Nilaya Foundation

Nilaya Foundation Nilaya Foundation, ನಿಲಯ ಫೌಂಡೇಶನ್

30/10/2024

ನಮಸ್ಕಾರ,

ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬ *ಸುಖ ಸಮೃದ್ಧಿ ಮತ್ತು ನೆಮ್ಮದಿಯನ್ನು ತರಲಿ* ಎಂದು ಆಶಿಸುವೆ.

ನಿಲಯ ಫೌಂಡೇಶನ್ನಿನ ಕಾರ್ಯ ಭರದಿಂದ ನಡೆಯುತ್ತಿದೆ. ಸಂಕ್ಷಿಪ್ತ ವಿವರ ನಿಮ್ಮ ಅವಗಾಹನೆಗಾಗಿ 🙏

1. ಈಗಾಗಲೇ *ವಿಜಯಪುರ, ಧಾರವಾಡ ಮತ್ತು ಬೆಂಗಳೂರಿನಲ್ಲಿ 164 ವಿದ್ಯಾರ್ಥಿಗಳಿಗೆ 36.5 ಲಕ್ಷದ ವಿದ್ಯಾರ್ಥಿ ವೇತನ* ವಿತರಣೆಯಾಗಿದೆ. ಭಾವಚಿತ್ರಗಳು ಕೆಳಗೆ ಇವೆ.

2. ಈ ವರ್ಷದ ಒಟ್ಟು ಗುರಿ 240 ಮಿಕ್ಕಿ ವಿದ್ಯಾರ್ಥಿಗಳು ಮತ್ತು 54 ಲಕ್ಷ ವಿದ್ಯಾರ್ಥಿವೇತನ.

3. ದಾನಿಗಳ ಸಹಾಯದಿಂದ ಆಗಲೇ 40 ಲಕ್ಷ ಹಣ ಸಂಗ್ರಹವಾಗಿದೆ. *ಗುರಿ ತಲುಪಲು ಇನ್ನೂ 14 ಲಕ್ಷ ಬಾಕಿ ಇದೆ*. ಆದಷ್ಟು ಬೇಗನೆ ಉಳಿದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ವಿತರಣೆ ಮಾಡುವ ಮನಸ್ಸಿದೆ.

4. ಅದಕ್ಕಾಗಿ ದಯವಿಟ್ಟು ವಿದ್ಯಾರ್ಥಿ ವೇತನದ ಅವಶ್ಯಕತೆಯನ್ನು ಪೂರೈಸಲು *ತಾವು ದಯವಿಟ್ಟು ಸಹಾಯ ಮಾಡಿ ಮತ್ತು ಇನ್ನುಳಿದವರನ್ನು ಕೂಡ ಪ್ರೇರೇಪಿಸಿ* ಎಂದು ಪ್ರಾರ್ಥಿಸುವೆ.

5. ತಮ್ಮ ಕಾಣಿಕೆಯನ್ನು ಕೆಳ ಕಾಣಿಸಿದ *ಕ್ಯೂಆರ್ ಕೋಡ್ ಅಥವಾ 6364673746@upi ಯುಪಿಐ ಹ್ಯಾಂಡಲ್* ದ್ವಾರಾ ಕಳಿಸಬಹುದು. ಹಣ ಕಳುಹಿಸಿದ ತಕ್ಷಣ ಒಂದು ಚಿಕ್ಕ ಸಂದೇಶ ಕಳುಹಿಸಿದರೆ ಅನುಕೂಲವಾಗುವುದು.

ಏನಾದರೂ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ದೂರವಾಣಿ ಮಾಡಿ ಅಥವಾ ವಾಟ್ಸಪ್ ಸಂದೇಶ ಕಳುಹಿಸಿ.

ನಿಮ್ಮ ಸಹಾಯಕ್ಕಾಗಿ ಅನಂತ ಧನ್ಯವಾದಗಳು,

26/10/2024

ನಮಸ್ಕಾರ,

🙏 *ಆದರದ ಆಮಂತ್ರಣ* 🙏

ನಿಲಯ ಫೌಂಡೇಶನ್ನಿನ 2024ರ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬರುವ ಭಾನುವಾರ ಬೆಳಿಗ್ಗೆ ನಡೆಯಲಿದೆ.

