12/01/2026
ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ.ಎಲ್ಲ ಮೌಢ್ಯಗಳನ್ನು ಮೆಟ್ಟಿ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.
- ಶ್ರೀ ಈಶ್ವರ್ ಮೆಡ್ಲೆರಿ.
ಚಿರನೂತನ ವಿವಿದೊದ್ದೇಶಗಳ ಸಂಘ, ಟೀಮ್ ಚಿರನೂತನ ಆಯೋಜಿತ ಸ್ವಾಮಿ ವಿವೇಕಾನಂದರ 163ನೇ ಜಯಂತಿ "ವಿವೇಕ ದರ್ಶನ" ಕಾರ್ಯಕ್ರಮವು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಈಶ್ವರ್ ಮೆಡ್ಲೆರಿ ಚಿರನೂತನ ಕಾರ್ಯ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಕೆ ರವಿ ತಮ್ಮ ಸಮಾರೋಪ ನುಡಿಯಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ ಮಕ್ಕಳ ಕೌಶಲ್ಯ ವೃದ್ಧಿಗೆ ಸಹಕಾರಿ ಎಂದರಲ್ಲದೆ ಪ್ರತಿವರ್ಷ ಯುವ ದಿನವನ್ನು ತಮ್ಮ ಶಾಲೆಯಲ್ಲಿ ಆಚರಿಸಲು ಟೀಮ್ ಚಿರನೂತನವನ್ನ ಆಹ್ವಾನಿಸಿದರು.
ನಾಗೇಶ್ ನಾವಿ ಪ್ರಸಾವಿಕವಾಗಿ ಮಾತನಾಡಿ ಚಿರನೂತನ ಸಂಸ್ಥೆಯ ಹತ್ತು ವರ್ಷಗಳ ನಿರಂತರ ಕಾರ್ಯಾಚಟುವಟಿಕೆಗಳನ್ನು ವಿವರಿಸಿದರು.
ಕಾರ್ಯದರ್ಶಿ ಷಣ್ಮುಖ ಗಡ್ಡೆಣ್ಣವರ ಮಾತನಾಡಿದರು., ಕಾರ್ಯಧ್ಯಕ್ಷ ಸಿದ್ದು ದುರ್ಗಣ್ಣವರ, ಸದಸ್ಯಮಿತ್ರರಾದ ಚಿದಾನಂದ ನುಚ್ಚಂಬಲಿ, ಆನಂದ ಓದಣ್ಣವರ, ಆದರ್ಶ ಗಾಂಜಿ, ಕಿರಣ್ ನಾಗಲೂಟಿ ಇದ್ದರು.
ಜಯಂತಿ ಅಂಗವಾಗಿ ಏರ್ಪಡಿಸಿದ್ದ ಭಾಷಣ, ಚಿತ್ರಕಲೆ, ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪ್ರೌಢಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಸ್ರಾರ್ಜುನ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಪ್ರಭು ಸ್ವಾಗತಿಸಿದರೆ, ವಂದನಾರ್ಪಣೆ ನೀಡಿದ್ದು ದೇವರಾಜ್, ಮತ್ತು ನಾಗರಾಜ್ ಹರಿಜನ್ ಕಾರ್ಯಕ್ರಮ ನಿರ್ವಹಿಸಿ ಯಶಸ್ವಿಗೊಳಿಸಿದರು.