Rashtrotthana Parishat ರಾಷ್ಟ್ರೋತ್ಥಾನ ಪರಿಷತ್

  • Home
  • India
  • Bangalore
  • Rashtrotthana Parishat ರಾಷ್ಟ್ರೋತ್ಥಾನ ಪರಿಷತ್

Rashtrotthana Parishat ರಾಷ್ಟ್ರೋತ್ಥಾನ ಪರಿಷತ್ Voluntary Organization since 1965 to build a healthy & sustainable society
ಸ್ವಯಂಸೇವಾ ಸಂಸ್ಥೆ 1965ರಿಂದ
(1)

ರಾಷ್ಟ್ರೋತ್ಥಾನ ಪರಿಷತ್
ಜನಜಾಗೃತಿ, ಜನಶಿಕ್ಷಣ, ಜನಸೇವೆ - ಉದ್ದೇಶದಿಂದ 1965ರಲ್ಲಿ ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್ , ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ‘ರಾಷ್ಟ್ರ-ಉತ್ಥಾನ’ಕ್ಕೆ ಪೂರಕವಾದ ಅನ್ಯಾನ್ಯ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಕೌಟುಂಬಿಕ ಮಾಸಪತ್ರಿಕೆ ‘ಉತ್ಥಾನ’ದ ಮೂಲಕ ಶುಭಾರಂಭಗೊಂಡ ಪರಿಷತ್ ಇಂದು ರಾಷ್ಟ್ರೀಯ ವಿಚಾರಧಾರೆಯ ಪುಸ್ತಕ ಪ್ರಕಾಶನ (ರಾಷ್ಟ್ರೋ ತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನ ); ಸಾಮಾಜಿಕ-ಸಾಂಸ್ಕೃತಿಕ ವಿಕಾಸದ ಗುರ

ಿ ಹೊತ್ತ ರಾಷ್ಟ್ರೋತ್ಥಾನ ಬಳಗಗಳು; ದೇಶದ ಭವಿಷ್ಯದ ದಿಕ್ಪತಗಳನ್ನು ನಿರ್ದರಿಸುವ ಸುಸಂಪನ್ನ ಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಶಿಕ್ಷಣ ಸಂಸ್ಥೆಗಳು; ಸೇವಾಬಸ್ತಿ (ಸ್ಲಂ, ಕೊಳೆಗೇರಿ)ಗಳ ವಿಕಾಸಕ್ಕಾಗಿ ಅಲ್ಲಿನ ಮಕ್ಕಳನ್ನು ಶಾಲೆಯೆಡೆಗೆ ಕರೆತಂದು , ಅವರನ್ನು ಇತರ ವಿದ್ಯಾರ್ಥಿಗಳಂತೆ ಅಧ್ಯಯನಾಸಕ್ತಿ ಹೆಚ್ಚಿಸಲು ಅವರಿರುವ ಕಡೆಗಳಲ್ಲೇ ಅವರಿಗೆ ‘ವ್ಯಾಸಂಗ ಕೇಂದ್ರಗಳು’; ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಳನ್ನು ಐಐಟಿ-ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸುವ ‘ತಪಸ್’; ರಕ್ತಚಾಲನಾ ಪರಿಷತ್ ನಿಗದಿಪಡಿಸಿರುವ ತಪಾಸಣಾ ಶುಲ್ಕಕ್ಕಿಂತಲೂ ಕಡಮೆ ಶುಲ್ಕ ಪಡೆದು ಅಗತ್ಯ ಫಲಾನುಭವಿಗಳ ಸೇವೆಗಾಗಿ 24 ಗಂಟೆಯೂ ಕಾರ್ಯ ನಿರ್ವಹಿಸುವ ‘ರಕ್ತನಿಧಿ’; ಆರೋಗ್ಯವಂತ ಸಶಕ್ತ ವ್ಯಕ್ತಿಗಳನ್ನು ರೂಪಿಸುವ ಉದ್ದೇಶದ ‘ಯೋಗಕೇಂದ್ರಗಳು’; ಅವಕಾಶವಂಚಿತ, ಪೋಷಕರಹಿತ ಮಕ್ಕಳ ರಕ್ಷಣೆಗೆ ನಿಂತಿರುವ ‘ನಂದಗೋಕುಲ’; ಗೋ-ಸಂತತಿಯ ರಕ್ಷಣೆಗೆ ‘ಗೋಶಾಲೆ’; - ಹೀಗೆ ಸಾಮಾಜಿಕ ಕಾಳಜಿ ಹಾಗೂ ಬದ್ಧತೆಯ ಸಮಾಜದ ಬಹುಕ್ಷೇತ್ರಗಳಲ್ಲಿ ಕಾರ್ಯೋನ್ಮುಖವಾಗಿರುವ ಹೆಮ್ಮೆ ರಾಷ್ಟ್ರೋತ್ಥಾನ ಪರಿಷತ್ ನದ್ದು. ಇಂತಹ ಬಹುಮುಖೀ ಕಾರ್ಯವ್ಯಾಪ್ತಿಯುಳ್ಳ ಸಂಘಟನೆ ‘ರಾಷ್ಟ್ರೋತ್ಥಾನ ಪರಿಷತ್’.

