ಕನ್ನಡ ಮನಸುಗಳು ಕರ್ನಾಟಕ

ಕನ್ನಡ ಮನಸುಗಳು ಕರ್ನಾಟಕ ಕನ್ನಡ ಮನಸುಗಳು ಕರ್ನಾಟಕ
DRB3/SOR/337/2022-23

ನಾವೆಲ್ಲರೂ ಒಗ್ಗಟ್ಟಿನಲ್ಲಿ ಭಾರತೀಯರು, ಆದರೆ ಒಬ್ಬಂಟಿ ಕನ್ನಡಿಗರಾಗಿದ್ದೇವೆಯೇ...?ಈ ಪ್ರಶ್ನೆ ಇಂದು ಹಲವಾರು ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಮನಸ...
31/07/2026

ನಾವೆಲ್ಲರೂ ಒಗ್ಗಟ್ಟಿನಲ್ಲಿ ಭಾರತೀಯರು, ಆದರೆ ಒಬ್ಬಂಟಿ ಕನ್ನಡಿಗರಾಗಿದ್ದೇವೆಯೇ...?

ಈ ಪ್ರಶ್ನೆ ಇಂದು ಹಲವಾರು ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಮನಸ್ಸಿನಲ್ಲಿ ಮೂಡಿರಬಹುದು.

ನಮ್ಮದೇ ಭಾರತ ದೇಶದಲ್ಲಿ, ಅದರಲ್ಲೂ ನಮ್ಮ ಕರ್ನಾಟಕ ರಾಜ್ಯದಲ್ಲಿ, ನಮ್ಮ ಸಹೋದರ ರಾಜ್ಯಗಳಿಂದ ಬಂದಿರುವ ಅನೇಕರು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಆದರೆ ಹಲವಾರು ಕನ್ನಡಿಗ ಯುವಕರು ತಮ್ಮ ವಿದ್ಯಾರ್ಹತೆಗೆ ಮತ್ತು ಸಾಮರ್ಥ್ಯಕ್ಕೆ ತಕ್ಕ ಉದ್ಯೋಗವನ್ನು ಪಡೆಯಲು ಇನ್ನೂ ಹೋರಾಡುತ್ತಿದ್ದಾರೆ.

ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಒಂದು ವಿಷಯ ಸ್ಪಷ್ಟ—ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವೆ ನೇರ ಸಂಪರ್ಕ ಹಾಗೂ ಸರಿಯಾದ ಮಾಹಿತಿ ತಲುಪುವ ವೇದಿಕೆಗಳ ಅಗತ್ಯವಿದೆ. ಇದೇ ಉದ್ದೇಶದಿಂದ ಕನ್ನಡ ಮನಸುಗಳು ಕರ್ನಾಟಕ ತಂಡ ಹಾಗೂ ಉದ್ಯೋಗ ನಿಮಿತ್ತಂ ವತಿಯಿಂದ ಮೊದಲ ಮತ್ತು ಪುಟ್ಟ ಪ್ರಯತ್ನವಾಗಿ "ಉದ್ಯೋಗ ಮೇಳ-2026" ಆಯೋಜಿಸಲಾಗಿದೆ.

ನಮ್ಮ ತಂಡವು ಇಲ್ಲಿಯವರೆಗೆ ಸುಮಾರು 69 ಸರ್ಕಾರಿ ಶಾಲೆಗಳಿಗೆ ದಾನಿಗಳ ಸಹಕಾರದೊಂದಿಗೆ ಸುಣ್ಣ-ಬಣ್ಣ ತುಂಬುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದೆ. ಜೊತೆಗೆ ಪರಿಸರ ಅಭಿಯಾನ, ಕನ್ನಡ ಜಾಗೃತಿ ಅಭಿಯಾನ, ಕಾಡಿನ ಜನರಿಗೆ ಆಸರೆ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಇದೀಗ ಕನ್ನಡಿಗ ಯುವಕರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಕನ್ನಡಿಗರಿಗಾಗಿಯೇ ಈ ಉದ್ಯೋಗ ಮೇಳ ಎಂಬ ಹೊಸ ಹೆಜ್ಜೆಯನ್ನು ಇಡುತ್ತಿದ್ದೇವೆ.

