Karnataka Lekhakiyara Sangha

Karnataka Lekhakiyara Sangha Contact information, map and directions, contact form, opening hours, services, ratings, photos, videos and announcements from Karnataka Lekhakiyara Sangha, Nonprofit Organization, ನಂ. 206, Vijaya Mansion, 2nd floor, 2nd Main Road, Chamarajpet, Bangalore.

ಮಹಿಳಾ ಸಾಹಿತ್ಯ ಗಟ್ಟಿಯಾಗಿ ನೆಲೆ ನಿಲ್ಲಲು 1979ರಲ್ಲಿ ಕರ್ನಾಟಕ ಲೇಖಕಿಯರ ಸಂಘ ಸ್ಥಾಪನೆಗೊಂಡಿತು.
ಇದು ದೇಶದಲ್ಲಿ ಲೇಖಕಿಯರಿಗಾಗಿಯೇ ಇರುವ ಪ್ರಪಥಮ ಸಂಸ್ಥೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಈ‌ ಸಂಸ್ಥೆಯ ಘಟಕಗಳಿವೆ.

ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ  24 -25 ಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ. ಗುರುವಾರ ಮಧ್ಯಾಹ್ನ 2.30 ಕ್ಕ...
05/04/2026

ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ 24 -25 ಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ. ಗುರುವಾರ ಮಧ್ಯಾಹ್ನ 2.30 ಕ್ಕೆ ನಯನ ಸಭಾಂಗಣದಲ್ಲಿ ನಮ್ಮ ನಿಮ್ಮ ಭೇಟಿ.

ದಯವಿಟ್ಟು ಎಲ್ಲರೂ ಬನ್ನಿ. ಒಟ್ಟುಗೂಡಿ ಸಂಭ್ರಮಿಸೋಣ. ಪ್ರಶಸ್ತಿ ಪುರಸ್ಕೃತರ ಖುಷಿಯನ್ನು ಹಂಚಿಕೊಳ್ಳೋಣ.

12/03/2026
ಕಲೇಸಂನ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಮತ್ತು ವಿಜೇತರು.
08/03/2026

ಕಲೇಸಂನ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಮತ್ತು ವಿಜೇತರು.

ವಾರ್ಷಿಕ ಪ್ರಶಸ್ತಿಗಳು ಮತ್ತು ವಿಜೇತರ ಪಟ್ಟಿ.
08/03/2026

ವಾರ್ಷಿಕ ಪ್ರಶಸ್ತಿಗಳು ಮತ್ತು ವಿಜೇತರ ಪಟ್ಟಿ.

ಇಂದು ಸಂಜೆ 4 ಗಂಟೆಗೆ ಲುಲು ಮಾಲ್ ನಲ್ಲಿ ಸಂವಾದವಿದೆ. ಸರ್ವರಿಗೂ ಸ್ವಾಗತ.🌹
03/02/2026

ಇಂದು ಸಂಜೆ 4 ಗಂಟೆಗೆ ಲುಲು ಮಾಲ್ ನಲ್ಲಿ ಸಂವಾದವಿದೆ.
ಸರ್ವರಿಗೂ ಸ್ವಾಗತ.🌹

ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮತಿ. ನಾಗಮಣಿ ಎಸ್ ರಾವ್ ಮೇಡಂ ಅವರಿಗೆ ಬಿ ಎಂ ಶ್ರೀ ವಾರ್ಷಿಕ ಪ್ರಶಸ್ತಿಗಾಗಿ ಕಲೇಸಂ ನ ಎಲ್ಲರಿ...
31/01/2026

ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮತಿ. ನಾಗಮಣಿ ಎಸ್ ರಾವ್ ಮೇಡಂ ಅವರಿಗೆ ಬಿ ಎಂ ಶ್ರೀ ವಾರ್ಷಿಕ ಪ್ರಶಸ್ತಿಗಾಗಿ ಕಲೇಸಂ ನ ಎಲ್ಲರಿಂದ ಹೃತ್ಪೂರ್ವಕ ಅಭಿನಂದನೆಗಳು🌹❤
ನಾಡಿನ ಖ್ಯಾತ ವಿಮರ್ಶಕರಾದ ಡಾ. ಟಿ ಪಿ ಅಶೋಕ್ ಅವರಿಗೂ ಕಲೆಸಂ ಬಳಗದಿಂದ ಹೃತ್ಪೂರ್ವಕ ಅಭಿನಂದನೆಗಳು.🌹😊

ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಕುಲಶೇಖರಿ ಉಷಾದೇವಿ ಅವರು ನಮ್ಮನ್ನಗಲಿದ್ದಾರೆ. ಅವರಿಗೇ ಕರ್ನಾಟಕ ಲೇಖಕಿಯರ ಸಂಘದದಿ...
28/01/2026

ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಕುಲಶೇಖರಿ ಉಷಾದೇವಿ ಅವರು ನಮ್ಮನ್ನಗಲಿದ್ದಾರೆ. ಅವರಿಗೇ ಕರ್ನಾಟಕ ಲೇಖಕಿಯರ ಸಂಘದದಿಂದ ಭಾವಪೂರ್ಣ ಶ್ರದ್ಧಾಂಜಲಿ🙏🏼

ಹಿರಿಯ ಪೋಲಿಸ್ ಅಧಿಕಾರಿˌ ಲೇಖಕಿ 2026ನೇ ಸಾಲಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿನ ಶ್ಲಾಘನೀಯ ಸೇವೆಯನ್ನು ಗುರುತಿಸಿ ನೀಡಲಾಗು...
26/01/2026

ಹಿರಿಯ ಪೋಲಿಸ್ ಅಧಿಕಾರಿˌ ಲೇಖಕಿ 2026ನೇ ಸಾಲಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿನ ಶ್ಲಾಘನೀಯ ಸೇವೆಯನ್ನು ಗುರುತಿಸಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ಭಾಜನರಾಗಿದ್ದಾರೆ. ಕಲೇಸಂ ವತಿಯಿಂದ ಅಭಿನಂದನೆ ಸವಿತಾ ಮೇಡಂ🌹🌹

ಎಸ್.ಜಿ. ಸುಶೀಲಮ್ಮ ಅವರಿಗೆ  ಸಮಾಜಸೇವಾ ಕ್ಷೇತ್ರದಲ್ಲಿ ದೇಶದ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸಂದಿದೆ. ಅಮ್ಮನಿಗೆ ಕರ್ನಾಟಕ ಲೇಖಕಿಯರ ಸಂಘದ...
26/01/2026

ಎಸ್.ಜಿ. ಸುಶೀಲಮ್ಮ ಅವರಿಗೆ ಸಮಾಜಸೇವಾ ಕ್ಷೇತ್ರದಲ್ಲಿ ದೇಶದ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸಂದಿದೆ. ಅಮ್ಮನಿಗೆ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು 🌹🌹🙏🙏

*ಕರ್ನಾಟಕ ಲೇಖಕಿಯರ ಸಂಘದಿಂದ ಕಮ್ಮಟ* ಕರ್ನಾಟಕ ಲೇಖಕಿಯರ ಸಂಘವು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ 12ನೇ ಶತಮಾನದ  ವಚನಕಾರ್ತಿಯರ ಕುರಿತಾ...
25/01/2026

*ಕರ್ನಾಟಕ ಲೇಖಕಿಯರ ಸಂಘದಿಂದ ಕಮ್ಮಟ*

ಕರ್ನಾಟಕ ಲೇಖಕಿಯರ ಸಂಘವು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ 12ನೇ ಶತಮಾನದ ವಚನಕಾರ್ತಿಯರ ಕುರಿತಾದ ಒಂದು ದಿನದ ಕಮ್ಮಟವನ್ನು ನಡೆಸಲು ಉದ್ದೇಶಿಸಿದೆ.
ಫೆಬ್ರವರಿ 28 ರಂದು ಬೆಂಗಳೂರಿನ, ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಈ ಕಮ್ಮಟಕ್ಕೆ 40 ಜನರನ್ನು ಮಾತ್ರ ಆಯ್ಕೆ ಮಾಡಲಾಗುವುದು ಮತ್ತು 40 ವಯಸ್ಸಿನ ಒಳಗಿರುವ ಯುವ ಬರಹಗಾರ್ತಿಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸ ಬೇಕಾದ ಇಮೇಲ್ ವಿಳಾಸ: [email protected]
ನಿಮ್ಮ ಅರ್ಜಿಯಲ್ಲಿ ಒಳಗೊಂಡಿರಬೇಕಾದ ವಿವರಗಳು: ವಿಳಾಸ, ಸಂಪರ್ಕ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐ.ಡಿ. ಗಳನ್ನು ತಪ್ಪದೇ ಕಳಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಫೆಬ್ರವರಿ 2026.

