Odeyar Edu Trust

Odeyar Edu Trust Unique Academy Jalageri
Odeyar English Medium Public School

ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು*   ♥️    🙏
02/04/2026

ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು*

♥️ 🙏

ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು
30/03/2026

ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು

ಸಮಸ್ತ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು     ✨🌙🕋❤️
21/03/2026

ಸಮಸ್ತ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು


✨🌙🕋❤️

ಸಮಸ್ತ ಜನತೆಗೆ  ಹಿಂದು ಸನಾತನ ಪರಂಪರೆಯ ಹೊಸ ವರ್ಷ "ಯುಗಾದಿ"  #ಹಬ್ಬದ_ಹಾರ್ದಿಕ_ಶುಭಾಶಯಗಳು #ಯುಗಾದಿ #ಯುಗಾದಿ2026  jalageri
19/03/2026

ಸಮಸ್ತ ಜನತೆಗೆ ಹಿಂದು ಸನಾತನ ಪರಂಪರೆಯ ಹೊಸ ವರ್ಷ "ಯುಗಾದಿ" #ಹಬ್ಬದ_ಹಾರ್ದಿಕ_ಶುಭಾಶಯಗಳು
#ಯುಗಾದಿ
#ಯುಗಾದಿ2026


jalageri

ಅದೇ ತಾನೇ ಶುರುವಾಗಿ ಎರಡನೇ ವರ್ಷವಾಗಿದ್ದ ನಮ್ಮ  #ಯುನಿಕ್_ಅಕಾಡೆಮಿ  ಕೋಚಿಂಗ್ ಕ್ಲಾಸ್‌ ಸರಿಯಾದ ಸ್ಥಳ ಇಲ್ಲದೆ  ಶಿರಾಳಶೆಟ್ಟಿ ವಸ್ತಿಯ ಶ್ರೀ ವ...
14/03/2026

ಅದೇ ತಾನೇ ಶುರುವಾಗಿ ಎರಡನೇ ವರ್ಷವಾಗಿದ್ದ ನಮ್ಮ #ಯುನಿಕ್_ಅಕಾಡೆಮಿ ಕೋಚಿಂಗ್ ಕ್ಲಾಸ್‌ ಸರಿಯಾದ ಸ್ಥಳ ಇಲ್ಲದೆ ಶಿರಾಳಶೆಟ್ಟಿ ವಸ್ತಿಯ ಶ್ರೀ ವೀರಭದ್ರ ದೇವಸ್ಥಾನದ ಬಲಭಾಗದಲ್ಲಿರುವ ಸಮುದಾಯ ಭವನದಲ್ಲಿ ಅಲ್ಲಿರುವ ಸುತ್ತಮುತ್ತಲಿನ ಹಿರಿಯರ ಅನುಮತಿಯೊಂದಿಗೆ ಕ್ಲಾಸುಗಳನ್ನು ಪ್ರಾರಂಭಿಸಿದೇವು,
ಸುಮಾರು 50ರಿಂದ 60 ಇರುವ 10ನೇ ತರಗತಿಯ ವಿಧ್ಯಾರ್ಥಿಗಳು ಕೊಚಿಂಗ್ ಗೆ ಸೇರಿದರು,, ಅವರೆಲ್ಲರಿಗೂ ತಮ್ಮ ಸ್ವಂತ ಮೊಮ್ಮಕ್ಕಳಂತೆ ನೋಡುತ್ತ, ಅವರಿಗೆ ಸುತ್ತಮುತ್ತಲಿನ ಗೀಡಮರಗಳಲ್ಲಿ ಇರುವ ಮಾವಿನ ಹಣ್ಣು, ಪೆರಲ ಹಣ್ಣು, ಸಿತಾಫಲ ಹಣ್ಣು, ಪಪಾಯ ಹಣ್ಣುಗಳನ್ನು ಮಧ್ಯಾನ್ಹ ತಂದು ಮಕ್ಕಳಿಗೆ ಕೋಡುತಿದ್ದ ನಮ್ಮ ಜಾಲಗೇರಿ ಗ್ರಾಮದ ಹಿರಿಯರು ಮತ್ತು ನಮ್ಮ ಅಜ್ಜ ಮುತ್ತಜ್ಜನ ತಲೆಮಾರಿನವರಾದ #ಶ್ರೀ_ಶಿವಲಿಂಗಪ್ಪ_ಶಿರಾಳಶೆಟ್ಟಿಯವರು ಇವತ್ತು ಬೆಳೆಗ್ಗೆ ನಿಧನರಾದ ಸುದ್ದಿ ನಮ್ಮೆಲ್ಲರನ್ನು ಘಾಸಿಗೊಳಿಸಿತು,

