ಲಿಂಗಾಯತ ಪಂಚಮಸಾಲಿ Lingayath Panchamasali

  • Home
  • India
  • Bangalore
  • ಲಿಂಗಾಯತ ಪಂಚಮಸಾಲಿ Lingayath Panchamasali

ಲಿಂಗಾಯತ ಪಂಚಮಸಾಲಿ Lingayath Panchamasali Contact information, map and directions, contact form, opening hours, services, ratings, photos, videos and announcements from ಲಿಂಗಾಯತ ಪಂಚಮಸಾಲಿ Lingayath Panchamasali, Nonprofit Organization, Bangalore.

ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸವನ್ನ ಉಳಿಸಿ ಬೆಳೆಸುವ ಧ್ಯೇಯ.
ನಮ್ಮ ಧರ್ಮ, ನಮ್ಮ ಗುರು, ನಮ್ಮ ನಂಬಿಕೆ — ಬಸವಭಕ್ತಿ, ನಮ್ಮ ಜನರ ಮತ್ತು ಸಮಾಜ ಸೇವೆ ನಮ್ಮ ಪಥ.
ಲಿಂಗಾಯತ ಸಮುದಾಯದ ಗೌರವಕ್ಕಾಗಿ ಪ್ರಚಾರ ಮತ್ತು ಪ್ರತಿಭಟನೆಗಳ ವೇದಿಕೆ.
ಏಕತೆ ನಮ್ಮ ಶಕ್ತಿ | ಸಂಸ್ಕೃತಿ ನಮ್ಮ ಹೆಮ್ಮೆ

03/06/2026

ಲಿಂಗಾಯತ ಕೋಟಾ ಅಂದರೆ ಬರೀ ಬಣಜಿಗ ಕೂಡಕ್ಕಲಿಗ ಅಲ್ಲ ಅಲ್ಲವೆ?
ಪಂಚಮಸಾಲಿಗಳಿಗೆ ಘೋರ ಅನ್ಯಾಯ!

03/06/2026

ಕಾಂಗ್ರೇಸ್ ಸಚಿವ ಸಂಪುಟದಲ್ಲಿ ಪಂಚಮಸಾಲಿಗಳ ಸಂಖ್ಯೆ ೦೦೦೦
ಕಾಂಗ್ರೇಸ್ ಗೆ next election ಒಂದು ಓಟ್ ಬಿದ್ರು ಆತ್ಮವಂಚನೆ ಆದಂತೆ ಎಚ್ಚರ

ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.. ಯಾರಾದರೂ 10 ನೇ ತರಗತಿ ಮತ್ತು PUC ಅಲ್ಲಿ 90% ಅಧಿಕ ಅಂಕಗಳನ್ನು ಪಡೆದವರ...
11/05/2026

ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ..

ಯಾರಾದರೂ 10 ನೇ ತರಗತಿ ಮತ್ತು PUC ಅಲ್ಲಿ 90% ಅಧಿಕ ಅಂಕಗಳನ್ನು ಪಡೆದವರು, ನೇರವಾಗಿ ವಿಜಯಪುರದಲ್ಲಿ ಇರುವ ಶಾಂತಿನಿಕೇತನ ಶಾಲೆಯಲ್ಲಿ ನಿಮ್ಮ ಅಂಕ ಪಟ್ಟಿ, ಆಧಾರ ಮತ್ತು ಒಂದು ಭಾವಚಿತ್ರ ಕೊಟ್ಟಬನ್ನಿ.

https://in.bookmyshow.com/events/gss-bhavageethegalu/ET00491905ಜಿ ಎಸ್ ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವಿರತದಿಂದ ...
22/04/2026

https://in.bookmyshow.com/events/gss-bhavageethegalu/ET00491905

ಜಿ ಎಸ್ ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವಿರತದಿಂದ ಜಿ ಎಸ್ ಎಸ್ ಅವರ ಭಾವಗೀತೆಗಳ ಕಾರ್ಯಕ್ರಮ... ಬುಕ್ ಮೈ ಷೋ ನಲ್ಲಿ ಟಿಕೆಟ್ ಗಳು ಲಭ್ಯ. ಬನ್ನಿ ಸಂಭ್ರಮಿಸಿ...

