ರಾಷ್ಟ್ರೋತ್ಥಾನ ಪರಿಷತ್
ಜನಜಾಗೃತಿ, ಜನಶಿಕ್ಷಣ, ಜನಸೇವೆ - ಉದ್ದೇಶದಿಂದ 1965ರಲ್ಲಿ ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್ , ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ‘ರಾಷ್ಟ್ರ-ಉತ್ಥಾನ’ಕ್ಕೆ ಪೂರಕವಾದ ಅನ್ಯಾನ್ಯ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಕೌಟುಂಬಿಕ ಮಾಸಪತ್ರಿಕೆ ‘ಉತ್ಥಾನ’ದ ಮೂಲಕ ಶುಭಾರಂಭಗೊಂಡ ಪರಿಷತ್ ಇಂದು ರಾಷ್ಟ್ರೀಯ ವಿಚಾರಧಾರೆಯ ಪುಸ್ತಕ ಪ್ರಕಾಶನ (ರಾಷ್ಟ್ರೋ ತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನ ); ಸಾಮಾಜಿಕ-ಸಾಂಸ್ಕೃತಿಕ ವಿಕಾಸದ ಗುರ
ಿ ಹೊತ್ತ ರಾಷ್ಟ್ರೋತ್ಥಾನ ಬಳಗಗಳು; ದೇಶದ ಭವಿಷ್ಯದ ದಿಕ್ಪತಗಳನ್ನು ನಿರ್ದರಿಸುವ ಸುಸಂಪನ್ನ ಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಶಿಕ್ಷಣ ಸಂಸ್ಥೆಗಳು; ಸೇವಾಬಸ್ತಿ (ಸ್ಲಂ, ಕೊಳೆಗೇರಿ)ಗಳ ವಿಕಾಸಕ್ಕಾಗಿ ಅಲ್ಲಿನ ಮಕ್ಕಳನ್ನು ಶಾಲೆಯೆಡೆಗೆ ಕರೆತಂದು , ಅವರನ್ನು ಇತರ ವಿದ್ಯಾರ್ಥಿಗಳಂತೆ ಅಧ್ಯಯನಾಸಕ್ತಿ ಹೆಚ್ಚಿಸಲು ಅವರಿರುವ ಕಡೆಗಳಲ್ಲೇ ಅವರಿಗೆ ‘ವ್ಯಾಸಂಗ ಕೇಂದ್ರಗಳು’; ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಳನ್ನು ಐಐಟಿ-ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸುವ ‘ತಪಸ್’; ರಕ್ತಚಾಲನಾ ಪರಿಷತ್ ನಿಗದಿಪಡಿಸಿರುವ ತಪಾಸಣಾ ಶುಲ್ಕಕ್ಕಿಂತಲೂ ಕಡಮೆ ಶುಲ್ಕ ಪಡೆದು ಅಗತ್ಯ ಫಲಾನುಭವಿಗಳ ಸೇವೆಗಾಗಿ 24 ಗಂಟೆಯೂ ಕಾರ್ಯ ನಿರ್ವಹಿಸುವ ‘ರಕ್ತನಿಧಿ’; ಆರೋಗ್ಯವಂತ ಸಶಕ್ತ ವ್ಯಕ್ತಿಗಳನ್ನು ರೂಪಿಸುವ ಉದ್ದೇಶದ ‘ಯೋಗಕೇಂದ್ರಗಳು’; ಅವಕಾಶವಂಚಿತ, ಪೋಷಕರಹಿತ ಮಕ್ಕಳ ರಕ್ಷಣೆಗೆ ನಿಂತಿರುವ ‘ನಂದಗೋಕುಲ’; ಗೋ-ಸಂತತಿಯ ರಕ್ಷಣೆಗೆ ‘ಗೋಶಾಲೆ’; - ಹೀಗೆ ಸಾಮಾಜಿಕ ಕಾಳಜಿ ಹಾಗೂ ಬದ್ಧತೆಯ ಸಮಾಜದ ಬಹುಕ್ಷೇತ್ರಗಳಲ್ಲಿ ಕಾರ್ಯೋನ್ಮುಖವಾಗಿರುವ ಹೆಮ್ಮೆ ರಾಷ್ಟ್ರೋತ್ಥಾನ ಪರಿಷತ್ ನದ್ದು. ಇಂತಹ ಬಹುಮುಖೀ ಕಾರ್ಯವ್ಯಾಪ್ತಿಯುಳ್ಳ ಸಂಘಟನೆ ‘ರಾಷ್ಟ್ರೋತ್ಥಾನ ಪರಿಷತ್’.