೂ ಅನಂತ ಅನಂತ ಧನ್ಯವಾದಗಳು ಇಂತಿ ಜೈಮಾರುತಿಸೇವಾಟ್ರಸ್ಟ.ಮಂಡ್ಯ

03/06/2026
09/04/2026
09/04/2026

ಹರೇ ಕೃಷ್ಣ ಚೈತ್ರ ಮಾಸದ ಚೌತಿಯ ಪವಿತ್ರ ದಿನ ಹಾಗೂ ವಿಶಾಖ ನಕ್ಷತ್ರದ ದಿನ ಅಂದರೆ 05.04.2026 ನೇ ಭಾನುವಾರ ಹೊಸಹಳ್ಳಿಯ ಗುರುಮಠ ಭವನ ದಲ್ಲಿ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ವತಿಯಿಂದ ಅಗ್ನಿ ಹೋತ್ರ ಯಜ್ಞ ಏರ್ಪಡಿಸಲಾಗಿತ್ತು. ಸುಮಾರು ಇನ್ನೂರು ದೈವ ಭಕ್ತರು ಯಜ್ಞ ದಲ್ಲಿ ಭಾಗವಹಿಸಿದ್ದರು ಹಾಸನ ಜಿಲ್ಲೆಯ ವೇದ ಭಾರತಿ ಸಂಯೋಜಕರಾದ ಶ್ರೀಧರ್ ಜೀ ಹಾಗೂ ಅವರ ತಂಡದ ಇಪ್ಪತ್ತು ವೇದ ಪಾರಂಗತರು ಅಗ್ನಿ ಹೋತ್ರ ಯಜ್ಞ ವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಸ್ಕಾನಿನ ಪಂಡಿತರಾದ ಜಯಗೋಪಿಕಾಂತದಾಸರು 108 ಸಲ ಹರೇ ಕೃಷ್ಣ ಮಂತ್ರ ಪಠಣ ಮಾಡಿಸಿ ನಾಮಜಪದ ಮಹತ್ವ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಯುಗಾದಿಯಿಂದ ಯುಗಾದಿಗೆ ಹೊಸ ದಿನ ದರ್ಶಿನಿ (ಕ್ಯಾಲೆಂಡರ್)ನ್ನು ಬಿಡುಗಡೆ ಮಾಡಲಾಯಿತು ಹಿಂದೂ ಕಾಲಚಕ್ರ ದ ರುವಾರಿಗಳಾದ ಚಿತ್ರದುರ್ಗದ ಪ್ರಸನ್ನಕುಮಾರ್ ರವರು ಸನಾತನ ಪಂಚಾಂಗದ ಮಹತ್ವ ತಿಳಿಸಿಕೊಟ್ಟರು. ಸಂಪದ ಫೌಂಡೇಶನ್ನಿನ ಅಧ್ಯಕ್ಷರಾದ ಪುನೀತ್ ರವರು ದೇಸಿ ತಳಿಗಳ ಉಪಯೋಗವನ್ನು ತಿಳಿಸಿಕೊಟ್ಟರು. ಗುರುಮಠದ ಮುಖ್ಯಸ್ಥರಾದ ಬೋರೇಗೌಡರು, ಹೊಸಹಳ್ಳಿಯ ನಾಗೇಶ್ ರವರು ಹೊಸಹಳ್ಳಿಯ ಯಜಮಾನರಾದ ಸ್ವಾಮಿಯವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರ ಶಕ್ತಿ ಕೇಂದ್ರದ ಮುಖ್ಯಸ್ಥರಾದ ರಾಜೇಶ ರವರು ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಿದ್ದರು. ಗ್ರಾಮ ವಿಕಾಸ ಕೇಂದ್ರದ ಪ್ರಚಾರಕರಾದ ರಾಜ್ ಮೋಹನ್ ಜೀ ರವರಿಂದ ರಾಷ್ಟ್ರ ಗೀತೆ ವಂದೇ ಮಾತರಂ ಸಾಮೂಹಿಕ ವಾಗಿ ಹೇಳಲಾಯಿತು. ಗೋ ಪೂಜೆ ಹೊಸಹಳ್ಳಿಯ ನವೀನ್ ರವರಿಂದ ನೆರವೇರಿತು. ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇದರ ಸದಸ್ಯರಾದ ಎಲ್ಲರೂ ತನುಮನಧನದ ಮೂಲಕ ಭಗವಂತನ ಅನುಗ್ರಹ ಕ್ಕೆ ಪಾತ್ರರಾದರು. ಅಗ್ನಿ ಹೋತ್ರ ಯಜ್ಞ ಕ್ಕೆ ಕುಳಿತ ಪ್ರತಿಯೊಬ್ಬರಿಗೂ ಹಾಗೂ ಮುಖ್ಯ ಅತಿಥಿಗಳಿಗೂ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಲಾಯಿತು. ಅಗ್ನಿ ಹೋತ್ರ ದ ಪುಸ್ತಕ, ಜಪಮಾಲೆಗಳನ್ನು ವಿತರಿಸಲಾಯಿತು ಎಲ್ಲ ಸದಸ್ಯರ ಪರಿಶ್ರಮದಿಂದ ಈ ಯಜ್ಞ ಸುಂದರವಾಗಿ ನೆರವೇರಿತು ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಅನಂತ ಅನಂತ ಧನ್ಯವಾದಗಳು ಇಂತಿ ಜೈಮಾರುತಿಸೇವಾಟ್ರಸ್ಟ.ಮಂಡ್ಯ 108 ಅಡಿ ಮಾರುತಿ ಪ್ರತಿಮೆ ನಿರ್ಮಾಣ ಸಮಿತಿ.ಮಂಡ್ಯ