ಬೆಂಗಳೂರು, ಜೂನ್ 14: ರಾಷ್ಟ್ರೋತ್ಥಾನ ಸೇವಾವಸತಿ (ಸ್ಲಂಗಳಲ್ಲಿ) ಮಹಿಳಾ ಸ್ವಸಹಾಯ ಗುಂಪಿನ ಪ್ರಮುಖ ಪ್ರತಿನಿಧಿಗಳ ಸಮಾವೇಶವನ್ನು ಕೇಶವಶಿಲ್ಪದಲ್ಲ...
15/06/2026

ಬೆಂಗಳೂರು, ಜೂನ್ 14: ರಾಷ್ಟ್ರೋತ್ಥಾನ ಸೇವಾವಸತಿ (ಸ್ಲಂಗಳಲ್ಲಿ) ಮಹಿಳಾ ಸ್ವಸಹಾಯ ಗುಂಪಿನ ಪ್ರಮುಖ ಪ್ರತಿನಿಧಿಗಳ ಸಮಾವೇಶವನ್ನು ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಸಮಾವೇಶವನ್ನು ಸಾಲಾಗಿ ಚಪ್ಪಲಿ ಬಿಡುವುದರಿಂದ ಪ್ರಾರಂಭಿಸಿ, ಚಿಂತನ-ಮಂಥನ ಅವಧಿಗಳಿಗೆ ಕಿವಿಯಾಗಿ, ವಿನೋದಮಯ ಆಟಗಳಿಂದ ಸಂತೋಷಪಟ್ಟು, ಸ್ವಾದಿಷ್ಟ ಊಟೋಪಚಾರಗಳೊಂದಿಗೆ ಸಂಪನ್ನಗೊಳಿಸಲಾಯಿತು. ಸೇವಾವಸತಿಯಲ್ಲಿ ಒಟ್ಟು 214 ಸ್ವಸಹಾಯ ಗುಂಪುಗಳಿಂದ 2200+ ಸದಸ್ಯರಿದ್ದಾರೆ.

Learn More: https://sevavasati.rashtrotthana.org/

12th International Day of Yoga: Walkathon by 10 Rashtrotthana Yoga Centres in Bengaluruಬೆಂಗಳೂರು, ಜೂನ್ 13: ಅಂತಾರಾಷ್ಟ್ರೀಯ ...
15/06/2026

12th International Day of Yoga: Walkathon by 10 Rashtrotthana Yoga Centres in Bengaluru

ಬೆಂಗಳೂರು, ಜೂನ್ 13: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ರಾಷ್ಟ್ರೋತ‍್ಥಾನದ 10 ಯೋಗಕೇಂದ್ರಗಳಲ್ಲಿ (ಜಯನಗರ, ಆರ್‌ಬಿಐ ಲೇಔಟ್, ಕಾಮಾಕ್ಷಿಪಾಳ್ಯ, ಕೋಣನಕುಂಟೆ, ನಾಗರಭಾವಿ, ಕೆ.ಜಿ. ನಗರ, ಗಾಯತ್ರಿನಗರ, ಸದಾಶಿವನಗರ, ಕಲ್ಯಾಣನಗರ ಹಾಗೂ ಕುಂದಲಹಳ್ಳಿ) ವಾಕಥಾನ್-ಅನ್ನು ಆಯೋಜಿಸಲಾಗಿತ್ತು.

ಪಾಲ್ಗೊಂಡ ಗಣ್ಯಮಾನ್ಯರು:
• ಜಯನಗರ - ಶ್ರೀ ರಾಜೇಶ್ ಪದ್ಮಾರ್, ಸಾಮಾಜಿಕ ಕಾರ್ಯಕರ್ತರು
• ಕಾಮಾಕ್ಷಿಪಾಳ್ಯ - ಶ್ರೀ ಪುನೀತ್ ರಾಜ್, ಸಾಮಾಜಿಕ ಕಾರ್ಯಕರ್ತರು
• ಕುಂದಲಹಳ್ಳಿ - ಡಾ. ಗೀತಾಂಜಲಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ವೈಟ್‌ಫೀಲ್ಡ್
• ಕೆ.ಜಿ. ನಗರ - ಡಾ. ವಿ. ಬಿ. ಆರತಿ, ಖ್ಯಾತ ವಿದ್ವಾಂಸೆ, ಲೇಖಕಿ ಹಾಗೂ ಶಿಕ್ಷಣತಜ್ಞೆ
• ಗಾಯತ್ರಿನಗರ – ಶ್ರೀ ಸಾಯಿ ವೆಂಕಟೇಶ್
• ಸದಾಶಿವನಗರ – ಶ್ರೀ ಗಂಗಾಧರ್, ನಿವೃತ್ತ ಎಸ್. ಪಿ.