*ಉಪಸ್ಥಿತಿ ಮತ್ತು ಮಾರ್ಗದರ್ಶನ* :

1. *ಶ್ರೀ ವಿಶ್ವನಾಥ ಸಿ. ಆರ್*,
ಉಪಾಧ್ಯಕ್ಷರು (ನಿವೃತ್ತ), ವೋಲ್ವೋ ಇಂಡಿಯಾ ಕಂಪನಿ, ಬೆಂಗಳೂರು.

2. *ಶ್ರೀ ಪ್ರಮೋದ ಕುಲಕರ್ಣಿ*,
ಸಾಥೀ, ಪ್ರೇರಣಾ ಮುಂತಾದ ಸಂಸ್ಥೆಗಳ ಮಾರ್ಗದರ್ಶಕರು, ಬೆಂಗಳೂರು. ರಾಷ್ಟ್ರಪತಿಗಳಿಂದ ಪುರಸ್ಕೃತರು.

3. *ಶ್ರೀ ಶ್ರೀಪಾದ ಸಿಂಗನಮಲ್ಲಿ*
ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಮಾಧ್ವ ಮಂಡಲ, ಬೆಂಗಳೂರು.

*ಸ್ಥಳ* : ಶ್ರೀ ವಿಶ್ವೇಶತೀರ್ಥ ಸಭಾಭವನ, ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ, ಬೆಂಗಳೂರು.

*ಸಮಯ* ಬೆಳಿಗ್ಗೆ 10:00 ಗಂಟೆ, ರವಿವಾರ, 27-ಅಕ್ಟೋಬರ್.

ಎಲ್ಲರೂ ನಿಶ್ಚಿತ ಸಮಯಕ್ಕೆ 10 ನಿಮಿಷ ಮುಂಚಿತವಾಗಿ ಉಪಸ್ಥಿತರಿರಬೇಕೆಂದು ಪ್ರಾರ್ಥನೆ.

ಧನ್ಯವಾದಗಳು
ನಿಲಯ ಫೌಂಡೇಶನ್
9448064123
9845968032
*_______________________*
Namaste,

🙏 *You are cordially invited* 🙏

Nilaya Foundation invites you to 2024 scholarship distribution program on Sunday, 27th October.

*AUGUST PRESENCE and GUIDANCE*

1. *Shri Vishwanath C R*
Vice President and Site Manager (Retd.)
Volvo India Pvt Ltd. India.

2. *Shri Pramod Kulkarni*
Mentor SAATHI, PRERANA. Rashtrapati Awardee.

3. *Shri Shripad Singanamalli*,
General Secretary, Akhil Bharat Madhwa Maha Mandala, Bengaluru.

*VENUE* : Poornaprajna Vidyapeetha, Katriguppe, Bengaluru.

*TIME* : 10.00 AM. SUNDAY, 27-Oct.

*Request everyone to be present 10 minutes before scheduled TIME.*

Looking forward to meet you all.

With high regards,
Nilaya Foundation.
9845968032
9448064123

ನಿಲಯ ಫೌಂಡೇಶನ್ನಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮಸ್ಥಳ:  ಪ್ರಹ್ಲಾದ ವಿದ್ಯಾರ್ಥಿ ನಿಲಯ ಮಾಳಮಡ್ಡಿ, ಧಾರವಾಡ.
14/12/2023

ನಿಲಯ ಫೌಂಡೇಶನ್ನಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ
ಸ್ಥಳ: ಪ್ರಹ್ಲಾದ ವಿದ್ಯಾರ್ಥಿ ನಿಲಯ ಮಾಳಮಡ್ಡಿ, ಧಾರವಾಡ.

14/12/2023

ನಿಲಯ ಬಂಧುಗಳೇ, ಹಿತೈಷಿಗಳೇ ಹಾಗೂ ಪೋಷಕರೇ, ಎಲ್ಲರಿಗೂ ನಮಸ್ಕಾರಗಳು.

