Raksha Foundation

Raksha Foundation Raksha Foundation is a Non Govt Organization

Raksha Foundation is a Non Govt Organization, working towards the over all development of weaker section of the community like orphans, poorer, people with disabilities, Senior Citizens, women and other venerable communities

ಬೆಂಗಳೂರು ನಗರದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ Raksha Foundation  ವತಿಯಿಂದ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ.ರಕ್ಷಾ ಫೌಂಡೇಷ...
24/04/2026

ಬೆಂಗಳೂರು ನಗರದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ Raksha Foundation ವತಿಯಿಂದ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ.

ರಕ್ಷಾ ಫೌಂಡೇಷನ್ ಸಂಸ್ಥಾಪಕರು ಹಾಗೂ ಜಯನಗರ ಕ್ಷೇತ್ರದ ಶಾಸಕರಾದ CK Ramamurthy ಅವರ ನೇತೃತ್ವದಲ್ಲಿ ಬಸ್ ನಿಲ್ದಾಣಗಳು, ಕೂಲಿ ಕಾರ್ಮಿಕರು ಇರುವ ಸ್ಥಳಗಳು, ಅಂಗಡಿಗಳ ಪ್ರದೇಶಗಳು ಹಾಗೂ ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಪ್ರತಿದಿನ ಉಚಿತ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಶಾಸಕರಾದ ಸಿ. ಕೆ. ರಾಮಮೂರ್ತಿ ಅವರು, ಬಡವರ್ಗದ ಕುಟುಂಬಗಳಿಂದ ಬಂದಿರುವ ಹಲವರು ಕೂಲಿ ಕೆಲಸಗಳ ಮೂಲಕ ಜೀವನ ನಡೆಸುತ್ತಿದ್ದು, ಅವರಿಗೆ ಪ್ರತಿದಿನ ಹಣ ನೀಡಿ ಬಾಟಲ್ ನೀರು ಖರೀದಿಸುವುದು ಕಷ್ಟಕರವಾಗುತ್ತದೆ. ಇಂತಹ ಜನರನ್ನು ಗಮನದಲ್ಲಿಟ್ಟುಕೊಂಡು ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

“ಈ ತೀವ್ರ ಬೇಸಿಗೆಯಲ್ಲಿ ಒಂದು ಹನಿ ನೀರೂ ಒಂದು ಜೀವ ಉಳಿಸಬಲ್ಲದು. ಆದ್ದರಿಂದ ಜನರು ನೀರನ್ನು ವ್ಯರ್ಥ ಮಾಡದೆ, ಮಿತವಾಗಿ ಬಳಸುವ ಅಭ್ಯಾಸ ಬೆಳೆಸಬೇಕು,” ಎಂದು ಅವರು ಮನವಿ ಮಾಡಿದರು.

ಮುಂದೆ ಅವರು ಎಚ್ಚರಿಕೆ ನೀಡುತ್ತಾ, “ನೀರನ್ನು ಅಜಾಗರೂಕವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ತೀವ್ರವಾಗಿ ಉಂಟಾಗಿ ಸಾವು-ನೋವುಗಳಿಗೆ ಕಾರಣವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ನೀರು ಉಳಿಸುವ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು,” ಎಂದು ಹೇಳಿದರು.

ರಕ್ಷಾ ಫೌಂಡೇಶನ್ ಈ ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ಸಾರ್ವಜನಿಕರ ಆರೋಗ್ಯ ಮತ್ತು ಕಲ್ಯಾಣದತ್ತ ಮಹತ್ವದ ಹೆಜ್ಜೆ ಇಟ್ಟಿದೆ.

#ರಕ್ಷಾಫೌಂಡೇಶನ್ #ಜಯನಗರ

Raksha Foundation ಹಾಗೂ  Paypal Bangalore ಸಂಸ್ಥೆಯ ವತಿಯಿಂದ ಭೈರಸಂದ್ರ ಬಿಬಿಎಂಪಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾ...
26/07/2025

Raksha Foundation ಹಾಗೂ Paypal Bangalore ಸಂಸ್ಥೆಯ ವತಿಯಿಂದ ಭೈರಸಂದ್ರ ಬಿಬಿಎಂಪಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ವಾಟರ್ ಬಾಟೆಲ್ ಅನ್ನು ಮಾನ್ಯ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರಾದ ಶ್ರೀ Tejasvi Surya ರವರ ಮೂಲಕ ವಿತರಿಸಲಾಯಿತು.

ಮಾನ್ಯ ಶಾಸಕರಾದ ಶ್ರೀ CK Ramamurthy ರವರು ವಿದ್ಯಾರ್ಥಿಗಳಿಗೆ ಹಿತನುಡಿ ತಿಳಿಸಿ, 2024-25ನೇ ಸಾಲಿನ SSLC ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಕೊಡುಗೆ ಸ್ಮರಿಸಿ ಶುಭ ಹಾರೈಸಿ ಸಿಹಿ ಹಂಚಿದರು.

ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ Jayanagara Shaikshanika Samithi ವತಿಯಿಂದ ನುರಿತ ಶಿಕ್ಷಕರಿಂದ 3 ತಿಂಗಳ ಕಾಲ "ಉಚಿತ ವಿಶೇಷ ತರಗತಿ" ನೆಡೆಸಿ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸಲು ಸಹಕರಿಸುವುದು.

ಈ ವೇಳೆಯಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಹೆಚ್.ಸಿ. ನಾಗರತ್ನರವರು, PayPal ಸಂಸ್ಥೆಯ ಆನಂದ್, ಅಮೃತ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಶಶಿಕಲಾ ಮತ್ತು ಮುಖಂಡರುಗಳಾದ ಲೋಕೇಶ್, ಶಾಂತರಾಜು, ಸುರೇಶ್, ಉದಯ್ ಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದ ಪತ್ರಿಕಾ ವರದಿ
22/06/2025

ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದ ಪತ್ರಿಕಾ ವರದಿ

ರಕ್ಷಾ ಫೌಂಡೇಷನ್ (ರಿ.) ಸಂಸ್ಥೆಯ ವತಿಯಿಂದ ಜಯನಗರ ಚಂದ್ರಗುಪ್ತ (ಶಾಲಿನಿ) ಆಟದ ಮೈದಾನದಲ್ಲಿ ಸಂಸ್ಥಾಪಕರಾದ CK Ramamurthy ರವರ ನೇತೃತ್ವದಲ್ಲಿ...
21/06/2025

ರಕ್ಷಾ ಫೌಂಡೇಷನ್ (ರಿ.) ಸಂಸ್ಥೆಯ ವತಿಯಿಂದ ಜಯನಗರ ಚಂದ್ರಗುಪ್ತ (ಶಾಲಿನಿ) ಆಟದ ಮೈದಾನದಲ್ಲಿ ಸಂಸ್ಥಾಪಕರಾದ CK Ramamurthy ರವರ ನೇತೃತ್ವದಲ್ಲಿ ನೆಡೆದ 13ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ

* 10 ಸಾವಿರ ಸರ್ಕಾರಿ ಹಾಗೂ ಸರ್ಕಾರೇತರ ವಿದ್ಯಾರ್ಥಿಗಳಿಗೆ Infosys Foundation ಸಹಯೋಗದೊಂದಿಗೆ 2ಲಕ್ಷ ಉಚಿತ ನೋಟ್ ಪುಸ್ತಕ ವಿತರಣೆ.

* SSLC / PUC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀಭಾ ಪುರಸ್ಕಾರ.

* ಅನಾಥ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಪಾಲನೆ ಜವಾಬ್ದಾರಿ.

* ಜಯದೇವ ಆಸ್ಪತ್ರೆಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಹೃದಯ ಚಿಕಿತ್ಸೆಗೆ ಸಹಾಯ ಹಸ್ತ.

* PayPal ಸಂಸ್ಥೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ನೆಡೆಸಲಾಯಿತು.

ಈ ವೇಳೆಯಲ್ಲಿ ವಿಪಕ್ಷ ನಾಯಕರಾದ ಶ್ರೀ R Ashoka ರವರು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ Vijayendra Yediyurappa ರವರು, ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ರವರು, ಶಾಸಕರಾದ Uday B. Garudachar ರವರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ Thammesh Gowda HC , ಇನ್ಫೋಸಿಸ್ ಫೌಂಡೇಷನ್ Infosys Foundation ಶ್ರೀಮತಿ ಬಿಂದ್ಯಾ ರಾಜನ್, Paypal Bangalore ಆನಂದ ತ್ಯಾಗರಾಜ್, ಧೀರಜ್, ಚಲನಚಿತ್ರ ನಟರಾದ ಶ್ರೀ Vasishta N Simha ಹಾಗೂ ಬಿಗ್ ಬಾಸ್ ಶ್ರೀ Olle Hudga Pratham ಮತ್ತು ಬಿಬಿಎಂಪಿಯ ಮಾಜಿ ಸದಸ್ಯರುಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪತ್ರಿಕಾ ವರದಿ Raksha Foundation
21/06/2025

ಪತ್ರಿಕಾ ವರದಿ
Raksha Foundation

20/06/2025ಜಯನಗರದಲ್ಲಿ   ವತಿಯಿಂದ ಮಂತ್ರಾಲಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುದೆಂದ್ರ ತೀರ್ಥ ಮಹಾಸ್ವಾಮಿಜೀಗಳವರ ದಿವ್ಯ ಸಾನಿದ್ಯದಲ್ಲಿ ...
21/06/2025

20/06/2025

ಜಯನಗರದಲ್ಲಿ ವತಿಯಿಂದ ಮಂತ್ರಾಲಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುದೆಂದ್ರ ತೀರ್ಥ ಮಹಾಸ್ವಾಮಿಜೀಗಳವರ ದಿವ್ಯ ಸಾನಿದ್ಯದಲ್ಲಿ “ಶ್ರೀ ಲಲಿತ ಸಹಸ್ರನಾಮ” ಪೂಜಾ ಕಾರ್ಯಕ್ರಮವನ್ನು ನೆಡೆಸಲಾಯಿತು.