Learn More: https://www.rashtrotthana.org/

15/06/2026

ರಾಷ್ಟ್ರಸೇವೆಯಲ್ಲಿ ರಾಷ್ಟ್ರೋತ್ಥಾನ 101: (ಸೇವಾವಸತಿ) ಸೇವಾ ತೃಪ್ತಿ ನೀಡುವ ಸಮಾಜನಿಧಿ
Rashtrotthana in Rashtraseva 101: (Seva Vasati) A Community Fund that brings the Satisfaction of Service

ರಾಷ್ಟ್ರೋತ್ಥಾನದ 60ರ ಸಂಭ್ರಮದಲ್ಲಿ ರಾಷ್ಟ್ರಸೇವೆಯಲ್ಲಿ ರಾಷ್ಟ್ರೋತ್ಥಾನ ವೀಡಿಯೋ ಸರಣಿ: ಸಾಧನೆ, ಪ್ರಭಾವ, ಪ್ರೇರಣಾದಾಯಿ ಅಂಶಗಳೊಂದಿಗೆ

On the occasion of the 60th Anniversary of Rashtrotthana, Rashtrotthana in Rashtraseva Video Series: With the elements of Achievement, Influence, Motivation

Learn More: https://sevavasati.rashtrotthana.org/
#ರಾಷ್ಟ್ರೋತ್ಥಾನ60

The greatest threat to our planet is the belief that someone else will save itಬೆಂಗಳೂರು, ಜೂನ್ 13: ವಿಶ್ವ ಪರಿಸರದ ದಿನಾಚರಣೆಯ ...
15/06/2026

The greatest threat to our planet is the belief that someone else will save it

ಬೆಂಗಳೂರು, ಜೂನ್ 13: ವಿಶ್ವ ಪರಿಸರದ ದಿನಾಚರಣೆಯ ಹಿನ್ನೆಲೆಯಲ್ಲಿ 3Rs - Reduce, Reuse, Recycle ಸಂದೇಶದೊಂದಿಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಮಕ್ಕಳು, ಶಿಕ್ಷಕರು, ಸಹಾಯಕ ಸಿಬ್ಬಂದಿ, ಮಾತೃಭಾರತಿಯವರೆಲ್ಲ ಸೇರಿ ರಾಜರಾಜೇಶ್ವರಿ ನಗರದಲ್ಲಿ ವಾಕಥಾನ್ ಮತ್ತು ಸೈಕ್ಲೊಥಾನ್‍ಗಳನ್ನು ಆಯೋಜಿಸಿ, ರಾಷ್ಟ್ರೋತ‍್ಥಾನ ಆಸ್ಪತ್ರೆಯಲ್ಲಿ ಸಾಂಸ್ಕೃತಿಕ ಪ್ರಸ್ತುತಿಗಳೊಂದಿಗೆ ಸಂಪನ್ನಗೊಳಿಸಿದರು.

Bengaluru, June 13: Against the backdrop of World Environment Day and with the message of 3Rs - Reduce, Reuse, Recycle, the children, teachers, support staff, and members of Matrubharati of Rashtrotthana Vidya Kendra – Banashankari collectively organized a Walkathon and a Cyclothon in Rajarajeshwari Nagar, which concluded with cultural presentations at the Rashtrotthana Hospital.

Learn More: https://bskbng.rvkcbse.in/

ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸರ್ವರಿಗೂ ಆದರದ ಸ್ವಾಗತ!ಬೆಳಗ್ಗೆ 6:15ರಿಂದ ISROದ ನಿಕಟಪೂರ್ವ ಅಧ್ಯಕ್ಷರಾದ ಡಾ. ಎಸ್ ಸೋಮನಾಥ್ ಅ...
15/06/2026

ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸರ್ವರಿಗೂ ಆದರದ ಸ್ವಾಗತ!
ಬೆಳಗ್ಗೆ 6:15ರಿಂದ ISROದ ನಿಕಟಪೂರ್ವ ಅಧ್ಯಕ್ಷರಾದ ಡಾ. ಎಸ್ ಸೋಮನಾಥ್ ಅವರ ಉಪಸ್ಥಿತಿಯಲ್ಲಿ ಯೋಗಾಭ್ಯಾಸ

June 21: A Hearty Welcome to Everyone to the International Day of Yoga!
Yoga Practice from 6:15 AM in the presence of Dr. S Somanath, the former Chairman of ISRO.

@ Udayabhanu Kala Sangha Grounds, Kempegowda Nagar, Bengaluru
https://maps.app.goo.gl/jksNdDTEgmQnvF1X9

Learn More: https://www.rashtrotthana.org/

Abhinandan - 2026: Inspiring RVK CBSE Toppers to aim for Patents before Graduationಬೆಂಗಳೂರು, ಜೂನ್ 13: ರಾಷ್ಟ್ರೋತ್ಥಾನ ವಿದ್ಯ...
13/06/2026

Abhinandan - 2026: Inspiring RVK CBSE Toppers to aim for Patents before Graduation