ಈ ಉದ್ಯೋಗ ಮೇಳಕ್ಕೆ ನಿಮ್ಮೆಲ್ಲರ ಬೆಂಬಲ ದೊರೆತು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ *ಎಲ್ಲ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು* ಒಂದೇ ವೇದಿಕೆಗೆ ತರುವ ಮಹತ್ತರ ಉದ್ಯೋಗ ಮೇಳಗಳನ್ನು ಆಯೋಜಿಸುವ ಸಂಕಲ್ಪ ನಮ್ಮದಾಗಿದೆ.

ನಾವು ಕನ್ನಡಿಗರು... ಹೌದು
ನಾವು ಭಾರತೀಯರು... ಹೌದು

ಕನ್ನಡವೇ ಸತ್ಯ... ಕನ್ನಡವೇ ನಿತ್ಯ...

– 🙏 ಕನ್ನಡ ಮನಸುಗಳು ಕರ್ನಾಟಕ

#ಕನ್ನಡ #ನಾಡು
#ಉದ್ಯೋಗ #ಮೇಳ
#ಕನ್ನಡಿಗರಿಗಾಗಿ

ನಮ್ಮ ತಂಡದ ಹೊಸ ಹೆಜ್ಜೆ ಕನ್ನಡಿಗರಿಗಾಗಿ ಉದ್ಯೋಗ ಮೇಳ 2026, ಕೆಲಸದ ಅವಶ್ಯಕತೆ ಇರುವವರು ದಯವಿಟ್ಟು ಇದರ ಸದುಪಯೋಗ ಪಡೆದುಕೊಳ್ಳಿ, 💛❤️🙏 #ಉದ್ಯೋ...
30/07/2026

ನಮ್ಮ ತಂಡದ ಹೊಸ ಹೆಜ್ಜೆ ಕನ್ನಡಿಗರಿಗಾಗಿ ಉದ್ಯೋಗ ಮೇಳ 2026,

ಕೆಲಸದ ಅವಶ್ಯಕತೆ ಇರುವವರು ದಯವಿಟ್ಟು ಇದರ ಸದುಪಯೋಗ ಪಡೆದುಕೊಳ್ಳಿ, 💛❤️🙏

#ಉದ್ಯೋಗ #ಮೇಳ
#ಕನ್ನಡಿಗರಿಗಾಗಿ

12/07/2026
ಅದೊಂದು 80 ವರ್ಷಗಳನ್ನು ಪೂರೈಸಿದ ಸರ್ಕಾರಿ ಶಾಲೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 19 ಜನ ಶಿಕ್ಷಕರು ಬೋಧನೆ ನಡೆಸುತ್ತಿರುವ, ವಿದ್ಯಾದೇವತೆ...
30/06/2026

ಅದೊಂದು 80 ವರ್ಷಗಳನ್ನು ಪೂರೈಸಿದ ಸರ್ಕಾರಿ ಶಾಲೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 19 ಜನ ಶಿಕ್ಷಕರು ಬೋಧನೆ ನಡೆಸುತ್ತಿರುವ, ವಿದ್ಯಾದೇವತೆ ನೆಲೆಸಿರುವ ಜ್ಞಾನದ ನೆಲೆ ... ಸ್ಫೂರ್ತಿಯ ಸೆಲೆ...

