15/01/2025
ಗೋವಾ, ಮಾಹಾರಾಷ್ಟ್ರ ಮೀನುಗಾರರಿಗೆ ಸಚಿವರ ಖಡಕ್ ಎಚ್ಚರಿಕೆ
ರಾಜ್ಯದ ಮೀನುಗಾರರ ಬೆನ್ನಿಗೆ ನಿಂತ ಮೀನುಗಾರಿಕೆ, ಬಂದರು ಹಾಗೂ ಒಳನಾದು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ. ಹಲವು ವರ್ಷಗಳಿಂದ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯದ ಮೀನುಗಾರರ ಮೇಲೆ ಹಲ್ಲೆಗಳು ನಡೆಯುತ್ತಿವೆ. 4 ದಿನಗಳ ಹಿಂದೆ ನಮ್ಮ ರಾಜ್ಯದ ಮಲ್ಪೆಯ ಒಂದು ಬೊಟನ್ನು ಗೋವಾದ ಮೀನುಗಾರರು ವಶಪಡಿಸಿಕೊಂಡು ಹಲ್ಲೆ ನಡೆಸಿದ್ದಲ್ಲದೆ, ಅಲ್ಲಿನ ಸರಕಾರ ನಮ್ಮ ಮೀನುಗಾರರ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲು ಮಾಡಿತ್ತು. ಇದನ್ನು ಗಮನಿಸಿದ ಸಚಿವ ಮಂಕಾಳ ವೈದ್ಯ, ಇನ್ನು ಮುಂದೆ ಕರ್ನಾಟಕಕ್ಕೆ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯ ಮೀನುಗಾರರು ಮೀನುಗಾರಿಕೆಗೆ ಬಂದಲ್ಲಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.