ಇವತ್ತು ಧಾರವಾಡದ ಮಾಳಮಡ್ಡಿಯಲ್ಲಿರುವ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ನಿಲಯ ಫೌಂಡೇಶನ್ನಿನ ಶಿಷ್ಯವೇತನ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅತಿಥಿಗಳು ಮಕ್ಕಳಿಗೆ ಅಕ್ಷರ ಮತ್ತು ಸಂಸ್ಕಾರದ ಕುರಿತು ಮಾತನಾಡಿದರು. ವಿಶೇಷವಾಗಿ ಶ್ರೀ ಸುರೇಶ ಕುಲಕರ್ಣಿಯವರು ಮಕ್ಕಳಿಗೆ ಚಿತ್ರ ಬಿಡಿಸಿ ಪಾಠ ಹೇಳಿದ್ದು ಸಭಿಕರ ಮೆಚ್ಚುಗೆ ಪಡೆಯಿತು. ಇವತ್ತು ೧೨೦ ಜನ ( ವಿದ್ಯಾರ್ಥಿ ಮತ್ತು ಪಾಲಕರು) ಭಾಗವಹಿಸಿ ೬೮ ಮಕ್ಕಳು ಶಿಷ್ಯ ವೇತನ ಪಡೆದರು. ಹುಬ್ಬಳ್ಳಿ - ಧಾರವಾಡ ಅವಳಿ ನಗರದಿಂದ ಒಟ್ಟು 76 ಜನ ವಿದ್ಯಾರ್ಥಿಗಳು 14ವರೆ ಲಕ್ಷ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.

ನಿಲಯದ ಹಂ.ವೆ.ಕಾಖಂಡಕಿಯವರು ಡಾ.ಗಿರಿಧರ ಕಿನ್ನಾಳವರು, ಅನಿಲ‌ ಹರಿಹರ ಮತ್ತು ವಕೀಲರಾದ ಸಂಜಯ ಕುಲಕರ್ಣಿ ಭಾಗವಹಿಸಿ ಯಶಸ್ವಿಯಾಗಿ ನಡೆಯಲು ಬೆಂಬಲಿಸಿದರು. ಗೆಳೆಯ ರಂಗನಾಥ‌ ಯಾದವಾಡ ಅನಿವಾರ್ಯ ಕಾರಣದಿಂದ ಬರಲಾಗದಿದ್ದರು ಪರೋಕ್ಷವಾಗಿ ಈ ಕಾರ್ಯಕ್ರಮಕ್ಕೆ ಬೆನ್ನಲಬು ಆಗಿದ್ದನು.

ವಿದ್ಯಾರ್ಥಿಗಳ‌ ಮೊಗದಲ್ಲಿನ‌ ಸಂತಸ ನೋಡಿ ನಮ್ಮೆಲ್ಲರ ಪರಿಶ್ರಮದ ನೋವು ಮರೆಯಾಯಿತು*

ಚಿತ್ರ - ಲೇಖನ : ವಿದ್ಯಾಸಾಗರ ದೀಕ್ಷಿತ

08/12/2023

ನಮಸ್ಕಾರ,

*ಆದರದ ಆಮಂತ್ರಣ*

ನಿಲಯ ಫೌಂಡೇಶನ್ನಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಾಳೆ ಶನಿವಾರ ಸಾಯಂಕಾಲ ನಡೆಯಲಿದೆ.

*ಉಪಸ್ಥಿತಿ ಮತ್ತು ಮಾರ್ಗದರ್ಶನ* :

1. ಶ್ರೀ ವಿ. ಕೆ. ಹರಿದಾಸ,
ಲೆಕ್ಕ ಪರಿಶೋಧಕರು & ಖಜಾಂಚಿ, ಅಖಿಲ ಭಾರತ ಮಾಧ್ವ ಮಹಾಮಂಡಲ, ಬೆಂಗಳೂರು.

2. ಶ್ರೀ ಮಧುಸೂದನ ಕುಲಕರ್ಣಿ,
ಹಿರಿಯ ಅಧಿಕಾರಿ, ಅಮೆಜಾನ್.

3. ಶ್ರೀ ಪ್ರಶಾಂತ್ ಜೋರಾಪುರ,
ಡೈರೆಕ್ಟರ್, ಮ್ಯಾನ್ ಹಾಟನ ಅಸೋಸಿಯೇಟ್ಸ್

4. ಶ್ರೀ ಅನಂತ ಕುಲಕರ್ಣಿ,
ಉನ್ನತ ಅಧಿಕಾರಿ, ಇಂಜಿನಿಯರಿಂಗ್ ವಿಭಾಗ, ರೋಕೊ ಕಂಪನಿ.

*ಸ್ಥಳ* : ಶ್ರೀ ವಿಶ್ವೇಶತೀರ್ಥ ಸಭಾಭವನ, ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ, ಬೆಂಗಳೂರು.

*ಸಮಯ* ಸಾಯಂಕಾಲ 4:30 ಗಂಟೆ, ಶನಿವಾರ, 9-ಡಿಸೆಂಬರ್.