12ನೇ ಶತಮಾನದಲ್ಲಿ ಕರ್ನಾಟಕದ ಮಣ್ಣಿನಲ್ಲಿ ನಡೆದ ಸಾಮಾಜಿಕ ಚಳುವಳಿ ಇಂದಿಗೂ ಜಗತ್ತಿಗೆ ಮಾದರಿಯಾಗಿದೆ. ಈ ಚಳುವಳಿಯ ನಾಯಕತ್ವ ವಹಿಸಿದ್ದ "ಕ್ರಾಂತಿ...
20/04/2026

12ನೇ ಶತಮಾನದಲ್ಲಿ ಕರ್ನಾಟಕದ ಮಣ್ಣಿನಲ್ಲಿ ನಡೆದ ಸಾಮಾಜಿಕ ಚಳುವಳಿ ಇಂದಿಗೂ ಜಗತ್ತಿಗೆ ಮಾದರಿಯಾಗಿದೆ. ಈ ಚಳುವಳಿಯ ನಾಯಕತ್ವ ವಹಿಸಿದ್ದ "ಕ್ರಾಂತಿಕಾರಿ ಬಸವಣ್ಣ"ನವರು ಒಬ್ಬ ಜಗತ್ಪ್ರಸಿದ್ಧ ದಾರ್ಶನಿಕ, ಸಮಾಜ ವಿಜ್ಞಾನಿ ಮತ್ತು ಶ್ರೇಷ್ಠ ಅರ್ಥಶಾಸ್ತ್ರಜ್ಞ.

ಬಸವಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಜನಿಸಿದರು. ಬಾಲ್ಯದಲ್ಲೇ ಅವರು ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದ ಅಸಮಾನತೆಯನ್ನು ಪ್ರಶ್ನಿಸಿದರು.

ಶಿಕ್ಷಣ ಮುಗಿಸಿದ ನಂತರ ಬಸವಣ್ಣನವರು ಪ್ರಬಲ ಅರಸನಾಗಿದ್ದ ಬಿಜ್ಜಳನ ಆಸ್ಥಾನವಿದ್ದ ಮಂಗಳವಾಡಕ್ಕೆ (ನಂತರ ಕಲ್ಯಾಣಕ್ಕೆ) ಬಂದರು. ಮೊದಲಿಗೆ ಅರಮನೆಯಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿದ ಅವರು ತಮ್ಮ ಬುದ್ಧಿವಂತಿಕೆ ಮತ್ತು ಕರ್ತವ್ಯ ನಿಷ್ಠೆ ಗಳಿಂದ ಅರಸರ ಮನ ಗೆದ್ದು ಮಹಾಮಂತ್ರಿಯಾಗಿ ನಿಯೋಜನೆಗೊಂಡರು.

ರಾಜಾಶ್ರಯದ ಮೂಲಕ ಬಸವಣ್ಣನವರು ಕಲ್ಯಾಣದಲ್ಲಿ ಸ್ಥಾಪಿಸಿದ 'ಅನುಭವ ಮಂಟಪ' ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುತ್ತದೆ. ಇಲ್ಲಿ ರಾಜನಿಂದ ಹಿಡಿದು ಸಾಮಾನ್ಯ ಕಾರ್ಮಿಕನವರೆಗೆ ಮತ್ತು ಮಹಿಳೆಯರಿಗೆ ಸಮಾನವಾಗಿ ವಿಚಾರ ಮಂಡಿಸುವ ಅವಕಾಶವಿತ್ತು. ಸಮಾನ ಮನಸ್ಕ ಶರಣರು ಒಟ್ಟಾಗಿ ಕುಳಿತು ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಒಂದು ವೈಚಾರಿಕ ವೇದಿಕೆಯಾಗಿತ್ತು.

ಮಾದರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವರಂತಹ ಅಂದಿನ ಕಾಲದ ಕೆಳವರ್ಗದ ಶ್ರಮಜೀವಿಗಳು ಮತ್ತು ಅಕ್ಕಮಹಾದೇವಿ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮರಂತಹ ಅನೇಕ ಶರಣೆಯರು ಇಲ್ಲಿ ಸಮಾನವಾಗಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು.

"ಕಾಯಕವೇ ಕೈಲಾಸ" ಮತ್ತು "ದಾಸೋಹ" ಎಂಬ ತತ್ವಗಳು ಇಲ್ಲಿ ಚರ್ಚಿಸಲ್ಪಟ್ಟು ಸಮಾಜದಲ್ಲಿ ಜಾರಿಗೆ ಬಂದವು. ಇವು ಸಂಪತ್ತಿನ ಸಂಗ್ರಹಣೆಗಿಂತ ಹಂಚಿಕೆಗೆ ಪ್ರಾಮುಖ್ಯತೆ ನೀಡಿದವು. ಮನುಷ್ಯ ತಾನು ಗಳಿಸಿದುದರಲ್ಲಿ ಅಗತ್ಯಕ್ಕಿಂತ ಹೆಚ್ಚಾದುದನ್ನು ಸಮಾಜಕ್ಕೆ "ದಾಸೋಹ"ದ ಮೂಲಕ ಮರಳಿಸಬೇಕು ಎನ್ನುವ ನೀತಿ ಕಲಿಸುವ ಮೂಲಕ ಇಂದಿನ ಸಮಾಜವಾದಕ್ಕೆ ಅಡಿಪಾಯ ಹಾಕಿದವು.

ಹೀಗೆ ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಲು, 'ಕಾಯಕ' ತತ್ವದ ಮೂಲಕ ಶ್ರಮಜೀವಿಗಳಿಗೆ ಗೌರವ ತಂದುಕೊಡಲು ತಮಗೆ ಸಿಕ್ಕಿದ ಅಧಿಕಾರವನ್ನು ಬಸವಣ್ಣನವರು ಸಮರ್ಥವಾಗಿ ಬಳಸಿಕೊಂಡರು

ಅನುಭವ ಮಂಟಪದಲ್ಲಿ ಚರ್ಚಿಸಲ್ಪಡುತ್ತಿದ್ದ ವಿಚಾರಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಬಸವಣ್ಣನವರ ನೇತೃತ್ವದಲ್ಲಿ ಶರಣರು ಬಳಸಿದ ಮಾಧ್ಯಮವೇ "ವಚನಗಳು. ಇವು ಸಾಹಿತ್ಯದ ಪ್ರಜಾಪ್ರಭುತ್ವೀಕರಣಕ್ಕೆ ಕಾರಣವಾದವು.

ವಚನ ಚಳುವಳಿಗಿಂತ ಮೊದಲು ದೇವರು ಕೇವಲ ಶ್ರೀಮಂತರ ಮತ್ತು ಮೇಲ್ವರ್ಗದವರ ಸೊತ್ತಾಗಿತ್ತು. ವಚನ ಚಳುವಳಿಯು ಸಂಕೀರ್ಣವಾದ ಯಜ್ಞ-ಯಾಗಾದಿಗಳನ್ನು ವಿರೋಧಿಸಿ, ಭಕ್ತಿಯನ್ನು ಸರಳೀಕರಿಸಿತು. ಪಂಡಿತರ ಭಾಷೆಯಾಗಿದ್ದ ಸಂಸ್ಕೃತವನ್ನು ಬಿಟ್ಟು, ಸಾಮಾನ್ಯ ಜನರ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆಯಾಯಿತು.

