ಭೂಸ್ವಾಧೀನ ವಿರೋಧಿ ಹೋರಾಟ ಚನ್ನರಾಯಪಟ್ಟಣ

  • Home
  • India
  • Bangalore
  • ಭೂಸ್ವಾಧೀನ ವಿರೋಧಿ ಹೋರಾಟ ಚನ್ನರಾಯಪಟ್ಟಣ

ಭೂಸ್ವಾಧೀನ ವಿರೋಧಿ ಹೋರಾಟ ಚನ್ನರಾಯಪಟ್ಟಣ KIADB ಮೂಲಕ ರೈತರ ಫಲವತ್ತಾದ ಭೂಮಿಯನ್ನು ಕಬಳಿಸುತ್ತಿರುವ ಸರ್ಕಾರದ ನೀತಿಗಳನ್ನು ವಿರೋಧಿಸುವ ಹೋರಾಟ
(2)

29/05/2026
ಮಾನ್ಯ ಸಿದ್ದರಾಮಯ್ಯನವರಿಗೆ ಶುಭಾ ವಿದಾಯ...ದೇವನಹಳ್ಳಿ ಭೂಸ್ವಾಧೀನ ವಿಷಯದಲ್ಲಿ ತಡವಾಗಿಯಾದರು ರೈತರ ಪರ ನಿರ್ಣಯ ತೆಗೆದುಕೊಂಡಿರಿ. ರೈತರು ಅದನ್ನ...
28/05/2026

ಮಾನ್ಯ ಸಿದ್ದರಾಮಯ್ಯನವರಿಗೆ ಶುಭಾ ವಿದಾಯ...
ದೇವನಹಳ್ಳಿ ಭೂಸ್ವಾಧೀನ ವಿಷಯದಲ್ಲಿ ತಡವಾಗಿಯಾದರು ರೈತರ ಪರ ನಿರ್ಣಯ ತೆಗೆದುಕೊಂಡಿರಿ. ರೈತರು ಅದನ್ನು ಮರೆಯುವುದಿಲ್ಲ.
ಆದರೆ...
ಬಿಡದಿ, ಜಂಗಮಕೋಟೆ, ಆನೇಕಲ್ ಸೇರಿದಂತೆ ಹಲವು ಭೂಸ್ವಾಧೀನದ ವಿವಾದಗಳನ್ನು ಹಾಗೆಯೇ ಉಳಿಸಿದಿರಿ. ಭೂಸ್ವಾಧೀನ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ತಿದ್ದುಪಡಿ ಮಾಡಿ ದುಡಿಯುವ ಜನರ, ತಳಸಮುದಾಯಗಳ ಪರವಾಗಿ ನಿಲ್ಲುವ ಅವಕಾಶ ನಿಮಗಿತ್ತು, ಆದರೆ ಅದನ್ನು ತಾವು ಮಾಡಲೇ ಇಲ್ಲ.
ಅದೇಕೋ ಕಳೆದ ಅವದಿಯಂತೆ ಈ ಅವದಿಗೆ ಗಟ್ಟಿದ್ವನಿಯ ಮುಖ್ಯಮಂತ್ರಿಯಾಗಿ ಕಾಣಲೇ ಇಲ್ಲ.
ಆದರೂ....
ಕನಿಷ್ಟ, ಪ್ರಜಾಪ್ರಭುತ್ವದ ಅರಿವಿದ್ದ ಒಬ್ಬ ಮಾಸ್ ಲೀಡರ್ ನೀವು. ಸಮಾಜವಾದ, ಪ್ರಜಾಪ್ರಭುತ್ವ, ಸಂವಿಧಾನ ಅಂತೆಲ್ಲ ತಾವು ಮಾತನಾಡುತ್ತಿದ್ದಿರಿ. ತಮ್ಮ ಮಾತುಗಳಲ್ಲಾದರೂ ಬಂದು ಹೋಗುತ್ತಿದ್ದ ಬುದ್ದ, ಬಸವ, ಅಂಬೇಡ್ಕರ್, ಕುವೆಂಪು ಮುಂತಾದವರು ಇನ್ನೂ ಮುಂದೆ ಯಾರಲ್ಲಾದರೂ ಕಾಣುವುದು ಅನುಮಾನ.
ಆ... ಜೊತೆಗೆ ಕೆಲವೊಮ್ಮೆಯಾದರೂ ತಾವು ತೋರಿದ ಜನಪರ ಕಾಳಜಿ ಮತ್ತು ನಿಲುವುಗಳನ್ನು ಕರ್ನಾಟಕ ನೆನಪಿಟ್ಟುಕೊಳ್ಳುತ್ತದೆ...
Siddaramaiah

10/05/2026

ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ ಇದೆ ಎಂದು ಸುಳ್ಳು ಹೇಳಿ ಸಚಿವ ಸಂಪುಟ ಅಂತಿಮ ಅಧಿಸೂಚನೆಗೆ ಹೊರಡಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಇಂದು ಬಿಡದಿಯ ರೈತರು ಬೈರಮಂಗಲ ಸರ್ಕಲ್ ನಲ್ಲಿ ರಸ್ತೆ ತಡೆ ನಡೆಸುತ್ತಿದ್ದಾರೆ.

