Bettada Bedagampanaru

Bettada Bedagampanaru mmhills male mahadeswar swamy temple

18/10/2025
ಬೇಡಗಂಪಣ ಕುಲಗುರುಗಳಾದ ಪೂಜ್ಯ ಶ್ರೀ ಪಟ್ಟದ ಗುರುಸ್ವಾಮಿಗಳವರು ಇಂದು ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಶ್ರೀಗ...
20/05/2025

ಬೇಡಗಂಪಣ ಕುಲಗುರುಗಳಾದ ಪೂಜ್ಯ ಶ್ರೀ ಪಟ್ಟದ ಗುರುಸ್ವಾಮಿಗಳವರು ಇಂದು ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಶ್ರೀಗಳವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಂಜೆ ಐದು ಗಂಟೆಗೆ ಶ್ರೀಮಠದ ಆವರಣದಲ್ಲಿ ನಡೆಸಲು ನಿಶ್ಚಯಿಸಿದೆ.

ಬೇಡಗಂಪಣರು ಪೂರ್ವಜರು ನಡೆಸಿಕೊಂಡು ಬಂದ ಆಚಾರ ವಿಚಾರಗಳನ್ನು ಇಂದಿಗೂ ಆಚರಿಸುತ್ತಿದ್ದಾರೆ..⭐
05/03/2025

ಬೇಡಗಂಪಣರು ಪೂರ್ವಜರು ನಡೆಸಿಕೊಂಡು ಬಂದ ಆಚಾರ ವಿಚಾರಗಳನ್ನು ಇಂದಿಗೂ ಆಚರಿಸುತ್ತಿದ್ದಾರೆ..⭐

02/03/2025

ಸಾಂಪ್ರದಾಯಿಕವಾಗಿ ಈ ವರ್ಷವೂ ಬೇಡಗಂಪಣ ತಂಬ್ಬಡಿಗಳು ಹಾಗೂ ಶ್ರೀ ಸಾಲೂರು ಮಠದ ಶ್ರೀಗಳು ಡಾ! ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಒಳಗೊಂಡು.ಮುದ್ದು ಮಾದಪ್ಪನ ಕೊಂಡೋತ್ಸವ ನಡೆಯಿತು ಸಾವಿರಾರು ಮಾದಪ್ಪನ ಭಕ್ತರು ಕೊಂಡೋತ್ಸವದ ದೃಶ್ಯವನ್ನು ನೋಡಿ ಮಾದಪ್ಪನ ಕೃಪೆಗೆ ಪಾತ್ರರಾದರು💐🙏💐

1/03/2025. ಶನಿವಾರ ದೊಡ್ಡ ತೇರು ಮಹೋತ್ಸವ ⚛ ಬೆಟ್ಟದ ಬೇಡಗಂಪಣರು⚛ ಮಹಾ ಶಿವರಾತ್ರಿಯ ಮಹಾರಥದ ಉತ್ಸವವು ಬೇಡಗಂಪಣ ಸಂಪ್ರದಾಯಿಕ ಇಂದು ಜರುಗಿತು.ಪ...
01/03/2025

1/03/2025. ಶನಿವಾರ ದೊಡ್ಡ ತೇರು ಮಹೋತ್ಸವ
⚛ ಬೆಟ್ಟದ ಬೇಡಗಂಪಣರು⚛
ಮಹಾ ಶಿವರಾತ್ರಿಯ ಮಹಾರಥದ ಉತ್ಸವವು ಬೇಡಗಂಪಣ ಸಂಪ್ರದಾಯಿಕ ಇಂದು ಜರುಗಿತು.

ಪರಮ ಪುಣ್ಯಕ್ಷೇತ್ರವಾದ ಚಾಮರಾಜನಗರ ನಗರ ಗಡಿಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಯ ಪ್ರಯುಕ್ತವಾಗಿ ಮಲೆ ಮಹದೇಶ್ವರ ಸ್ವಾಮಿಯವರ ಸನ್ನಿಧಿಯಲ್ಲಿ ಇಂದು ದೊಡ್ಡ ತೇರಿನ ಉತ್ಸವವು ಬೇಡಗಂಪಣ ಸಂಪ್ರದಾಯಿಕವಾಗಿ ವಿಜೃಂಭಣೆಯಿಂದ ಸರಳವಾಗಿ ಜರುಗಿತು.