ಕಮ್ಮಟದ ಸಂಚಾಲಕರು:
ಇಂದಿರಾ ಶಿವಣ್ಣ
98455 35026

ಡಾ. ಮುಕ್ತಾ ಬಿ.ಕಾಗಲಿ 9845689845.

ಪ್ರೊ.ಆರ್.ಸುನಂದಮ್ಮ
ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ (ರಿ), ಬೆಂಗಳೂರು.
ದಿನಾಂಕ:15-01-2026

*ಕರ್ನಾಟಕ ಲೇಖಕಿಯರ ಸಂಘದ 2025 ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ*ಕರ್ನಾಟಕ ಲೇಖಕಿಯರ ಸಂಘದ 2025 ನೆಯ ಸಾಲಿನ ವಿವಿಧ ಪುಸ್ತಕ ಬಹ...
11/01/2026

*ಕರ್ನಾಟಕ ಲೇಖಕಿಯರ ಸಂಘದ 2025 ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ*

ಕರ್ನಾಟಕ ಲೇಖಕಿಯರ ಸಂಘದ 2025 ನೆಯ ಸಾಲಿನ ವಿವಿಧ ಪುಸ್ತಕ ಬಹುಮಾನಗಳಿಗೆ ಲೇಖಕಿಯರಿಂದ ಕಾದಂಬರಿ, ಕಥಾಸಂಕಲನ, ವಿಜ್ಞಾನ ಕೃತಿಗಳು, ಲಲಿತ ಪ್ರಬಂಧ, ಅನುವಾದ ಕೃತಿ, ಕವನ ಸಂಕಲನ, ಪ್ರವಾಸ ಸಾಹಿತ್ಯ, ನಾಟಕ, ಹಾಸ್ಯ ಕೃತಿ, ಮಕ್ಕಳ ಸಾಹಿತ್ಯ, ಆತ್ಮಕಥನ ಮುಂತಾದ ಕೃತಿಗಳನ್ನು ಆಹ್ವಾನಿಸಲಾಗಿದೆ. (2025 ರ ಜನವರಿಯಿಂದ 2025 ರ ಡಿಸೆಂಬರ್ ವರೆಗೆ ಪ್ರಕಟಗೊಂಡಿರಬೇಕು.) ಕೃತಿಗಳನ್ನು 10 - 2 - 2026 ರೊಳಗಾಗಿ ಕರ್ನಾಟಕ ಲೇಖಕಿಯರ ಸಂಘ(ರಿ) ಬೆಂಗಳೂರು, ನಂ. 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2 ನೇ ಕ್ರಾಸ್, 2ನೇ ಮುಖ್ಯ ರಸ್ತೆ , ಚಾಮರಾಜಪೇಟೆ, ಬೆಂಗಳೂರು- 560018 ಈ ವಿಳಾಸಕ್ಕೆ ಕಳಿಸಲು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಸಿ, ಸಂಘದ ಕಾರ್ಯದರ್ಶಿ- ಸುಮಾ ಸತೀಶ್ - 9481480220
ಉಪಾಧ್ಯಕ್ಷರು - ಸರ್ವಮಂಗಳಾ- 9448818900

1. ಕಾಕೋಳು ಸರೋಜಮ್ಮ ಪ್ರಶಸ್ತಿ (ಕಾದಂಬರಿ)

2. ಭಾಗ್ಯ ನಂಜಪ್ಪ ಪ್ರಶಸ್ತಿ (ವಿಜ್ಞಾನ ಸಾಹಿತ್ಯ)

3. ನಾಗರತ್ನ ಚಂದ್ರಶೇಖರ್ ಪ್ರಶಸ್ತಿ (ಲಲಿತ ಪ್ರಬಂಧ)

4. ಜಿ.ವಿ. ನಿರ್ಮಲ ಪ್ರಶಸ್ತಿ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ)

5. ಡಾ. ಬಿ. ಸಿ. ಶೈಲ ನಾಗರಾಜ್ ಕಾವ್ಯ ಪುರಸ್ಕಾರ (ಕಾವ್ಯಕ್ಕಾಗಿ, 50 ವರ್ಷದ ಒಳಗಿನವರಿಗಾಗಿ)

