23/03/2026
ಎಬಿವಿಪಿ ಬೆಳಗಾವಿ ವತಿಯಿಂದ ಭಗತ್ ಸಿಂಗ್ ರಾಜಗುರು, ಸುಖದೇವ ಅವರ ಬಲಿದಾನ ದಿನದ ಅಂಗವಾಗಿ "ರಂಗ್ ದೇ ಬಸಂತಿ" ಕಾರ್ಯಕ್ರಮವನ್ನು ನಗರದ ಕೆ ಕೆ ವೇಣುಗೋಪಾಲ ಸಂಭಾಗಣದಲ್ಲಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಶ್ರೀ ಹನುಮಂತ ಕೋಗಾಲಿ,ವಾಗ್ಮಿಗಳಾದ ಅಮೋಘ ಹಿರೇಮಠ, ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯರಾದ ಶ್ರೀ ಸಚಿನ ಕುಳಗೇರಿ, ಕೆ ಎಲ್ ಏ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್ ವಿ ಗಣಾಚಾರಿ, ಎಬಿವಿಪಿಯ ವಿಭಾಗ ಸಂಚಾಲಕ ಪಣಿರಾಘವೇಂದ್ರ ದೇಸಾಯಿ, ಎಬಿವಿಪಿಯ ಬೆಳಗಾವಿ ಮಹಾನಗರ ಅಧ್ಯಕ್ಷರಾದ ಶ್ರೀಮತಿ ಪೂಜಾ ಪಾಟೀಲ, ನಗರ ಕಾರ್ಯದರ್ಶಿ ಪ್ರಥಮ ಪಾಟೀಲ ಉಪಸ್ತಿತರಿದ್ದರು.