🙏ವಿಶೇಷ ಅಭಿಶೇಕ🙏
ಉಘೇ ಮಾದಪ್ಪ
ಇಂದು ಬೆಳಗಿನ ಜಾವ 3 ಗಂಟೆಯಿಂದ 4 ಗಂಟೆಯವರಿಗೆ ಮಲೆ ಮಹದೇಶ್ವರ ಸ್ವಾಮಿಗೆ ಮೊದಲ ಪ್ರಾರ್ಥಕಾಲದ ಪೂಜೆಯನ್ನು ಬೇಡಗಂಪಣ ಸರದಿ ಅರ್ಚಕರು ಉಪವಾಸದಿಂದ ಸ್ವಾಮಿಯ ಮಜ್ಜನ ಬಾವಿಯಿಂದ ಅಗ್ನಿಯ ಜಲಾಭಿಶೇಕವನ್ನು ತಂದು ಅಭಿಶೇಕ ಮಾಡಿ ಹಾಲಿನ ಅಭಿಶೇಕವನ್ನು ಮಾಡಿ ಅಲಂಕಾರವನ್ನು ಮಾಡಿ ದೂಪ ದೀಪ ನೈವೇದ್ಯವನ್ನು ಅರ್ಪಿಸಿ ಮುಕ್ತಾಯಗೊಂಡ ನಂತರ

ದ್ವೀತಿಯ ಪೂಜೆಯನ್ನು 4.00 ಗಂಟೆಯಿಂದ 6.00 ಗಂಟೆಯವರಿಗೆ ದ್ವೀತಿಯ ಅನ್ನೋದಕವನ್ನು ತಂದು ಗಣಪತಿ ಪೂಜೆ ಹಾಗೂ ಕಳಸ ಪೂಜೆಯನ್ನು ಮಾಡಿ ಸಂಕಲ್ಪಂದಿ ಶೋಡಶ ಅಭಿಶೇಕದ ಜೋತೆಗೆ ಪಂಚಾಮೃತ ಅಭಿಶೇಕವನ್ನು ಮಾಡಿದ ಬಳಿಕ ಶತನಾಮವಳಿಯ ಬಿಲ್ವಾರ್ಚನೆಯನ್ನು ಮಾಡಿ ನವರತ್ನ ಕಿರೀಟವನ್ನು ಸ್ವಾಮಿಗೆ ಧರಿಸಿ ವಿವಿಧ ರೀತಿಯ ಪುಷ್ಪಗಳಿಂದ ಅಲಂಕಾರಿಕ ಮಾಡಿ ದೂಪದ ಆರತಿಯ ಸೇವೆಯನ್ನು ಮಾಡಿ ವಿವಿಧ ಬಗ್ಗೆಯ ಆರತಿಗಳನ್ನು ಮಾಡಿ ಮಹಾ ಮಂಗಳಾರುತಿಯನ್ನು ಸೇವೆಯನ್ನು ಮಾಡಿದ ಬಳಿಕ ನೈವೇದ್ಯವನ್ನು ಸಮರ್ಪಣೆಯನ್ನುದ ನಂತರ ಸ್ಥಳೀಯ ನಿವಾಸಿಗಳು ಹಾಗೂ ಆಹ್ವಾನಿತ ಗಣ್ಯರಿಗೆ ದರ್ಶನಕ್ಕೆ ಅವಕಾಶವನ್ನು ಮಾಡಲಾಯಿತು.

