31/07/2026
ನಾವೆಲ್ಲರೂ ಒಗ್ಗಟ್ಟಿನಲ್ಲಿ ಭಾರತೀಯರು, ಆದರೆ ಒಬ್ಬಂಟಿ ಕನ್ನಡಿಗರಾಗಿದ್ದೇವೆಯೇ...?
ಈ ಪ್ರಶ್ನೆ ಇಂದು ಹಲವಾರು ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಮನಸ್ಸಿನಲ್ಲಿ ಮೂಡಿರಬಹುದು.
ನಮ್ಮದೇ ಭಾರತ ದೇಶದಲ್ಲಿ, ಅದರಲ್ಲೂ ನಮ್ಮ ಕರ್ನಾಟಕ ರಾಜ್ಯದಲ್ಲಿ, ನಮ್ಮ ಸಹೋದರ ರಾಜ್ಯಗಳಿಂದ ಬಂದಿರುವ ಅನೇಕರು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಆದರೆ ಹಲವಾರು ಕನ್ನಡಿಗ ಯುವಕರು ತಮ್ಮ ವಿದ್ಯಾರ್ಹತೆಗೆ ಮತ್ತು ಸಾಮರ್ಥ್ಯಕ್ಕೆ ತಕ್ಕ ಉದ್ಯೋಗವನ್ನು ಪಡೆಯಲು ಇನ್ನೂ ಹೋರಾಡುತ್ತಿದ್ದಾರೆ.
ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಒಂದು ವಿಷಯ ಸ್ಪಷ್ಟ—ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವೆ ನೇರ ಸಂಪರ್ಕ ಹಾಗೂ ಸರಿಯಾದ ಮಾಹಿತಿ ತಲುಪುವ ವೇದಿಕೆಗಳ ಅಗತ್ಯವಿದೆ. ಇದೇ ಉದ್ದೇಶದಿಂದ ಕನ್ನಡ ಮನಸುಗಳು ಕರ್ನಾಟಕ ತಂಡ ಹಾಗೂ ಉದ್ಯೋಗ ನಿಮಿತ್ತಂ ವತಿಯಿಂದ ಮೊದಲ ಮತ್ತು ಪುಟ್ಟ ಪ್ರಯತ್ನವಾಗಿ "ಉದ್ಯೋಗ ಮೇಳ-2026" ಆಯೋಜಿಸಲಾಗಿದೆ.
ನಮ್ಮ ತಂಡವು ಇಲ್ಲಿಯವರೆಗೆ ಸುಮಾರು 69 ಸರ್ಕಾರಿ ಶಾಲೆಗಳಿಗೆ ದಾನಿಗಳ ಸಹಕಾರದೊಂದಿಗೆ ಸುಣ್ಣ-ಬಣ್ಣ ತುಂಬುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದೆ. ಜೊತೆಗೆ ಪರಿಸರ ಅಭಿಯಾನ, ಕನ್ನಡ ಜಾಗೃತಿ ಅಭಿಯಾನ, ಕಾಡಿನ ಜನರಿಗೆ ಆಸರೆ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಇದೀಗ ಕನ್ನಡಿಗ ಯುವಕರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಕನ್ನಡಿಗರಿಗಾಗಿಯೇ ಈ ಉದ್ಯೋಗ ಮೇಳ ಎಂಬ ಹೊಸ ಹೆಜ್ಜೆಯನ್ನು ಇಡುತ್ತಿದ್ದೇವೆ.
ಈ ಉದ್ಯೋಗ ಮೇಳಕ್ಕೆ ನಿಮ್ಮೆಲ್ಲರ ಬೆಂಬಲ ದೊರೆತು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ *ಎಲ್ಲ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು* ಒಂದೇ ವೇದಿಕೆಗೆ ತರುವ ಮಹತ್ತರ ಉದ್ಯೋಗ ಮೇಳಗಳನ್ನು ಆಯೋಜಿಸುವ ಸಂಕಲ್ಪ ನಮ್ಮದಾಗಿದೆ.
ನಾವು ಕನ್ನಡಿಗರು... ಹೌದು
ನಾವು ಭಾರತೀಯರು... ಹೌದು
ಕನ್ನಡವೇ ಸತ್ಯ... ಕನ್ನಡವೇ ನಿತ್ಯ...
– 🙏 ಕನ್ನಡ ಮನಸುಗಳು ಕರ್ನಾಟಕ
#ಕನ್ನಡ #ನಾಡು
#ಉದ್ಯೋಗ #ಮೇಳ
#ಕನ್ನಡಿಗರಿಗಾಗಿ