ಬೆಂಗಳೂರು, ಜೂನ್ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಪ್ರತಿಭಾ‍ನ್ವಿತ ಮಕ್ಕಳನ್ನು ಗೌರವಿಸಿ, ಪ್ರೋತ್ಸಾಹಿಸುವ ಅಭಿನಂದನ್ – 2026 ಕಾರ್ಯಕ್ರಮವನ್ನು ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಡಾ. ಶ್ರೀನಿವಾಸ್ ಎಂ. ಕೆ. (MedTech Innovator, Start-up Mentor & Head, CPDMED TBI, IISc, Bengaluru) ಮುಖ್ಯ ಅತಿಥಿಗಳಾಗಿ ಆಗಮಿಸಿ, RVK CBSEಯ X ಹಾಗೂ XIIನೇ ಗ್ರೇಡ್‍ಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ, ಪದವಿ ಮುಗಿಸುವುದರೊಳಗೇ ಒಬ್ಬೊಬ್ಬರೂ ತಮ್ಮ ಹೆಸರಿನಲ್ಲಿ ಪೇಟೆಂಟ್ ಹೊಂದುವ ಬಗೆಗೆ ಪ್ರತಿಜ್ಞೆಯನ್ನು ಸ್ವಯಂಪ್ರೇರಣೆಯಿಂದ ಬೋಧಿಸಿದರು. ಸಮಾರಂಭದಲ್ಲಿ ರಾಷ್ಟ್ರೋತ‍್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಉಪಸ್ಥಿತರಿದ್ದರು. ಮಕ್ಕಳ ಭಾರತೀಯ ನೃತ್ಯ, ಸಂಗೀತ, ಯೋಗ ಪ್ರಸ್ತುತಿಗಳು ನೆರೆದವರನ್ನು ರಂಜಿಸಿದವು.

Bengaluru, June 13: Abhinandan – 2026, a program organized to honor and encourage the talented children of Rashtrotthana Vidya Kendras, was held herein Keshava Shilpa. Dr. Srinivas M. K. (MedTech Innovator, Start-up Mentor & Head, CPDMED TBI, IISc, Bengaluru) graced the occasion as the Chief Guest. While motivating the students who achieved excellence in Grades X and XII of RVK CBSE, he voluntarily administered a pledge inspiring each of them to secure a patent in their name before completing their graduation. Sri M. P. Kumar, President of Rashtrotthana Parishat and Sri N. Dinesh Hegde, General Secretary, were present at the event. The children's performances of Indian dance, music and yoga delighted the audience.

Learn More: https://rvkcbse.in/

ಬಸವನಗುಡಿಯಲ್ಲಿ 350 ಯೋಗಾಭ್ಯಾಸಿಗಳಿಂದ ಮಳೆಯೊಳಗೂ ನಡೆಯಿತು 4 ಕಿಮೀ ವಾಕಥಾನ್ಬೆಂಗಳೂರು, ಜೂನ್ 13: ಅಂತಾರಾಷ್ಟ್ರೀಯ ಯೋಗ ದಿನದ (ಜೂನ್ 21) ಅಂಗ...
13/06/2026

ಬಸವನಗುಡಿಯಲ್ಲಿ 350 ಯೋಗಾಭ್ಯಾಸಿಗಳಿಂದ ಮಳೆಯೊಳಗೂ ನಡೆಯಿತು 4 ಕಿಮೀ ವಾಕಥಾನ್

ಬೆಂಗಳೂರು, ಜೂನ್ 13: ಅಂತಾರಾಷ್ಟ್ರೀಯ ಯೋಗ ದಿನದ (ಜೂನ್ 21) ಅಂಗವಾಗಿ ರಾಷ್ಟ್ರೋತ್ಥಾನ ಯೋಗಕೇಂದ್ರ – ಕೆಂಪೇಗೌಡನಗರ, ಸುಂಕೇನಹಳ್ಳಿ ಹಾಗೂ ಗಿರಿನಗರದವರು ಜಂಟಿಯಾಗಿ ಆಯೋಜಿಸಿದ್ದ ವಾಕಥಾನ್‍ಗೆ ವಿಭು ಅಕಾಡೆಮಿಯ ಮುಖ್ಯಸ್ಥರಾದ ಡಾ. ಆರತಿ ವಿ ಬಿ ಹಾಗೂ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಚಾಲನೆ ನೀಡಿದರು.

ಡಾ. ಆರತಿಯವರ ಬಿಸಿಲು-ಮಳೆಗಳಿಗೆ ಒಡ್ಡಿಕೊಳ್ಳುವ ಸ್ಪೂರ್ತಿಯ ಮಾತುಗಳನ್ನು ಧರಿಸಿ, 350ಕ್ಕೂ ಹೆಚ್ಚಿನ ಯೋಗಾಭ್ಯಾಸಿಗಳು ಈ ಸಂಜೆಯ ಕಡುಕಪ್ಪಾದ ಮೋಡಗಳ ಕೆಳಗೇ ಕೇಶವಶಿಲ್ಪದಿಂದ ಯೋಗನಡಿಗೆಯನ್ನು ಪ್ರಾರಂಭಿಸಿ; ಬಸವನಗುಡಿ ರಸ್ತೆ, ರಂಗರಾವ್ ರಸ್ತೆಗಳಲ್ಲಿ ಹನಿಹನಿ ಮಳೆಯ ಸಿಂಚನವನ್ನು ಆಸ್ವಾದಿಸುತ್ತ; ಗಾಂಧೀಬಜಾರ್, ಡಿವಿಜಿ ರಸ್ತೆ, ಸುಂಕೇನಹಳ್ಳಿ, ಬಸವನಗುಡಿ ರಸ್ತೆಯಲ್ಲಿ ದೊಡ್ಡ ಮಳೆಗೆ ತೊಯ್ದು; ಕೇಶವಶಿಲ್ಪವನ್ನು ಪುನಃ ಪ್ರವೇಶಿಸುವುದರೊಂದಿಗೆ ಸುಮಾರು 4 ಕಿಮೀ ವಾಕಥಾನನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು.

