ಶ್ರೀ ನಾದಪ್ರಿಯ ಕಲಾಸಂಘವು 1995ರಲ್ಲಿ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರ ನೇತ್ರತ್ವದಲ್ಲಿ , ಇವರ ಸಮಾನ ಮನಸ್ಕ ಸ್ನೇಹಿತರ ಸಹಕಾರದೊಂದಿಗೆ ಸ್ಥಾಪಿತಗೊಂಡು 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.. ಸ್ನೇಹಿತರೆ, ನಮ್ಮ ಕಲಾಸಂಘದಲ್ಲಿ... ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ, ಹಾರ್ಮೋನಿಯಂ, ಕೀಬೋರ್ಡ್, ನಾಟಕಗಳು, ವಿಶೇಷವಾಗಿ ಪೌರಾಣಿಕ ನಾಟಕಗಳನ್ನು ಅಭ್ಯಸಿಸಲಾಗುವದು .. ಈ ಕಲಾಸಂಘದ ಮುಖ್ಯ ರೂವಾರಿ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರು... 62ನೇ ವಸಂತದಲ್ಲಿರುವ ಶ್ರೀಯುತರು
ಅನೇಕ ಪೌರಾಣಿಕ ನಾಟಕಗಳನ್ನು ರಚಿಸಿದ್ದು, ರಂಗಪ್ರಯೋಗಗಳನ್ನು ನಡೆಸುತ್ತ ಬಂದಿರುತ್ತಾರೆ... ಅವುಗಳಲ್ಲಿ "ಕೌಂಡ್ಲೀಕನ ವಧೆ", "ಶಿವಪೃಥ್ವಿ", "ನಲ್ಲತಂಗ", "ರಾಜ ವಿಕ್ರಮ", "ರುಕ್ಮಿಣೀ ಸ್ವಯಂವರ", "ರಾಮಾಯಣ" ಅತ್ಯಂತ ಮುಖ್ಯವಾದವುಗಳು... ಅಲ್ಲದೆ ಶ್ರೀಯುತರು.. ಕುರುಕ್ಷೇತ್ರ(ರಚನೆ : ಬಿ.ಪುಟ್ಟಸ್ವಾಮಿಯ್ಯನವರು) ಪೌರಾಣಿಕ ನಾಟಕದ ಸಂದರ್ಭಗಳಿಗನುಸಾರವಾಗಿ ನೂರಾರು ರಂಗ ಗೀತೆಗಳನ್ನು ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.. ಈಗಾಗಲೇ ಇವರ ರಂಗಗೀತೆಗಳನ್ನು ಬೇರೆ ಬೇರೆ ಕಲಾತಂಡದವರು.. ತಮ್ಮ ರಂಗಪ್ರಯೋಗಳಲ್ಲಿ ಅಳವಡಿಸಿಕೊಂಡಿದ್ದಾರೆ.... ಈ ರಂಗ ಗೀತೆಗಳು ಆಡಿಯೋ ಸಿಡಿ ರೂಪದಲ್ಲಿ ಪ್ರಚಲಿತವಾಗಿದೆ ಮತ್ತು ಯಶಸ್ವಿಯಾಗಿದೆ..... ಶ್ರೀಯುತರ ಈ ಎಲ್ಲ ಸಾಧನೆಗಳನ್ನು ಗುರುತಿಸಿ... ಸರ್ಕಾರವು ೨೦೧೫ ರಲ್ಲಿ "ನಾಡಪ್ರಭು ಕೆಂಪೇಗೌಡ" ಪ್ರಶಸ್ತಿಯನ್ನು ಗೌರವಿಸಿದೆ... ನಾದಪ್ರಿಯ ಕಲಾಸಂಘವು.. ಕಳೆದ ೨೦ ವರ್ಷಗಳಿಂದಲೂ ಕಲಾರಂಗದ ಸೇವೆಯಲ್ಲದೆ.. ಅನೇಕ ಸಾಮಾಜಿಕ ಸೇವೆಗಳಲ್ಲು ತೊಡಗಿಸಿಕೊಂಡಿದೆ.. ಸಂಘದ ಎಲ್ಲ ಪದಾಧಿಕಾರಿಗಳು, ಸದಸ್ಯರುಗಳ ಸಹಕಾರದಿಂದ ಮತ್ತು ಗುರುಗಳಾದ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ... ಕಲಾಸಕ್ತರಿಗೆ... ನಮ್ಮ ಕಲಾಸಂಘದವರಿಂದ ಆತ್ಮೀಯ ಸ್ವಾಗತ..