ದೇವಸ್ಥಾನಗಳಿಗೆ ಪ್ರವೇಶವಿಲ್ಲದ ಜನರಿಗಾಗಿ ಬಸವಣ್ಣನವರು 'ಇಷ್ಟಲಿಂಗ' ಎಂಬ ಕ್ರಾಂತಿಕಾರಿ ಪರಿಕಲ್ಪನೆಯನ್ನು ನೀಡಿದರು.

ಮನುಷ್ಯನ "ಕಾಲುಗಳೇ ಕಂಬ, ದೇಹವೇ ದೇಗುಲ" ಎಂದು ಸಾರುವ ಮೂಲಕ ಪ್ರತಿಯೊಬ್ಬರ ಆತ್ಮದಲ್ಲೂ ದೇವನಿದ್ದಾನೆ ಎಂದು ತೋರಿಸಿಕೊಟ್ಟರು.

ಆದರೆ ಹೀಗೆ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ತತ್ವಗಳು ಅಂದಿನ ಸಂಪ್ರದಾಯಬದ್ಧ ಸಮಾಜದಲ್ಲಿ ದೊಡ್ಡ ಸಂಚಲನ ಮೂಡಿಸಿದವು. ಇದು ಅಂತಿಮವಾಗಿ ದೊಡ್ಡದೊಂದು ಕ್ರಾಂತಿಗೆ (ಧರ್ಮಯುದ್ಧ) ದಾರಿ ಮಾಡಿಕೊಟ್ಟಿತು.

ಆ ಕ್ರಾಂತಿಗೆ ತಕ್ಷಣದ ಕಾರಣವಾದದ್ದು ಒಂದು ವಿಶಿಷ್ಟ ಅಂತರ್ಜಾತೀಯ ವಿವಾಹ. ಇದನ್ನು ಸಹಿಸದ ಸಂಪ್ರದಾಯವಾದಿಗಳು ರಾಜ ಬಿಜ್ಜಳನಿಗೆ ದೂರು ನೀಡಿದರು. ಸಂಪ್ರದಾಯವಾದಿಗಳ ಒತ್ತಡಕ್ಕೆ ಮಣಿದ ಬಿಜ್ಜಳ ರಾಜನು ವಧುವರರ ಪೋಷಕರಿಗೆ ಕಠಿಣ ಶಿಕ್ಷೆ ವಿಧಿಸಿದನು. ಈ ಘಟನೆಯು ಶರಣರನ್ನು ಕೆರಳಿಸಿತು. ಕಲ್ಯಾಣದಲ್ಲಿ ಅಶಾಂತಿ ಹರಡಿತು.

ಅಧಿಕಾರಕ್ಕಿಂತ ತತ್ವ ಮುಖ್ಯವೆಂದು ನಂಬಿದ್ದ ಬಸವಣ್ಣನವರು, ಈ ಹಿಂಸಾಚಾರ ಮತ್ತು ಅನ್ಯಾಯವನ್ನು ಪ್ರತಿಭಟಿಸಿ ತಮ್ಮ ಮಹಾಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಅವರು ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ಪ್ರಯಾಣ ಬೆಳೆಸಿದರು. .ಅವರು ಹೋಗುವ ಮುನ್ನ ಶರಣರಿಗೆ ಧೈರ್ಯ ತುಂಬಿದರು ಮತ್ತು ವಚನ ಸಾಹಿತ್ಯವನ್ನು ಉಳಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಈ ಮಧ್ಯೆ ಕಲ್ಯಾಣದಲ್ಲಿ ನಡೆದ ಗಲಭೆಗಳ ನಡುವೆ ಬಿಜ್ಜಳ ರಾಜನ ಕೊಲೆಯಾಯಿತು. ಇದು ಶರಣರ ಮೇಲೆ ಸೈನ್ಯದ ಆಕ್ರಮಣಕ್ಕೆ ಕಾರಣವಾಯಿತು.