Learn More: https://www.rashtrotthana.org/

ಧನ್ಯತೆಯ ನಗುಮೊಗದೊಳಗೆ ವಿಶ್ವ ರಕ್ತದಾನಿಗಳ ದಿನ – 2026: One Drop of Humanity. Give Blood. Save Livesಭೂದಾನ, ಗೋದಾನ, ಸ್ವರ್ಣದಾನ, ಅನ...
13/06/2026

ಧನ್ಯತೆಯ ನಗುಮೊಗದೊಳಗೆ ವಿಶ್ವ ರಕ್ತದಾನಿಗಳ ದಿನ – 2026: One Drop of Humanity. Give Blood. Save Lives

ಭೂದಾನ, ಗೋದಾನ, ಸ್ವರ್ಣದಾನ, ಅನ್ನದಾನ ಮಾಡಿ ಪುಣ್ಯಪ್ರಾಪ್ತಿಯಾದರೂ, ಹಣವೂ ವ್ಯಯವಾಗುವುದು. ಆದರೆ, ದೇವರು ಎಲ್ಲರಿಗೂ ಕೊಟ್ಟಿರುವ ರಕ್ತವನ್ನು ದಾನ ಮಾಡಿದಲ್ಲಿ ಪುಣ್ಯದೊಟ್ಟಿಗೆ ಜೀವ ಉಳಿಸಿದ ತೃಪ್ತಿಯೂ ನಮ್ಮದಾಗುತ್ತದೆ. 18 ರಿಂದ 65 ವರ್ಷ ವಯಸ್ಸಿನ, 45 ಕೆ.ಜಿ. ಗಿಂತ ಹೆಚ್ಚು ತೂಕವುಳ್ಳ, 12.5 g/dl ಹಿಮೋಗ್ಲೋಬಿನ್ ಇರುವ ಯಾರಾದರೂ ಪ್ರತಿ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಬನ್ನಿ, ರಕ್ತದಾನ ಮಾಡೋಣ, ಜೀವ ಉಳಿಸೋಣ, ಸ್ವಸ್ಥ-ಸುಸ್ಥಿರ ಸಮಾಜನಿರ್ಮಿಸೋಣ.

"ಅನ್ನದಾನಂ ಪರಂ ದಾನಂ, ವಿದ್ಯಾದಾನಂ ಅತಃ ಪರಮ್" - ಎಂಬ ಸುಭಾಷಿತದಂತೆ ಅನ್ನದಾನವು ಉತ್ತಮವಾದ ದಾನ, ಅದು ಹಸಿವನ್ನು ನೀಗಿಸಿದರೆ, ವಿದ್ಯಾದಾನವು ಅದಕ್ಕಿಂತ ಮಿಗಿಲು. ಕಾರಣ, ಅದು ಜೀವಮಾನದ ಹಸಿವನ್ನೂ ನೀಗಿಸಬಲ್ಲದು! ಭೌತಿಕ ಸ್ತರದಲ್ಲಾದರೆ, ಮಾನವನ ಮಾನಸಿಕ, ಆಧ್ಯಾತ್ಮಿಕ ಸ್ತರದಲ್ಲಿ ವಿಶ್ಲೇಷಿಸಿದಾಗ ಕ್ಷಮಾದಾನ, ಉಪವಾಸ, ಬ್ರಹ್ಮಚರ್ಯ, ಸನ್ಯಾಸಗಳಲ್ಲೂ ತ್ಯಾಗರೂಪದ ದಾನವೇ ಅಸ್ತಿತ್ವ ತೋರುತ್ತದೆ. ಹೀಗೆ ದಾನದ ಮೌಲ್ಯ ಕೇವಲ ನೀಡುವ ಕ್ರಿಯೆಯಲ್ಲ, ಅದು ಮಾನವೀಯತೆಯ ಅತ್ಯುತ್ಕೃಷ್ಟ ಅಭಿವ್ಯಕ್ತಿಯಾಗಿದ್ದು ಅದು ದಯೆ ಮತ್ತು ಧರ್ಮದ ಪ್ರತೀಕವೆನಿಸಿದೆ.