ಅಂತಹ ಪವಿತ್ರ ನೆಲೆಯಲ್ಲಿನ ಮಕ್ಕಳ ಕನಸುಗಳು ವರ್ಣರಂಜಿತವಾಗಿರಲಿ ಎಂಬ ಆಶಯದಿಂದ, ಆ ಶಾಲೆಯ ಕಟ್ಟಡಕ್ಕೆ ಬಣ್ಣದ ಮೆರಗು ನೀಡಿ, ಕಲಾಕೃತಿಗಳ ಮೂಲಕ ಕಲಿಕೆಯನ್ನು ಮತ್ತಷ್ಟು ಆಕರ್ಷಕವಾಗಿಸಲು ಹಾಗೂ ಒಟ್ಟಾರೆ ಶಾಲೆಗೆ ಹೊಸ ಜೀವಕಳೆ ತುಂಬಲು ನಮ್ಮ ತಂಡವು ಸಜ್ಜಾಗಿದೆ.

ಇದುವರೆಗೆ ನಿಮ್ಮಂತಹ ದಾನಿಗಳ ನೆರವಿನಿಂದ ಸುಮಾರು 68 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದಿರುವ ನಮ್ಮ ತಂಡವು, ಇದೇ ಜುಲೈ 11 ಮತ್ತು 12ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೇಲಡಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು "ಸರ್ಕಾರಿ ಶಾಲೆ ಉಳಿಸಿ ಅಭಿಯಾನ – 34" ಕ್ಕೆ ಆಯ್ಕೆ ಮಾಡಿಕೊಂಡಿದೆ.

ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ, ಈ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಕೈಜೋಡಿಸಬೇಕೆಂದು ವಿನಮ್ರವಾಗಿ ಕೇಳಿಕೊಳ್ಳುತ್ತೇವೆ. ಹಾಗೆಯೇ ಸಹಾಯ ಮಾಡುವ ಮನಸ್ಸುಳ್ಳ ನಿಮ್ಮ ಆತ್ಮೀಯರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೋರುತ್ತೇವೆ.

ಹಣದ ರೂಪದಲ್ಲಿ ದೇಣಿಗೆ ನೀಡಲು ಸಾಧ್ಯವಾಗದಿದ್ದರೆ, ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ತಮ್ಮಿಂದಾಗಲಿ ಅಥವಾ ಬೇರೆಯವರ ಸಹಾಯದಿಂದಾಗಲಿ ಒದಗಿಸಬಹುದು.

ಅಷ್ಟೇ ಅಲ್ಲ, ಸ್ವಯಂಸೇವಕರಾಗಿ ಬಂದು ಈ ಅಭಿಯಾನದಲ್ಲಿ ಪಾಲ್ಗೊಂಡು, ಶಾಲೆಯನ್ನು ಮತ್ತಷ್ಟು ವರ್ಣಮಯಗೊಳಿಸುವ ಈ ಅಭಿಯಾನದಲ್ಲಿ ಸೇವೆಸಲ್ಲಿಸಬಹುದು...

– ನಿಮ್ಮ ಕನ್ನಡ ಮನಸುಗಳು ಕರ್ನಾಟಕ

#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಮನಸುಗಳುಕರ್ನಾಟಕ

ಎಲ್ಲ ಕನ್ನಡ ಮನಸುಗಳಿಗೂ ಶರಣು.. 🙏ಕನ್ನಡ ನಾಡು ನುಡಿಯ ಸೇವೆಗಾಗಿ ಹಲವು ಅಭಿಯಾನಗಳಲ್ಲಿ ತೊಡಗಿರುವ ನಮ್ಮ ತಂಡವು,  ಇದೇ ಮೊಟ್ಟ ಮೊದಲ ಭಾರಿಗೆ, ನಮ...
22/05/2026

ಎಲ್ಲ ಕನ್ನಡ ಮನಸುಗಳಿಗೂ ಶರಣು.. 🙏

ಕನ್ನಡ ನಾಡು ನುಡಿಯ ಸೇವೆಗಾಗಿ ಹಲವು ಅಭಿಯಾನಗಳಲ್ಲಿ ತೊಡಗಿರುವ ನಮ್ಮ ತಂಡವು, ಇದೇ ಮೊಟ್ಟ ಮೊದಲ ಭಾರಿಗೆ, ನಮ್ಮ ತಂಡದ ಸ್ವಯಂ ಸೇವಕರಿಗಾಗಿ ಕ್ರೀಡಾ ಚಟುವಟಿಗೆ ಮತ್ತು ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ....