6. ಸಂಕಮ್ಮ ಸಂಕಣ್ಣನವರ್ ಹೆಸರಿನ ಕಾವ್ಯ ಪುರಸ್ಕಾರ

(ಕಾವ್ಯಕ್ಕಾಗಿ)

7. 'ಶ್ರೀ ಜಯ' ಪ್ರಶಸ್ತಿ(ಲೀಲಾ ಕಲಕೋಟಿ ದತ್ತಿ - ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳಿಗಾಗಿ)

8. ಸುಶೀಲಾ ಸೋಮಶೇಖರ್ ಪ್ರಶಸ್ತಿ (ವಚನ ಸಾಹಿತ್ಯದಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳಿಗಾಗಿ)

9. ತ್ರಿವೇಣಿ ಸಾಹಿತ್ಯ ಪುರಸ್ಕಾರ

( ಪ್ರಾಯೋಜಕರು - ಸುಧಾಮೂರ್ತಿ- ಕಾದಂಬರಿ ಪ್ರಕಾರ)

10. ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ)

11. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ)

12. ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ)

13. ಇಂದಿರಾ ವಾಣಿರಾವ್ (ನಾಟಕ)

14. ಜಯಮ್ಮ ಕರಿಯಣ್ಣ (ಸಂಶೋಧನೆ)

15. ತ್ರಿವೇಣಿ ದತ್ತಿನಿಧಿ (ಕಥಾ ಪ್ರಕಾರಕ್ಕೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನ)

16. ಉಷಾ. ಪಿ. ರೈ. ಪ್ರಶಸ್ತಿ - (ಕಾವ್ಯ ಪ್ರಕಾರ - 2024- 2025 ಈ ಎರಡು ವರ್ಷಗಳಲ್ಲಿ ಪ್ರಕಟಗೊಂಡ ಕಾವ್ಯ ಕೃತಿಗಳು)

17. ನಿರುಪಮಾ (2025ರಲ್ಲಿ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು)

18. ಲಕ್ಷ್ಮೀದೇವಮ್ಮ ಕಥಾ ಪುರಸ್ಕಾರ

19. ಶ್ರೀಲೇಖಾ ದತ್ತಿ ಪ್ರಶಸ್ತಿ (ಯಾವುದೇ ಪ್ರಕಾರದ ಅನುವಾದಿತ ಕೃತಿ)

ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಪ್ರೊ. ಆರ್. ಸುನಂದಮ್ಮ ಅವರು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯಮಗಳು

* ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು.

* ಲೇಖಕಿಯರು ತಮ್ಮ 3 ಕೃತಿಗಳನ್ನು ಕಳುಹಿಸಬೇಕು.

*ಈಗಾಗಲೇ ಎರಡು ಬಾರಿ ಪುಸ್ತಕ ಬಹುಮಾನ ಪಡೆದ ಲೇಖಕಿಯರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.

*ಸಂಪಾದಿತ ಕೃತಿಗಳನ್ನು ಹಾಗೂ ಪಿ.ಎಚ್ ಡಿ ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.

* ಕೃತಿಯ ಪ್ರಥಮ ಆವೃತ್ತಿಯನ್ನು ಮಾತ್ರ ಪರಿಗಣಿಸಲಾಗುವುದು.

* ಕೃತಿಗಳನ್ನು 10 - 2 - 2026 ಒಳಗೆ ನಮಗೆ ತಲುಪುವಂತೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

* ಕೃತಿಗಳು ತಲುಪಬೇಕಾದ ವಿಳಾಸ: ಕರ್ನಾಟಕ ಲೇಖಕಿಯರ ಸಂಘ(ರಿ) ಬೆಂಗಳೂರು, ನಂ. 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2 ನೇ ಕ್ರಾಸ್, 2ನೇ ಮುಖ್ಯ ರಸ್ತೆ , ಚಾಮರಾಜಪೇಟೆ, ಬೆಂಗಳೂರು- 560018

ಸಂಪರ್ಕಿಸಬೇಕಾದ ಸಂಖ್ಯೆಗಳು

ಸುಮಾ ಸತೀಶ್
-9481480220

ಸರ್ವಮಂಗಳಾ - 9448818900

Address

ನಂ. 206, Vijaya Mansion, 2nd Floor, 2nd Main Road, Chamarajpet
Bangalore
560001

Alerts

Be the first to know and let us send you an email when Karnataka Lekhakiyara Sangha posts news and promotions. Your email address will not be used for any other purpose, and you can unsubscribe at any time.

Share