ಸಂಸ್ಕೃತ ಭಾಷೆಯಲ್ಲಿ ದಾನವೆಂಬ ಪದಕ್ಕೆ ಸರಳವಾದ ಅರ್ಥವಿದೆ. "ದಾ" ಧಾತುವಿನಿಂದ ಉದ್ಭವಿಸಿರುವ ಈ ಪದಕ್ಕೆ "ಕೊಡುವುದು", "ಅರ್ಪಿಸುವುದು" ಎಂಬ ಮೂಲ ಅರ್ಥ. ತನ್ನಲ್ಲಿರುವ ವಸ್ತುವಿನ ಮೇಲಿನ ಸ್ವಾಮ್ಯವನ್ನು ಸಂಪೂರ್ಣವಾಗಿ ತೊರೆದು, ಪ್ರತಿಫಲದ ನಿರೀಕ್ಷೆಯಿಲ್ಲದೇ ಪರರ ಹಿತಕ್ಕಾಗಿ ಅರ್ಪಿಸುವ ಕ್ರಿಯೆಯೇ ನಿಜವಾದ ದಾನ ಎಂಬ ಭಾವಾರ್ಥವೇ ಹೆಚ್ಚು ಪ್ರಚಲಿತ ಹಾಗೂ ಅರ್ಥಗರ್ಭಿತವಾದದ್ದು. ಭಗವದ್ಗೀತೆಯಲ್ಲಿ ಕೃಷ್ಣ ಹೇಳುವಂತೆ, "ದಾತವ್ಯಮಿತಿ ಯದ್ದಾನಂ…" — ಕರ್ತವ್ಯ ಭಾವದಿಂದ, ಸರಿಯಾದ ದೇಶ-ಕಾಲ-ಪಾತ್ರದಲ್ಲಿ ಪ್ರತ್ಯುಪಕರಿಸಲು ಆಗದ ದೀನರಿಗೆ ನೀಡಿದ ದಾನವೇ ಸಾತ್ತ್ವಿಕ ದಾನ.

ಜೂನ್ ತಿಂಗಳ 14ನೇ ದಿನಾಂಕವನ್ನು “ವಿಶ್ವ ರಕ್ತದಾನಿಗಳ ದಿನ”ವಾಗಿ ಆಚರಿಸಲಾಗುತ್ತದೆ. ಇಂದು ಈ ದಾನ ಪರಂಪರೆ ಹೊಸ ಸ್ವರೂಪದಲ್ಲಿ ಮುಂದುವರೆದಿದೆ - ರಕ್ತದಾನ, ಅಂಗಾಂಗ ದಾನ, ನೇತ್ರದಾನ. ಇವೆಲ್ಲವುಗಳಲ್ಲಿ ರಕ್ತದಾನವೂ ಮುಖ್ಯವಾದದ್ದು. ಯಾವ ಕಾರ್ಖಾನೆಯಲ್ಲೂ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೇ ತಾಂತ್ರಿಕ ಹಾಗೂ ವೈಜ್ಞಾನಿಕ ಆವಿಷ್ಕಾರಗಳಾಗಿದ್ದರೂ, ರಕ್ತ ಹಾಗೂ ಕೃತಕ ಅಂಗಾಂಗಗಳ ಸೃಷ್ಟಿ ಸಾಧ್ಯವಾಗಿಲ್ಲ, ದಾನದ ಮೂಲಕ ಪಡೆವುದೊಂದೇ ಇದಕ್ಕೆ ಪರ್ಯಾಯ.

ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ತಲಸ್ಸೆಮಿಯಾದಂತಹ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿನ ರಕ್ತದ ಆವಶ್ಯಕತೆಗೆ ದಾನವೇ ಏಕೈಕ ಪರಿಹಾರ. ರಕ್ತದಾನ ಮಾಡಿದ 24-48 ಗಂಟೆಗಳಲ್ಲಿ ದಾನಿಯ ದೇಹವು ಹೊಸ ರಕ್ತವನ್ನು ಉತ್ಪಾದಿಸಿ ನಷ್ಟ ಪೂರೈಸಿಕೊಳ್ಳುತ್ತದೆ. ದಾನಿಯ ಆರೋಗ್ಯಕ್ಕೂ ಅದು ಬಹಳ ಪ್ರಯೋಜನಕಾರಿ. ಪ್ರಸ್ತುತ, ಭಾರತದಲ್ಲಿ ಪ್ರತಿವರ್ಷ ಸಾವಿರಾರು ಯೂನಿಟ್ಗಳ ರಕ್ತದ ಕೊರತೆ ಉಂಟಾಗುತ್ತಿದೆ. ಅರ್ಹ ದಾನಿಗಳಲ್ಲಿ ಕೇವಲ ಶೇ. 5ರಷ್ಟು ಮಂದಿ ಮಾತ್ರ ರಕ್ತದಾನ ಮಾಡುತ್ತಿದ್ದಾರೆ.

ಭಾರತದಾದ್ಯಂತ ಸರಾಸರಿ ಪ್ರತಿ 2 ಸೆಕೆಂಡಿಗೊಮ್ಮೆ ತುರ್ತು ರಕ್ತದ ಅವಶ್ಯಕತೆ ಉದ್ಭವಿಸುತ್ತದೆ. ಸರಾಸರಿ ವಾರ್ಷಿಕ 14.6 ಮಿಲಿಯನ್ ಯೂನಿಟ್-ಗಳಷ್ಟು ರಕ್ತ ಬೇಡಿಕೆಯಿದೆ; ಆದರೆ ಯಾವಾಗಲೂ 1 ಮಿಲಿಯನ್ ಯೂನಿಟ್-ಗಳಷ್ಟು ಕೊರತೆಯಾಗುತ್ತಿದೆ. ಪ್ರಾಚೀನ ಕಾಲದಲ್ಲಿ ದಧೀಚಿ ಎಂಬ ಋಷಿಯು ಲೋಕದ ರಕ್ಷಣೆಗಾಗಿ ತನ್ನ ಬೆನ್ನುಮೂಳೆಯನ್ನೇ ವಜ್ರಾಯುಧ ತಯಾರಿಸಲು ದಾನ ನೀಡಿದಂತೆ, ಅನೇಕ ಜೀವಗಳ ರಕ್ಷಣೆಗಾಗಿ ರಕ್ತದಾನವನ್ನು ಅವಶ್ಯವಾಗಿ ಮಾಡಬೇಕಾಗಿದೆ.

