ಕನ್ನಡ ಮನಸುಗಳು ಕರ್ನಾಟಕ

ಕನ್ನಡ ಮನಸುಗಳು ಕರ್ನಾಟಕ ಕನ್ನಡ ಮನಸುಗಳು ಕರ್ನಾಟಕ
DRB3/SOR/337/2022-23

03/04/2026

ನಿಮ್ಮ ದೊಡ್ಡ ಮನಸ್ಸಿನಿಂದ, ನೀವು ಸಣ್ಣ ಸಹಾಯ ಮಾಡಿದರೆ, ಅಭಿಯಾನಕ್ಕೆ ನೇರವಾಗುತ್ತದೆ...
#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಮನಸುಗಳುಕರ್ನಾಟಕ

01/04/2026

#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಮನಸುಗಳುಕರ್ನಾಟಕ

ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂತಹ ಸಮಯದಲ್ಲಿ   ಯುವಜನತೆ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ತೋರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗ...
22/03/2026

ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂತಹ ಸಮಯದಲ್ಲಿ ಯುವಜನತೆ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ತೋರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ ಸರಿ, ಕೆಲವು ವರ್ಷಗಳ ಹಿಂದೆಯೇ ಇಂತಹ ಬೆಳವಣಿಗೆಗಳು ಸಾಧ್ಯವಾಗಬೇಕಿತ್ತು, ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗುವ ಅವಶ್ಯಕತೆ ತುಂಬಾ ಇತ್ತು ಈಗಲೂ ಕೂಡ ಇದೆ,

ಇತ್ತೀಚಿಗಂತೂ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವುದು ಟ್ರೆಂಡಿಂಗ್ ನಲ್ಲಿರೋದನ್ನ ನಾವು ಕಾಣಬಹುದು, ಹಾಗೆಯೇ ನಮ್ಮ ತಂಡವು ಹಲವು ವರ್ಷಗಳ ಹಿಂದೆಯೇ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಶುರುಮಾಡಿದ್ದು ಆ ನಿಟ್ಟಿನಲ್ಲಿ ಶ್ರಮದಾನ ಮಾಡುತ್ತಿರುವುದನ್ನು ಸ್ಫೂರ್ತಿಯಾಗಿ ತೆಗೆದು ಕೊಂಡ ಯುವ ಮನಸುಗಳಿಂದ ಎಷ್ಟೋ ಸರ್ಕಾರಿ ಶಾಲೆಗಳು ಬಣ್ಣದ ಮೆರಗು ಪಡೆದುಕೊಂಡಿವೆ..

ದಾನಿಗಳ ನೆರವಿನಿಂದ ನಮ್ಮ ತಂಡವು ಇಲ್ಲಿಯವರೆಗೆ 32 ಸರ್ಕಾರಿ ಶಾಲೆ ಉಳಿಸಿ ಅಭಿಯಾನದಿಂದ 66 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವುದರ ಮೂಲಕ ನಮ್ಮ ಶ್ರಮದಾನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ,

ಮುಂದಿನ ತಿಂಗಳು ಅಂದರೆ ಏಪ್ರಿಲ್ 11 ಮತ್ತು 12 ನೇ ತಾರೀಕು, ಸರ್ಕಾರಿ ಶಾಲೆ ಉಳಿಸಿ ಅಭಿಯಾನ 33,
67ನೇ ಶಾಲೆಯಾಗಿ ನಾಲ್ಕು ಜ್ಞಾನ ಪೀಠ ಪುರಸ್ಕಾರ ಪಡೆದ ಕವಿಗಳ ನೆಲವಾದ ಧಾರವಾಡಕ್ಕೆ 20 ಕಿಲೋಮೀಟರ್ ಹತ್ತಿರದಲ್ಲಿರುವ ಶಿಂಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ, ನಮ್ಮ ತಂಡದ ಸರ್ಕಾರಿ ಶಾಲೆ ಉಳಿಸಿ ಅಭಿಯಾನವೆಂಬ ಕನ್ನಡ ಪರ ಅಳಿಲು ಸೇವೆಗೆ ದಾನಿಗಳು ನಿಮ್ಮಿಂದ ಸಾಧ್ಯವಾದಷ್ಟು ದೇಣಿಗೆ ಕೊಟ್ಟು ಸಹಕರಿಸಿ, ನೀವು ಕೊಡುವ ಒಂದು ರೂಪಾಯಿ ಕೂಡ ಅಭಿಯಾನಕ್ಕೆ ಬಹಳ ಮುಖ್ಯ,

ಒಂದುವೇಳೆ ನೀವು ಹಣದ ರೂಪದಲ್ಲಿ ದೇಣಿಗೆ ಕೊಡಲು ಸಾಧ್ಯವಾಗದಿದ್ದರೆ, ಶಾಲೆಗೆ ಅಗತ್ಯವಿರುವ ಬಣ್ಣಗಳು ಮತ್ತು ಅಗತ್ಯವಸ್ತುಗಳನ್ನು ಕೊಡಿಸಬಹುದು..

ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ನಾವು 🙏💛❤️

-ಕನ್ನಡ ಮನಸುಗಳು ಕರ್ನಾಟಕ

ನಾನು ನಾನಲ್ಲ, ನಾನು ಕನ್ನಡ.
ಕನ್ನಡವೆಂದರೆ ಹೃದಯದ ನಾದ.
- ದ.ರಾ.ಬೇಂದ್ರೆ

#ಕನ್ನಡಮನಸುಗಳುಕರ್ನಾಟಕ
#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಿಗ #ಹೆಮ್ಮೆಯಕನ್ನಡಿಗ #ನಮ್ಮಕನ್ನಡ
#ಕನ್ನಡಪ್ರೇಮ #ಕನ್ನಡಗೌರವ #ಕನ್ನಡಸಂಸ್ಕೃತಿ





,

ಶನಿವಾರ ನಡೆದ “ಕನ್ನಡ ಮನಸುಗಳು ಕರ್ನಾಟಕ & ನಮ್ಮ ನಾಡು ನಮ್ಮ ಆಳ್ವಿಕೆ” ಸ್ವಚ್ಛತಾ ಹಾಗೂ ಬಣ್ಣ ಬಳಿಯುವ ಕಾರ್ಯ ಯಶಸ್ವಿಯಾಗಿ ನೆರವೇರಿತು. ಕಸ ವಿ...
15/03/2026

ಶನಿವಾರ ನಡೆದ “ಕನ್ನಡ ಮನಸುಗಳು ಕರ್ನಾಟಕ & ನಮ್ಮ ನಾಡು ನಮ್ಮ ಆಳ್ವಿಕೆ” ಸ್ವಚ್ಛತಾ ಹಾಗೂ ಬಣ್ಣ ಬಳಿಯುವ ಕಾರ್ಯ ಯಶಸ್ವಿಯಾಗಿ ನೆರವೇರಿತು.
ಕಸ ವಿಲೇವಾರಿ ಮಾಡಿದ ಪಂಚಾಯಿತಿಯವರಿಗೆ, ಹಾಗೂ ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. 🙏

ವಿಶೇಷವಾಗಿ ಈ ಕಾರ್ಯಕ್ರಮದ ಪ್ರೇರಣೆ ಹಾಗೂ ಸಹಕಾರ ನೀಡಿದ ಚಿತ್ರ ಸಾಹಿತಿಗಳಾದ ಕವಿ ರಾಜ್ ಸರ್ ರವರಿಗೆ ನಮ್ಮ ತಂಡದ ಪರವಾಗಿ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇವೆ, ನಿಮ್ಮ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಕಾರ್ಯ ಅರ್ಥಪೂರ್ಣವಾಗಿ ನೆರವೇರಿತು, ನೀವು ಕಾರ್ಯಕ್ರಮವನ್ನು ನಮ್ಮ ತಂಡದ ಜೊತೆ ಸೇರಿ ಮಾಡಿದ್ದೂ ನಮ್ಮ ತಂಡಕ್ಕೆ ಹೆಚ್ಚು ಖುಷಿ ಕೊಟ್ಟಿದೆ,

ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಜೊತೆಯಾಗೋಣ ಧನ್ಯವಾದಗಳು 💛❤️🥰

#ಸ್ವಚ್ಛತಾ #ಕಾರ್ಯ


#ಕನ್ನಡಮನಸುಗಳು
#ನಮ್ಮನಾಡು_ನಮ್ಮಆಳ್ವಿಕೆ

ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ ಅವಳೊಂದು ಮಹಾಶಕ್ತಿ...-ಕುವೆಂಪು  #ಮಹಿಳಾ  #ದಿನದ  #ಶುಭಾಶಯಗಳು  #ಕನ್ನಡಮನಸುಗ...
08/03/2026

ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ
ಮಾನುಷಿಯಲ್ಲ, ಅಬಲೆಯೂ ಅಲ್ಲ
ಅವಳೊಂದು ಮಹಾಶಕ್ತಿ...