12/02/2026

ವಂದೇ ಮಾತರಂ ವಂದೇ ಮಾತರಂ ವಂದೇ ಮಾತರಂ. ಮನೆ ಮನೆಯ ಬೀಸುವ ಕಲ್ಲುಗಳಿಂದ, ತೂಗುವ ತೊಟ್ಟಿಲುಗಳಿಂದ, ಮರಮರದ ಮರ್ಮರ ಸ್ವರದಿಂದ "ವಂದೇ ಮಾತರಂ "ಹೊಮ್ಮಿ ಬರಲಿ. ಹಿಮಾಲಯದ ಶಿಖರಗಳಿಂದ, ಶಿವಾಲಯದ ಗಂಟೆ ಜಾಗಟೆಗಳಿಂದ, ಮಠ ಮಂದಿರಗಳ ಭೇರಿ ನಗಾರಿಗಳಿಂದ, ಕಡಲ ತೀರದ ಹೆದ್ದೆರೆಗಳ ಘರ್ಜನೆಯಿಂದ ಅದು ಮೊರೆದು ಬರಲಿ. ನದಿನಾಲೆಗಳ ಕಲಕಲರವದಿಂದ, ಝರಿ ಜಲಪಾತಗಳ ಭೋರ್ಗರೆತದಿಂದ ಆ ನಾದನವನೀತ ತೇಲಿ ಬರಲಿ. ಕೆಸರು ಗದ್ದೆಗಳಿಂದ, ಗಿರಣಿ ಯಂತ್ರ ಗಳಿಂದ, ತೆಂಗು ಕಂಗಿನ ಚಾಮರಗಳಿಂದ, ತೆನೆಯೊಡೆದ ಪೈರು ಪಚ್ಚೆಯ ಮೈಪುಳಕದಿಂದ ಆ ಸಂಗೀತದ ಶ್ರುತಿ ಸ್ಪುರಿಸಿ ಬರಲಿ. ನೆಲದಾಯಿಯ ಮಕ್ಕಳ ಕುಣಿತ ಕೋಲಾಟಗಳಿಂದ, ಹರೆಯದ ಹುಡುಗರ ಹೃದಯ ಗಹ್ವರದಿಂದ, ನೆಲ ಗೋಡೆ ಛಾವಣಿಗಳಿಂದ, ಛಾತ್ರವೃಂದದ ಕ್ಷಾತ್ರಕಂಠಗಳಿಂದ ಮಾತೃವಂದನೆಯ ಸಂಕೀರ್ತನೆಯಾಗಲಿ. ಸೈನಿಕರ ಕೋವಿಯ ಬಾಯಲ್ಲಿ, ಶಿಕ್ಷಕರ ಬೋಧನೆಯಲ್ಲಿ, ವಿದ್ವಾಂಸರ ಸಂಶೋಧನೆಯಲ್ಲಿ, ತಾಯಿ ತಂಗಿಯರ ಹಾಡು ಹಸೆಗಳಲ್ಲಿ, ಹೆಣಿಗೆ ಹೊಲಿಗೆಗಳಲ್ಲಿ "ವಂದೇ ಮಾತರಂ "ಸಾಕಾರಗೊಳ್ಳಲಿ. ಈ ದೃಷ್ಟಿಯಿಂದ ಇಂದು ಪ್ರಯತ್ನ ಸಾಗಬೇಕಾಗಿದೆ. ಸಭೆ ಸಮಾರಂಭಗಳಲ್ಲಿ, ಪೂಜೆ ಉತ್ಸವ ಗಳಲ್ಲಿ, ಸಾರ್ವಜನಿಕ ಕಾರ್ಯಕಲಾಪಗಳೆಲ್ಲದರಲ್ಲೂ ಅದನ್ನು ಬಳಕೆಗೆ ತಂದು, ಇಂದಿನ ಮತ್ತು ಮುಂದಿನ ಜನಾಂಗಗಳ ಅಂತ:ಕರಣಕ್ಕೆ ಅದರ ರಾಗಭಾವಗಳನ್ನು ಇಳಿಸುವ ಕಾರ್ಯ ನಡೆಯಬೇಕಾಗಿದೆ. ವಂದೇ ಮಾತರಂ ನ ಏರಿಳಿತಗಳೇ ನಮ್ಮ ರಾಷ್ಟ್ರ ಜೀವನದ ಏರಿಳಿತಗಳು. ಅದರ ನಲಿವು ರಾಷ್ಟ್ರದ ನಲಿವು, ಅದರ ಅಳಲು ರಾಷ್ಟ್ರದ ಅಳಲು. ಅದರ ಗೆಲುವು ರಾಷ್ಟ್ರದ ಗೆಲುವು, ಅದರ ಸೋಲು ರಾಷ್ಟ್ರದ ಸೋಲು. ಅದರ ಮರೆವು ರಾಷ್ಟ್ರದ ಮರೆವು, ಅದರ ವಿಭಜನೆ ರಾಷ್ಟ್ರದ ವಿಭಜನೆ, ಅದರ ಕಥೆ ರಾಷ್ಟ್ರದ ಕಥೆ ಅದರ ವ್ಯಥೆ ರಾಷ್ಟ್ರದ ವ್ಯಥೆ. ಆದರೆ ಈ ಮೃತ್ಯುಂಜಯ ರಾಷ್ಟ್ರ ಕ್ಕೆ ಇಂಥ ಕಥೆಗಳು,ಇಂಥ ವ್ಯಥೆಗಳು ಹೊಸವಲ್ಲ. ಇಷ್ಟಕ್ಕೆಲ್ಲ ಹತಾಶವಾಗಿ ಕುಸಿದು ಬೀಳುವ ಚೈತನ್ಯವಲ್ಲ. ನೋಡನೋಡುತ್ತಾ ದುರಂತ ಸುಖಾಂತವಾಗುವ, ಇಂದಿನ ವ್ಯಥೆ ಹಳೆಯ ಕಥೆಯಾಗುವ ದಿನ ಬರುತ್ತದೆ. ಪುನ: ವಂದೇ ಮಾತರಂ ಘೋಷಣೆ ಸಂತಾನಕೋಟಿಯ ಅಂತ:ಕರಣದ ಆಳದಿಂದ ಉಕ್ಕೇರುತ್ತದೆ. ದೇಶದ ಉದ್ದಗಲಕ್ಕೂ ಹರಿದಾಡತೊಡಗುತ್ತದೆ. ಜನ ಅದಕ್ಕೆ ಓಗೊಡುತ್ತಾರೆ. ಭಾವೋನ್ಮತ್ತರಾಗಿ ಅದನ್ನು ಹಾಡುತ್ತಾರೆ. ಪೂರ್ಣವಾಗಿ ಹಾಡುತ್ತಾರೆ. ಹಾಡಹಾಡುತ್ತಾ ಅದರ ಅಮರತೆಯನ್ನು, ತಾಯಿಯ ಶಾಶ್ವತ ಅಸ್ತಿತ್ವವನ್ನು, ಪುತ್ರತ್ವದ ಸಾರ್ಥಕತೆಯನ್ನು ಜಗತ್ತಿಗೆ ಸಾರುತ್ತಾರೆ. ಭಾರತಾಂಬೆಯ ಅಸಂಖ್ಯಾತ ಭಕ್ತರ ನಾಲಿಗೆಯಲ್ಲಿ ನಲಿದು, ನೆತ್ತರಲ್ಲಿ ನೆನೆದು, ಅಗಣಿತ ಅಮರ ಬಲಿದಾನಗಳಿಗೆ ಪ್ರೇರಣೆಯಾದ ಉಜ್ವಲ ದೇಶಭಕ್ತಿಯ ಈ ಮಂತ್ರವನ್ನು ನಾಡಿನ ಯುವ ಜನರು ತಮ್ಮ ಸ್ವರಕ್ಕೆ, ಮನಸ್ಸಿಗೆ ತಂದುಕೊಂಡು ದಿಗಂತವ್ಯಾಪಿಯಾಗಿ ಹಬ್ಬಿಸುತ್ತಾರೆ. ಪೀಳಿಗೆಯ ನಂತರ ಪೀಳಿಗೆ ಅದರ ಉತ್ತರಾಧಿಕಾರ ವಹಿಸಿಕೊಳ್ಳುತ್ತಾರೆ. ಆಗ ಭಾರತಾಂಬೆ ಎಚ್ಚೆತ್ತು ಉಸಿರೆಳೆದು ನಿಲ್ಲುತ್ತಾಳೆ. (ಈ ಲೇಖನ:ಲೇಖಕರಾದ ಶಿವರಾಮು ಅವರ "ವಂದೇ ಮಾತರಂ ಒಂದು ಕಥೆ, ಒಂದು ವ್ಯಥೆ "ಪುಸ್ತಕದಿಂದ ಆಯ್ದ ಭಾಗ)ಮುಂದೊಂದು ದಿನ ವಂದೇ ಮಾತರಂ ರಾಷ್ಟ್ರ ಗೀತೆಯಾಗಲಿ ಎಂಬುದು ಸಮಸ್ತ ಭಾರತೀಯರ ಆಶಯ. ಹಾಗೆ ಆಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವವರು ಜೈಮಾರುತಿಸೇವಾಟ್ರಸ್ಟ.ಮಂಡ್ಯ 108 ಅಡಿ ಮಾರುತಿ ಪ್ರತಿಮೆ ನಿರ್ಮಾಣ ಸಮಿತಿ.ಮಂಡ್ಯ

