01/06/2025
ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ #ಮೆತಗಲ್ ಗ್ರಾಮದಲ್ಲಿ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಬಾರ್ಡ್ ಸಂಸ್ಥೆಯವರು ಮೆತಗಲ್ ಗ್ರಾಮದ ಸಾರ್ವಜನಿಕರ ಒಪ್ಪಿಗೆ ಇಲ್ಲದೆ , ಪೊಲೀಸ್ ಸಿಬ್ಬಂದಿಯನ್ನು ಕರೆತಂದು Cold Storage ಕಟ್ಟಡವನ್ನು ಕಟ್ಟಲು ಮುಂದಾಗಿದ್ದರು, ಈ ಸಮಸ್ಯೆಯನ್ನು ಬಿಜೆಪಿ ಮುಖಂಡರಾದ #ಶ್ರೀ_ಸಂಗಮೇಶ್_ಸುಗ್ರೀವಾ ಅವರಿಗೆ ತಿಳಿಸಿದಾಗ ಸ್ಥಳಕ್ಕೆ ದೌಡಾಯಿಸಿದ ಸುಗ್ರೀವಾ ಅವರು ಸಂಬಂಧಪಟ್ಟಂತ ಅಧಿಕಾರಿಗಳ ಜೊತೆ , AC ಸಹಾಯಕ ಆಯುಕ್ತರ ಜೊತೆ ಮತ್ತು ಪೊಲೀಸ್ ಸಿಬ್ಬಂದಿ ಜೊತೆ ಮಾತನಾಡಿ ಕೆಲಸವನ್ನು ಸ್ಥಗಿತಗೊಳಿಸಿ , ಸಾರ್ವಜನಿಕರ ಒಪ್ಪಿಗೆ ಮೇರೆಗೆ ಕಟ್ಟಡ ಸ್ಥಳವನ್ನು ಬದಲಾವಣೆ ಮಾಡಿ ಕಟ್ಟಬೇಕೆಂದು ಆಗ್ರಹಿಸಿ , ಸಾರ್ವಜನಿಕರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ( AC ) , DYSP, CPI , PI Koppal ಮತ್ತು ಊರಿನ ಮುಖಂಡರಾದ ಹಂಪಯ್ಯ ತಾತ ಮತ್ತು ಮಾಜಿ zp ಅಧ್ಯಕ್ಷರು , ತಾಯಿಂದರು ಮತ್ತು ನೂರಾರು ಸಂಖ್ಯೆಯಲ್ಲಿ ಊರಿನ ಮುಖಂಡರು ಉಪಸ್ಥಿತಿ ಇದ್ದರು.