ಶಿಕ್ಷಕರು ಒಂದೊಂದು ಸಾರಿ
ಸರಿಯಾದ ಸಮಯಕ್ಕೆ ಬಾರದಿದ್ದರೆ ಮಕ್ಕಳನ್ನು ತಮ್ಮ ಹತ್ತಿರ ಕರೆದು ಸುತ್ತಲೂ ಕೂರಿಕೊಂಡು ಅವರಿಗೆ ರಾಮಾಯಣ , ಮಹಾಭಾರತ, ಅಕ್ಕಮಹಾದೇವಿ, ಶ್ರೀ ಅಮೋಘಸಿದ್ದರ ಕಥೆಗಳನ್ನು ಹೇಳುತ್ತ ಇಂದಿನ ಹೆಣ್ಣುಮಕ್ಕಳು ತಂದೆತಾಯಿಗಳು ಕಲಿಸಿದ ವಿದ್ಯೆಯನ್ನು ಸರಿಯಾದ ಮಾರ್ಗದಲ್ಲಿ ಉಪಯೊಗಿಸಿಕೊಂಡು ಹೋಗಿದ್ದೆ ಆದರೆ ನಿಮ್ಮ ಜೀವನ ಸಾರ್ಥಕ ಎಂದು ಹೇಳುತಿದ್ದರೆ ಮಕ್ಕಳು ಅವರು ಹೇಳಿದ್ದನ್ನು ಕುತೂಹಲಕಾರಿಯಾಗಿ ಕೇಳುತ್ತಿದ್ದರು.

ಬೇಸಿಗೆ ಇದ್ದರೂ ಮನೆಯಲ್ಲಿ ವಿಶ್ರಾಂತಿ ಪಡೆಯದೆ ಸಮುದಾಯ ಭವನದ ಪಕ್ಕದ ಕಟ್ಟಿಯ ಮೇಲೆ ಕುಳಿತು ಮಕ್ಕಳಿಗೆ ಅವರು ಹೇಳುತಿದ್ದ ಮಾರ್ಗದರ್ಶನದ ಮಾತುಗಳು ಯಾವ ವಿಶ್ವವಿದ್ಯಾಲಯಕ್ಕೂ ಕಡಿಮೆ ಇರಲಿಲ್ಲ ಊಟವಾದ ನಂತರ ಅವರ ಕಥೆಗಾಗಿ ಮಕ್ಕಳು ಕಾಯುತ್ತಿದ್ದರು,

ಇಂತಹ ಮಹಾನ್ ಚೇತನದಂತಿದ್ದ ಹಿರಿಯರು, ಅನುಭವಸ್ತರು ಇವತ್ತು ಬಾರದ ಲೋಕಕ್ಕೆ ಪ್ರಯಾಣ ಬೇಳೆಸಿದರು,

ಒಂದಂತೂ ನಿಜ, ಎರಡು ವರ್ಷಗಳ ಕಾಲ ಸಮುದಾಯ ಭವನದ ಬೇಸಿಗೆ ಶಿಬಿರದ ಅವಧಿಯಲ್ಲಿ ಅವರ ಮಾರ್ಗದರ್ಶನದಲ್ಲಿ ಬೆಳೆದ ವಿಧ್ಯಾರ್ಥಿಗಳು ಇವತ್ತು ಉನ್ನತ ಶಿಕ್ಷಣದತ್ತ ದಾಪುಗಾಲಿಟ್ಟಿದ್ದಾರೆ, ಮತ್ತು ತಮ್ಮ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ರೂಪಿಸಿಕೊಳುತ್ತಿದ್ದಾರೆ,