💐ಮಹಾ ರಥಕ್ಕೆ ವಿಶೇಷ ಪೂಜೆ💐
💐🙏💐
ಶಿವರಾತ್ರಿ ಪ್ರಯುಕ್ತವಾಗಿ ಮುದ್ದು ಮಾದಪ್ಪನಿಗೆ ದೊಡ್ಡ ತೇರಿನ ಉತ್ಸವಕ್ಕೆ ಮಹಾ ರಥವನ್ನು ವಿವಿಧ ರೀತಿಯ ವಿನ್ಯಾಸದಲ್ಲಿ ಹೂವಿನ ಅಲಂಕಾರವನ್ನು ಸಂಪೂರ್ಣವಾಗಿ 55 ಅಡಿ ಎತ್ತರದವರಿಗೆ ಮಾಡಲಾಗಿದ್ದು ಬಾಳೆಯ ಗೂನೆಯ ಕಂಬಗಳನ್ನು ಕಟ್ಟಿ ಸಿಂಗಾರ ಮಾಡಲಾಗಿತ್ತು.

ಬೆಳಿಗ್ಗೆ 7:00 ಗಂಟೆಯ ಸಮಯದಲ್ಲಿ ಬೇಡಗಂಪಣ ಸರದಿಯ ಅರ್ಚಕರು ಹಾಗೂ ಆಗಮಿಕರುಗಳಿಂದ ಮಹಾ ರಥಕ್ಕೆ ಪೂರ್ಣಕುಂಭದ ಪೂಜೆ ಹಾ ಬ್ರಹ್ಮ ಸೋತ್ರದ ಪೂಜೆಯನ್ನು ಸಂಪ್ರದಾಯಿಕವಗಿ ಮಾಡಿ ಸಂಕಲ ಅಷ್ಟ ದಿಕ್ಕಪಾಲಕರು ಹಾಗೂ ಸಮಸ್ತ ದೇವತೆಗಳನ್ನು ಮಹಾ ರಥದ ಉತ್ಸವಕ್ಕೆ ಆಹ್ವಾನದ ಪೂಜೆಯನ್ನು ಮಾಡಿ ರಥ ಚಾಲನೆಯ ಗೂಂದಮರಗಳಿಗೆ ಪೂಜೆಯನ್ನು ಮಾಡಿ ಮೂಕೋಟಿ ದೇವತೆಗಳನ್ನು ಪ್ರಾರ್ಥನೆ ಮಾಡಿ ಪೂಜಿಸಲಾಯಿತ್ತು.

💐ಮಹಾ ರಥಕ್ಕೆ ಬಲಿ ಅನ್ನ ಸಮರ್ಪಣೆ💐
⚛🔱 ⚛
ಬೆಳಿಗ್ಗೆ 7.30 ರ ಸಮಯದಲ್ಲಿ ಸಂಪ್ರದಾಯಿಕವಾಗಿ ಮಹಾ ರಥಕ್ಕೆ ಪ್ರಾರಂಭದ ಮೊದಲು ಸರದಿಯ ಅರ್ಚಕರು ಕಟ್ಟುನಿಟ್ಟಿನ ಸಂಪ್ರದಾಯಿಕವಾಗಿ ಸಂಕಲ ದುಷ್ಟ ದೇವಾತೆಗಳನ್ನು ಅಹ್ವಾನವನ್ನು ಮಾಡಿ ಮಹಾ ರಥಕ್ಕೆ ಪೂಜೆಯನ್ನು ಸಲ್ಲಿಸಿ ಬಲಿ ಅನ್ನವನ್ನು ದೂಡ್ಡತೇರಿಗೆ ಸುತ್ತುಲೂ ದಿಕ್ಕು ದಿಕ್ಕಿಗೂ ಎಸೆದು ಪೂಜೆಯನ್ನು ಮಾಡಿ ನೈವೇದ್ಯವನ್ನು ಅರ್ಪಣೆ ಮಾಡಲಾಯಿತು.
⚛ಸಾಲೂರು ಸ್ವಾಮಿಗೆ ಪಾದಪೂಜೆ⚛

ಬೆಳಿಗ್ಗೆ 8:00 ಗಂಟೆಗೆ ಸಾಲೂರು ಮಠದ ಪಟ್ಟದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸಾಲೂರು ಮಠದಿಂದ ದೇವಾಲಯಕ್ಕೆ ಮಂಗಳಾ ವಾದ್ಯಗಳ ಸಮೇತವಾಗಿ ನೆಡೆದುಕೊಂಡು ಬಂದ ನಂತರ ದೇವಾಲಯದಲ್ಲಿ ಬೇಡಗಂಪಣ ಸರದಿಯ ಅರ್ಚಕರು ಕುಲದ ಗುರುಗಳಿಗೆ ಮೊದಲು ಪಾದ ಪೂಜೆಯನ್ನು ದೇವಾಲಯದಲ್ಲಿ ಮಾಡಿ ಸ್ವಾಮಿಯ ಐರವಂತದ ಉತ್ಸವವನ್ನು ಮಾಡಲಾಗುವುದು.