ಎಲ್ಲರೂ ನಿಶ್ಚಿತ ಸಮಯಕ್ಕೆ 10 ನಿಮಿಷ ಮುಂಚಿತವಾಗಿ ಉಪಸ್ಥಿತರಿರಬೇಕೆಂದು ಪ್ರಾರ್ಥನೆ.

ಧನ್ಯವಾದಗಳು
ನಿಲಯ ಫೌಂಡೇಶನ್
9448064123
9845968032
*_______________________*
Namaste,

*You are cordially invited*

Nilaya Foundation invites you to scholarship distribution program on Saturday, 9th December.

*AUGUST PRESENCE and GUIDANCE*

1. Sri VK Haridas. Chartered Accountant and Treasurer, Akhila Bharat Madhwa Mahamandala.

2. Sri Madhusudan Kulkarni,
Head of Strategic Pursuits - AWS Global Services.

3. Shri Prashant Jorapur, Director, Manhattan Associates.

4. Shri Anant Kulkarni, Senior Engineering Manager, Roku.

*VENUE* : Poornaprajna Vidyapeetha, Katriguppe, Bengaluru.

*TIME* : 4:30 PM. SATURDAY, 9-DEC.

*Request everyone to be present 10 minutes before scheduled TIME.*

Looking forward to meet you all.

With high regards,
Nilaya Foundation.
9845968032
9448064123

ಉತ್ತಮ ಅಂಕ ಗಳಿಸಿರುವ ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ ಎಸ್ ತಿಮ್ಮಯ್ಯ ನಗದು ಪ್ರಶಸ್ತಿಗೆ ಅರ್ಜಿ ಆಹ್ವಾನ.
31/07/2023

ಉತ್ತಮ ಅಂಕ ಗಳಿಸಿರುವ ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ ಎಸ್ ತಿಮ್ಮಯ್ಯ ನಗದು ಪ್ರಶಸ್ತಿಗೆ ಅರ್ಜಿ ಆಹ್ವಾನ.

*ನಿಲಯ ಫೌಂಡೇಶನ್ ವಿದ್ಯಾರ್ಥಿವೇತನ 2023 : ಅರ್ಜಿ ಆಹ್ವಾನ* ನಮಸ್ಕಾರ, *ನಿಲಯ ಫೌಂಡೇಶನ್*  ಈ ವರ್ಷದ (2023-24) ವಿದ್ಯಾರ್ಥಿ ವೇತನಕ್ಕಾಗಿ ಅರ್...
20/07/2023

*ನಿಲಯ ಫೌಂಡೇಶನ್ ವಿದ್ಯಾರ್ಥಿವೇತನ 2023 : ಅರ್ಜಿ ಆಹ್ವಾನ*

ನಮಸ್ಕಾರ,

*ನಿಲಯ ಫೌಂಡೇಶನ್* ಈ ವರ್ಷದ (2023-24) ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನ ಆರ್ಥಿಕ ಅನಾನುಕೂಲತೆ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ. ಪಿಯುಸಿ ಮತ್ತು ಮೇಲ್ಪಟ್ಟ ತರಗತಿಗಳಲ್ಲಿ ಓದುವ ವಿದ್ಯಾರ್ಥಿಗಳು ಅರ್ಹರು. ಯಾರಿಗೆ ಸರ್ಕಾರದ ಅಥವಾ ಬೇರೆ ರೀತಿಯ ಆರ್ಥಿಕ ಸಹಾಯ / ಸೌಲಭ್ಯವಿಲ್ಲವೋ ಅವರಿಗೆ ಪ್ರಾಧಾನ್ಯತೆ ಕೊಡಲಾಗುವುದು.

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13 ಆಗಸ್ಟ್ 2023*

ಅರ್ಜಿಯನ್ನು ಕೆಳಕಂಡ ಲಿಂಕ್ ಮುಖಾಂತರ ಆನ್ಲೈನ್ ನಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ವಿವರಗಳನ್ನು ಚೆನ್ನಾಗಿ ಓದಿ.

http://www.nilayafoundation.org/Scholarships.html

ಆರ್ಥಿಕ ಸಹಾಯದ ಅವಶ್ಯಕತೆ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆ ಈ ಸಂದೇಶವನ್ನು ಹಂಚಿಕೊಳ್ಳಿ.

