Karnataka Organic Growers Association

Karnataka Organic Growers Association Farm Production Practices, Indigenous Inputs Production. Tradition and Culture, Ayurvedic Medicinal Herbs. Farming Knowledge. Integrated Farming. Rural Education.
(1)

Multiple Income Sources. Society Welfare. Women Supportive. Organic Karnataka Farmers Association is a group of active and interested farmers involved in Organic, Natural and Sustainable farming methods and Practices.

ದೇಶಾದ್ಯಂತ ಇಂಧನ ದರಗಳು ಮತ್ತೆ ಏರಿಕೆ! ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ 😡ಶುಕ್ರವಾರದಿಂದಲೇ ಹೊಸ ದರಗಳು ಜಾರಿಗೆ ಬಂದಿದ್ದು, ಜಾಗತಿಕ ಕಚ್ಚಾ ತ...
16/05/2026

ದೇಶಾದ್ಯಂತ ಇಂಧನ ದರಗಳು ಮತ್ತೆ ಏರಿಕೆ! ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ 😡

ಶುಕ್ರವಾರದಿಂದಲೇ ಹೊಸ ದರಗಳು ಜಾರಿಗೆ ಬಂದಿದ್ದು, ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಅಸ್ಥಿರತೆಯ ನಡುವೆ ತೈಲ ಕಂಪನಿಗಳು ಪೆಟ್ರೋಲ್ ⛽ ಮತ್ತು ಡೀಸೆಲ್ 🚛 ದರವನ್ನು ಲೀಟರ್‌ಗೆ ₹3 ವರೆಗೆ ಹೆಚ್ಚಿಸಿವೆ. 💸🌍

ಇದರಿಂದ ಸಾಮಾನ್ಯ ಜನರ ಪ್ರಯಾಣ 🚗, ಸರಕು ಸಾಗಣೆ 🚚 ಮತ್ತು ದಿನನಿತ್ಯದ ಖರ್ಚುಗಳ ಮೇಲೆ ಮತ್ತಷ್ಟು ಹೊರೆ ಹೆಚ್ಚುವ ಸಾಧ್ಯತೆ ಇದೆ 😟📊

📍ನಿಮ್ಮ ನಗರದಲ್ಲಿ ಈಗಿನ ಇಂಧನ ದರ ಎಷ್ಟು?
💬 ಕಾಮೆಂಟ್ ಮಾಡಿ ತಿಳಿಸಿ!
📲 ಇಂತಹ ಅಪ್ಡೇಟ್‌ಗಳಿಗಾಗಿ Follow ಮಾಡಿ Krishikaipidi ❤️

16/05/2026
ಬೇಸಿಗೆಯಲ್ಲಿ ಸಂಜೆ ವೇಳೆ ಹಳ್ಳಿಗಳಲ್ಲಿ ಬಹಳ ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಕೆಲಸ ಎಂದರೆ ಮಲ್ಲಿಗೆ ಮೊಗ್ಗು ಬಿಡಿಸುವುದು. ಮೈಸೂರು ಮಲ್ಲಿಗೆಯ ಘಮ...
15/05/2026

ಬೇಸಿಗೆಯಲ್ಲಿ ಸಂಜೆ ವೇಳೆ ಹಳ್ಳಿಗಳಲ್ಲಿ ಬಹಳ ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಕೆಲಸ ಎಂದರೆ ಮಲ್ಲಿಗೆ ಮೊಗ್ಗು ಬಿಡಿಸುವುದು. ಮೈಸೂರು ಮಲ್ಲಿಗೆಯ ಘಮಘಮಕ್ಕೆ ಸರಿಸಾಟಿಯಿಲ್ಲ. ಇದರ ಜೊತೆ ಏಳು ಸುತ್ತಿನ ಮಲ್ಲಿಗೆ, ಜಾಜಿ ಮಲ್ಲಿಗೆ, ನಿತ್ಯ ಮಲ್ಲಿಗೆ ಗಿಡಗಳಿದ್ದರೆ ದೇವರ ಮನೆಗೆ ವಿಶೇಷ ಮೆರಗು. ಹೂವು ಮುಡಿಯುವ ಹೆಣ್ಣು ಮಕ್ಕಳಿಗೂ ಹಿತವಾಗಿರುತ್ತದೆ. ಅದರಲ್ಲೂ ಮನೆಯ ಅಕ್ಕಪಕ್ಕದಲ್ಲಿ ಏನಾದರೂ ಮಲ್ಲಿಗೆ ಪಾರಿಜಾತ ರೀತಿಯ ಗಿಡಗಳಿದ್ದರೆ ಸಂಜೆ 7-8 ಗಂಟೆ ಸಮಯದಲ್ಲಿ ಬೀಸುವ ಗಾಳಿಗೆ ಮನೆಯಲ್ಲಾ ಘಮ ಘಮ ಎನುತಿರುತ್ತದೆ.
ಸಮಯ ಮಾಡಿಕೊಂಡು ಮಕ್ಕಳಿಗೆ ಒಂದಷ್ಟು ಹೂವು ಕಟ್ಟುವುದನ್ನು ಹೇಳಿಕೊಟ್ಟರೆ ಹೊಸ ಸ್ಕಿಲ್ ಬೆಳೆಯುತ್ತದೆ ಅಲ್ಲವೇ?

15/05/2026

ತುಮಕೂರು ತಾಲ್ಲೂಕಿನ ಬುಗುಡನಹಳ್ಳಿ ಕೆರೆಗೆ ಬುಧವಾರ ಸಂಜೆ ಹೇಮಾವತಿ ನೀರು ತಲುಪಿತು....

1924 ರಲ್ಲಿ ಆಸ್ಟ್ರಿಯಾದ ತತ್ವಜ್ಞಾನಿ ಮತ್ತು ವಿಜ್ಞಾನಿ ರುಡಾಲ್ಫ್ ಸ್ಟೈನರ್ (Rudolf Steiner) ಅವರು ಜರ್ಮನಿಯಲ್ಲಿ ರೈತರಿಗೆ ನೀಡಿದ ಉಪನ್ಯಾಸ...
15/05/2026

1924 ರಲ್ಲಿ ಆಸ್ಟ್ರಿಯಾದ ತತ್ವಜ್ಞಾನಿ ಮತ್ತು ವಿಜ್ಞಾನಿ ರುಡಾಲ್ಫ್ ಸ್ಟೈನರ್ (Rudolf Steiner) ಅವರು ಜರ್ಮನಿಯಲ್ಲಿ ರೈತರಿಗೆ ನೀಡಿದ ಉಪನ್ಯಾಸಗಳ ಸರಣಿಯೊಂದಿಗೆ ಬಯೋಡೈನಾಮಿಕ್ ಕೃಷಿ ಪ್ರಾರಂಭವಾಯಿತು.

ಈ ಕೃಷಿಯಲ್ಲಿ ಪಂಚಾಂಗ (Astrological Calendar) ನೋಡಿಕೊಂಡು ಬಿತ್ತನೆ ಮಾಡುವುದು ಮತ್ತು ಸಸ್ಯಗಳಿಗೆ ಪೋಷಕಾಂಶ ಒದಗಿಸಲು ವಿಶೇಷವಾದ 'ಬಯೋಡೈನಾಮಿಕ್ ಪ್ರಿಪರೇಷನ್' (biodynamic preparations - BD 500, BD 501, CPP manure ಇತ್ಯಾದಿ) ಬಳಸಲಾಗುತ್ತದೆ.

ಇಂದು ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಅನೇಕ ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗುತ್ತಿದ್ದಾರೆ. BDAI ಮತ್ತು ಡಿಮೀಟರ್ (Demeter) ಎಂಬ ಸಂಸ್ಥೆಗಳು ಈ ಉತ್ಪನ್ನಗಳಿಗೆ ಪ್ರಮಾಣೀಕರಣ ನೀಡುವ ಮೂಲಕ ಜಾಗತಿಕ ಮಾರುಕಟ್ಟೆಗೆ ದಾರಿ ಮಾಡಿಕೊಟ್ಟಿದೆ.

ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಂತಹ ಬರಗಾಲ ಪೀಡಿತ ಪ್ರದೇಶದಲ್ಲೂ, ರೈತರು ಕೇವಲ 2 ಎಕರೆ ಜಮೀನಿನಲ್ಲಿ 20ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆದು, ಸಮಗ್ರ ಸಾವಯವ/ಬಯೋಡೈನಾಮಿಕ್ ಕೃಷಿಯ ಮೂಲಕ ಅಂತರ್ಜಲ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಕಥೆಗಳು ಬಯೋಡೈನಾಮಿಕ್ ಕೃಷಿಯ ಯಶಸ್ಸಿಗೆ ಸಾಕ್ಷಿಯಾಗಿವೆ.

ನಿಮ್ಮ ಸಕ್ಕರೆಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು.!! ನಿಮ್ಮ ಸುತ್ತಮುತ್ತ ಸಕ್ಕರೆ ಕಾಯಿಲೆ ಇರುವ ಆಪ್ತರಿಗೆ ಈ ಮಾಹಿತಿಯನ್ನು ಓದಿ ಹೇಳಿ ಹಂಚಿಕೊ...
15/05/2026

ನಿಮ್ಮ ಸಕ್ಕರೆಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು.!! ನಿಮ್ಮ ಸುತ್ತಮುತ್ತ ಸಕ್ಕರೆ ಕಾಯಿಲೆ ಇರುವ ಆಪ್ತರಿಗೆ ಈ ಮಾಹಿತಿಯನ್ನು ಓದಿ ಹೇಳಿ ಹಂಚಿಕೊಳ್ಳಿರಿ.

ಔಷಧಿ ತೆಗೆದುಕೊಂಡರೂ ಕೆಲವರಿಗೆ ನಿಯಂತ್ರಣಕ್ಕೆ ಬರುತ್ತಿರುವುದಿಲ್ಲ, ಕೆಲವರಿಗೆ ಕೈಕಾಲುಗಳಲ್ಲಿ ಗಾಯಗಳಾಗಿ ಮಾಯುವುದೇ ಇಲ್ಲ. ಹೀಗೆ ಬಗೆಬಗೆಯ ಸಕ್ಕರೆ ಕಾಯಿಲೆಯಿಂದ ಉಂಟಾಗುವ ಬೇರೆ ಬೇರೆ ಪರಿಣಾಮಗಳನ್ನು ಆಹಾರದಿಂದ ನೀವು ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು. ಅಷ್ಟೇ ಅಲ್ಲ ನಿಮ್ಮ ಸಕ್ಕರೆ ಕಾಯಿಲೆ ಬದಲಾದ ಜೀವನಶೈಲಿಯಿಂದ ಬಂದಿದ್ದರೆ ಗುಣಪಡಿಸಿಕೊಳ್ಳಬಹುದು.