ದೇವರು ಇವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ
🙏🙏🙏🙏🙏💐💐💐💐💐😥😥😥

20/02/2026

A girls' cricket match was organized at our Unique Academy Summer Camp. #2025

16/02/2026

Sun sun Sunday rhymes activities with kids

14/02/2026

ಶ್ರೇಷ್ಠ ಸಂತ, ಸಮಾಜ ಸುಧಾರಕ, ಮಹಾನ್ ದಾರ್ಶನಿಕ ಸಂತ ಶ್ರೀ ಸೇವಾಲಾಲ ಮಹಾರಾಜ ಜಯಂತಿಯ ಹಾರ್ದಿಕ ಶುಭಾಶಯಗಳು

14/02/2026

ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಷಯಗಳು
#ಮಹಾಶಿವರಾತ್ರಿ

ಇಂದು ನಮ್ಮ  #ಒಡೆಯರ್_ಆಂಗ್ಲ_ಮಧ್ಯಮ_ಪಬ್ಲಿಕ್_ಶಾಲೆ_ಜಾಲಗೇರಿಯಲ್ಲಿ  #77ನೇ  #ಗಣರಾಜ್ಯೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮ...
26/01/2026

ಇಂದು ನಮ್ಮ #ಒಡೆಯರ್_ಆಂಗ್ಲ_ಮಧ್ಯಮ_ಪಬ್ಲಿಕ್_ಶಾಲೆ_ಜಾಲಗೇರಿಯಲ್ಲಿ #77ನೇ #ಗಣರಾಜ್ಯೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ #ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ #ಶ್ರೀ_ಪರಮೇಶ್ವರ_ಒಡೆಯರ್ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ #ಶ್ರೀಯುತ_ಕರಿಯಪ್ಪ_ಆಸಂಗಿಯವರು ಭೂಸೇನಾ ಅಭಿವೃದ್ದಿ ನಿಗಮ ವ್ಯವಸ್ಥಾಪಕ ಇಲಾಖೆಯ ಕೊಡಗು ಜಿಲ್ಲಾ ವ್ಯವಸ್ಥಾಪಕರು ಮತ್ತು ವಿಜಯಪುರ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಮತ್ತು #ಘೋಡಕೆ_ಫೌಂಡೇಷನ್ ಸಂಸ್ಥಾಪಕರು ಆದ #ಶ್ರೀಯುತ_ರೇವಣಸಿದ್ದ_ಆರ್_ಘೋಡಕೆಯವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಶ್ರೀಯುತ ರೇವಣಸಿದ್ದ ಘೋಡಕೆಯವರು ಮತ್ತು ಶ್ರೀಯುತ ಬಸವರಾಜ ಒಡೆಯರ್ ರವರು ಪೂಜೆ ಸಲ್ಲಿಸಿದರು.
ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀಯುತ ಕರಿಯಪ್ಪ ಆಸಂಗಿಯವರು "ಗ್ರಾಮೀಣ ಮಟ್ಟದಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ವೃದ್ದಿಸುವಂತಹ ಕಾರ್ಯಗಳನ್ನು ಮಾಡುತ್ತವೆ. ಅಂತಹ ಸಂಸ್ಥೆಗಳಲ್ಲಿ #ಒಡೆಯರ್_ಶಿಕ್ಷಣ_ಸಂಸ್ಥೆ ಯು ಉತ್ತುಂಗದಲ್ಲಿರಬೇಕು, ಅಲ್ಲದೇ ಇಂತಹ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆಗೈದ ಒಡೆಯರ್ ಶಿಕ್ಷಣ ಸಂಸ್ಥೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ" ಎಂದು ಹಾರೈಸಿದರು, ನಂತರ ಮಾತನಾಡಿದ ಶ್ರೀಯುತ ರೇವಣಸಿದ್ದ ಆರ್ ಘೋಡಕೆಯವರು "ಶಿಕ್ಷಣ ಎನ್ನುವದು ಮನುಷ್ಯ ಜೀವನದ ಅವಿಭಾಜ್ಯ ಅಂಗ ಅದನ್ನು ನಾವು ಅತ್ಯಂತ ಜಾಗರೂಕತೆಯಿಂದ ಸ್ವೀಕರಿಸುವ ಜೊತೆಗೆ ಹುಟ್ಟಿದ ಮನೆಗೆ, ಕಲಿತ ಶಾಲೆಗೆ, ಕಲಿಸಿದ ಗುರುಗಳಿಗೆ, ಮತ್ತು ಬೆಳೆದ ಊರಿಗೆ ಕೀರ್ತಿ ತರುವಂಥಹ ಕಾರ್ಯವನ್ನು ಇಂದಿನ ವಿಧ್ಯಾರ್ಥಿಗಳು ಮಾಡಬೇಕು, ಮುಂದಿನ ದಿನಗಳಲ್ಲಿ ನಾವು ಒಡೆಯರ್ ಸಂಸ್ಥೆಯೊಂದಿಗೆ ವಿಜಯಪುರ ಜಿಲ್ಲೆಯಯಾದ್ಯಂತ ನಮ್ಮ ಘೋಡಕೆ ಫೌಂಡೇಷನ್ ವತಿಯಿಂದ ಕೆಎಸ್, ಐಎಎಸ್ ಪರೀಕ್ಷೆಯಲ್ಲಿ ಪಾಸಾದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದರು

ನಂತರ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿಧ್ಯಾರ್ಥಿಗಳಿಗೆ ಮತ್ರು ಕ್ಲಸ್ಟರ್ ಮಟ್ಟದ, ತಾಲೂಕಾ ಮಟ್ಟದ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಅಧ್ಯಕ್ಷರ ಮತ್ತು ಅತಿಥಿಗಳ ಮತ್ತು ಊರಿನ ಹಿರಿಯರ ಮತ್ತು ಪಾಲಕರ ಸಮ್ಮುಖದಲ್ಲಿ ಪ್ರಶಸ್ತಿ ಪತ್ರವನ್ನು ಪ್ರಧಾನಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಾಲಗೇರಿ ಗ್ರಾಮದ ಪ್ರಮುಖರಾದ ಗಜಾನಂದ ಶಿರಾಳಶೆಟ್ಟಿ (ನಿವೃತ್ತ ಭಾರತೀಯ ಯೋಧರು) ಕೋಮು ಜಾಧವ್, ನಿಂಗಪ್ಪ ಗಾಡವೆ, ಸಂತೋಷ ವೇಣು ಲಮಾಣಿ, ಶ್ರೀಕಾಂತ್ ಚವ್ಹಾಣ, ಸಿದರಾಯ ಬಿರಾದರ, ಸುನೀಲ್ ರಾಠೋಡ್, ಪಾಪು ರಾಠೋಡ್, ಆನಂದ ಪವಾರ, ಮಲ್ಲೆಶ್ವರ ರಾಠೋಡ್, ಉತ್ತಮ ಜಾಧವ, ಕಲ್ಲುಗೌಢ ಬಿರಾದಾರ, ಉತ್ತಮ ಜಾಧವ್, ರವಿ ಪವಾರ್ ಮುಂತಾದ ಪ್ರಮುಖರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Happy Republic day- 2026 #2026
25/01/2026

Happy Republic day- 2026
#2026






Address

Jalageri
Bijapur
586104

Alerts

Be the first to know and let us send you an email when Odeyar Edu Trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Odeyar Edu Trust:

Share