ಹರೇ ಕೃಷ್ಣ 09.02.2026 ನೇ ಸೋಮವಾರ ಹೊಸಹಳ್ಳಿಯ ಗುರುಮಠದ ಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ಸಂಯುಕ್...
11/02/2026

ಹರೇ ಕೃಷ್ಣ 09.02.2026 ನೇ ಸೋಮವಾರ ಹೊಸಹಳ್ಳಿಯ ಗುರುಮಠದ ಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಧರ್ಮ ಶಿಕ್ಷಣ ಸಭೆಯು ನಡೆಯಿತು ಸನಾತನ ಸಂಸ್ಥೆಯ ಗುರುಗಳಾದ ಪೂಜ್ಯ ಸಂತರಾದ ರಮಾನಂದ ಅಣ್ಣನವರು ಮಾರ್ಗದರ್ಶನ ನೀಡುವ ಮೂಲಕ ಜಾಗೃತಿ ಮೂಡಿಸಿದರು ಸಮಿತಿಯ ಮೋಹನ್ ಗೌಡರು ಶಿವರಾಮು ಅಣ್ಣ ಹಾಗೂ ಮೂವತ್ತು ಜನ ಸಾಧಕರು ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು. ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ವತಿಯಿಂದ ಪೂಜ್ಯ ಸಂತರಾದ ರಮಾನಂದ ಅಣ್ಣನವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಬಡವರಿಗಾಗಿ ಸಭಾ ಭವನ ನಿರ್ಮಿಸಿದ (ಸಾರ್ವಜನಿಕರ ಸಹಕಾರದಿಂದ)ಗುರುಮಠದ ಮುಖ್ಯಸ್ಥರಾದ ಹಾಗೂ ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇದರ ಸದಸ್ಯರಾದ ಹೊಸಹಳ್ಳಿಯ ಬೋರೇಗೌಡರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಸಹಕರಿಸಿದ ಎಲ್ಲ ಟ್ರಸ್ಟಿನ ಸದಸ್ಯರಿಗೂ ಧರ್ಮ ಪ್ರೇಮಿಗಳಿಗೂ ಅನಂತ ಅನಂತ ಧನ್ಯವಾದಗಳು. ಇಂತಿ ಜೈಮಾರುತಿಸೇವಾಟ್ರಸ್ಟ.ಮಂಡ್ಯ

