04/12/2025
ಹೊನ್ನವಳ್ಳಿ ಕಾರ್ಯಕ್ರಮದ ಯಶಸ್ಸಿಗೆ ದುಡಿದ ಕನ್ನಡದ ಮನಸುಗಳಿಗೆ *_ಧನ್ಯವಾದಗಳು_*
*ಸಾಲುಮರದ ತಿಮ್ಮಕ್ಕ ವೇದಿಕೆ* ಅಡಿಯಲ್ಲಿ ಆಯೋಜನೆ ಮಾಡಲಾಗಿದ್ದ
ಕಲ್ಪತರು ನಾಡಿನ ಕನ್ನಡದ ಹಬ್ಬಕ್ಕೆ *ಸುಮಾರು 5 ಸಾವಿರ ಜನಗಳು ಆಸನಗಳು ತುಂಬಿ ಮತ್ತು ನಿಂತುಕೊಂಡ್ಡು ಸಾವಿರ ಜನರು ಕಾರ್ಯಕ್ರಮ ವೀಕ್ಷಿಸಿದ್ದಾರೆ*
ದಿನಾಂಕ :- *30-11-2025*
ಸ್ಥಳ :- *ಹೊನ್ನವಳ್ಳಿ*
*ಡಾ || ಪುನೀತ್ ರಾಜ್ ಕುಮಾರ್ ಕನ್ನಡದ ಧ್ವಜ ಕಟ್ಟೆ ಉದ್ಘಾಟನೆ ಮತ್ತೆ ಮೊದಲ ಧ್ವಜಾರೋಹಣ* ಬೆಳಿಗ್ಗೆ 10:45 ಕ್ಕೆ ತಿಪಟೂರ್ *ಡಿ,ವೈ,ಎಸ್,ಪಿ ಶ್ರೀಮತಿ ಜಯಲಕ್ಷ್ಮಿ ಮೇಡಂ* ರವರು ನೆರವೇರಿಸಿದರು.ನಂತರ ಎಲ್ಲಾ ಕನ್ನಡ ಕಾರ್ಯಕರ್ತರಿಗೆ *ಸಿಹಿ ಹಂಚಿ* ಸಂಭ್ರಮಿಸಲಾಯಿತು.
*ತಿಪಟೂರ್ ಡಿ,ವೈ,ಎಸ್,ಪಿ ಶ್ರೀಮತಿ ಜಯಲಕ್ಷ್ಮಿ ಮೇಡಂ ರವರಿಗೆ ಸನ್ಮಾನ*
ನಂತರ ಹೊನ್ನವಳ್ಳಿ ಗ್ರಾಮ ಪಂಚಾಯತಿಯ ಸದಸ್ಯರುಗಳು ಡಾ||ಪುನೀತ್ ರಾಜ್ ಕುಮಾರ್ ರವರ ಭಾವ ಚಿತ್ರಕ್ಕೆ ಪುಷ್ಪ ಮಾಲಿಕೆ ಹಾಗೂ ಪುಷ್ಪರ್ಚನೆ ನೆರವೇರಿಸಿದರು. ಬಂದಿದ್ದ ಮಂಜುನಾಥ್,ಮಂಜುಳ ರವರು, ದೊಡ್ಡೇಗೌಡರು, ಸುರೇಶಣ್ಣ, ಸದಸ್ಯರುಗಳಿಗೆ ಸನ್ಮಾನ ಮಾಡಲಾಯಿತು.