⚛ಬಿಳಿ ಆನೆ ಉತ್ಸವ⚛

8.10 ಸಮಯದಲ್ಲಿ ಐರವಂತದ ಬಿಳಿಯ ಆನೆಯ ಮೇಲೆ ಮಲೆ ಮಹದೇಶ್ವರ ಸ್ವಾಮಿಯ (ಉಮ ಮಹೇಶ್ವರಿ) ಮೂರ್ತಿಯನ್ನು ನೂತನ ವಸ್ತ್ರಆಭರಣಗಳಿಂದ ಹಾಗೂ ವಿವಿಧ ಬಗ್ಗೆಯ ಹೂವುಗಳಿಂದ ಮತ್ತು ಬಿಲ್ವಪತ್ರೆಯ ಹಾರದಿಂದ ಸಿಂಗಾರವನ್ನು ಮಾಡಿ ಉಪವಾಸದಿಂದ ಸರದಿಯ ಅರ್ಚಕರು ಅನೆಯ ವಾಹನದ ಮೇಲೆ ಇಟ್ಟು ಸಂಪ್ರದಾಯಿಕವಾಗಿ ವಿಭೂತಿ, ಗಂಧದ ,ದೂಪ ದೀಪ ನೈವೇದ್ಯ ಮಾಡಿ ಮಹಾ ಮಂಗಳಾರುತಿಯನ್ನು ಮಾಡಿ . ಕೆಂಪು ಮಡಿಯನ್ನು ಹುಟ್ಟ ಸರದಿಯ ತಮ್ಮಂಡಿಗಳು ಹೆಗಲ ಮೇಲೆ ಬಿಳಿ ಆನೆಯ ಉತ್ಸವ ಮೂರ್ತಿಯನ್ನು ಹೂತ್ತು ದೇವಾಲಯದ ಒಳ ಭಾಗ ಹಾಗೂ ಹೋರ ಭಾಗದ ಜೋತೆಗೆ ತೇರನ್ನು ಮೂರು ಸುತ್ತು ಪ್ರದಕ್ಷಿಣೆಯನ್ನು ಮಾಡಿದ ಮೇಲೆ ಸ್ವಾಮಿಯನ್ನು ಮಹಾ ತೇರಿನ ಮೇಲೆ ಇಡಲಾಗುತ್ತದೆ.