ರಕ್ತದ ಕೊರತೆಯ ಸಮಸ್ಯೆಯನ್ನು ನೀಗಿಸಲು ನಿರಂತರ ಶ್ರಮಿಸುತ್ತಿರುವ ಸಂಸ್ಥೆಗಳಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರವೂ ಅಗ್ರಗಣ್ಯವಾಗಿದ್ದು, 1993ರ ಮೇ 30ರಂದು ಸ್ಥಾಪಿತವಾಯಿತು. ಇಂದು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಅಹರ್ನಿಶಿ (24x7) ಸೇವೆ ನೀಡುತ್ತಾ ಬಂದಿದೆ. 1993ರಿಂದ 2026ರ ಮಾರ್ಚ್ ತಿಂಗಳ 33 ವರ್ಷಗಳ ಅವಧಿಯಲ್ಲಿ ಈ ಕೇಂದ್ರವು ಅಭೂತಪೂರ್ವ ಸಾಧನೆಗಳನ್ನು ಮಾಡಿದೆ.

ಅವುಗಳಲ್ಲಿ ಪ್ರಮುಖವಾದವುಗಳು:
• ಒಟ್ಟು 6,369 ರಕ್ತದಾನ ಶಿಬಿರಗಳು
• 11,23,553 ಯೂನಿಟ್ ರಕ್ತಸಂಗ್ರಹ
• 5,39,139 ಸ್ವಯಂಪ್ರೇರಿತ ದಾನಿಗಳು
• 10,88,827 ಯೂನಿಟ್ ವಿತರಣೆ
• 4,07,932 ಫಲಾನುಭವಿಗಳು

ಈ ಅಂಕಿ-ಅಂಶಗಳು ಸೇವಾಕಾರ್ಯಗಳ ಆಳ ಮತ್ತು ವ್ಯಾಪ್ತಿಯನ್ನು ಸ್ಪಷ್ಟಪಡಿಸುತ್ತವೆ. "ರಕ್ತಕ್ಕಾಗಿ ಬಂದವರಾರೂ ಬರಿಗೈಯಲ್ಲಿ ಹಿಂದಿರುಗಬಾರದು" ಎಂಬುದೇ ರಾಷ್ಟ್ರೋತ್ಥಾನ ರಕ್ತಕೇಂದ್ರದ ಉನ್ನತ ಧ್ಯೇಯಗಳಲ್ಲೊಂದು. ಕರ್ನಾಟಕ ಸರ್ಕಾರದಿಂದ "ಅತ್ಯುತ್ತಮ ರಕ್ತ ಬ್ಯಾಂಕ್" (2011-12) ಮತ್ತು ಕೋವಿಡ್ ಸಮಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹದ ಗುರಿ ದಾಟಿದ ಸಾಧನೆಯು ರಕ್ತಕೇಂದ್ರದ ವಿಶ್ವಾಸಾರ್ಹತೆಗೆ ಸಂದ ಗೌರವವಾಗಿದೆ.

ತಲಸ್ಸೆಮಿಯಾ ಒಂದು ಆನುವಂಶೀಯ ಕಾಯಿಲೆಯಾಗಿದ್ದು, ರಕ್ತದಲ್ಲಿರುವ ಕೆಂಪು ರಕ್ತಕಣಗಳ ಅವ್ಯವಸ್ಥೆಯಿಂದಾಗಿ (ಏರುಪೇರು) ಉಂಟಾಗುವ ಸಮಸ್ಯೆ. ಆ ಸಮಸ್ಯೆಯಿಂದಾಗಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಕ್ರಮೇಣ ಕುಂಠಿತಗೊಳಿಸಿ ರಕ್ತಹೀನತೆಗೆ ದಾರಿ ಮಾಡಿಕೊಟ್ಟು, ರೋಗಿಯು ನಿತ್ರಾಣಗೊಂಡು ಸಾಯುವ ಸನ್ನಿವೇಶ ಎದುರಾಗುತ್ತದೆ. ಇದು ಅತ್ಯಂತ ವಿರಳ ರೋಗವಾಗಿದ್ದು, ಪ್ರತಿ 15 ದಿನಕ್ಕೊಮ್ಮೆ ದೇಹದ ರಕ್ತವನ್ನು ಬದಲಿಸಿ ಮರುಪೂರಣ ಮಾಡುವುದೊಂದೇ ಈ ರೋಗಕ್ಕಿರುವ ಪರಿಹಾರೋಪಾಯ. ಆದರೆ, ರೋಗಿಯು ಬಡ ಅಥವಾ ಕೆಳಮಧ್ಯಮ ವರ್ಗಕ್ಕೆ ಸೇರಿದ ಕುಟುಂಬದವನಾಗಿದ್ದರೆ ಈ ಚಿಕಿತ್ಸೆಯು ದೊಡ್ಡ ಖರ್ಚಿನ ಬಾಬತ್ತು ಎಂಬಂತಾಗಿ, ಜೀವನ ದುರ್ಭರಗೊಂಡು ಇಡಿಯ ಕುಟುಂಬವೇ ಸಾಲದ ಹೊರೆ ಹೊರುವ ಭೀತಿ ಎದುರಾಗಬಹುದು.