ಮತ್ತು ಸಂಜೆ ಕಾರ್ಯಕ್ರಮ ಸುಮಾರು 7:00 ಗಂಟಗೆ ಪ್ರಾರಂಭ ಆಗಬೇಕಿತ್ತು ಆದರೆ ನಮ್ಮ ಭಾಗದ ಜನಗಳು ಊಟ ಮುಗಿಸಿ 9 ಗಂಟಗೆ ಬಂದ್ದು ಆಸನಗಳನ್ನ ಸ್ವೀಕರಿಸಿದರು,ಇದರಿಂದ್ದಾಗಿ
*ವೇದಿಕೆ ಕಾರ್ಯಕ್ರಮ* ಮುಖ್ಯವಾದ ಅಂಶ,ಅದನ್ನ ಅರಿತಿದ್ದ ನಾವುಗಳು ಬಂದಂತಹ ಅತಿಥಿಗಳಾದ *ವಿಶೇಷ ಆಹ್ವಾನಿತರು ಶ್ರೀ ನಿಖಿತ್ ರಾಜ್ ಮೌರ್ಯ ರವರು, ಶ್ರೀ ಷಡಕ್ಷರಿ ರವರು,ಶ್ರೀ ಲೋಕೇಶ್ವರ ರವರು, ಶ್ರೀ kt ಶಾಂತಕುಮಾರ್ ರವರು, ಶ್ರೀ ಅಶ್ವಥ್ ನಾರಾಯಣ್, ಶ್ರೀ ಡಾ// ಶ್ರೀಧರ್ ಹಾಗೂ ಹಲವು ಮುಖಂಡರುಗಳಿಗೆ ವೇದಿಕೆಗೆ ಕರೆದ್ದು ಸಾಲುಮರದ ತಿಮ್ಮಕ್ಕ ವೇದಿಕೆ ಅಡಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ಪ್ರಾರಂಭಿಸಿ* , ಹಲವು ಗಣ್ಯರ ಕನ್ನಡ ಜಾಗೃತಿ ಭಾಷಣದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು,
ತದನಂತರ ಸನ್ಮಾನಿತರಿಗೆ ಸನ್ಮಾನ, *ವರದಿಗಾರರು ನಂಜಪ್ಪ ರವರು, ಪವನ್ ಡಾಕ್ಟರ್, ಶಿಲ್ಪಿಗಳು ಆನಂದಣ್ಣ ರವರಿಗೆ ಸನ್ಮಾನಿಸಲಾಯಿತು*
ಮುಖ್ಯವಾದ ಪ್ರಶಸ್ತಿ ಪ್ರಧಾನ ಅಂದರೆ
*ಪುನೀತಾ ಶ್ರೀ ಪ್ರಶಸ್ತಿ ಕೆಪಿಸಿಸಿ ಸದಸ್ಯರು ಯೋಗೇಶ್ ರವರಿಗೆ ನೀಡಿ, ಸನ್ಮಾನಿಸಲಾಯಿತು,*
*ಸಾಮಾಜಿಕ ಕಾರ್ಯಕ್ರಮ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳು ಡಾ// ಮಧುಸೂದನ್ ರವರ ಮತ್ತು ಹನುಮಂತ್ ರಾಜ್ ಅರಸ್ ತಂದೆ ರವರು ರಾಮಣ್ಣ ಕೊಟ್ಟಿರುತ್ತಾರೆ.*
ವೇದಿಕೆ ಕಾರ್ಯಕ್ರಮ 10:00 ಗಂಟೆಗೆ ಮಕ್ತಾಯಗೊಳಿಸಿ,
ಹೆಸರಾಂತ ಕಾಮಿಡಿ *ಕಿಲಾಡಿಗಳು, ಸರಿಗಮಪ, ಮಿಮಿಕ್ರಿ ಗೋಪಿ, DKD ನೃತ್ಯ,* ಪ್ರಾರಂಭಿಸಿ ಮಧ್ಯ *ರಾತ್ರಿ 1:30* ಕ್ಕೆ ಕಾರ್ಯಕ್ರಮ ಮುಕ್ತಾಯ ಆಯಿತು,
ಕಾರ್ಯಕ್ರಮಕ್ಕೆ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ಕೊಟ್ಟಿರುವ ಎಲ್ಲಾ ಕನ್ನಡ ಮನಸುಗಳಿಗೆ *ಧನ್ಯವಾದಗಳು* .
ಇಂತಿ ನಿಮ್ಮ ವಿಶ್ವಾಸಿ
*ಏಜಸ್*
*ಯುವ ರಾಜ್ಯಾಧ್ಯಕ್ಷರು*