12/07/2026
ಜೆಸಿಐ ಅಲುಮ್ನಿ ಕ್ಲಬ್ (ಹರಪನಹಳ್ಳಿ) ಹಾಗೂ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ 'ಕನ್ನಡ ರತ್ನ' ಪ್ರಶಸ್ತಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ಜರುಗಿತು. ಈ ಸಮಾರಂಭದಲ್ಲಿ ಪಿಯುಸಿ ಕನ್ನಡ ವಿಷಯದಲ್ಲಿ ಅತ್ಯುನ್ನತ ಸಾಧನೆಗೈದ ನೂರಾರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಇದೇ ವೇದಿಕೆಯಲ್ಲಿ ಜೆಎಸಿ ಅಲುಮ್ನಿ ಕ್ಲಬ್ ವಲಯ-24ರ ಅಧ್ಯಕ್ಷರಾದ ಜೆಸಿ ಪಿಡಿಎಂ ಎನ್.ಮಹಾಬಲೇಶ್ವರ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಜೊತೆಗೆ, ಜೆಸಿ ಪಿ.ಟಿ.ನಾಗರಾಜ್ (ಜೆಎಸಿ ಅಲುಮ್ನಿ ಕ್ಲಬ್ ಘಟಕ) ಹಾಗೂ ಎನ್.ರವೀಂದ್ರನಾಥ್ (ಜೆಎಸಿ ಕೊಟ್ಟೂರು ಕಾಟನ್) ಅವರನ್ನು ನೂತನ ಸದಸ್ಯರಾಗಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಆಯೋಜಕರು ಹಾಗೂ ಹರಪನಹಳ್ಳಿ ಘಟಕದ ಅಧ್ಯಕ್ಷರಾದ ಜೆಸಿ ಹೆಚ್.ಮಲ್ಲಿಕಾರ್ಜುನ, ಸಂಸ್ಥೆಯ ಅಧ್ಯಕ್ಷೆ ಜೆಸಿ ಸಪ್ನಾ ಮಲ್ಲಿಕಾರ್ಜುನ, ಜೆಎಸಿ ಸಂಸದೀಯ ಸದಸ್ಯ ಜೆಸಿ ವಿಶ್ವನಾಥ ಡಿ, ಪ್ರಮುಖರಾದ ಜೆಸಿ ಇರ್ಷಾದ್ ಭಾಷ, ಜೆಸಿ ಕೆ.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.
#ಜೆಸಿಐ #ಜೆಸಿಐಇಂಡಿಯಾ #ಜೆಸಿಐವಲಯ24
#ಜೆಎಸಿ #ಜೆಸಿಐಅಲ್ಮುನಿಕ್ಲಬ್