ಬಳ್ಳಾರಿ ರೈತರೊಂದಿಗೆ ನಾವಿದ್ದೇವೆ....ಕುಡಿತಿನಿ ರೈತರ ಹೋರಾಟಕ್ಕೆ ನಮ್ಮ ಬೆಂಬಲ...
27/04/2026

ಬಳ್ಳಾರಿ ರೈತರೊಂದಿಗೆ ನಾವಿದ್ದೇವೆ....
ಕುಡಿತಿನಿ ರೈತರ ಹೋರಾಟಕ್ಕೆ ನಮ್ಮ ಬೆಂಬಲ...

ನಿಮ್ಮ ಹುಟ್ಟು ಇಲ್ಲಿನ ಹಲವರಿಗೆ ಹಬ್ಬ. ನೀವು ಹುಟ್ಟಿದ ಕಾರಣಕ್ಕೆ ದ್ವನಿ ಇಲ್ಲದ ಅದೆಷ್ಟೋ ಜನರ ದ್ವನಿಯಾದಿರಿ. ನಾಳೆಯೇ ಇಲ್ಲದವರಿಗೆ ನಂಬಿಕೆ ಕೊ...
04/04/2026

ನಿಮ್ಮ ಹುಟ್ಟು ಇಲ್ಲಿನ ಹಲವರಿಗೆ ಹಬ್ಬ. ನೀವು ಹುಟ್ಟಿದ ಕಾರಣಕ್ಕೆ ದ್ವನಿ ಇಲ್ಲದ ಅದೆಷ್ಟೋ ಜನರ ದ್ವನಿಯಾದಿರಿ. ನಾಳೆಯೇ ಇಲ್ಲದವರಿಗೆ ನಂಬಿಕೆ ಕೊಟ್ಟಿದ್ದೀರಿ,ಕೈ ಹಿಡಿದು ನಡೆಸಿದ್ದೀರಿ. ನೋವುಂಡವರನ್ನು ಪ್ರತಿನಿಧಿಸಿದ್ದೀರಿ...
ಹೀಗೆ ಸದಾ ಜನರ ಜೊತೆಗಿರಿ, ಜನನಾಯಕರಾಗಿರಿ. ಶುಭಾಶಯಗಳು ಸಾರ್....

 #ಸಾವಿರಾರು_ನದಿಗಳು #ದೇವನಹಳ್ಳಿರೈತಹೋರಾಟದಕಥನಗಳುಸಾವಿರಾರು ನದಿಗಳು - ಸಂಪಾದನೆ: ಕಾರಳ್ಳಿ ಶ್ರೀನಿವಾಸ್‌, ರಮೇಶ್‌ ಚೀಮಾಚನಹಳ್ಳಿ, ಚಂದ್ರು ತರ...
26/03/2026

