14/04/2026
*ಮನೆ ಮನೆಗೆ ಶಂಕರ, ಮನ ಮನದಲ್ಲಿ ಶಂಕರ*
ಭಕ್ತಿಯ ಪರಾಕಾಷ್ಠೆಯ ವಾರವಿದು! ತಮ್ಮ ತಮ್ಮ ದೇವಸ್ಥಾನ ಹಾಗೂ ಸಂಘಟನೆಗಳಲ್ಲಿ ಶಂಕರ ಜಯಂತಿಯನ್ನು ಆಚರಿಸಲು ಭಕ್ತರು ತೋರುತ್ತಿರುವ ಉತ್ಸಾಹವು ಒಂದು ಮಹಾನ್ ಆಧ್ಯಾತ್ಮಿಕ ಚಳುವಳಿಯಾಗಿ ಮಾರ್ಪಟ್ಟಿದೆ. ಜಗದ್ಗುರುಗಳ ಸಂದೇಶವು ಮನೆ ಮನೆಯನ್ನು ತಲುಪುತ್ತಿದೆ. ಈ ಪವಿತ್ರ ಕಾರ್ಯವು ಜಗದ್ಗುರು ಆದಿ ಶಂಕರಾಚಾರ್ಯರ ಅನುಗ್ರಹ ಹಾಗೂ ಶೃಂಗೇರಿಯ ಉಭಯ ಜಗದ್ಗುರುಗಳ ಆಶೀರ್ವಾದದಿಂದ ಮಾತ್ರವೇ ಸಾಧ್ಯವಾಗಿದೆ. 🙏