-ಕುವೆಂಪು

#ಮಹಿಳಾ #ದಿನದ #ಶುಭಾಶಯಗಳು
#ಕನ್ನಡಮನಸುಗಳುಕರ್ನಾಟಕ

18/02/2026

#ಕನ್ನಡಮನಸುಗಳುಕರ್ನಾಟಕ

15/02/2026

#ಕನ್ನಡಮನಸುಗಳುಕರ್ನಾಟಕ
#ಸರ್ಕಾರಿಶಾಲೆಉಳಿಸಿಅಭಿಯಾನ

#ಕನ್ನಡ

ನೀವು ಸಹಾಯ ನೀಡುವ ಮೊದಲಿನ ಶಾಲೆಯ ಚಿತ್ರಣಕ್ಕೂ, ನಿಮ್ಮ ಸಹಾಯ ಮತ್ತು ನಮ್ಮ ತಂಡದ ಸ್ವಯಂ ಸೇವಕರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಕರು ...
14/02/2026

ನೀವು ಸಹಾಯ ನೀಡುವ ಮೊದಲಿನ ಶಾಲೆಯ ಚಿತ್ರಣಕ್ಕೂ, ನಿಮ್ಮ ಸಹಾಯ ಮತ್ತು ನಮ್ಮ ತಂಡದ ಸ್ವಯಂ ಸೇವಕರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಊರಿನ ಗ್ರಾಮಸ್ಥರ ಶ್ರಮದ ನಂತರ, ಶಾಲೆಯ ಚಿತ್ರಣಕ್ಕೂ ಇರುವ ವ್ಯತ್ಯಾಸವನ್ನು ನೀವೇ ಕಾಣಬಹುದು....

ಶಾಲೆಯ ಗೋಡೆಗಳು ಮಾತನಾಡುತ್ತಿವೆ
ನಮ್ಮ ಶ್ರಮದ ಕಥೆ ಹೇಳುತ್ತಿವೆ

ಬಣ್ಣವಿಲ್ಲದ ಗೋಡೆಯ ಕನಸುಗಳಿಗೆ
ಬಣ್ಣದ ಸ್ಪರ್ಶ ನೀಡಲು ಸಹಾಯ ನೀಡಿದ ಎಲ್ಲರಿಗೂ ಧನ್ಯವಾದಗಳು. ಮತ್ತು ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ನಮ್ಮೊಂದಿಗೆ ಜೊತೆಯಾಗುತ್ತಿರುವ ಸಾಮರಸ್ಯ ಟ್ರಸ್ಟ್ ತಂಡಕ್ಕೂ ಧನ್ಯವಾದಗಳು 🥰🙏

ಸರ್ಕಾರಿ ಶಾಲೆಗಳು ಉಳಿಯಲಿ
ಮಕ್ಕಳ ಭವಿಷ್ಯವು ಬೆಳಗಲಿ
ಕನ್ನಡ ಮೊಳಗಲಿ... 💛❤️🙏

#ಕನ್ನಡಮನಸುಗಳುಕರ್ನಾಟಕ
#ಸರ್ಕಾರಿಶಾಲೆಉಳಿಸಿಅಭಿಯಾನ

ಮತ್ತೊಂದು ಶಾಲೆಗೆ ಬಣ್ಣ ಹಚ್ಚುವ ಕಾರ್ಯ ಯಶಸ್ವಿಯಾಯ್ತು...ಬದಲಾವಣೆಯನ್ನು ಕಾಣಲು,ನಿರಂತರ ಸೇವೆಯಿಂದ  ಮಾತ್ರ ಸಾಧ್ಯವೇ ಹೊರತು, ಬರೀ ಬಾಯಿಮಾತಿನಿ...
11/02/2026

ಮತ್ತೊಂದು ಶಾಲೆಗೆ ಬಣ್ಣ ಹಚ್ಚುವ ಕಾರ್ಯ ಯಶಸ್ವಿಯಾಯ್ತು...

ಬದಲಾವಣೆಯನ್ನು ಕಾಣಲು,
ನಿರಂತರ ಸೇವೆಯಿಂದ ಮಾತ್ರ ಸಾಧ್ಯವೇ ಹೊರತು,
ಬರೀ ಬಾಯಿಮಾತಿನಿಂದಲ್ಲ...

ಸರ್ಕಾರಿ ಶಾಲೆಗಳು ಉಳಿಯ ಬೇಕು ಎಂದು ಕೊಂಡರೆ ಸಾಲದು.. ಅದಕ್ಕೆ ಪೂರಕವಾಗಿ ನಿರಂತರ ಕಾರ್ಯಗಳನ್ನು ನಾವು ಮಾಡಬೇಕು...

