Rashtrotthana Parishat ರಾಷ್ಟ್ರೋತ್ಥಾನ ಪರಿಷತ್

  • Home
  • India
  • Bangalore
  • Rashtrotthana Parishat ರಾಷ್ಟ್ರೋತ್ಥಾನ ಪರಿಷತ್

Rashtrotthana Parishat ರಾಷ್ಟ್ರೋತ್ಥಾನ ಪರಿಷತ್ Voluntary Organization since 1965 to build a healthy & sustainable society
ಸ್ವಯಂಸೇವಾ ಸಂಸ್ಥೆ 1965ರಿಂದ
(1)

ರಾಷ್ಟ್ರೋತ್ಥಾನ ಪರಿಷತ್
ಜನಜಾಗೃತಿ, ಜನಶಿಕ್ಷಣ, ಜನಸೇವೆ - ಉದ್ದೇಶದಿಂದ 1965ರಲ್ಲಿ ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್ , ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ‘ರಾಷ್ಟ್ರ-ಉತ್ಥಾನ’ಕ್ಕೆ ಪೂರಕವಾದ ಅನ್ಯಾನ್ಯ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಕೌಟುಂಬಿಕ ಮಾಸಪತ್ರಿಕೆ ‘ಉತ್ಥಾನ’ದ ಮೂಲಕ ಶುಭಾರಂಭಗೊಂಡ ಪರಿಷತ್ ಇಂದು ರಾಷ್ಟ್ರೀಯ ವಿಚಾರಧಾರೆಯ ಪುಸ್ತಕ ಪ್ರಕಾಶನ (ರಾಷ್ಟ್ರೋ ತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನ ); ಸಾಮಾಜಿಕ-ಸಾಂಸ್ಕೃತಿಕ ವಿಕಾಸದ ಗುರ

ಿ ಹೊತ್ತ ರಾಷ್ಟ್ರೋತ್ಥಾನ ಬಳಗಗಳು; ದೇಶದ ಭವಿಷ್ಯದ ದಿಕ್ಪತಗಳನ್ನು ನಿರ್ದರಿಸುವ ಸುಸಂಪನ್ನ ಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಶಿಕ್ಷಣ ಸಂಸ್ಥೆಗಳು; ಸೇವಾಬಸ್ತಿ (ಸ್ಲಂ, ಕೊಳೆಗೇರಿ)ಗಳ ವಿಕಾಸಕ್ಕಾಗಿ ಅಲ್ಲಿನ ಮಕ್ಕಳನ್ನು ಶಾಲೆಯೆಡೆಗೆ ಕರೆತಂದು , ಅವರನ್ನು ಇತರ ವಿದ್ಯಾರ್ಥಿಗಳಂತೆ ಅಧ್ಯಯನಾಸಕ್ತಿ ಹೆಚ್ಚಿಸಲು ಅವರಿರುವ ಕಡೆಗಳಲ್ಲೇ ಅವರಿಗೆ ‘ವ್ಯಾಸಂಗ ಕೇಂದ್ರಗಳು’; ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಳನ್ನು ಐಐಟಿ-ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸುವ ‘ತಪಸ್’; ರಕ್ತಚಾಲನಾ ಪರಿಷತ್ ನಿಗದಿಪಡಿಸಿರುವ ತಪಾಸಣಾ ಶುಲ್ಕಕ್ಕಿಂತಲೂ ಕಡಮೆ ಶುಲ್ಕ ಪಡೆದು ಅಗತ್ಯ ಫಲಾನುಭವಿಗಳ ಸೇವೆಗಾಗಿ 24 ಗಂಟೆಯೂ ಕಾರ್ಯ ನಿರ್ವಹಿಸುವ ‘ರಕ್ತನಿಧಿ’; ಆರೋಗ್ಯವಂತ ಸಶಕ್ತ ವ್ಯಕ್ತಿಗಳನ್ನು ರೂಪಿಸುವ ಉದ್ದೇಶದ ‘ಯೋಗಕೇಂದ್ರಗಳು’; ಅವಕಾಶವಂಚಿತ, ಪೋಷಕರಹಿತ ಮಕ್ಕಳ ರಕ್ಷಣೆಗೆ ನಿಂತಿರುವ ‘ನಂದಗೋಕುಲ’; ಗೋ-ಸಂತತಿಯ ರಕ್ಷಣೆಗೆ ‘ಗೋಶಾಲೆ’; - ಹೀಗೆ ಸಾಮಾಜಿಕ ಕಾಳಜಿ ಹಾಗೂ ಬದ್ಧತೆಯ ಸಮಾಜದ ಬಹುಕ್ಷೇತ್ರಗಳಲ್ಲಿ ಕಾರ್ಯೋನ್ಮುಖವಾಗಿರುವ ಹೆಮ್ಮೆ ರಾಷ್ಟ್ರೋತ್ಥಾನ ಪರಿಷತ್ ನದ್ದು. ಇಂತಹ ಬಹುಮುಖೀ ಕಾರ್ಯವ್ಯಾಪ್ತಿಯುಳ್ಳ ಸಂಘಟನೆ ‘ರಾಷ್ಟ್ರೋತ್ಥಾನ ಪರಿಷತ್’.