ಧನ್ಯವಾದಗಳೊಂದಿಗೆ,
ನಿಲಯ ಫೌಂಡೇಶನ್
Mob : 6364673746
[email protected]

*ತಮ್ಮ ಗಮನಕ್ಕೆ* : ಕಳೆದ ವರ್ಷ (2022-23 ರಲ್ಲಿ ) 244 ವಿದ್ಯಾರ್ಥಿಗಳಿಗೆ ಒಟ್ಟು 45 ಲಕ್ಷದ ರೂಪಾಯಿಯ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ. ಈ ಎಲ್ಲಾ ಸಾಧನೆಗೆ ಉದಾರವಾಗಿ ಸಹಾಯ ಮಾಡಿ ಸಹಕರಿಸಿದ *ಎಲ್ಲಾ ದಾನಿಗಳಿಗೆ ಅನಂತ ಕೃತಜ್ಞತೆಗಳು* 🙏.

ವಿವರಗಳಿಗೆ ನಿಲಯ ಫೌಂಡೇಶನ್ ಜಾಲತಾಣ ನೋಡಿ.

Scholarship for students studying in Finance and Business courses. Eligible please apply.
11/07/2023

Scholarship for students studying in Finance and Business courses. Eligible please apply.

ರಮಣಕಾಂತ್ ಮುಂಜಲ್ ಸ್ಕಾಲರ್‌ಶಿಪ್ 2023

ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಸರೋಜಿನಿ ದಾಮೋದರನ್‌ ಪ್ರತಿಷ್ಠಾನದ ವತಿಯಿಂದ 2023ನೇ ಸಾಲಿನ ‘ವಿದ್ಯಾಧನ್‌‘ ವಿದ್ಯಾರ್ಥಿ ವೇತನ...
10/07/2023

ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಸರೋಜಿನಿ ದಾಮೋದರನ್‌ ಪ್ರತಿಷ್ಠಾನದ ವತಿಯಿಂದ 2023ನೇ ಸಾಲಿನ ‘ವಿದ್ಯಾಧನ್‌‘ ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿಷ್ಠಾನವು ಕರ್ನಾಟಕ , ಕೇರಳ, ತಮಿಳುನಾಡು, ಪುದುಚೇರಿ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ, ಒಡಿಶಾ, ದೆಹಲಿ, ಲಡಾಖ್, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹೀಗಿವೆ: ಕುಟುಂಬದ ವಾರ್ಷಿಕ ಆದಾಯ ₹ 2 ಲಕ್ಷಕ್ಕಿಂತ ಕಡಿಮೆ ಇರಬೇಕು. 2023ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾಗಿರಬೇಕು. 90ಕ್ಕಿಂತ ಅಧಿಕ ಅಥವಾ 9CGPA (ಶೇ 75 ಅಥವಾ 7CGPA ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು) ಅರ್ಜಿ ಸಲ್ಲಿಸಲು ಅರ್ಹರು.

ಅವಶ್ಯವಿರುವ ದಾಖಲೆಗಳು: ಆದಾಯ ಪ್ರಮಾಣ ಪತ್ರ, 10ನೇ ತರಗತಿಯ ಅಂಕಪಟ್ಟಿ, ವಿದ್ಯಾರ್ಥಿಯ ಭಾವಚಿತ್ರ, ವಿದ್ಯಾರ್ಥಿಯ ಹೆಸರಿನ ಇ–ಮೇಲ್ ಐಡಿ.

ವಿದ್ಯಾರ್ಥಿಗಳು ಉಚಿತವಾಗಿ ವಿದ್ಯಾಧನ್‌ ವೆಬ್‌ಸೈಟ್‌ www.vidyadhan.org ಜುಲೈ 31ರ ಒಳಗೆ ಅರ್ಜಿ ಸಲ್ಲಿಸಬಹುದು.

–ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9663517131

ಸರೋಜಿನಿ ದಾಮೋದರನ್‌ ಪ್ರತಿಷ್ಠಾನದ ವತಿಯಿಂದ 2023ನೇ ಸಾಲಿನ ‘ವಿದ್ಯಾಧಾನ್‌‘ ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಹಿಂದುಳಿದ ವಿದ್ಯ...

Hostel admission at Bengaluru. Interested please make note...
28/05/2023

Hostel admission at Bengaluru. Interested please make note...

Address

4th Cross, 9th Main, Srinivas Nagar, BSK
Bangalore
560050

Alerts

Be the first to know and let us send you an email when Nilaya Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nilaya Foundation:

Share