ಬಣ್ಣ ಬಳಿದರೆ ಶಾಲೆ ಉಳಿಯುತ್ತಾ...?
ಸರ್ಕಾರಿ ಶಾಲೆಗಳು ಜೀವಂತವಾಗಿದೆ ಅಂತ ಯಾರಿಗೆ ವಿಚಾರ ಮುಟ್ಟಬೇಕೋ ಅವರಿಗೆ ಮುಟ್ಟುತ್ತದೆ, ಮುಂದಿನ ದಿನಗಳಲ್ಲಿ ಅವರು ಏನು ಮಾಡಬೇಕು ಅದನ್ನು ಸರಿಯಾಗಿ ಮಾಡುತ್ತಾರೆ...

ಮುಖ್ಯವಾಗಿ ಶಾಲೆಯ ಮಕ್ಕಳ ಮುಖದಲ್ಲಿ ಖುಷಿ ಹೆಚ್ಚಾಗುತ್ತದೆ.. ನಾವು ಮಾಡಬೇಕಿರುವ ಕೆಲಸವನ್ನು ಬೇರೆ ಯಾರೋ ಮಾಡ್ತಿದ್ದಾರೆ ಅಂತ ಕೆಲವರಿಗೆ ಅರಿವಾಗುತ್ತದೆ..

ಈ ನಿಟ್ಟಿನಲ್ಲಿ ನಮ್ಮ ತಂಡದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ 32, ಶಾಲೆ 66, ಹಿರೇಬೂದನೂರು ಸರಕಾರಿ ಪ್ರೌಢ ಶಾಲೆಯನ್ನು ಆಯ್ಕೆ ಮಾಡಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ದೇಣಿಗೆ ಸಂಗ್ರಹಣೆ ಮಾಡಲು ಶುರುಮಾಡಿದೆವು,

ನಮ್ಮೊಂದಿಗೆ ಆ ಶಾಲೆಯ ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಕೊಡ ದೇಣಿಗೆ ಸಂಗ್ರಹಣೆ ಮಾಡಿ ನಮ್ಮ ತಂಡದೊಂದಿಗೆ ಸೇರಿ ಬಣ್ಣ ಬಳಿದು ತಮ್ಮ ಶಾಲೆಗೆ ಹೊಸ ಕಳೆಯನ್ನು ಕೊಡಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು,

ನಮ್ಮ ಈ ಅಭಿಯಾನಕ್ಕೆ ದೇಣಿಗೆ ನೀಡಿದ ಎಲ್ಲ ದಾನಿಗಳಿಗೂ ಹಾಗೂ ಸ್ವಯಂ ಸೇವಕರಿಗೂ ಈ ನಿಮ್ಮ ಕನ್ನಡ ಮನಸುಗಳು ಕರ್ನಾಟಕ ತಂಡದ ವತಿಯಿಂದ ಧನ್ಯವಾದಗಳು 🙏

ಸದಾ ಹೀಗೆ ಕನ್ನಡಕ್ಕಾಗಿ ಜೊತೆಯಾಗೋಣ

ಕನ್ನಡಿಗರು ಕನ್ನಡಕ್ಕೆ ತೋರುವ ಒಲವೇ
ಕನ್ನಡಕ್ಕೆ ಇರುವ ಬಲವು..💛❤️

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

#ಕನ್ನಡಮನಸುಗಳುಕರ್ನಾಟಕ
#ಸರ್ಕಾರಿಶಾಲೆಉಳಿಸಿಅಭಿಯಾನ

08/02/2026
ಪ್ರಯಾಣ ಶುರು.. 🤩 #ಸರ್ಕಾರಿಶಾಲೆಉಳಿಸಿಅಭಿಯಾನ  #ಕನ್ನಡಮನಸುಗಳುಕರ್ನಾಟಕ
06/02/2026

ಪ್ರಯಾಣ ಶುರು.. 🤩
#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಮನಸುಗಳುಕರ್ನಾಟಕ

Address

ಕನ್ನಡ ಮನಸುಗಳು ಕಚೇರಿ #೧೯೭ ನೆಟ್ಟಕಲ್ಲಪ್ಪ ವೃತ್ತ ಬಸವನಗುಡಿ ಬೆಂಗಳೂರು
Bangalore
560004

Telephone

+919148652017

Website

Alerts

Be the first to know and let us send you an email when ಕನ್ನಡ ಮನಸುಗಳು ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕನ್ನಡ ಮನಸುಗಳು ಕರ್ನಾಟಕ:

Share