ನಮ್ಮ ತಂಡದ ಅಧಿಕೃತ ವಾಟ್ಸಪ್ ಗುಂಪಿನಲ್ಲಿರುವವರಿಗೆ ಈಗಲೇ ಕಾರ್ಯಕ್ರಮಕ್ಕೆ ಆಹ್ವಾನ ತಲುಪಿರಬಹುದು, ನಮ್ಮ ತಂದಡ ಮುಖ ಪುಟವನ್ನು ಅನುಸರಿಸುತ್ತಿರುವ ನೀವು, ಈ ಮೊದಲು ನಮ್ಮ ತಂಡದ ಯಾವುದೇ ಅಭಿಯಾನಗಳಲ್ಲಿ ಭಾಗವಹಿಸಿದ್ದಲ್ಲಿ ನೀವು ಕೊಡ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಜೊತೆಯಾಗಬಹುದು..

ಕ್ರೀಡಾಚಟುವಟಿಕೆಗಳು ಶನಿವಾರ ಬೆಳಿಗ್ಗೆ ಇಂದ ಸಂಜೆ ತನಕ ರಾಮನಗರದ ಜಾನಪದ ಲೋಕ ಪಕ್ಕದಲ್ಲಿರುವ ಮೈದಾನಲ್ಲಿ ನಡೆಯಲಿದೆ, ವಾರ್ಷಿಕ ಕಾರ್ಯಕ್ರಮವು ಭಾನುವಾರವಿರುತ್ತದೆ,

ಗ್ರಾಮೀಣ ಕ್ರೀಡೆಗಳು ನಿಮ್ಮ ಬಾಲ್ಯವನ್ನು ನೆನಪಿಸ ಬಹುದು, ಹಾಗೂ ವಾರ್ಷಿಕ ಕಾರ್ಯಕ್ರಮವು ನೀವು ಭಾಗವಹಿಸಿದ್ದ ಅಭಿಯಾನವನ್ನು ನೆನಪಿಸುತ್ತದೆ, ಹಳೆಯ ನೆನಪುಗಳ ಮೆಲುಕು ಹಾಕುತ್ತ, ಒಂದೊಳ್ಳೆ ಸುಂದರ ಕ್ಷಣಗಳನ್ನು ನಾಳೆಗಾಗಿ ಕೊಡುವ, ಬಿಡುವು ಮಾಡಿಕೊಂಡು ತಾವುಗಳು ಬರಬೇಕೆಂದು ಪ್ರೀತಿಯಿಂದ ಆಹ್ವಾನಿಸುತ್ತೇವೆ...( ತಡವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಬೇಸರ ಮಾಡಿಕೊಳ್ಳಬೇಡಿ ಬಿಡುವು ಮಾಡಿಕೊಂಡು ತಪ್ಪದೇ ಬನ್ನಿ)

ಧನ್ಯವಾದಗಳು 🙏

ನಿಮ್ಮ - ಕನ್ನಡ ಮನಸುಗಳು ಕರ್ನಾಟಕ 🥰
💛❤️

ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ.  – ಶಿವರಾಮ ಕಾರಂತರು..ಮೊದಲೆಲ್ಲ ಚೆನ...
02/05/2026

ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ. – ಶಿವರಾಮ ಕಾರಂತರು..