#ಸಾವಿರಾರು_ನದಿಗಳು
#ದೇವನಹಳ್ಳಿರೈತಹೋರಾಟದಕಥನಗಳು
ಸಾವಿರಾರು ನದಿಗಳು - ಸಂಪಾದನೆ: ಕಾರಳ್ಳಿ ಶ್ರೀನಿವಾಸ್‌, ರಮೇಶ್‌ ಚೀಮಾಚನಹಳ್ಳಿ, ಚಂದ್ರು ತರಹುಣಿಸೆ, ರವಿ ಈಚಲಮರ
ಪ್ರಕಾಶಕರು: ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ.
ಒಳಪುಟ ವಿನ್ಯಾಸ : ಕೃಷ್ಣ ಬಾದರ್ಲಿ
ಮುಖಪುಟ ವಿನ್ಯಾಸ : ಸರೋವರ್‌ ಬೆಂಕೀಕೆರೆ
ಬೆಲೆ: ರೂ. 200/-(ರಿಯಾಯಿತಿ ಲಭ್ಯ)
ಆಯ್ದ ಭಾಗ...
"ನಮ್ಮ ಭೂಮಿಯನ್ನು ನಾವು ಬಿಡುವುದಿಲ್ಲ, ಬೇಕಾದರೆ ನಮ್ಮ ಪ್ರಾಣ ತೆಗೆದುಕೊಳ್ಳಿ" ಎಂದು ಅವರೆತ್ತಿದ ಗಟ್ಟಿದನಿ, ಹೋರಾಟಕ್ಕೆ ಶಕ್ತಿ ತುಂಬಿತು.ಜೈಲು ವಾಸ, ಅಧಿಕಾರಿಗಳ ಬೆದರಿಕೆ, ಸರ್ಕಾರದ ಉಪೇಕ್ಷೆ ಯಾವುದಕ್ಕೂ ಬಗ್ಗದೆ ಈ ಮಹಿಳೆಯರು ನಿರಂತರವಾಗಿ ಧರಣಿ ಸತ್ಯಾಗ್ರಹದಲ್ಲಿ ಪಾತ್ರವಹಿಸಿದ್ದು, ಸಮಾಜದ ಅಂತಃಕರಣವನ್ನು ತಾಕಿತು, ಸರ್ಕಾರದ ಕಲ್ಲೆದೆಯನ್ನೂ ಕರಗಿಸಬಲ್ಲ ಅಸ್ತ್ರವಾಯಿತು. ಹೋರಾಟಕ್ಕಿಳಿದಿದ್ದ ರೈತ ಮಹಿಳೆಯರ ಪಾಲಿಗೆ ಇದು ಕೇವಲ ಲಾಭ-ನಷ್ಟದ ಪ್ರಶ್ನೆಯಾಗಿರಲಿಲ್ಲ ಅಥವಾ ತಲೆತಲಾಂತರಗಳ ಕೌಟುಂಬಿಕ ಪ್ರತಿಷ್ಟೆಯನ್ನು ರಕ್ಷಣೆಯವಿಷಯವೂ ಆಗಿರಲಿಲ್ಲ,ಈ ಹೋರಾಟವು ರೈತಮಹಿಳೆಯರ ಅಸ್ತಿತ್ವ ಮತ್ತು ಘನತೆಯ ರಕ್ಷಣೆಗಾಗಿಯೂ ಕೂಡಾ ಆಗಿತ್ತು. ದಿನನಿತ್ಯದ ಬದುಕಿನ ಜಂಜಾಟಗಳನ್ನೂ ನಿರ್ವಹಿಸುತ್ತಲೇ ಸತತವಾಗಿ ಹೋರಾಟದ ಭಾಗವಾಗಿ ಸಕ್ರಿಯರಾಗಿದ್ದ ಈ ರೈತ ಮಹಿಳೆಯರನ್ನು ಮಾತನಾಡಿಸಿದಾಗ, “ಭೂಮಿಯನ್ನು ಕಳೆದುಕೊಂಡರೆ ಪುರುಷರು ನಗರಕ್ಕೆ ಹೋಗಿ ಕೆಲಸ ಮಾಡಬಹುದು, ಆದರೆ ತಲೆಮಾರುಗಳಿಂದ ಮಣ್ಣನ್ನೇ ನಂಬಿದ ಮಹಿಳೆಯರು ಎಲ್ಲಿಗೆ ಹೋಗಬೇಕು? ಅರ್ಧ ಕುಂಟೆ ಜಮೀನಿದ್ದರೆ ಹೂವು ತರಕಾರಿ ಬೆಳೆದು ಹೊಟ್ಟೆ ಹೊರೆಯಬಹುದು,ಒಂದು ಕುಂಟೆ ಭೂಮಿಯಿದ್ದರೆ ಒಂದೆರಡು ಹಸು ಕಟ್ಟಿ ಅದಕ್ಕೆ ಬೇಕಿರುವ ಮೇವು ಬೆಳೆದು ಬದುಕು ನಡೆಸಬಹುದು ಅಥವಾ ಒಂದ್ಹತ್ತು ಕುರಿ ಮೇಯಿಸಿ ಜೀವನ ನಿರ್ವಹಿಸಬಹುದು, ಇನ್ನಷ್ಟು ಭೂಮಿಯಿದ್ದರೆ ಕಷ್ಟಪಟ್ಟು ಬೇಸಾಯ ಮಾಡಿ ಅನುಕೂಲವಾಗಿಯೇ ಬದುಕಬಹುದು, ಬದುಕಿಗೆ ಇಂತಹ ಭದ್ರತೆ ನೀಡುವ ಭೂಮಿಯೇ ಇಲ್ಲವಾದರೆ ಏನು ಮಾಡುವುದು?” ಎಂಬ ಪ್ರಶ್ನೆಯೇ ಅವರನ್ನು ಹೋರಾಟಕ್ಕೆಳೆತಂದ ಆಲೋಚನೆಯಾಗಿತ್ತು.ಕೊನೆಗೂ ಜುಲೈ 2025ರಲ್ಲಿಕರ್ನಾಟಕ ಸರ್ಕಾರವು ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಘೋಷಿಸಿದ್ದರೆ, ಅದರ ಹಿಂದೆ ಈ ರೈತ ಮಹಿಳೆಯರ ದಿಟ್ಟ ಹೋರಾಟದ ಪಾಲೂ ಇದೆ.
• ಮಲ್ಲಿಗೆ ಸಿರಿಮನೆ

ಶುಭಾಶಯಗಳು ಸರ್
26/03/2026

ಶುಭಾಶಯಗಳು ಸರ್

Address

Channarayanapattana, Devanahalli
Bangalore
562110

Telephone

+919902967307

Website

Alerts

Be the first to know and let us send you an email when ಭೂಸ್ವಾಧೀನ ವಿರೋಧಿ ಹೋರಾಟ ಚನ್ನರಾಯಪಟ್ಟಣ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಭೂಸ್ವಾಧೀನ ವಿರೋಧಿ ಹೋರಾಟ ಚನ್ನರಾಯಪಟ್ಟಣ:

Share