Karnataka Rashtra Samithi - State Student Wing

Karnataka Rashtra Samithi - State Student Wing Student wing of Karnataka Rashtra Samithi Party (R)

State President of Party: Shri. Deepak C N

State Honorary President: Shri.

Ravi Krishna Reddy

Motto: To enable student community to develop democratic , secular temper and Patriotism

17/08/2026

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಭಾಗದಲ್ಲಿ ನಡೆಯುತ್ತಿರುವ ಕೃಷಿ ಭೂಸ್ವಾಧೀನವನ್ನು ವಿರೋಧಿಸಿ ಅಲ್ಲಿನ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಬೆಂಬಲಿಸಿ, ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಬೃಹತ್ ಪ್ರತಿಭಟನಾ ಬೈಕ್ ಜಾಥಾ.

16/08/2026

ಹುಬ್ಬಳ್ಳಿ ಧಾರವಾಡ ಕಣ್ಣು ಮುಚ್ಚಿ ಕುಳಿತಿರುವ ಮಹಾನಗರ ಪಾಲಿಕೆ ಯಲ್ಲಿ ನೋಡಿದರಲ್ಲಿ ಗುಂಡಿಗಳದ್ದೆ ಧರಬಾರ್ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಪಡೆಯುತ್ತಿರುವ ಲೂಟಿ

ಎಲ್ಲರೂ ಸೇರಿ ಎಷ್ಟು ಲೂಟಿ ಹೊಡೆದಿದ್ದೀರಿ ಅಂತ ಲೆಕ್ಕ ಕೊಡಿ. ಇಲ್ಲದೇ ಇದ್ದಲ್ಲಿ ತಕ್ಷಣದಲ್ಲೇ ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಿ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ Hubballi Dharwad Municipal Corporation

16/08/2026

ಹುಬ್ಬಳ್ಳಿ ಧಾರವಾಡ ಕಣ್ಣು ಮುಚ್ಚಿ ಕುಳಿತಿರುವ ಮಹಾನಗರ ಪಾಲಿಕೆ ಯಲ್ಲಿ ನೋಡಿದರಲ್ಲಿ ಗುಂಡಿಗಳದ್ದೆ ಧರಬಾರ್ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಪಡೆಯುತ್ತಿರುವ ಲೂಟಿ

01/08/2026
26/07/2026

#ಭ್ರಷ್ಟ KPSC ಸಂಸ್ಥೆ ರದ್ದುಗೊಳಿಸಿ ಅಭಿಯಾನಕ್ಕೆ ಧಾರವಾಡದಲ್ಲಿ ಕೆಆರ್‌ಎಸ್ ಪಕ್ಷದಿಂದ ಚಾಲನೆ.

ಧಾರವಾಡ
26-06-206

23/07/2026

ಭಾರತೀಯ ಸಮಾಜದಲ್ಲಿ 'ಚಿನ್ನ' ಕೇವಲ ಒಂದು ಲೋಹವಲ್ಲ, ಅದು ಕುಟುಂಬಗಳ ಆರ್ಥಿಕ ಭದ್ರತೆಯ, ಸಂಸ್ಕೃತಿಯ ಮತ್ತು ಭಾವನೆಗಳ ಸಂಕೇತವಾಗಿದೆ. ಮಗಳ ಮದುವೆ, ಆರೋಗ್ಯದ ತುರ್ತು ಪರಿಸ್ಥಿತಿ, ಮಕ್ಕಳ ಉನ್ನತ ಶಿಕ್ಷಣದಂತಹ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರಿಗೆ ನೆರವಾಗುವುದೇ ಅವರು ಕೂಡಿಟ್ಟ ಈ ಚಿನ್ನ. ಇಂತಹ ಸೂಕ್ಷ್ಮ ಭಾವನೆಗಳ ಮೇಲೆ ಚಿನ್ನತಂಬಿ ಮತ್ತು ಆತನ ಪೊಲೀಸ್ ಬೆಂಬಲಿಗರು ಪ್ರಹಾರ ಮಾಡಿದ್ದಾರೆ. ಅಡವಿಟ್ಟ ಚಿನ್ನಕ್ಕೆ ಹೆಚ್ಚಿನ ಬೆಲೆ ನೀಡುವುದಾಗಿ ನಂಬಿಸಿ, ನೂರಾರು ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಕರಗಿಸಿ ಕೋಟ್ಯಾಂತರ ರೂಪಾಯಿ ದೋಚಿರುವ ಈ ಕೃತ್ಯವು, ನೂರಾರು ಕುಟುಂಬಗಳನ್ನು ಬೀದಿಗೆ ತಂದಿದೆ.
​ತಮ್ಮ ಜೀವಮಾನದ ದುಡಿಮೆಯನ್ನೆಲ್ಲಾ ಕಳೆದುಕೊಂಡಿರುವ ಸಂತ್ರಸ್ತರು ಇಂದು ಕಣ್ಣೀರು ಹಾಕುತ್ತಿದ್ದಾರೆ. ವಂಚಕನಿಂದ ನ್ಯಾಯ ಪಡೆಯಲು ಪೊಲೀಸ್ ಠಾಣೆಯ ಮೆಟ್ಟಿಲೇರಿದರೆ, ಅಲ್ಲಿನ ಭ್ರಷ್ಟ ವ್ಯವಸ್ಥೆ ಅವರನ್ನು ಮತ್ತಷ್ಟು ಹತಾಶೆಗೆ ದೂಡಿದೆ. ಈ ರೀತಿಯ ವ್ಯವಸ್ಥಿತ ಆರ್ಥಿಕ ಲೂಟಿಯು ಸಮಾಜದಲ್ಲಿ ಸರ್ಕಾರದ ಮತ್ತು ಕಾನೂನು ಸುವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುತ್ತದೆ. ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಸುಲಭವಾಗಿ ನುಣುಚಿಕೊಳ್ಳುವಂತಾದರೆ, ಅದು ಭವಿಷ್ಯದಲ್ಲಿ ಇಂತಹ ನೂರಾರು ವಂಚಕರು ಹುಟ್ಟಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ.
​ ಸ್ಥಳೀಯ ಪೊಲೀಸರು (CCB) ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ದೂರುದಾರರ ಅರ್ಜಿಗಳನ್ನು ತಿರುಚಿರುವ ಸಿಸಿಬಿ ಪೊಲೀಸರ ನಡೆಯೇ ಇದಕ್ಕೆ ಜ್ವಲಂತ ಸಾಕ್ಷಿ. ಆದ್ದರಿಂದ, ತಾವು ತಕ್ಷಣವೇ BUDS Act, 2019 ರ ಸೆಕ್ಷನ್ 30 ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿ, ಈ ಹಗರಣವನ್ನು ಕೇಂದ್ರೀಯ ತನಿಖಾ ದಳ (CBI) ಗೆ ಹಸ್ತಾಂತರಿಸಲು ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಬೇಕು.