ನಿಮ್ಮ ತಿನ್ನುವ ಆಹಾರದಲ್ಲಿ ಒಂದು ಭಾಗ (25%) ಬೇಯಿಸಿದ ಕಾಳುಗಳು ಅಂದರೆ ಕಾಳು ಪಲ್ಯಗಳು, ಆದಷ್ಟೂ ಎಣ್ಣೆ ಬಳಸದೆ ಅಥವಾ ಕಡಿಮೆ ಎಣ್ಣೆ ಬಳಸಿ ಕಾಳುಗಳನ್ನು ಬೇಯಿಸಿ ಪಲ್ಯವನ್ನು ಮಾಡಬಹುದು. ಹುರುಳಿಕಾಳು, ಅವರೆಕಾಳು, ಹೆಸರುಕಾಳು, ಅಲಸಂದೆ, ತೊಗರಿ ಇಂತಹ ಕಾಳುಗಳು. ಕಾಳುಗಳು ಇಲ್ಲದೆ ಹೋದರೆ ಮೊಟ್ಟೆ ಅಥವಾ ಮಶ್ರೂಮ್ ರೀತಿಯ ಪ್ರೋಟೀನ್ ಇರುವ ಆಹಾರಗಳು ಇರಬೇಕು. ಇನ್ನೊಂದು ಭಾಗದಲ್ಲಿ (25%) ಬೇಯಿಸಿದ ತರಕಾರಿಗಳು ಇರಬೇಕು. ಮೂರನೇ ಭಾಗದಲ್ಲಿ (25%) ಹಸಿ ತರಕಾರಿಗಳು ಅಥವಾ ಸಲಾಡ್ ಇದರಲ್ಲಿ ಕ್ಯಾರೇಟ್, ಬೀಟ್ ರೂಟ್, ಸೌತೆಕಾಯಿ, ಗೆಡ್ಡ ಕೋಸು, ಗೆಣಸು, ಹಸಿ ಸೊ್ಪ್ಪುಗಳು, ಮೂಲಂಗಿ ಮುಂತಾದವು ಇರಬಹುದು. ನಾಲ್ಕನೇ ಭಾಗದಲ್ಲಿ (25%) ಮುದ್ದೆ ಅಥವಾ ಅನ್ನ ಅಥವಾ ಚಪಾತಿ, ಉಪ್ಪಿಟ್ಟು ಚಿತ್ರಾನ್ನ ಏನೋ ಕಾರ್ಬೋಹೈಡ್ರೈಟ್ ಇರುವ ಆಹಾರಗಳು ಇರಬೇಕು. ನೆನಪಿರಲಿ, ಮುದ್ದೆ ಒಳ್ಳೇದು ಎಂದು ಚೆನ್ನಾಗಿ ತಿನ್ನಬಾರದು. ರಾಗಿ, ಅಕ್ಕಿ, ಸಿರಿಧಾನ್ಯ, ಗೋಧಿ ಇವೆಲ್ಲಾ ಕಾರ್ಬೋಹೈಡ್ರೈಟ್ ಇರುವ ಆಹಾರಗಳು, ಇವುಗಳನ್ನು ನಮ್ಮ ತಟ್ಟೆಯಲ್ಲಿ 25% ಗೆ ತರಲೇಬೇಕು.

ಇನ್ನೊಂದು ಮುಖ್ಯ ಸಂಗತಿ ಎಂದರೆ, ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಊಟ ಮಾಡಿ. ಹಿತ ಮಿತವಾದ ಊಟವಿರಲಿ. ಕೆಲವರು ಇದು ಆಗುವುದಿಲ್ಲ. ಊಟ ಕಡಿಮೆ ಮಾಡುವುದು ಕಷ್ಟ, ಮುದ್ದೆ ಅನ್ನ ಕಡಿಮೆ ಮಾಡುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ. ಗೊತ್ತಿರಲಿ, ಇದೆಲ್ಲಾ ಮನಸ್ಸಿನ ಮಾಯೆ. ನೀವು ಮನಸ್ಸು ಮಾಡಿದರೆ ಮಾತ್ರ ಇದೆಲ್ಲಾ ಆಗುತ್ತದೆ. ಆಹಾರ ತಿನ್ನುವದೆಲ್ಲಾ ನೀವೇ ರೂಢಿಸಿಕೊಂಡ ಅಭ್ಯಾಸಗಳು. ಅವುಗಳನ್ನು ನೀವೇ ಬದಲಿಸಿಕೊಳ್ಳಬೇಕು ಹಾಗೂ ಬದಲಿಸಿಕೊಳ್ಳಲು ಸಾಧ್ಯ ಎಂದು ನೀವು ನಂಬಬೇಕು.

ಇನ್ನು ಮೂರನೇ ಮುಖ್ಯ ಸಂಗತಿ ಎಂದರೆ, ಪ್ರತಿ ಸಲ ಊಟ ಆದ ಮೇಲೆ ತಿಂದದ್ದು ಕರಗುವಷ್ಟು ಏನಾದರೂ ಕೆಲಸ ಮಾಡಿ. ಮೈ ಬಗ್ಗಿಸಿ ತಿಂದದ್ದು ಕರಗುವ ಸಣ್ಣ ಪುಟ್ಟ ಕೆಲಸಗಳು. ವಾಕ್ ಮಾಡಿರಿ. ಏನೂ ಮಾಡಲು ಸಾಧ್ಯವಿಲ್ಲದಿದ್ದರೆ, ಮಹಡಿ ಮೇಲಕ್ಕೆ ಹತ್ತಿ ಇಳಿಯುವ ಕೆಲಸ ಹತ್ತು ಸಲ ಮಾಡಿ. ಒಟ್ಟು ಏನಾದರೂ ಕೆಲಸ ಮಾಡಿರಿ.

ಮೈದಾ, ರಿಫೈನ್ಡ್ ಎಣ್ಣೆಗಳುಗಳಿಂದ ಕರಿದ ಪದಾರ್ಥಗಳನ್ನು, ಬೇಕರಿ ತಿನಿಸುಗಳು, ಕಾಫಿ , ಟೀ, ಬೀಡಿ, ಸಿಗರೇಟು, ಮದ್ಯ ಇಂತಹವುಗಳನ್ನು ನಿಲ್ಲಿಸಿಬಿಡಿ.

15/05/2026

#ಮಳೆ 🌨️ ಮುನ್ಸೂಚನೆ
17.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕರಾವಳಿ ತೀರ ಭಾಗಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಿರಬಹುದು.
ಈಗಿನಂತೆ ಮೇ 19ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಮೇ 19ರ ತನಕ ಮಳೆ ಮುಂದುವರಿಯುವ ಸೂಚನೆಗಳಿವೆ.

ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಬೀದರ್, ಕೊಪ್ಪಳ, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೆಲವು ಭಾಗಗಳಲ್ಲಿ ಮಾತ್ರ ಮಳೆಯ ಪ್ರಮಾಣ ಹೆಚ್ಚಿರಬಹುದು.
ಈಗಿನಂತೆ ಮೇ 17ರ ನಂತರ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ.

ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇ 19ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ.

ಮುಂಗಾರು ಅಂಡಮಾನ್ ದ್ವೀಪ ತಲುಪಿಧರೂ, ಮೇ 17ರಿಂದ ಹಿಂದೂಮಹಾಸಾಗರ ಮೂಲಕ ಸಾಗಿ ಬರುವ ಮುಂಗಾರು ಮಾರುತಗಳು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ರಾಜ್ಯಕ್ಕೆ ಮುಂಗಾರು ಪ್ರವೇಶ ನಿಗಧಿತ ಸಮಯದಲ್ಲಿ ಪ್ರವೇಶಿಸುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ತುಂಬೆ ಗಿಡ ಆರೋಗ್ಯಕರ ಪ್ರಯೋಜನಗಳು ಮತ್ತು ಉಪಯೋಗಗಳು:-1. ಕಣ್ಣಿನ ಕಾಯಿಲೆಯಲ್ಲಿ ತುಂಬೆ ಗಿಡದ ಪ್ರಯೋಜನಗಳುಸಾಮಾನ್ಯವಾಗಿ ಹೆಚ್ಚು ಟಿವಿ, ಸಿಸ್ಟಮ...
15/05/2026

ತುಂಬೆ ಗಿಡ ಆರೋಗ್ಯಕರ ಪ್ರಯೋಜನಗಳು ಮತ್ತು ಉಪಯೋಗಗಳು:-

1. ಕಣ್ಣಿನ ಕಾಯಿಲೆಯಲ್ಲಿ ತುಂಬೆ ಗಿಡದ ಪ್ರಯೋಜನಗಳು
ಸಾಮಾನ್ಯವಾಗಿ ಹೆಚ್ಚು ಟಿವಿ, ಸಿಸ್ಟಮ್, ಮೊಬೈಲ್ ನೋಡುವುದರಿಂದ ಕಣ್ಣುಗಳು ದೃಷ್ಟಿ ಕಳೆದುಕೊಳ್ಳುತ್ತವೆ. ಜೊತೆಗೆ ಕಣ್ಣಿಗೆ ಸಂಬಂಧಿಸಿ ನಾನಾ ಕಾಯಿಲೆಗಳು ಬರುತ್ತವೆ. ಆದರೆ ಕಣ್ಣಿನ ಸಮಸ್ಯೆಗಳಿಗೆ ತುಂಬೆ ಗಿಡ ರಾಮಬಾಣದಂತೆ ಕೆಲಸ ಮಾಡುತ್ತದೆ. ವೈದ್ಯರ ಸಲಹೆ ಮೇರೆಗೆ ಮನೆಮದ್ದಾಗಿ ಇದನ್ನು ಬಳಕೆ ಮಾಡಬಹುದು.

ಅಕ್ಕಿ ತೊಳೆದ ನೀರಿನಿಂದ ದ್ರೋಣಪುಷ್ಪವನ್ನು ಒಣಗಿಡಿ ಪುಡಿಮಾಡಿ. ಮೂಗಿನ ಮೂಲಕ 1-2 ಹನಿಗಳ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಕಣ್ಣಿನ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ಕಾಜಲ್‌ನಂತೆ ಇದನ್ನು ಹಚ್ಚುವುದರಿಂದ ಕಣ್ಣಿನ ಯಾವುದೇ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಇದಕ್ಕಿದೆ.

2. ಕೆಮ್ಮಿನಿಂದ ಮುಕ್ತಿ ನೀಡುವ ತುಂಬೆ ಗಿಡ
ಕೆಮ್ಮಿಗೆ ತುಂಬೆ ಗಿಡ ಉತ್ತಮ ಮನೆಮದ್ದಾಗಿ ಕೆಲಸ ಮಾಡುತ್ತದೆ. ಔಷಧಿಯ ಗುಣಗಳನ್ನು ಹೊಂದಿರುವ ಗಿಡದ ಎಲೆಗಳಿಂದ 5 ಮಿಲಿ ರಸದಲ್ಲಿ ಸಮಾನ ಪ್ರಮಾಣದ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ಕ್ರಮೇ ಕೆಮ್ಮು ಕಡಿಮೆಯಾಗುತ್ತದೆ. ಜೊತೆಗೆ ಜ್ವರ, ನೆಗಡಿಯಿಂದ ನಿಮ್ಮ ನ್ನು ಕಾಪಾಡುತ್ತದೆ.

3. ಜೀರ್ಣ ಕ್ರಿಯೆಯನ್ನು ಹೆಚ್ಚಿಸುವ ತುಂಬೆ ಗಿಡ
ಅಜೀರ್ಣಕ್ಕೆ ಚಿಕಿತ್ಸೆಯಾಗಿ ನೀವು ದ್ರೋಣಪುಷ್ಪವನ್ನು ಸೇವಿಸಬಹುದು. ದ್ರೋಣಪುಷ್ಪಿ ಎಲೆಗಳ ಸೊಪ್ಪಿನಂತೆ ತಯಾರಿಸಿ ತಿನ್ನಿ. ಇದು ಅಜೀರ್ಣದಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಮಾಡುತ್ತದೆ.