ಮೊದಲೆಲ್ಲ ಚೆನ್ನಾಗಿಯೇ ಇತ್ತು, ಅವರ ಅಧಿಕಾರದಲ್ಲೇ ಎಲ್ಲವು ಸರಿಯಾಗಿತ್ತು, ಇವರ ಅಧಿಕಾರದಲ್ಲಿ ಹೀಗಾಯ್ತು, ಎಲ್ಲವು ಮೊದಲಿನ ಸ್ಥಿತಿಗೆ ಬರಬೇಕಾದರೆ, ಅವರೇ ಬರಬೇಕು, ಅಲ್ಲಿಯವರೆಗೆ ನಾವು ಕಾಯಬೇಕು, ಅವರಿಂದ ಮಾತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯ ಇವರಿಂದ ಸಾಧ್ಯವಿಲ್ಲ, ಎಂಬ ನಮ್ಮ ಆಲೋಚನೆಗಳೇ ನಮ್ಮನ್ನು ಮತ್ತು ನಮ್ಮವರನ್ನು ಕುಗ್ಗಿಸಲು ಮತ್ತು ಅವಲಂಬಿತರಾಗುವಂತೆ ಮಾಡಿಬಿಡುತ್ತದೆ.

ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಒಳ್ಳೆಯ ಕೆಲಸಗಳಿಗೆ ಜೊತೆಯಾಗೋಣ, ನಮ್ಮ ಉದ್ದೇಶಗಳನ್ನು ಇಷ್ಟಪಡುವವರು ನಮ್ಮ ಜೊತೆಯಾಗುತ್ತಾರೆ, ಹೀಗೆ ಒಂದಷ್ಟು ಜನ ನಮ್ಮ ಜೊತೆಯಾಗುವುದರಿಂದ ನಮ್ಮ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹಿಗ್ಗುವುದಕ್ಕಿಂತ, ಮತ್ತಷ್ಟು ಒಳ್ಳೆಯ ಕೆಲಸಗಳು ನಮ್ಮಿಂದ ಸಾಧ್ಯವಾಗುತ್ತದೆ ಎನ್ನುವ ಮನಸ್ಸಿನಿಂದ ನಮ್ಮ ಕೆಲಸವನ್ನು ನಾವು ಮಾಡುವುದರಿಂದ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣಬಹುದು...

ಎಲ್ಲರಿಗೂ ನಮಸ್ತೆ... ನಾವು ನಿಮ್ಮ ಕನ್ನಡ ಮನಸುಗಳು ಕರ್ನಾಟಕ ತಂಡ, ನಿಮಗೆಲ್ಲ ತಿಳಿದಿರುವ ಹಾಗೆ, ನಮ್ಮ ತಂಡವು ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ಮೂಲಕ ಇಲ್ಲಿಯವರೆಗೆ ಸುಮಾರು 67 ಸರ್ಕಾರಿ ಶಾಲೆಗಳಿಗೆ ನಿಮ್ಮ ನೆರವಿನಿಂದ ಸುಣ್ಣ ಬಣ್ಣ ಬಳಿದು ಆಕರ್ಷಸಿಸುವಂತ ಚಿತ್ರಗಳನ್ನು ಬಿಡಿಸುವುದರ ಮೂಲಕ, ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿಗೆ , ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಿರುವಂತೆ ಒಂದು ಸುಂದರ ಕಲಿಕವಾತಾವರಣ ಸೃಷ್ಟಿಸಿದ್ದೇವೆ, ನಿಮ್ಮ ಒಂದು ಸಣ್ಣ ಸಹಾಯ ಇಷ್ಟು ದೊಡ್ಡ ಬದಲಾವಣೆಗೆ ಕಾರಣವಾಗಿದೆಯೇ ಹೊರತು ಬೇರೇನಿಲ್ಲ..

