15/04/2026
🙏🏻🌹*ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ, ಸಂರಕ್ಷಣೆ ಮತ್ತು ಕೃಷಿ, ಮೌಲ್ಯವರ್ಧನೆ, ಹಾಗೂ ಸುಸ್ಥಿರ ಬಳಕೆ* - ಈ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಮತ್ತು ಕ್ಷೇತ್ರ ಭೇಟಿ, ಹುಬ್ಬಳ್ಳಿ & ಕಪ್ಪತ್ಗುಡ್ಡ ದಲ್ಲಿ.
💧🌳💧
🌳 ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ, ಡೋಣಿ-ಗದಗ, ದಾಕ್ಷಾಯಿಣಿ, ಬಿ. ಜಾಬಶೆಟ್ಟಿ ಫೌಂಡೇಶನ್, ರಾಮದುರ್ಗ, ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯ ಬೆಂಗಳೂರು, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ ಗದಗ, ತೋಟಗಾರಿಕಾ ವಿಶ್ವ ವಿದ್ಯಾಲಯ ಬಾಗಲಕೋಟ, & ಇತರೆ ಸಂಸ್ಥೆಗಳೊಂದಿಗೆ ಆಯೋಜಿಸಿದ ಕಾರ್ಯಕ್ರಮ ಇದಾಗಿದೆ.
🌳 *ಯಾರು ಭಾಗವಹಿಸಬಹುದು? :-*
👉🏿 ಔಷಧಿ ಗಿಡಮೂಲಿಕೆಗಳನ್ನು ಬೆಳೆದು - ಮೌಲ್ಯವರ್ಧನೆ ಮಾಡಿ ತಮ್ಮ ಆದಾಯವನ್ನ ಹೆಚ್ಚಿಸಿಕೊಳ್ಳ ಬಯಸುವ ರೈತರು
👉🏿 ಔಷಧಿ ಸಸ್ಯಗಳ ನರ್ಸರಿ ಮಾಡ ಬಯಸುವವರು
👉🏿 ಆಯುರ್ವೇದ ಮತ್ತು ನಾಟಿ ವೈದ್ಯರು
👉🏿 ಔಷದ ತಯಾರಿಕಾ ಕಂಪನಿಗಳು
👉🏿 ಈ ರಂಗದಲ್ಲಿ ಕೆಲಸ ಮಾಡುವ ಸಂಶೋಧನಾ ಪ್ರಿಯರು
👉🏿. ಆಯುರ್ವೇದ ಮತ್ತು ಪಾರಂಪರಿಕ ವೈದ್ಯಕೀಯ ಪದ್ಧತಿಯಲ್ಲಿ ಅಭ್ಯಾಸ ಮಾಡುತಿರುವ ವಿದ್ಯಾರ್ಥಿಗಳು
👉🏿. ಕೃಷಿ, ತೋಟಗಾರಿಕಾ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಗಳ ವಿದ್ಯಾರ್ಥಿಗಳು, ಹಾಗೂ ಆಸಕ್ತ ಸಾರ್ವಜನಿಕರು
👉🏿 ಕಪ್ಪತ್ ಗುಡ್ಡದ ಮಹತ್ವವನ್ನು ಅರಿಯ ಬಯಸುವವರಿಗೆ / ಚಾರಣ ಪ್ರಿಯರಿಗೆ
👉🏿 ಗಿಡಮೂಲಿಕೆಗಳನ್ನ ನಿತ್ಯ ಆಹಾರದಲ್ಲಿ ಸೇವಿಸಿ ಸಹಜ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆನ್ನುವ ಜನ ಸಾಮಾನ್ಯರು
🌱🌱🌱🌱🌱🌱🌱
🌳*ಮೊದಲ ಎರಡು ದಿವಸ*:- ದಿನಾಂಕ 25 & 26 ನೇ ಏಪ್ರೀಲ್, 2026 ರಂದು ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಬಾಯೋಟೆಕ್ನಾಲಜಿ ವಿಭಾಗದಲ್ಲಿರುವ ಕೆ.ಎಲ್.ಇ. ಟೆಕ್ ಪ್ರೇಕ್ಷಾಗೃಹದಲ್ಲಿ (Auditorium) ನಲ್ಲಿ ಏರ್ಪಡಿಸಲಾಗಿದೆ. ಇಲ್ಲಿ ಕಾರ್ಯಕ್ರಮದ ಉದ್ದೇಶದ ಹಿನ್ನೆಲೆಯ ತಜ್ಞರಿಂದ ಮಾತುಗಳ & ಚರ್ಚೆ.