06/09/2025

ಬಾಲಗೋಕುಲ ಗಣೇಶೋತ್ಸವ ಕೆಟ್ಟ ಹಾಡುಗಳಿಗೆ ನೃತ್ಯ ಮಾಡುವ ಬದಲು ಭಗವಂತನ ಸಂಕೀರ್ತನೆಗಳಿಗೆ ನೃತ್ಯ ಮಾಡುವುದು ಅದ್ಭುತ 04.09.2025 ನೇ ಗುರುವಾರ ಗಣೇಶ ವಿಸರ್ಜನೆಯ ಸಂದರ್ಭ ಮಹಾ ನೃತ್ಯ

ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ವತಿಯಿಂದ ವಿ.ವಿ.ನಗರ ಹದಿನೆಂಟನೆಯ ತಿರುವಿನಲ್ಲಿ ಮೂರನೆಯ ವರ್ಷದ ಬಾಲಗೋಕುಲ ಗಣೇಶೋತ್ಸವ ಪ್ರಯುಕ್ತ ಭಗವದ್ಗೀತೆ...
05/09/2025

ಜೈಮಾರುತಿಸೇವಾಟ್ರಸ್ಟ.ಮಂಡ್ಯ ಇವರ ವತಿಯಿಂದ ವಿ.ವಿ.ನಗರ ಹದಿನೆಂಟನೆಯ ತಿರುವಿನಲ್ಲಿ ಮೂರನೆಯ ವರ್ಷದ ಬಾಲಗೋಕುಲ ಗಣೇಶೋತ್ಸವ ಪ್ರಯುಕ್ತ ಭಗವದ್ಗೀತೆಯ ಕಂಠಪಾಠ ಸ್ಪರ್ಧೆ ವಂದೇ ಮಾತರಂ, ಗೀತ ಗಾಯನ ಸ್ಪರ್ಧೆ ರಸಪ್ರಶ್ನೆಯ ಸ್ಪರ್ಧೆ ಕೇರಂ ಸ್ಪರ್ಧೆ ನಡೆಸಿ ಮಕ್ಕಳಿಗೆ ಬಹುಮಾನ ವಿತರಣೆಯನ್ನು 04.09.2025 ನೇ ಗುರುವಾರ ನಡೆಸಲಾಯಿತು ಅಸ್ಮಿ ಭರತನಾಟ್ಯ ಕಲಾ ಶಾಲೆಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು ಮಾಧವ ವಿದ್ಯಾಲಯದ ಖಜಾಂಚಿಯವರಾದ ಕೆರಗೋಡಿನ ರವಿಯಣ್ಣ, ಯೋಗ ಶಿಕ್ಷಕರಾದ ಚಂದ್ರಣ್ಣ, ವಕೀಲರಾದ ಮನೋಹರ್ ಸಾಹಿತಿಗಳಾದ ಸಬ್ಬನಹಳ್ಳಿ ಶಶಿಧರ ಇವರನ್ನು ಹಾಗೂ ಬಾಲಗೋಕುಲದ ಮಕ್ಕಳಿಗೆ ಸನ್ಮಾನ ಮಾಡಲಾಯಿತು ವಿಷ್ಣುಸಹಸ್ರನಾಮ ಪಾರಾಯಣ ನಡೆಸಲಾಯಿ.ಡ್ಯಾಫೋಡೆಲ್ಸ್ ಮುಖ್ಯಸ್ಥರಾದ ಸುಜಾತ ಕೃಷ್ಣ, ಉನ್ನತಿ ವಿದ್ಯಾಲಯದ ರಾಜೇಶ್ ಸಾಹಿತಿಗಳಾದ ಶಶಿಧರ್, ಮನೋಹರ್,ಇಸ್ಕಾನಿನ ಜಯ್ ಕುಮಾರ ಪ್ರಭು ಭಾಗವಹಿಸಿದ್ದರು ಸುಮಾರು ಮುನ್ನೂರು ಮಕ್ಕಳು ಭಾಗವಹಿಸಿದ್ದರು

Address

ವಿ ವಿ ನಗರ
Mandya
571401

Website

Alerts

Be the first to know and let us send you an email when ಜೈ ಮಾರುತಿ ಸೇವಾ ಟ್ರಸ್ಟ್ ರಿ ಮಂಡ್ಯ Jai Maruthi Seva Trust R Mandya posts news and promotions. Your email address will not be used for any other purpose, and you can unsubscribe at any time.

Share