KPID ಕಾಯ್ದೆ 2004 ಮತ್ತು BUDS ಕಾಯ್ದೆ 2019 ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವನ್ನು ತಕ್ಷಣವೇ ಕಾರ್ಯಪ್ರವೃತ್ತಗೊಳಿಸಿ, ಆರೋಪಿ ಚಿನ್ನತಂಬಿ ಮತ್ತು ಆತನ ಬೆಂಬಲಿಗರು ಬೇನಾಮಿ ಹೆಸರಿನಲ್ಲಿ ಮಾಡಿರುವ ಎಲ್ಲಾ ಸ್ಥಿರ ಮತ್ತು ಚರಾಸ್ತಿಗಳನ್ನು, ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು. ವಶಪಡಿಸಿಕೊಂಡ ಆಸ್ತಿಗಳನ್ನು 60 ದಿನಗಳ ಮಿತಿಯೊಳಗೆ ನಿಯೋಜಿತ ನ್ಯಾಯಾಲಯದ (Designated Court) ಅನುಮತಿ ಪಡೆದು ಶೀಘ್ರವಾಗಿ ಹರಾಜು ಹಾಕಿ, ನೊಂದ ಠೇವಣಿದಾರರಿಗೆ ಮತ್ತು ಗ್ರಾಹಕರಿಗೆ ಅವರ ಹಣ ಅಥವಾ ಚಿನ್ನದ ಮೌಲ್ಯವನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಸಮರೊಪಾದಿಯಲ್ಲಿ ಕೈಗೊಳ್ಳಬೇಕು ​ಎಂದು ಆಗ್ರಹಿಸುತ್ತಿದೆ .
ದಯವಿಟ್ಟು ಎಲ್ಲಾ ಪ್ರಜ್ಞಾವಂತ ಮೈಸೂರಿನ ನಾಗರಿಕರು ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಸ್ಥಳ,=ಜಿಲ್ಲಾಧಿಕಾರಿ ಕಚೇರಿ ಅವಾರಣ
ದಿನಾಂಕ: 23-07-2026
#ಮೈಸೂರು

16/07/2026

ದೇಶದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಭ್ರಷ್ಟ ರಾಜಕಾರಣಿಗಳ ವಿರುದ್ಧ ಸೋನಂ ವಾಂಗ್ಚುಕ್ ಅವರು ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸಬೇಕಾದ ಅಗತ್ಯವಿದೆ.

ಈ ಹೋರಾಟದ ಕುರಿತು ಕರ್ನಾಟಕ ಹೇಗೆ ಸ್ಪಂದಿಸಬೇಕು, ಯಾವ ರೀತಿಯ ಜನಾಂದೋಲನಗಳನ್ನು ಹಾಗೂ ಹೋರಾಟಗಳನ್ನು ರೂಪಿಸಬೇಕು ಎಂಬುದರ ಕುರಿತು ಸಮಾಲೋಚನೆ ನಡೆಸಲು ಇಂದು ಸಂಜೆ 4 ಗಂಟೆಗೆ ಶಾಸಕರ ಭವನದ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.

ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ದೇಶದ ಭವಿಷ್ಯದ ಬಗ್ಗೆ ಕಾಳಜಿ ಇರುವ ಎಲ್ಲರೂ ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಹಾಗೂ ಹೋರಾಟವನ್ನು ಮತ್ತಷ್ಟು ಬಲಪಡಿಸುವಂತೆ ವಿನಮ್ರವಾಗಿ ಕೋರಿಕೊಳ್ಳುತ್ತೇವೆ.

ಸ್ಥಳ: ಶಾಸಕರ ಭವನದ ಸಭಾಂಗಣ
ಸಮಯ: ಇಂದು ಸಂಜೆ 4 ಗಂಟೆ

Address

Hassan
573201

Alerts

Be the first to know and let us send you an email when Karnataka Rashtra Samithi - State Student Wing posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Rashtra Samithi - State Student Wing:

Shortcuts

Share