ಧಾರವಾಡ, ಆ.8 – ಸ.26: ಉತ್ತರಾದಿಮಠದ ಪೂಜ್ಯ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರ 31ನೇ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ಸರಿಸುಮಾರು 50 ದಿನಗ...
17/08/2026

ಧಾರವಾಡ, ಆ.8 – ಸ.26: ಉತ್ತರಾದಿಮಠದ ಪೂಜ್ಯ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರ 31ನೇ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ಸರಿಸುಮಾರು 50 ದಿನಗಳ ರಕ್ತದಾನ ಶಿಬಿರ, ರಾಷ್ಟ್ರೋತ್ಥಾನ ರಕ್ತಕೇಂದ್ರ – ಹುಬ್ಬಳ್ಳಿಯವರ ಸಹಯೋಗದಲ್ಲಿ…

Learn More: https://bloodcentrehubli.rashtrotthana.org/

ಆಗಸ್ಟ್ 15: ರಾಷ್ಟ್ರೋತ್ಥಾನ ಶಾಲೆಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾ, 2047ರ ವಿಕಸಿತ ಭಾರತದ ಸಂಕಲ್ಪವನ...
17/08/2026

ಆಗಸ್ಟ್ 15: ರಾಷ್ಟ್ರೋತ್ಥಾನ ಶಾಲೆಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾ, 2047ರ ವಿಕಸಿತ ಭಾರತದ ಸಂಕಲ್ಪವನ್ನು ತೊಡಲಾಯಿತು.

Aug 15: The 80th Independence Day was celebrated with great joy and enthusiasm across Rashtrotthana Schools, with a resolve to build a Vikasit Bharat by 2047.

Learn More: https://rvkcbse.in/

ಆಗಸ್ಟ್ 16: ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು - ದಾವಣಗೆರೆಯ ವಿದ್ಯಾರ್ಥಿನಿಯರು ನಾಗರಪಂಚಮಿಗೆ ಬಗೆಬಗೆ ಉಂಡೆಗಳನ್ನು ಕಟ್ಟಿ ಸಂಭ್ರಮಿಸಿದರು.L...
17/08/2026

ಆಗಸ್ಟ್ 16: ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು - ದಾವಣಗೆರೆಯ ವಿದ್ಯಾರ್ಥಿನಿಯರು ನಾಗರಪಂಚಮಿಗೆ ಬಗೆಬಗೆ ಉಂಡೆಗಳನ್ನು ಕಟ್ಟಿ ಸಂಭ್ರಮಿಸಿದರು.

Learn More: https://dwd.rpuc.in/

ಬೆಂಗಳೂರು, ಆಗಸ್ಟ್ 15: ಸೇವಾವಸತಿಗಳಲ್ಲಿ (ಸ್ಲಂಗಳಲ್ಲಿ) 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮLearn More: https://sevavasati.rashtro...
17/08/2026

ಬೆಂಗಳೂರು, ಆಗಸ್ಟ್ 15: ಸೇವಾವಸತಿಗಳಲ್ಲಿ (ಸ್ಲಂಗಳಲ್ಲಿ) 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Learn More: https://sevavasati.rashtrotthana.org/

ನಿಟ್ಟುವಳ್ಳಿಯಲ್ಲಿ ಕಟ್ಟಡದ ಇಟ್ಟಣಿಗೆಗಳನ್ನು ಒಟ್ಟಾಗಿಸುವ ಮೊದಲೇ ನಿರ್ಮಾಣ ಕರ್ಮಚಾರಿಗಳು ಎತ್ತರೆತ್ತರದಲಿ ಹಾರಿಸಿದರು ನಮ್ಮ ಬಾವುಟವನು...@ ರಾ...
15/08/2026