ಇದೇ ತಿಂಗಳು ಮೇ 10 ರಂದು, ತುಮಕೂರಿನ ಗಂಗೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸುಣ್ಣ ಬಣ್ಣ ತುಂಬಲು ಮತ್ತು ಅಗತ್ಯ ವಸ್ತುಗಳನ್ನು ಪೋರೈಸಲು ನಾವು ಸಿದ್ದವಿದ್ದೇವೆ ಮತ್ತು ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದೇವೆ, ನಿಮ್ಮ ಒಂದು ಸಣ್ಣ ಸಹಾಯ… ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಒಂದು ದೊಡ್ಡ ನಗುವನ್ನು ಮೂಡಿಸುತ್ತದೆ, ಬದಲಾವಣೆ ಬಯಸುವ ನಾವೇ ಬದಲಾವಣೆ ಮಾಡಲು ಶ್ರಮಿಸೋಣ, ನೀವುಗಳು ದೇಣಿಗೆ ನೀಡುವುದರ ಮೂಲಕ ನಮ್ಮ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಜೊತೆಯಾಗಬೇಕು,

ಶಾಲೆಗೆ ಅಗತ್ಯವಿರುವ ಬಣ್ಣದ ವಿವರ ಹಾಗೂ ಅಗತ್ಯ ವಸ್ತುಗಳ ಪಟ್ಟಿಯನ್ನು ಹಂಚಿಕೊಂಡಿದ್ದೇವೆ, ನೀವು ಸಹಾಯ ಮಾಡಿ ಹಾಗೂ ನಿಮ್ಮ ಸ್ನೇಹ ಬಳಗದಲ್ಲಿರುವ ಎಲ್ಲರಿಗೂ ಇದನ್ನು ಶೇರ್ ಮಾಡಿ, ಒಳ್ಳೆಯ ಕೆಲಸಕ್ಕೆ ಕೈಜೋಡಿಸಿ.. 💛❤️

🙏ನಿಮ್ಮ
ಕನ್ನಡ ಮನಸುಗಳು ಕರ್ನಾಟಕ

#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಮನಸುಗಳುಕರ್ನಾಟಕ
#ತುಮಕೂರು #ಕರ್ನಾಟಕ

03/04/2026

ನಿಮ್ಮ ದೊಡ್ಡ ಮನಸ್ಸಿನಿಂದ, ನೀವು ಸಣ್ಣ ಸಹಾಯ ಮಾಡಿದರೆ, ಅಭಿಯಾನಕ್ಕೆ ನೇರವಾಗುತ್ತದೆ...
#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಮನಸುಗಳುಕರ್ನಾಟಕ

01/04/2026

#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಮನಸುಗಳುಕರ್ನಾಟಕ

ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂತಹ ಸಮಯದಲ್ಲಿ   ಯುವಜನತೆ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ತೋರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗ...
22/03/2026

ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂತಹ ಸಮಯದಲ್ಲಿ ಯುವಜನತೆ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ತೋರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ ಸರಿ, ಕೆಲವು ವರ್ಷಗಳ ಹಿಂದೆಯೇ ಇಂತಹ ಬೆಳವಣಿಗೆಗಳು ಸಾಧ್ಯವಾಗಬೇಕಿತ್ತು, ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗುವ ಅವಶ್ಯಕತೆ ತುಂಬಾ ಇತ್ತು ಈಗಲೂ ಕೂಡ ಇದೆ,

ಇತ್ತೀಚಿಗಂತೂ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವುದು ಟ್ರೆಂಡಿಂಗ್ ನಲ್ಲಿರೋದನ್ನ ನಾವು ಕಾಣಬಹುದು, ಹಾಗೆಯೇ ನಮ್ಮ ತಂಡವು ಹಲವು ವರ್ಷಗಳ ಹಿಂದೆಯೇ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಶುರುಮಾಡಿದ್ದು ಆ ನಿಟ್ಟಿನಲ್ಲಿ ಶ್ರಮದಾನ ಮಾಡುತ್ತಿರುವುದನ್ನು ಸ್ಫೂರ್ತಿಯಾಗಿ ತೆಗೆದು ಕೊಂಡ ಯುವ ಮನಸುಗಳಿಂದ ಎಷ್ಟೋ ಸರ್ಕಾರಿ ಶಾಲೆಗಳು ಬಣ್ಣದ ಮೆರಗು ಪಡೆದುಕೊಂಡಿವೆ..