ಇಂತಹ ರೋಗಿಗಳ ಶುಶ್ರೂಷೆಗಾಗಿ, 2013ರಲ್ಲಿ ಆರಂಭಗೊಂಡ "ಸಂರಕ್ಷಾ", ‘ತಲಸ್ಸೆಮಿಯಾ ಆರೈಕೆ ಯೋಜನೆ’ಯ ಮೂಲಕ 400ಕ್ಕೂ ಅಧಿಕ ಮಕ್ಕಳಿಗೆ ಉಚಿತ ರಕ್ತಪೂರಣ ಹಾಗೂ ಪೂರಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಪ್ರತಿ ವರ್ಷ ಜೂನ್ 14ರಂದು ಆಚರಿಸಲ್ಪಡುವ ವಿಶ್ವ ರಕ್ತದಾನಿಗಳ ದಿನ, ನಿಸ್ವಾರ್ಥ ದಾನಿಗಳನ್ನು ಸ್ಮರಿಸುವ, ಸಮ್ಮಾನಿಸುವ, ಕೃತಜ್ಞತೆ ಸಲ್ಲಿಸುವ ಸುಸಂದರ್ಭ. ತನ್ಮೂಲಕ ಸಮಾಜದಲ್ಲಿ ರಕ್ತದಾನದ ಅರಿವು ಮೂಡಿಸುವ ಒಂದು ಸದವಕಾಶವೂ ಹೌದು.

Learn More: https://bloodcentre.rashtrotthana.org/

ಸಂತಾನ ಫಲವಂತಿಕೆ (Total Fertility Rate) ಇಳಿಮುಖ ಆಗುತ್ತಿರುವುದರ ಬಗೆಗೆ ಅವಿವಾಹಿತ ಸಾಮಾಜಿಕ ಕಾರ್ಯಕರ್ತರ ಆತಂಕ, ಜಾಗೃತಿ ಅಭಿಯಾನಕ್ಕೂ ನೈತ...
13/06/2026

ಸಂತಾನ ಫಲವಂತಿಕೆ (Total Fertility Rate) ಇಳಿಮುಖ ಆಗುತ್ತಿರುವುದರ ಬಗೆಗೆ ಅವಿವಾಹಿತ ಸಾಮಾಜಿಕ ಕಾರ್ಯಕರ್ತರ ಆತಂಕ, ಜಾಗೃತಿ ಅಭಿಯಾನಕ್ಕೂ ನೈತಿಕಸ್ಥೈರ್ಯವನ್ನು ತುಂಬುವಂತಿದೆ ನಾಗೇಶ್ ಹೆಗಡೆಯವರ ಈ ಲೇಖನ, ಜೀನ್-ಮೀಮ್‍ಗಳ ತಾಂಡವನೃತ್ಯ

Courtesy: Prajavani

ದೊಡ್ಡಬಳ್ಳಾಪುರ, ಜೂನ್ 9-11: ವಿಶ್ವ ವಿದ್ಯಾಪೀಠ – ಯಲಹಂಕದ ಮಕ್ಕಳು ಮಾಧವಸೃಷ್ಟಿಯಲ್ಲಿ Forest Roaming ಹಾಗೂ Cow Touching-ನಿಂದ ಪುಳಕಿತರಾ...
13/06/2026

ದೊಡ್ಡಬಳ್ಳಾಪುರ, ಜೂನ್ 9-11: ವಿಶ್ವ ವಿದ್ಯಾಪೀಠ – ಯಲಹಂಕದ ಮಕ್ಕಳು ಮಾಧವಸೃಷ್ಟಿಯಲ್ಲಿ Forest Roaming ಹಾಗೂ Cow Touching-ನಿಂದ ಪುಳಕಿತರಾದರು.

Doddaballapura, June 9-11: The Children of Vishwa Vidyapeeth - Yelahanka, were thrilled by the experiences of Forest Roaming and Cow Touching at Madhavasrushti.

Locate Goshala: https://maps.app.goo.gl/mV73u5EM1ryTGtUd7

Learn More: https://rashtrotthana.org/

Address

Keshava Shilpa, Kempegowda Nagar
Bangalore
560004

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:30pm
Saturday 9am - 5:30pm

Telephone

+919448284602

Alerts

Be the first to know and let us send you an email when Rashtrotthana Parishat ರಾಷ್ಟ್ರೋತ್ಥಾನ ಪರಿಷತ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rashtrotthana Parishat ರಾಷ್ಟ್ರೋತ್ಥಾನ ಪರಿಷತ್:

Share