4. ರಕ್ತಹೀನತೆ-ಕಾಮಾಲೆಗೆ ಚಿಕಿತ್ಸೆ ನೀಡುವ ತುಂಬೆ
ಮಸ್ಕರಾದಂತೆ ಹಲವು ಕಾಯಿಲೆಗಳು ಬಹುಬೇಗ ನಮ್ಮನ್ನು ಆವರಿಸಿಬಿಡುತ್ತದೆ. ಇತಂಹ ಕಾಯಿಲೆಗಳಲ್ಲಿ ರಕ್ತಹೀನತೆ ಮತ್ತು ಕಾಮಲೆ ಕೂಡ ಸೇರಿವೆ. ಈ ಕಾಯಿಲೆಗಳಿಗೆ ತುಂಬೆ ಗಿಡಿ ತುಂಬಾ ಪ್ರಯೋಜನಕಾರಿಯಾಗಿದೆ. 5 ಮಿಲಿ ರಸದಲ್ಲಿ ಸಮಾನ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಅದನ್ನು ಬಳಸಬೇಕು. ದ್ರೋಣಪುಷ್ಪದ 5-10 ಮಿಲಿ ರಸದಲ್ಲಿ 500 ಮಿಗ್ರಾಂ ಕರಿಮೆಣಸಿನ ಪುಡಿ ಮತ್ತು ಕಲ್ಲು ಉಪ್ಪನ್ನು ಮಿಶ್ರಣ ಮಾಡಿ. ದಿನಕ್ಕೆ ಮೂರು ಬಾರಿ ಇದನ್ನು ಸೇವಿಸುವುದರಿಂದ ರಕ್ತಹೀನತೆ ಮತ್ತು ಕಾಮಾಲೆಗೆ ಪ್ರಯೋಜನಕಾರಿಯಾಗಿದೆ.

5. ಲಿವರ್‌ಗೆ ತುಂಬಾ ಒಳ್ಳೆಯದು
ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ಲಿವರ್ ಅಥವಾ ಯಕೃತ್ತು ಸಮಸ್ಯೆಗಳು ಕೂಡ ಒಂದಾಗಿವೆ. ಈ ಸಮಸ್ಯೆಗಳು ಮಾನವ ಜೀವವನ್ನೇ ಬಲಿ ಪಡೆಯಬಹುದು. ಆದರೆ ವೈದ್ಯರ ಸಲಹೆ ಮೇರೆಗೆ ತುಂಬೆ ಗಿಡವನ್ನು ನಿತ್ಯ ಸೇವನೆಯಿಂದಾಗ ನಿಮ್ಮ ಲಿವರ್ ಕಾಪಾಡಿಕೊಳ್ಳಬಹುದು. ದ್ರೋಣಪುಷ್ಪಿ ಬೇರಿನ ಪುಡಿ ಯಕೃತ್ತು ಅಸ್ವಸ್ಥತೆಯನ್ನು ದೂರ ಮಾಡುತ್ತದೆ.

ತುಂಬೆ ಗಿಡದ ಬೇರಿನ ಪುಡಿಯನ್ನು ತೆಗೆದುಕೊಳ್ಳಿ, ಅದರಲ್ಲಿ ಒಂದು ಭಾಗ ಉದ್ದದ ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ. 1-2 ಗ್ರಾಂ ಪ್ರಮಾಣದಲ್ಲಿ ಸೇವಿಸುವುದು ಯಕೃತ್ತು ಅಸ್ವಸ್ಥತೆಗಳನ್ನು ದೂರ ಮಾಡಬಹುದು.

6. ತುಂಬೆ ಗಿಡದೊಂದಿಗೆ ಸಂಧಿವಾತದ ಚಿಕಿತ್ಸೆ
ತುಂಬೆ ಗಿಡದ ಕಷಾಯವನ್ನು ಕುಡಿದರೆ ಸಂಧಿವಾತ ವಾಸಿಯಾಗುತ್ತದೆ. ತುಂಬೆ ಗಿಡದ ಬೇರಿನ ಪುಡಿಯೊಂದಿಗೆ 1-2 ಗ್ರಾಂ ಕಾಳುಮೆಣಸಿನ ಪುಡಿಯನ್ನು 10-30 ಮಿ.ಲೀ ಕಷಾಯದಲ್ಲಿ ಬೆರೆಸಿ ಕುಡಿದರೆ ಸಂಧಿವಾತ ದೂರವಾಗುತ್ತದೆ.

7. ತುಂಬೆ ಗಿಡ ಚರ್ಮದ ತುರಿಕೆಗೆ ಆಯುರ್ವೇದ ಔಷಧ
ತುಂಬೆ ಗಿಡ ಚರ್ಮದ ತುರಿಕೆಗೆ ಆಯುರ್ವೇದ ಔಷಧಿಯಾಗಿದೆ. ಎಲೆಗಳ ರಸ ಅಥವಾ ಪೇಸ್ಟ್ ಅನ್ನು ಚರ್ಮಕ್ಕೆ ಅನ್ವಯಿಸಿದರೆ ತಕ್ಷಣ ತುರಿಕೆ ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇದು ಗಾಯಗಳನ್ನೂ ಗುಣಪಡಿಸುವ ಶಕ್ತಿಯನ್ನು ಹೊಂದಿದೆ.

8.ನಿದ್ರಾಹೀನತೆಗೆ ತುಂಬೆ ಗಿಡದ ಪ್ರಯೋಜನಗಳು
ನಿದ್ರಾಹೀನತೆಯ ಸಮಸ್ಯೆ ಇರುವವರಿಗೆ ತುಂಬೆ ಗಿಡಿ ಉತ್ತಮ ಔಷಧಿಯಾಘಿದೆ. ಅನೇಕ ಆಯುರ್ವೇದಾಚಾರ್ಯರು ಇದನ್ನು ಬಳಸುತ್ತಾರೆ. ದ್ರೋಣಪುಷ್ಪಿ ಬೀಜಗಳ 10-20 ಮಿಲಿ ಕಷಾಯವನ್ನು ತೆಗೆದುಕೊಂಡರೆ ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ.

9. ನರಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ತುಂಬೆ ಗಿಡ ಪ್ರಯೋಜನಕಾರಿ
ನರಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ತುಂಬೆ ಗಿಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದಕ್ಕೆ ತುಂಬೆ ಗಿಡದ ಎಲೆಗಳ ಕಷಾಯ ಮಾಡಿ ಕುಡಿದರೆ ನರಗಳ ಸೆಳೆತ, ಗಂಟು ಕಟ್ಟುವುದು, ನೋವು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

10.ಮಲೇರಿಯಾ ಜ್ವರದ ವಿರುದ್ಧ ಹೋರಾಡಲು ತುಂಬೆ
ಮಳೆಗಾಲದಲ್ಲಿ ಅನೇಕ ಕಾಯಿಲೆಗಳು ನಮ್ಮನ್ನು ಆವರಿಸುತ್ತವೆ. ಈ ಸಂದರ್ಭದಲ್ಲಿ ತುಂಬೆ ಗಿಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಎಲೆಗಳ 5 ಮಿಲಿ ರಸದಲ್ಲಿ 1 ಗ್ರಾಂ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ. ಇದನ್ನು ಸೇವಿಸುವುದು ಮಲೇರಿಯಾ ಜ್ವರಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.

⚫ ತುಂಬೆ ಗಿಡದಿಂದಾಗುವ ದುಷ್ಪರಿಣಾಮಗಳು:
2022 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತುಂಬೆ ಗಿಡ ಸಿಎನ್‌ಎಸ್ ಖಿನ್ನತೆಗೆ ಕಾರಣವಾಗಬಹುದು ಅಥವಾ ಮೆದುಳಿನ ಚಟುವಟಿಕೆಯನ್ನು ನಿಧಾನಗೊಳಿಸಬಹುದು ಎಂದು ಕಂಡುಹಿಡಿದಿದೆ. ಇದು ವಾಕರಿಕೆ, ವಾಂತಿ, ಕಡಿಮೆ ಹೃದಯ ಬಡಿತ ಮತ್ತು ಉಸಿರಾಟ, ಗೊಂದಲ ಮತ್ತು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು.

ಔಷಧಿಯ ಗುಣಗಳನ್ನು ಹೋಮದಿರುವ ತುಂಬೆ ಗಿಡದ ಸೇವನೆಯಿಂದ ಯಾವುದೇ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಅನುಭವಿಸಿದರೆ, ಅದರ ಸೇವನೆಯನ್ನು ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅಲ್ಲದೆ ಇದನ್ನು ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವುದು ಸರಿಯಾದ ಮಾರ್ಗವಾಗಿದೆ.