ದಾನಿಗಳ ನೆರವಿನಿಂದ ನಮ್ಮ ತಂಡವು ಇಲ್ಲಿಯವರೆಗೆ 32 ಸರ್ಕಾರಿ ಶಾಲೆ ಉಳಿಸಿ ಅಭಿಯಾನದಿಂದ 66 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವುದರ ಮೂಲಕ ನಮ್ಮ ಶ್ರಮದಾನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ,

ಮುಂದಿನ ತಿಂಗಳು ಅಂದರೆ ಏಪ್ರಿಲ್ 11 ಮತ್ತು 12 ನೇ ತಾರೀಕು, ಸರ್ಕಾರಿ ಶಾಲೆ ಉಳಿಸಿ ಅಭಿಯಾನ 33,
67ನೇ ಶಾಲೆಯಾಗಿ ನಾಲ್ಕು ಜ್ಞಾನ ಪೀಠ ಪುರಸ್ಕಾರ ಪಡೆದ ಕವಿಗಳ ನೆಲವಾದ ಧಾರವಾಡಕ್ಕೆ 20 ಕಿಲೋಮೀಟರ್ ಹತ್ತಿರದಲ್ಲಿರುವ ಶಿಂಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ, ನಮ್ಮ ತಂಡದ ಸರ್ಕಾರಿ ಶಾಲೆ ಉಳಿಸಿ ಅಭಿಯಾನವೆಂಬ ಕನ್ನಡ ಪರ ಅಳಿಲು ಸೇವೆಗೆ ದಾನಿಗಳು ನಿಮ್ಮಿಂದ ಸಾಧ್ಯವಾದಷ್ಟು ದೇಣಿಗೆ ಕೊಟ್ಟು ಸಹಕರಿಸಿ, ನೀವು ಕೊಡುವ ಒಂದು ರೂಪಾಯಿ ಕೂಡ ಅಭಿಯಾನಕ್ಕೆ ಬಹಳ ಮುಖ್ಯ,

ಒಂದುವೇಳೆ ನೀವು ಹಣದ ರೂಪದಲ್ಲಿ ದೇಣಿಗೆ ಕೊಡಲು ಸಾಧ್ಯವಾಗದಿದ್ದರೆ, ಶಾಲೆಗೆ ಅಗತ್ಯವಿರುವ ಬಣ್ಣಗಳು ಮತ್ತು ಅಗತ್ಯವಸ್ತುಗಳನ್ನು ಕೊಡಿಸಬಹುದು..

ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ನಾವು 🙏💛❤️

-ಕನ್ನಡ ಮನಸುಗಳು ಕರ್ನಾಟಕ

ನಾನು ನಾನಲ್ಲ, ನಾನು ಕನ್ನಡ.
ಕನ್ನಡವೆಂದರೆ ಹೃದಯದ ನಾದ.
- ದ.ರಾ.ಬೇಂದ್ರೆ

#ಕನ್ನಡಮನಸುಗಳುಕರ್ನಾಟಕ
#ಸರ್ಕಾರಿಶಾಲೆಉಳಿಸಿಅಭಿಯಾನ
#ಕನ್ನಡಿಗ #ಹೆಮ್ಮೆಯಕನ್ನಡಿಗ #ನಮ್ಮಕನ್ನಡ
#ಕನ್ನಡಪ್ರೇಮ #ಕನ್ನಡಗೌರವ #ಕನ್ನಡಸಂಸ್ಕೃತಿ





,

Address

ಕನ್ನಡ ಮನಸುಗಳು ಕಚೇರಿ #೧೯೭ ನೆಟ್ಟಕಲ್ಲಪ್ಪ ವೃತ್ತ ಬಸವನಗುಡಿ ಬೆಂಗಳೂರು
Bangalore
560004

Telephone

+919148652017

Website

Alerts

Be the first to know and let us send you an email when ಕನ್ನಡ ಮನಸುಗಳು ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕನ್ನಡ ಮನಸುಗಳು ಕರ್ನಾಟಕ:

Shortcuts

Share