ಸೈನ್ಯವು ಶರಣರ ಮೇಲೆರಗಿದಾಗ, ಅವರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯವನ್ನು ಪ್ರೀತಿಸಿದರು. ಮಡಿವಾಳ ಮಾಚಿದೇವ, ಚೆನ್ನಬಸವಣ್ಣನವರ ನೇತೃತ್ವದಲ್ಲಿ ವಚನಗಳ ಕಟ್ಟುಗಳನ್ನು ಹೊತ್ತು ಕಾಡು-ಮೇಡುಗಳ ಮೂಲಕ ಪಲಾಯನ ಮಾಡಿದರು.

ಅನೇಕ ಶರಣರು ಉತ್ತರ ಕನ್ನಡದ ಉಳವಿಗೆ ತೆರಳಿ ಅಲ್ಲಿ ಆಶ್ರಯ ಪಡೆದರು.

ಕಲ್ಯಾಣದ ರಾಜಕೀಯ ಮತ್ತು ಗದ್ದಲಗಳಿಂದ ದೂರ ಸರಿದ ಬಸವಣ್ಣನವರು, ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದಲ್ಲಿ ತಮ್ಮ ಇಷ್ಟದೈವ ಕೂಡಲಸಂಗಮದೇವನ ಧ್ಯಾನದಲ್ಲಿ ಮುಳುಗಿದರು.

ಕಲ್ಯಾಣ ಕ್ರಾಂತಿಯು ವಿಫಲವಾಯಿತು ಎಂದು ಕೆಲವರು ಭಾವಿಸಬಹುದು, ಆದರೆ ಅದು ಬಹಳ ದೊಡ್ಡ ಯಶಸ್ಸನ್ನು ಕಂಡಿತು.

ಭಾರತದಲ್ಲಿ ಮೊದಲ ಬಾರಿಗೆ ಜಾತಿ ವ್ಯವಸ್ಥೆಯ ವಿರುದ್ಧ ಸಂಘಟಿತ ಹೋರಾಟ ನಡೆಯಿತು.

ಕಲ್ಯಾಣದಿಂದ ಚದುರಿದ ಶರಣರು ನಾಡಿನ ಉದ್ದಗಲಕ್ಕೂ ಬಸವಣ್ಣನವರ ತತ್ವಗಳನ್ನು ಮತ್ತು ವಚನಗಳನ್ನು ಹರಡಿದರು.

ಮನುಷ್ಯತ್ವವೇ ಶ್ರೇಷ್ಠ ಎಂಬ ಮೌಲ್ಯವು ಸಮಾಜದಲ್ಲಿ ಆಳವಾಗಿ ಬೇರೂರಿತು.

ಬಸವಣ್ಣನವರು ಜಗತ್ತಿಗೆ ನೀಡಿದ ಅತಿ ದೊಡ್ಡ ಸಂದೇಶ 'ದಯೆ'. "ದಯವಿಲ್ಲದ ಧರ್ಮವದೇವುದಯ್ಯಾ" ಎಂಬ ಅವರ ಪ್ರಶ್ನೆ ಇಂದಿಗೂ ಪ್ರಸ್ತುತ. ಮಾನವ ಕುಲ ಒಂದೇ ಎಂಬ ಭಾವನೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಿದ ಅವರು ವಿಶ್ವಗುರುವಾಗಿ ಎಂದಿಗೂ ಅಮರ. ಅವರ ತತ್ವಗಳನ್ನು ಪಾಲಿಸೋಣ, ಸಮಾನತೆಯ ಸಮಾಜವನ್ನು ನಿರ್ಮಿಸೋಣ.