🔱ದೊಡ್ಡ ತೇರಿನ ಮೇಲೆ ದುಂಡು ಮಾದಯ್ಯ 🔱
⚛ ಉಘೇ ಮಹದೇಶ್ವರ ⚛
ಸ್ವಾಮಿಯ ಉತ್ಸವ ಮೂರ್ತಿಯನ್ನು ದೊಡ್ಡ ತೇರಿನ ಮೇಲೆ ಹೊತ್ತು ಇಟ್ಟ ನಂತರ ಸಾಲೂರು ಮಠದ ಡಾ! ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಪಟ್ಟಗಾರರು ಸರದಿಯ ಬೇಡಗಂಪಣ ತಮ್ಮಂಡಿಗಳಿಂದ ವಿಶೇಷ ಪೂಜೆಯನ್ನು ಮಾಡಲಾಗುವುದು ಜೋತೆಗೆ ಶತನಾಮ ಬಿಲ್ವಾರ್ಚನೆಯನ್ನು ಮಾಡಿ,ದೂಪದ ಸೇವೆ ಹಾಗೂ ದೀವಾಟಿಗೆಯ ಸೇವಯನ್ನು ಮಾಡಿ ನೈವೇದ್ಯವನ್ನು ಅರ್ಪಸಿ ಮಂಗಳಾರುತಿಯ ಸೇವೆಯನ್ನು ಮಾಡಿದ ನಂತರ ಬೇಡಗಂಪಣ ಹದಿಅರೆಯದ 101 ಬಾಲಕಿಯರು ಕೇಸರಿ ಸೀರೆಯನ್ನು ಕುಪ್ಪಸವನ್ನು ತೊಟ್ಟು ಉಪವಾಸದಿಂದ ದೂಡ್ಡ ಮಾದಪ್ಪನ ತೇರಿಗೆ ಬೆಲ್ಲದ ಆರತಿಯನ್ನು ಎತ್ತಿದ ನಂತರ ರಥದ ಚಾಲನೆಗೆ ಬೂದು ಕುಂಬಳಕಾಯಿ ದೃಷ್ಟಿಯನ್ನು ತೇಗೆದು ಒಡೆದ ತಕ್ಷಣ ಮಾದಪ್ಪನ ಭಕ್ತರಲ್ಲಿ ಮೈ ರೂಮಂಚಾನಗೊಂಡು ಉಘ..ಉಘ...ಉಘ.... ಮಾದಪ್ಪ ಮಾಯ್ಕಾರ ಎನ್ನುವ ಉದ್ಯೋಸವು ಮುಗಿಲು ಮುಟ್ಟುವಂತೆ ಗೂಗಿ ಹೇಳುತ್ತ ಕರೆಯುತ ತೇರಿನ ಹಗ್ಗವನ್ನು ಎಳೆಯುವರು ಮುಂದೆ ರುದ್ರಾಕ್ಷಿ ಮಂಟಪ, ಬಸವವಾಹನ, ಹುಲಿವಾಹನ ಹಾಗೂ ದೂಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ ನಂದಿಕಂಬಗಳು,ಸೂರ್ಯಪಾನಿ, ಚಂದ್ರಪಾಣಿ ವೀರಗಾಸೆಯ ಕುಣಿತದೊಂದಿಗೆ ಸ್ವಾಮಿಯ ದೇವಾಲಯ ಒಂದು ಸುತ್ತು ಬರುವುದು.

ತೇರು ಮುಂದೆ ಮುಂದೆ ಚಕ್ರ ಉರುಳು ತಿಂದತೆ ಬಾಳೆಯ ಹಣ್ಣು ಮತ್ತು ಜವನವನ್ನು ಎಸೆಯುವರು ಬೆಳೆದ ದವಸ ದಾನ್ಯಗಳು, ಚಿಲ್ಲರೆಯ ಕಾಸನ್ನು, ಎಸೆಯುವರು ಭಕ್ತರು ಆನಂದದಿ ಕೈ ಚಪಾಳೆ ತಟ್ಟುವರು .
⚛🔱💐 ಪಲ್ಲಕ್ಕಿ ಉತ್ಸವ💐🔱

ಮಹಾ ರಥದ ಉತ್ಸವ ಪೂರ್ಣಗೊಂಡ ಮೇಲೆ ಮಂಗಳವಾದ್ಯಗಳ ಸಮೇತವಾಗಿ ಪಲ್ಲಕಿಯ ಉತ್ಸವದಲ್ಲಿ ಸ್ವಾಮಿಯ ಉತ್ಸವವನ್ನು ಇಟ್ಟು ಪೂಜೆಯನ್ನು ಮಾಡಿ ಪಲ್ಲಕಿಯ ಉತ್ಸವದ ಮೇರವಾಣಿಗೆಯಲ್ಲಿ ಸಾಲೂರು ಮಠದ ಪಟ್ಟದ ಡಾ!ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಜೋತೆಯಲ್ಲಿ ಕುಳಿತು ಒಂದು ಸುತ್ತು ಸ್ವಾಮಿಯ ದೇವಾಲಯ ಬಂದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಇಲ್ಲಿಗ್ಗೆ ಮಹಾ ಶಿವರಾತ್ರಿ ರಥೋತ್ಸವ ಮುಕ್ತಾಯ

Address

Mahadeshwara Betta Tempale
Kollegal
571490

Telephone

+919448344258

Website

Alerts

Be the first to know and let us send you an email when Bettada Bedagampanaru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bettada Bedagampanaru:

Share