09/09/2025
ಕುಲ ಬಂದುಗಳೇ,
ಈ ದಿವಸ ಜಾತೀಗಣತಿ ವಿಷಯವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಗಳು ಭಾಗವಹಿಸಿದ್ದು ನಮ್ಮ ಸಮಾಜದ ಅನೇಕ ಬಂಧುಗಳು ಬಂದು ಕಾರ್ಯಕ್ರಮವನ್ನು ತುಂಬಾ ಯಶಸ್ವಿಗೊಳಿಸಿದ್ದಕ್ಕೆ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. 👏
ಈ ಕಾರ್ಯಕ್ರಮದ ಕುರಿತು ಏನೆಲ್ಲಾ ಚರ್ಚಿಸಲಾಯಿತು, ಮತ್ತು ಜನಗಣತಿಗೆ ಬಂದಾಗ ನಾವು ಹೇಗೆ ಮತ್ತು ಯಾವ ಮಾಹಿತಿಗಳನ್ನು ನೀಡಬೇಕು ಎಂದು ಎಲ್ಲರಿಗೂ ತಿಳಿಸಲಾಗುತ್ತದೆ.
ನಮ್ಮ ಕೆಂಪೇಗೌಡ ಯುವ ಸಮಿತಿವತಿಯಿಂದ ಗ್ರಾಮ ಸಭೆಗಳನ್ನು ನಾವು ಮೊದಲಿನಿಂದಲೂ ಮಾಡುತ್ತಿದ್ದು, ಮುಂದಿನ ಗ್ರಾಮ ಸಭೆಗಳಲ್ಲಿ ಜನಗಣತಿಯ ವಿಷಯವನ್ನೂ ಅದರಲ್ಲಿ ಸೇರಿಸಿಕೊಂಡು ಗ್ರಾಮ ಸಭೆ ಮಾಡುತ್ತೇವೆ. ಆದರೆ ಕಡಿಮೆ ಸಮಯ ಇರುವುದರಿಂದ ಎಲ್ಲಾ ಗ್ರಾಮಗಳಿಗೆ ಬೇಟಿ ನೀಡಿ ಜನಗಣತಿ ವಿಷಯ ಚರ್ಚಿಸಲು ಹಾಗುವುದಿಲ್ಲ. ಹಾಗಾಗಿ
ನಮ್ಮ ಸಮಾಜದ ಜನರಿಗೆ ವಿಷಯ ಮುಟ್ಟುವಂತೆ ಆಯಾ ಗ್ರಾಮಗಳಲ್ಲಿ ಗ್ರಾಮದವರೇ ಒಂದೊಂದು ಸಭೆ ಮಾಡಿ ವಿಷಯ ಮುಟ್ಟಿಸಬೇಕು.
ಮತ್ತು ಜಾತಿಗಣತಿಗೆ ಬಂದಂತಹ ಸಮಯದಲ್ಲಿ ಮನೆಯ ಒಬ್ಬ ಮುಖ್ಯ ಸದಸ್ಯ ಮನೆಯಲ್ಲಿ ಇದ್ದು ಮಾಹಿತಿ ನೀಡಿ. ಇದು ತುಂಬಾ ಮುಖ್ಯ.
ನಾವು ಈ ಜಾತಿಗಣತಿಯನ್ನು ನಿರ್ಲಕ್ಷಿಸಿದರೆ ಸರ್ಕಾರ ನಮ್ಮ ಜನಾಂಗವನ್ನು ನಿರ್ಲಕ್ಷಿಸುತ್ತದೆ.
ಹಾಗಾಗಿ ಈ ವಿಷಯದಲ್ಲಿ ಯಾರೂ ಮೈ ಮರೆಯಬೇಡಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಗಳು ಹೆಚ್ಚರಿಕೆ ಕೊಟ್ಟಿದ್ದಾರೆ.
ಏನೆಲ್ಲಾ ಅಂಶಗಳು ಮುಖ್ಯವಾಗಿ ನಾವು ನಮೂದಿಸಬೇಕು ಎಂದು ಮುಂದೆ ತಿಳಿಸಲಾಗುವುದು.❤️