09/04/2026

ಕಿತ್ತೂರ ಚೆನ್ನಮ್ಮನ ಐಕ್ಯಸ್ಥಳ ಅಭಿವೃಧ್ದಿಯಾಗಲಿ! ರಾಷ್ಟ್ರೀಯ ಸ್ಮಾರಕ ಅಂತ ಸರ್ಕಾರ ಘೋಷಣೆ ಮಾಡಲಿ

08/04/2026

ಪ್ರತಿಯೊಬ್ಬ ಪಂಚಮಸಾಲಿ ಮತ್ತು ದೇಶಭಕ್ತರು ಶೇರ್ ಮಾಡಿ

ಎಲ್ಲರ ಗಮನಕ್ಕೆ 🙏

ವೀರರಾಣಿ ತಾಯಿ ಕಿತ್ತೂರು ಚನ್ನಮ್ಮನವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಕೇಂದ್ರ ಸರಕಾರ ಘೋಷಣೆ ಮಾಡುವ ಹಾಗೂ ರಾಜ್ಯ ಸರಕಾರವು ಸಂಗೊಳ್ಳಿಯ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ನೂರಾರು ಕೋಟಿ ಅನುದಾನದಂತೆ , ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ಹಾಗೂ ಚನ್ನಮ್ಮ ಸೈನಿಕ ಶಾಲೆ, ರಾಕ್ ಗಾರ್ಡನ್ ನಿರ್ಮಾಣ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಳೆದ ಒಂದು ತಿಂಗಳಿಂದ ಸತ್ಯಾಗ್ರಹವನ್ನು, ಚನ್ನಮ್ಮವರ ಸಮಾಧಿ ಸ್ಥಳದ ಹತ್ತಿರ ಮಾಡುತ್ತಿದ್ದಾರೆ ಪತ್ರಿಕೆಯಲ್ಲೂ ಸುದ್ದಿ ಬರುತ್ತಿದೆ ಆದರೆ ಸ್ಥಳೀಯ ರಾಜಕಾರಣಿಗಳ ಹೊರತಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣಿಗಳು ಈ ಕಡೆ ಕಣ್ಣೆತ್ತಿ ನೋಡುತ್ತಿಲ್ಲ, ಹೀಗಾಗಿ ನಾವುಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಬೇಕು ರಾಜ್ಯ ಮತ್ತು ಕೇಂದ್ರ ಸರಕಾರಗಳ ಕಣ್ಣಿತೆರಸೇಬೇಕು ಹೀಗಾಗಿ ಸ್ವಲ್ಪ ಈ ವಿಷಯವನ್ನು ನಾವುಗಳು ಗಂಭೀರವಾಗಿ ಪರಿಗಣಿಸಬೇಕು

#ಕಿತ್ತೂರಚೆನ್ನಮ್ಮ

08/04/2026

ನಮ್ಮ ಪುಟದಿಂದ ನೇರವಾಗಿ ಬಸವ ಮೃತ್ಯಂಜಯ ವ್ಯಕ್ತಿಗೆ ಹೇಳುತ್ತಿದ್ದೆವೆ, ಈ ಕೂಡಲೇ ಪಂಚಮಸಾಲಿ ಹೆಸರನ್ನ ಬಳಸುವುದನ್ನ ಬಿಡಿ, ಸಮಾಜದಿಂದ ದೂರ ಸರಿಯಿರಿ 🙏

One more …
07/04/2026

One more …

07/04/2026

ಕೂಡಲಸಂಗಮ ಸ್ವಾಮಿಗೆ - ಸಪೋರ್ಟ ಮಾಡೊಣ್ವಾ ಅಥವಾ ಮಾಡಿದ್ದು ತಪ್ಪು ಬೇಡವೇ ಬೇಡ್ವಾ?
ಅಥವಾ ಇದೆಲ್ಲ ನಮ್ಮ ಸಮಾಜದ ವಿರುದ್ದದ ಪಿತೂರಿನಾ?
Comment

Address

Bangalore
560040

Website

Alerts

Be the first to know and let us send you an email when ಲಿಂಗಾಯತ ಪಂಚಮಸಾಲಿ Lingayath Panchamasali posts news and promotions. Your email address will not be used for any other purpose, and you can unsubscribe at any time.

Share