ಈ ಸಂದರ್ಭದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾನ್ಯ ನ್ಯಾಯಧೀಶರಾದ ಶ್ರೀ ನ್ಯಾಯಮೂರ್ತಿ ಅರವಿಂದ್ ಕುಮಾರ್ ರವರು ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರಾದ ಶ್ರೀ Tejasvi Surya ರವರು, ಬೊಮ್ಮನಹಳ್ಳಿ ಕ್ಷೇತ್ರ ಶಾಸಕರಾದ ಶ್ರೀ M Satish Reddy ರವರು, ಚಲನಚಿತ್ರ ನಟಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ Malavika Avinash, ಆಕ್ಸ್ಫರ್ಡ್ ಸಂಸ್ಥೆಯ ಶ್ರೀ ರಮೇಶ್ ರಾಜು, ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾದ ಶ್ರೀ Naresh Kumar ಜಯನಗರ ಕ್ಷೇತ್ರದ ಶಾಸಕರು ಮತ್ತು ಸಂಸ್ಥಾಪಕರಾದ ಶ್ರೀ CK Ramamurthy ರವರು ಮತ್ತು ಬಿಬಿಎಂಪಿಯ ನಿಕಟಪೂರ್ವ ಸದಸ್ಯರುಗಳು ಹಾಗೂ ಜಯನಗರ ಕ್ಷೇತ್ರದ ಬಂದುಗಳು ಉಪಸ್ಥಿತರಿದ್ದರು.

ಆತ್ಮೀಯರೇ,*ರಕ್ಷಾ ಫೌಂಡೇಷನ್ (ರಿ.) ಸಂಸ್ಥೆಯ ವತಿಯಿಂದ ಜಯನಗರ ಚಂದ್ರಗುಪ್ತ (ಶಾಲಿನಿ) ಆಟದ ಮೈದಾನದಲ್ಲಿ ನೆಡೆಯುವ ಕಾರ್ಯಕ್ರಮ*20/06/2025 (ಶು...
14/06/2025

ಆತ್ಮೀಯರೇ,

*ರಕ್ಷಾ ಫೌಂಡೇಷನ್ (ರಿ.) ಸಂಸ್ಥೆಯ ವತಿಯಿಂದ ಜಯನಗರ ಚಂದ್ರಗುಪ್ತ (ಶಾಲಿನಿ) ಆಟದ ಮೈದಾನದಲ್ಲಿ ನೆಡೆಯುವ ಕಾರ್ಯಕ್ರಮ*

20/06/2025 (ಶುಕ್ರವಾರ) ಬೆಳಿಗ್ಗೆ 9:00ಘಂಟೆಗೆ
*3ನೇ ವರ್ಷದ ಶ್ರೀ ಲಲಿತ ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮ*

ಮತ್ತು

21/06/2025 (ಶನಿವಾರ) ಬೆಳಿಗ್ಗೆ 10:00 ಘಂಟೆಗೆ
*13ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ*

* 10 ಸಾವಿರ ಸರ್ಕಾರಿ ಹಾಗೂ ಸರ್ಕಾರೇತರ ವಿದ್ಯಾರ್ಥಿಗಳಿಗೆ 2ಲಕ್ಷ ಉಚಿತ ನೋಟ್ ಪುಸ್ತಕ ವಿತರಣೆ.

* SSLC / PUC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತೀಭಾ ಪುರಸ್ಕಾರ.
* ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್.

* ಅನಾಥ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಪಾಲನೆ ಜವಾಬ್ದಾರಿ.

* ಜಯದೇವ ಆಸ್ಪತ್ರೆಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಚಿಕಿತ್ಸೆಗೆ ಸಹಾಯ ಹಸ್ತ.

ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ.

https://g.co/kgs/ZioKZGo

Address

Bangalore
560041

Opening Hours

Monday 9am - 10:30pm
Tuesday 9am - 10:30pm
Wednesday 9am - 10:30pm
Thursday 9am - 10:30pm
Friday 9am - 10:30pm
Saturday 9am - 10:30pm
Sunday 9am - 10:30pm

Telephone

918041230074

Alerts

Be the first to know and let us send you an email when Raksha Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Raksha Foundation:

Share