05/08/2026
ಸ್ನೇಹ ಸೇವಾ ಟ್ರಸ್ಟ್ ಸುದ್ದಿ
ಭಾನುವಾರ, 2 ಆಗಸ್ಟ್ 2026
ಸಂಸ್ಕಾರ ಕೇಂದ್ರದ ಚಟುವಟಿಕೆಗಳ ಭಾಗವಾದ 'ನಿತ್ಯ ಪೂಜೆ ನಿತ್ಯ ಧ್ಯಾನ'ದ ಸಂಕಲ್ಪ ಕಾರ್ಯಕ್ರಮವನ್ನು, ಈ ವರ್ಷ ೮ನೇ ತರಗತಿಯಲ್ಲಿ ಓದುತ್ತಿದ್ದು, ಜ್ಞಾನಸಿರಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಮಕ್ಕಳಿಗೆ, ಆಯೋಜಿಸಲಾಗಿತ್ತು.
ಮೊದಲಿಗೆ ಆರ್ಟ್ ಆಫ್ ಲಿವಿಂಗ್-ನ ಶ್ರೀಯುತ ಸುರೇಶ ಮತ್ತು ಶ್ರೀಮತಿ ಸಿಂಧು ಅವರು ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳು ಅತಿ ಉತ್ಸಾಹದಿಂದ ಭಜನೆಯಲ್ಲಿ ಭಾಗವಹಿಸಿದರು.
ನಂತರ ಶ್ರೀಯುತ ಲಕ್ಷ್ಮಿ ನಾರಾಯಣ ಶರ್ಮ ಅವರು ಮಕ್ಕಳಿಗೆ ಪೂಜೆಯ ಮಹತ್ವ ಮತ್ತು ದಿನನಿತ್ಯದ ಜೀವನದಲ್ಲಿ ಪೂಜೆ ಹಾಗೂ ಧ್ಯಾನಕ್ಕೆ ಕೆಲವು ನಿಮಿಷ ಏಕೆ ಮೀಸಲಿಡಬೇಕು ಎಂದು ತಿಳಿಸಿಕೊಟ್ಟು, ಪೂಜಾ ವಿಧಿವಿಧಾನ ಮತ್ತು ಶ್ಲೋಕಗಳನ್ನು ಮಕ್ಕಳಿಗೆ ಉಪದೇಶಿಸಿದರು.
ಹಲವಾರು ಪೋಷಕರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂತಹ ದೈವೀಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ತಮ್ಮ ಸಂತೋಷ ವ್ಯಕ್ತಪಡಿಸಿದರು.
ನಂತರ, ಎಲ್ಲರೂ ಭೋಜನ ಸ್ವೀಕರಿಸಿ, ನಿತ್ಯ ಪೂಜೆ ಪೂಜೆ ಮಾಡುವ ಸಂಕಲ್ಪದೊಂದಿಗೆ ಮನೆಗಳಿಗೆ ತೆರಳಿದರು.