15/05/2026

🌿 ಕರ್ನಾಟಕದಲ್ಲಿ ಹೆಚ್ಚು ಮಾರುಕಟ್ಟೆ ಹಾಗೂ ನೇರ ಮಾರಾಟಕ್ಕೆ ಸೂಕ್ತ 100 ಔಷಧಿ ಸಸ್ಯಗಳು 🌿

1️⃣ ತುಳಸಿ – ಜ್ವರ, ಶೀತ, ಕಷಾಯ, ಟೀ
2️⃣ ಅಮೃತಬಳ್ಳಿ – ರೋಗನಿರೋಧಕ ಶಕ್ತಿ
3️⃣ ಅಶ್ವಗಂಧ – ಶಕ್ತಿ, ನಿದ್ರೆ, ಒತ್ತಡ ನಿವಾರಣೆ
4️⃣ ಬ್ರಹ್ಮಿ – ನೆನಪು ಶಕ್ತಿ, ಮೆದುಳಿನ ಆರೋಗ್ಯ
5️⃣ ಒಂದೆಲಗ – ಮೆದುಳು, ಚರ್ಮ, ಗಾಯ ಗುಣಮುಖ
6️⃣ ಲೋಳೆಸರ – ಚರ್ಮ, ಕೂದಲು, ಜೀರ್ಣಕ್ರಿಯೆ
7️⃣ ನೆಲ್ಲಿಕಾಯಿ – ವಿಟಮಿನ್ C, ರೋಗನಿರೋಧಕ ಶಕ್ತಿ
8️⃣ ಅರಿಶಿನ – ಉರಿಯೂತ, ಗಾಯ, ಅಡುಗೆ
9️⃣ ಶುಂಠಿ – ಜೀರ್ಣಕ್ರಿಯೆ, ಶೀತ, ಕಫ
🔟 ಬೆಳ್ಳುಳ್ಳಿ – ಹೃದಯ ಆರೋಗ್ಯ, ರಕ್ತದೊತ್ತಡ
1️⃣1️⃣ ಕರಿಬೇವು – ರಕ್ತಹೀನತೆ, ಕೂದಲು
1️⃣2️⃣ ನುಗ್ಗೆ ಸೊಪ್ಪು – ಪೌಷ್ಟಿಕಾಂಶ, ರಕ್ತಶಕ್ತಿ
1️⃣3️⃣ ಅಡಸೋಗೆ – ಕೆಮ್ಮು, ಉಸಿರಾಟ
1️⃣4️⃣ ಪುದೀನಾ – ಜೀರ್ಣಕ್ರಿಯೆ, ತಂಪು
1️⃣5️⃣ ಕೊತ್ತಂಬರಿ – ದೇಹದ ಉಷ್ಣತೆ ಕಡಿಮೆ
1️⃣6️⃣ ಮೆಂತ್ಯೆ – ಮಧುಮೇಹ, ಜೀರ್ಣಕ್ರಿಯೆ
1️⃣7️⃣ ಓಮ – ಹೊಟ್ಟೆನೋವು, ಗ್ಯಾಸ್
1️⃣8️⃣ ಜೀereke – ಜೀರ್ಣಕ್ರಿಯೆ
1️⃣9️⃣ ಸೋಂಪು – ಹೊಟ್ಟೆ ತಂಪು, ಬಾಯಿ ವಾಸನೆ
2️⃣0️⃣ ಕರಿಮೆಣಸು – ಶೀತ, ಕಫ
2️⃣1️⃣ ಹಿಪ್ಪಲಿ – ಶ್ವಾಸಕೋಶ ಆರೋಗ್ಯ
2️⃣2️⃣ ಏಲಕ್ಕಿ – ಜೀರ್ಣಕ್ರಿಯೆ, ಬಾಯಿ ಸುವಾಸನೆ
2️⃣3️⃣ ದಾಲ್ಚಿನ್ನಿ – ಶುಗರ್ ನಿಯಂತ್ರಣ
2️⃣4️⃣ ಜಾಯಿಕಾಯಿ – ನಿದ್ರೆ, ಜೀರ್ಣಕ್ರಿಯೆ
2️⃣5️⃣ ಶತಾವರಿ – ಮಹಿಳಾ ಆರೋಗ್ಯ
2️⃣6️⃣ ಗೊಕ್ಷುರ – ಮೂತ್ರಪಿಂಡ ಆರೋಗ್ಯ
2️⃣7️⃣ ಪುನರ್ನವಾ – ಊತ, ಮೂತ್ರ ಸಮಸ್ಯೆ
2️⃣8️⃣ ಕಲ್ಲುರುಕ್ಕಿ – ಕಿಡ್ನಿ ಸ್ಟೋನ್
2️⃣9️⃣ ಸರ್ಪಗಂಧಿ – ರಕ್ತದೊತ್ತಡ
3️⃣0️⃣ ಮಧುನಾಶಿನಿ – ಮಧುಮೇಹ ನಿಯಂತ್ರಣ
3️⃣1️⃣ ಇನ್ಸುಲಿನ್ ಸಸಿ – ಶುಗರ್ ನಿಯಂತ್ರಣ
3️⃣2️⃣ ಚಕ್ರಮುನಿ – ಶೀತ, ಕೆಮ್ಮು
3️⃣3️⃣ ದೊಡ್ಡಪತ್ರೆ – ಕೆಮ್ಮು, ಗಂಟಲು
3️⃣4️⃣ ದಾಸವಾಳ – ಕೂದಲು, ರಕ್ತ ಶುದ್ಧೀಕರಣ
3️⃣5️⃣ ಬೇವು – ಚರ್ಮ, ರಕ್ತ ಶುದ್ಧೀಕರಣ
3️⃣6️⃣ ಬಿಲ್ವಪತ್ರೆ – ಜೀರ್ಣಕ್ರಿಯೆ, ಹೊಟ್ಟೆ ಸಮಸ್ಯೆ
3️⃣7️⃣ ಪಾರಿಜಾತ – ಜ್ವರ, ಸಂಧಿ ನೋವು
3️⃣8️⃣ ನಾಗದಾಳಿ – ವಿಷಹರಣ ಜನಪದ ಬಳಕೆ
3️⃣9️⃣ ತುಮ್ಮೆ – ಜ್ವರ, ಕಫ
4️⃣0️⃣ ಕರ್ಪೂರ ತುಳಸಿ – ಉಸಿರಾಟ ಆರೋಗ್ಯ
4️⃣1️⃣ ಲೆಮನ್ ಗ್ರಾಸ್ – ಟೀ, ಒತ್ತಡ ನಿವಾರಣೆ
4️⃣2️⃣ ಸಿಟ್ರೊನೆಲ್ಲಾ – ಸೊಳ್ಳೆ ನಿವಾರಣೆ
4️⃣3️⃣ ಪಾಲ್ಮರೋಸಾ – ಅತ್ತರು, ತೈಲ
4️⃣4️⃣ ಲಾವಂಚ – ತಂಪು, ಸುಗಂಧ
4️⃣5️⃣ ಪಾಚೋಲಿ – ಸುಗಂಧ ತೈಲ
4️⃣6️⃣ ಕರ್ಪೂರ ಮರ – ಶೀತ, ತೈಲ
4️⃣7️⃣ ಶಿಕಾಕಾಯಿ – ಕೂದಲು ತೊಳೆಯಲು
4️⃣8️⃣ ಅಂಟುವಾಳ – ನೈಸರ್ಗಿಕ ಸಾಬೂನು
4️⃣9️⃣ ಮೆಹೆಂದಿ – ಕೂದಲು, ತಂಪು
5️⃣0️⃣ ರೀಠಾ – ನೈಸರ್ಗಿಕ ಕ್ಲೀನರ್
5️⃣1️⃣ ನೇರಳೆ – ಶುಗರ್ ನಿಯಂತ್ರಣ