ಔಷಧೀಯ ಸಸ್ಯಗಳ ಬೆಳೆಯ ಬಗ್ಗೆ, ಮೌಲ್ಯವರ್ಧನೆ, ಔಷಧೀಯ ಸಸ್ಯಗಳ ಮಾರುಕಟ್ಟೆ', ವಿವಿಧ ರೋಗ ಪರಿಸ್ಥಿತಿಗಳಿಗೆ ಔಷಧಿ ಸಸ್ಯಗಳ ಆಯ್ಕೆ', ಮುಂತಾದುವು ಅಧಿವೇಶನದಲ್ಲಿ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಸಂಶೋಧಕರಿಗಾಗಿ ಹಾಗೂ ವಿದ್ಯಾರ್ಥಿಗಳಿಗಳಿಂದ ಸಂಶೋಧನಾ ಪ್ರಬಂಧಗಳ ಮಂಡನೆಯನ್ನು ಆಯೋಜಿಸಲಾಗಿದೆ.
🌳 *ಮೂರನೆಯ ದಿನ*:- 27 ನೇ ಏಪ್ರೀಲ್, 2026:- ಕಡಕೋಳ ಗ್ರಾಮದ ಸಾಧಕ ರೈತ *ಶ್ರೀಯುತ ದೇವರಡ್ಡಿ ಅಗಸನಕೊಪ್ಪ* ಇವರ ಸಾವಯವ ತೋಟಕ್ಕೆ ಕ್ಷೇತ್ರ ಭೇಟಿ. ನಂತರ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ, ಡೋಣಿ-ಗದಗದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಕಪ್ಪತಗುಡ್ಡ ವೀಕ್ಷಣೆ & ಸಮಾರೂಪ ಸಮಾರಂಭ.
🌱🌱🌱🌱🌱🌱🌱🌱
ಮಾನ್ಯರೆ,
ನಿಗದಿತ ಶುಲ್ಕ ಪಾವತಿಸಿ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.
*Link for Registration: https://forms.gle/xkyBzNxfm8EQpEfR9
🌱🌱🌱🌱🌱🌱🌱🌱
*Farmer/Students/Research Scholars:-*
ಎಲ್ಲಾ ಮೂರು ದಿನಗಳಿಗೆ (25 ರಿಂದ 27):- Rs 1050/-
ಕೇವಲ ಮೊದಲ ಎರಡು ದಿನಕ್ಕೆ (25 & 26):-Rs. 700/-
ಕೇವಲ ಕೊನೆಯ ದಿವಸ (27.04.2026):- Rs. 350/-
🌱🌱🌱🌱🌱🌱🌱🌱
*Doctors/Scientists/Faculties/Officers*
ಎಲ್ಲಾ ಮೂರು ದಿನಗಳಿಗೆ :(25 ರಿಂದ 27): - Rs. 1580/-
ಕೇವಲ ಮೊದಲ ಎರಡು ದಿನಕ್ಕೆ (25 & 26) :- Rs. 1180/-
ಕೇವಲ ಕೊನೆಯ ದಿವಸ (27.04.2026):- Rs 400/-
🌱🌱🌱🌱🌱🌱🌱
*ನೋಂದಾವಣೆಗೆ ಕೊನೆಯ ದಿನ: 15 ಎಪ್ರಿಲ್ 2026*
ನೋಂದಣಿ ಕಡ್ಡಾಯ. ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳದ ವ್ಯಕ್ತಿಗಳಿಗೆ ಪ್ರವೇಶಾವಕಾಶವನ್ನು ಕಡ್ಡಾಯವಾಗಿ ನೀಡಲಾಗುವುದಿಲ್ಲ.
*ಒಟ್ಟು 500 ವ್ಯಕ್ತಿಗಳಿಗೆ ಮಾತ್ರ ಭಾಗವಹಿಸುವ ಅವಕಾಶ.* ಮೊದಲು ಬಂದ 500 ಜನರಿಗೆ (200 ರೈತರು ಹಾಗೂ ಇತರ 300 ವ್ಯಕ್ತಿಗಳಿಗೆ ಮಾತ್ರ)
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
*ಭಾಲಚಂದ್ರ ಜಾಬಶೆಟ್ಟಿ ಪ್ರಧಾನ ಸಂಚಾಲಕರು*
9741888365
*ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮದ ಬ್ರೋಚರ್ ನೋಡುವುದು*
ಧನ್ಯವಾದಗಳು
We are organizing a Three Days National Conference on Conservation, Cultivation, Value Addition & Sustainable Utilization of Medicinal Plants – Edition II on 24th, 25th, and 26th April 2026 at KLE Technological University, B.V.B. Campus, Vidyanagar, Hubli.