ನಿಟ್ಟುವಳ್ಳಿಯಲ್ಲಿ ಕಟ್ಟಡದ ಇಟ್ಟಣಿಗೆಗಳನ್ನು ಒಟ್ಟಾಗಿಸುವ ಮೊದಲೇ ನಿರ್ಮಾಣ ಕರ್ಮಚಾರಿಗಳು ಎತ್ತರೆತ್ತರದಲಿ ಹಾರಿಸಿದರು ನಮ್ಮ ಬಾವುಟವನು...
@ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು - ದಾವಣಗೆರೆ

Learn More: https://dwd.rpuc.in/

ಆಗಸ್ಟ್ 14ರ ಮಧ್ಯರಾತ್ರಿ: ಅಖಂಡ ಭಾರತ ಸಂಕಲ್ಪ ದಿನೋತ್ಸವದಲ್ಲಿ ಬೆಳಗಿಸಲಾದ ಪಂಜಿನ ಜ್ವಾಲಾ-ಜಾಲ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ - ಧಾರವಾಡದಲ್...
15/08/2026

ಆಗಸ್ಟ್ 14ರ ಮಧ್ಯರಾತ್ರಿ: ಅಖಂಡ ಭಾರತ ಸಂಕಲ್ಪ ದಿನೋತ್ಸವದಲ್ಲಿ ಬೆಳಗಿಸಲಾದ ಪಂಜಿನ ಜ್ವಾಲಾ-ಜಾಲ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ - ಧಾರವಾಡದಲ್ಲಿ

Learn More: https://dwd.rvkcbse.in/

ಬೆಂಗಳೂರು, ಆಗಸ್ಟ್ 15: ಸಹಸ್ರ ಪೂರ್ಣ ಚಂದ್ರದರ್ಶನದ ಕಡೆಗೆ ಮುನ್ನಡೆಯುತ್ತಿರುವ ಭಾರತದ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದೊಳಗೆ, ತ್ರಿವರ್ಣದೊಂ...
15/08/2026

ಬೆಂಗಳೂರು, ಆಗಸ್ಟ್ 15: ಸಹಸ್ರ ಪೂರ್ಣ ಚಂದ್ರದರ್ಶನದ ಕಡೆಗೆ ಮುನ್ನಡೆಯುತ್ತಿರುವ ಭಾರತದ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದೊಳಗೆ, ತ್ರಿವರ್ಣದೊಂದಿಗೆ ಸೂರ್ಯದೇವನನ್ನು ಸ್ವಾಗತಿಸಲು ಬ್ರಹ್ಮಮುಹೂರ್ತದಲ್ಲೇ ಉಜಾಗರಗೊಂಡ ಕೇಶವಶಿಲ್ಪದ ಜನಗಣಮನವು ‘ವಂದೇ ಮಾತರಂ...’ ಗಾನಪುಷ್ಪವನ್ನೂ ಸಮರ್ಪಿಸಿತು.

Learn More: https://rashtrotthana.org/

ಸ್ವಾತಂತ್ರ್ಯೋತ್ಸವದ ಶುಭಾಶಯಗಳು!Happy 80th Independence Day!ಸ್ವ ಎಂದುತನ್ನೊಳಗೇ ತಾನಿಣುಕುವ ತಂತ್ರದೊಂದಿಗೆಸ್ವಾಗತವ ಪಡೆದ ಸ್ವಾತಂತ್ರ್ಯ ...
14/08/2026

ಸ್ವಾತಂತ್ರ್ಯೋತ್ಸವದ ಶುಭಾಶಯಗಳು!
Happy 80th Independence Day!