5️⃣2️⃣ ಪೇರಳೆ – ಜೀರ್ಣಕ್ರಿಯೆ
5️⃣3️⃣ ಪಪ್ಪಾಯಿ – ಜೀರ್ಣಕ್ರಿಯೆ, ಪಪೈನ್
5️⃣4️⃣ ಸೀತಾಫಲ – ಪೌಷ್ಟಿಕಾಂಶ
5️⃣5️⃣ ಅವಕಾಡೋ – ಆರೋಗ್ಯಕರ ಕೊಬ್ಬು
5️⃣6️⃣ ನೋನಿ – ರೋಗನಿರೋಧಕ ಶಕ್ತಿ
5️⃣7️⃣ ಕೊಕ್ಕೂಂ – ಶೀತಪಾನೀಯ
5️⃣8️⃣ ಹುಣಸೆ – ಜೀರ್ಣಕ್ರಿಯೆ
5️⃣9️⃣ ದಾಳಿಂಬೆ – ರಕ್ತ ಶಕ್ತಿ
6️⃣0️⃣ ಬಾಳೆ – ಶಕ್ತಿ, ಜೀರ್ಣಕ್ರಿಯೆ
6️⃣1️⃣ ಬಜೆ – ಮಕ್ಕಳ ಜೀರ್ಣಕ್ರಿಯೆ
6️⃣2️⃣ ಅನಂತಮೂಲ – ರಕ್ತ ಶುದ್ಧೀಕರಣ
6️⃣3️⃣ ವಾಯುವಿಡಂಗ – ಹೊಟ್ಟೆ ಹುಳು
6️⃣4️⃣ ಸೇನಾಮಕ್ಕಿ – ಮಲಬದ್ಧತೆ
6️⃣5️⃣ ಬ್ರಹ್ಮದಂಡಿ – ಶಕ್ತಿ ವೃದ್ಧಿ
6️⃣6️⃣ ಅಪರಾಜಿತೆ – ಮೆದುಳು ಆರೋಗ್ಯ
6️⃣7️⃣ ಕಸ್ತೂರಿ ಅರಿಶಿನ – ಚರ್ಮ ಆರೈಕೆ
6️⃣8️⃣ ಮುಟ್ಟಿದರೆ ಮುನಿ – ಗಾಯ, ಚರ್ಮ
6️⃣9️⃣ ಬಸಳೆ – ಪೌಷ್ಟಿಕಾಂಶ
7️⃣0️⃣ ಹರಿವೆ ಸೊಪ್ಪು – ರಕ್ತಹೀನತೆ
7️⃣1️⃣ ಅಗಸೆ – ಒಮೆಗಾ 3
7️⃣2️⃣ ಅಲಸಂದೆ ಸೊಪ್ಪು – ಪೌಷ್ಟಿಕಾಂಶ
7️⃣3️⃣ ಹುರಳಿ – ದೇಹ ಬಲ
7️⃣4️⃣ ಸಬ್ಬಸಿಗೆ – ಜೀರ್ಣಕ್ರಿಯೆ
7️⃣5️⃣ ಚುಕ್ಕೆ ಸೊಪ್ಪು – ರಕ್ತ ಶುದ್ಧೀಕರಣ
7️⃣6️⃣ ಕರಿಜೀರಿಗೆ – ರೋಗನಿರೋಧಕ ಶಕ್ತಿ
7️⃣7️⃣ ಸ್ಟೀವಿಯಾ – ನೈಸರ್ಗಿಕ ಸಿಹಿ
7️⃣8️⃣ ರಾಮ ತುಳಸಿ – ಟೀ, ಕಷಾಯ
7️⃣9️⃣ ಕೃಷ್ಣ ತುಳಸಿ – ಶೀತ, ಕೆಮ್ಮು
8️⃣0️⃣ ಕಾಡು ತುಳಸಿ – ರೋಗನಿರೋಧಕ ಶಕ್ತಿ
8️⃣1️⃣ ಹೊಂಗೆ – ತೈಲ, ಚರ್ಮ
8️⃣2️⃣ ಶ್ರೀಗಂಧ – ಸುಗಂಧ, ಆಯುರ್ವೇದ
8️⃣3️⃣ ರಕ್ತಚಂದನ – ಚರ್ಮ, ಪೂಜೆ
8️⃣4️⃣ ರುದ್ರಾಕ್ಷಿ – ಆಧ್ಯಾತ್ಮಿಕ ಬಳಕೆ
8️⃣5️⃣ ನಾಗಲಿಂಗಪುಷ್ಪ – ಪೂಜೆ, ಜನಪದ ಔಷಧ
8️⃣6️⃣ ಅರಳಿ – ಆಧ್ಯಾತ್ಮಿಕ, ಔಷಧೀಯ ಬಳಕೆ
8️⃣7️⃣ ಆಲದ ಮರ – ಜನಪದ ವೈದ್ಯ
8️⃣8️⃣ ಅತ್ತಿ – ಜೀರ್ಣಕ್ರಿಯೆ
8️⃣9️⃣ ನಾಗಕೇಸರಿ – ಆಯುರ್ವೇದ ಔಷಧ
9️⃣0️⃣ ಪೀಪಲ್ – ಶ್ವಾಸಕೋಶ ಆರೋಗ್ಯ
9️⃣1️⃣ ಲಕ್ಷ್ಮೀ ತರು – ತೈಲ, ಬಯೋಡೀಸೆಲ್
9️⃣2️⃣ ಮಹಾಗನಿ – ಬೀಜ, ಮರದ ಮೌಲ್ಯ
9️⃣3️⃣ ದೇವದಾರು – ಆಯುರ್ವೇದ ತೈಲ
9️⃣4️⃣ ಕಕ್ಕೆ ಮರ – ಮಲಬದ್ಧತೆ ನಿವಾರಣೆ
9️⃣5️⃣ ತಮಾಲಪತ್ರೆ – ಅಡುಗೆ, ಜೀರ್ಣಕ್ರಿಯೆ
9️⃣6️⃣ ಕರ್ಪೂರವಳ್ಳಿ – ಕೆಮ್ಮು, ಕಷಾಯ
9️⃣7️⃣ ಗರಗಡ ಸೊಪ್ಪು – ಕೂದಲು ತೈಲ
9️⃣8️⃣ ಬಾಳೆಹೂ – ಮಹಿಳಾ ಆರೋಗ್ಯ
9️⃣9️⃣ ಬಾಳೆದಿಂಡು – ಕಿಡ್ನಿ ಆರೋಗ್ಯ
💯 ತೆಂಗಿನಕಾಯಿ – ಆಹಾರ, ಎಣ್ಣೆ, ಆರೋಗ್ಯ
🌱 ನರ್ಸರಿ • ಮನೆಮದ್ದು • ಆಯುರ್ವೇದ • ಕಿಚನ್ ಗಾರ್ಡನ್ • ನೇರ ಮಾರಾಟ • ರೈತರಿಗೆ ಲಾಭದಾಯಕ ಬೆಳೆಗಳು 🌱

Address

Shankar Nagara
Bangalore
560096

Alerts

Be the first to know and let us send you an email when Karnataka Organic Growers Association posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Organic Growers Association:

Share