21/06/2026
ಸಹೋದರ ಸಮಾಜದವರೆ ಧನ್ಯವಾದಗಳು,
ನಿಮ್ಮ ಅಭಿಮಾನಕ್ಕೆ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದೇ ಸಮಾಜಕ್ಕೆ ಅಥವಾ ಜಾತಿಗೆ ಗುತ್ತಿಗೆಯನ್ನು ನೀಡಲಾಗಿಲ್ಲ ಇವರು ರಾಷ್ಟ್ರದ ಸಮಸ್ತ ನಾಗರಿಕರಿಗೆ ಒಂದು ಬಹುದೊಡ್ಡ ಶಕ್ತಿ ಹಾಗಾಗಿ ಇವರನ್ನಷ್ಟೇ ಅಲ್ಲ ಎಲ್ಲಾ ರಾಷ್ಟ್ರೀಯ ನಾಯಕರುಗಳು ಅವರವರದೇ ಆದ ಕೊಡುಗೆಯನ್ನು ನಮಗೆ ಉಡುಗೊರೆಯಾಗಿ ನೀಡಿದ್ದಾರೆ, ಅವರನ್ನ ಗೌರವಿಸುವುದು ಪೂಜಿಸುವುದು ಹಾಗೆ ಮುಂದಿನ ಪೀಳಿಗೆಯೂ ಸಹ ಇವರನ್ನು ಗೌರವಿಸುವಂತೆ ಮಾಡಿಸುವ ಜವಾಬ್ದಾರಿ ಕೂಡ ಅತಿ ಅವಶ್ಯಕವಾಗಿರುತ್ತದೆ, ಈ ಒಂದು ನಿಟ್ಟಿನಲ್ಲಿ ಇವರುಗಳು ನಮಗೆ ದೇವರು ಸಮಾನ ಈ ದೇವರಿಗೆ ಮಸಿ ಬಳಿಯುವಷ್ಟು ತಿಳುವಳಿಕೆ ಇಲ್ಲದ ವ್ಯಕ್ತಿಗಳು ನಾವು ಆಗಬಾರದು, ಚಂದ್ರು ಎಂಬ ವ್ಯಕ್ತಿ ಒಂದು ವೇಳೆ ನಿಜಕ್ಕೂ ಮಸಿ ಬಳ್ದಿದ್ರೆ ಆ ವ್ಯಕ್ತಿಯಲ್ಲಿ ಮೃಗತ್ವ ಮನೆ ಮಾಡಿದೆ ಎಂಬುದು ಮನವರಿಕೆ ಮಾಡಿಕೊಳ್ಳಬೇಕು, ಯಾವುದೇ ಪಕ್ಷಪಾತವಿಲ್ಲದೆ ತನಿಖೆಯನ್ನು ಮಾಡಿ ತಪ್ಪು ಮಾಡಿದರೆ ಶಿಕ್ಷೆ ಕೊಡಿಸಿ, ಮತ್ತು ತಪ್ಪು ಇರದೇ ಹೋದರೆ ಸನ್ಮಾನಿಸಿ, ಒಂದು ವೇಳೆ ತಪ್ಪೇ ಮಾಡಿದ್ದಾದರೆ! ಅವನಲ್ಲಿ ಇರುವ ಮುರುಗತ್ವವನ್ನ ನಾವು ನೀವು ಎಲ್ಲರೂ ಸೇರಿ ಸರ್ಕಾರದ ಮೂಲಕ ಕಾನೂನು ಪರಿಪಾಲನೆ ಮಾಡುವ ಸಲುವಾಗಿ ತಪ್ಪು ಮಾಡಿದ ವ್ಯಕ್ತಿಗಳಿಗೆ ಸಮಾಲೋಚನೆ ಇನ್ನಿತರ ಮಾರ್ಗಗಳಿಂದ ತಪ್ಪು ಮರುಕಳಿಸದಂತೆ ಕೆಲವು ಆಯಾಮಗಳನ್ನ ಡಾ ಬಾಬಾಸಾಹೇಬರು ಮತ್ತು ಈ ದೇಶದ ಹಿರಿಯರು ನೀಡಿದ್ರೆ ಅವುಗಳಿಗೂ ಸಾರ್ವಜನಿಕವಾಗಿ ಹಣ ಪೋಲು ಮಾಡುತ್ತಿದ್ದೇವೆ . ಈ ಮಾರ್ಗ ಎಲ್ಲರೂ ಒಪ್ಪಬಹುದಾಗಿದೆ. ಇದನ್ನು ಮರೆಮಾಚಿ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಂವಿಧಾನದಲ್ಲಿ ಇಲ್ಲ. ಸ್ವತಃ ಉಪ್ಪಾರ ಜನಾಂಗದವರೇ ಸಹ ಚಂದ್ರು ಮಾಡಿದ್ದು ತಪ್ಪು ಅಂತ ಸಾಭಿತಾದರೆ ಅವನು ಮಾಡಿದ್ದೂ ಸಹ ತಪ್ಪು ಎಂದೇ ತಿಳಿ ಹೇಳಬೇಕಾಗುತ್ತದೆ, ಮತ್ತು ಅವನನ್ನು ದಾರಿಗೆ ತ್ತಾರುವ ಕೆಲಸವನ್ನು ಮಾಡುತ್ತೇವೆ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವನಲ್ಲಿರುವ ಕೀಳರಿಮೆ ಏನು ಮತ್ತು ಆ ಕೀಳರಿಮೆಗೆ ಕಾರಣ ಏನು ಸಮಾಲೋಚನೆ ಮಾಡಿ ಆ ವ್ಯಕ್ತಿಯಲ್ಲೂ ಕೂಡ ಪ್ರೀತಿ ಗೌರವವನ್ನು ಕಂಡು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಯಾಗಲು ಅವನನ್ನ ಪ್ರೇರೇಪಿಸಬೇಕು. ಅವನಿಗೂ ಒಂದು ಅವಕಾಶವನ್ನು ನೀಡಬೇಕು ಒಟ್ಟಿನಲ್ಲಿ ರಾಷ್ಟ್ರ ಮಟ್ಟದ ನಾಯಕರುಗಳನ್ನ ಗೌರವಿಸುವ ಪ್ರೀತಿಸುವ ಗುಣವನ್ನ ನಾವೆಲ್ಲರೂ ಸೇರಿ ಬೆಳೆಸಲು ಶ್ರಮಿಸೋಣ. ಯಾರೂ ಸಹ ಕಾನುನನ್ನು ಕೈಗೆ ತೆಗೆದುಕೊಳ್ಳಬೇಡಿ. ರಾಷ್ಟ್ರೀಯ ನಾಯಕ ಗೌರವಕ್ಕೆ ದಕ್ಕೆ ಹಾಗೂ ಅಪಮಾನ ಮಾಡಿದವರನ್ನು ಉಪ್ಪಾರ ಸಮಾಜ ಸಹಿಸುವುದಿಲ್ಲ, ನ್ಯಾಯದ ಪರವಾಗಿ ಉಪ್ಪಾರ ಸಮಾಜವಿರುತ್ತದೆ.
ಜೈ ಭಗೀರಥ ಜೈ ಭೀಮ್.
ಇಂತಿ ನಿಮ್ಮ
ಭಗೀರಥ Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ
#ಖಂಡನೀಯ