ಸ್ವ ಎಂದು
ತನ್ನೊಳಗೇ ತಾನಿಣುಕುವ ತಂತ್ರದೊಂದಿಗೆ
ಸ್ವಾಗತವ ಪಡೆದ ಸ್ವಾತಂತ್ರ್ಯ
ಕುತಂತ್ರದ ಕ್ರೌರ್ಯದಿಂದ ಅತಂತ್ರವಾಗದೇ
ಸ್ವದೇಶದ ಸುಗಂಧ ಪೂಸಿಕೊಂಡು
ಸ್ವಾಭಿಮಾನದಿ ಎದೆಯ ಸೆಟೆಸಿಕೊಂಡು
ಪ್ರಕೃತಿಯ ಮಡಿಲೊಳಗಿದ್ದುಕೊಂಡೇ
ಸಂಸ್ಕೃತಿಯ ಬೇರುಗಳನು ಭದ್ರವಾಸಿಕೊಳ್ಳುತ್ತ
ತಾಯ ಭಾಷೆಯ ಬೆಚ್ಚಗಿನ ಹೃದಯದಿಂದೊಡಗೂಡಿ
ವಿಶ್ವರಂಗದೊಳಗೆ ಭವ್ಯ ಭಾರತವು
ವಸುಧೈವ ಕುಟುಂಬದ ಪತಾಕೆಯನು
ಸಹಸ್ರ, ದಶಸಹಸ್ರ ಚಂದ್ರದರ್ಶನಗಳಾಚೆಗೂ
ಹಾರಿಸುತಿರಲಿ...

Learn More: https://rashtrotthana.org/

14/08/2026

ಭಾರತದ ರಾಷ್ಟ್ರೀಯ ಗಾನ "ವಂದೇ ಮಾತರಂ" - ಬಂಕಿಮಚಂದ್ರ ಚಟ್ಟೋಪಾಧ್ಯಾಯ ವಿರಚಿತ

ವಂದೇ ಮಾತರಂ, ವಂದೇ ಮಾತರಮ್
ಸುಜಲಾಂ ಸುಫಲಾಂ ಮಲಯಜ ಶೀತಲಾಮ್
ಶಸ್ಯ ಶ್ಯಾಮಲಾಂ ಮಾತರಮ್
ವಂದೇ ಮಾತರಮ್

ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಮ್
ಪುಲ್ಲಕುಸುಮಿತ ದ್ರುಮದಲ ಶೋಭಿನೀಮ್
ಸುಹಾಸಿನೀಂ ಸುಮಧುರ ಭಾಷಿಣೀಮ್
ಸುಖದಾಂ ವರದಾಂ ಮಾತರಮ್
ವಂದೇ ಮಾತರಮ್

ಕೋಟಿ ಕೋಟಿ ಕಂಠ ಕಲ-ಕಲ ನಿನಾದ-ಕರಾಲೇ
ಕೋಟಿ ಕೋಟಿ ಭುಜೈರ್ಧೃತ-ಖರ-ಕರವಾಲೇ
ಕೇ ಬೋಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಮ್
ರಿಪುದಲ-ವಾರಿಣೀಂ ಮಾತರಾಮ್
ವಂದೇ ಮಾತರಮ್

ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋ ಮಾರಯಿ ಪ್ರತಿಮಾ ಗಡಿ ಮಂದಿರೇ ಮಂದಿರೇ
ವಂದೇ ಮಾತರಮ್

ತ್ವಂ ಹಿ ದುರ್ಗಾ ದಶ-ಪ್ರಹರಣ-ಧಾರಿಣೀ
ಕಮಲಾ ಕಮಲ-ದಳ-ವಿಹಾರಿಣೀ
ವಾಣೀ ವಿದ್ಯಾ-ದಾಯಿನೀ
ನಮಾಮಿ ತ್ವಾಂ ನಮಾಮಿ ಕಮಲಾಮ್
ಅಮಲಾಂ ಅತುಲಾಮ್
ಸುಜಲಾಂ ಸುಫಲಾಂ ಮಾತರಮ್
ವಂದೇ ಮಾತರಂ

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಮ್
ಧರಣೀಂ ಭರಣೀಂ ಮಾತರಮ್
ವಂದೇ ಮಾತರಂ ವಂದೇ ಮಾತರಮ್

Learn More: https://rashtrotthana.org/

Address

Keshava Shilpa, Kempegowda Nagar
Bangalore
560004

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:30pm
Saturday 9am - 5:30pm

Telephone

+919448284602

Alerts

Be the first to know and let us send you an email when Rashtrotthana Parishat ರಾಷ್ಟ್ರೋತ್ಥಾನ ಪರಿಷತ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rashtrotthana Parishat ರಾಷ್ಟ್ರೋತ್ಥಾನ ಪರಿಷತ್:

Shortcuts

Share