Nyaaya Kannada

Nyaaya Kannada 'ನ್ಯಾಯ' ಭಾರತದ ಕಾನೂನುಗಳನ್ನು ವಿವರಿಸುವ ಭಾರತದ ಮೊದಲ ಉಚಿತ ಆನ್‌ಲೈನ್ ಸಾಧನ.

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಸಾಗರ್ ಮುಧೋಳ್ ಅವರು ಡಿಡಿ ಚಂದನ ವಾಹಿನಿಯ ಹೆಲೋ ಗೆಳೆಯರೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ನಮ್...
28/11/2025

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಸಾಗರ್ ಮುಧೋಳ್ ಅವರು ಡಿಡಿ ಚಂದನ ವಾಹಿನಿಯ ಹೆಲೋ ಗೆಳೆಯರೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ನಮ್ಮ ಸಂವಿಧಾನದ ಬಗ್ಗೆ ತಿಳಿಸಿಕೊಟ್ಟರು.

ಭಾರತದ ಪ್ರತಿ ಪ್ರಜೆಯೂ ಯಾವುದೇ ತಾರತಮ್ಯ ಇಲ್ಲದೆ ನ್ಯಾಯ ಮತ್ತು ತಮ್ಮ ಹಕ್ಕುಗಳನ್ನು ಪಡೆಯಲು ಸಶಕ್ತರಾದಾಗ ಮಾತ್ರ ನಮ್ಮ ಭಾರತದ ಸಂವಿಧಾನ ಅರ್ಥಪೂ...
26/11/2025

ಭಾರತದ ಪ್ರತಿ ಪ್ರಜೆಯೂ ಯಾವುದೇ ತಾರತಮ್ಯ ಇಲ್ಲದೆ ನ್ಯಾಯ ಮತ್ತು ತಮ್ಮ ಹಕ್ಕುಗಳನ್ನು ಪಡೆಯಲು ಸಶಕ್ತರಾದಾಗ ಮಾತ್ರ ನಮ್ಮ ಭಾರತದ ಸಂವಿಧಾನ ಅರ್ಥಪೂರ್ಣ ಆಗುವುದು. ನ್ಯಾಯ ಸಂಸ್ಥೆ ಸದಾ ಎಲ್ಲರಿಗೂ, ಅದರಲ್ಲೂ ತಳಮಟ್ಟದ ಸಮುದಾಯಗಳಿಗೆ ಕಾನೂನು ಕೈಗೆಟಕುವಂತೆ ಆಗುವತ್ತ ಕೆಲಸ ಮಾಡುತ್ತಿದೆ. ಮಕ್ಕಳಿಗೆ ತಮ್ಮ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಇತರೆ ಹಕ್ಕುಗಳನ್ನು ತಿಳಿಸುವ ಪ್ರಯತ್ನದ ಭಾಗವೇ ಈ ಬಣ್ಣದ ಪುಸ್ತಕ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಬಿಡುಗಡೆ ಮಾಡುತ್ತಿರುವ ಈ ಪುಸ್ತಕವನ್ನು ಕರ್ನಾಟಕದ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರು ಮತ್ತು ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಮತಿ ಅನು ಸಿವರಾಮನ್ ಇನ್ನಿತರೆ ಮುಖ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು. ತಮ್ಮ ಹಕ್ಕು ಮತ್ತು ಜವಾಬ್ದಾರಿಗಳ ಅರಿತು ಸಂವಿಧಾನದ ಆಶಯಗಳನ್ನು ಮುನ್ನಡೆಸಲು ಈ ಪುಸ್ತಕ ಮಕ್ಕಳನ್ನು ಪ್ರೋತ್ಸಾಹಿಸುತ್ತದೆ ಎಂದು ' ನ್ಯಾಯ ' ಆಶಿಸುತ್ತದೆ.
#ನ್ಯಾಯ #ಸಂವಿಧಾನ

ಮಕ್ಕಳಿಗೆ ಅವರ ಸೃಜನಶೀಲತೆ ಹೆಚ್ಚಿಸುವುದರೊಂದಿಗೆ ಅವರ ಹಕ್ಕುಗಳ ಬಗ್ಗೆಯೂ ತಿಳಿಸುವ ಮಾರ್ಗ ಇದ್ದರೆ ಎಷ್ಟು ಚಂದ ಅಲ್ಲವೇ? ನ್ಯಾಯ ಮತ್ತು ಕರ್ನಾಟಕ...
14/11/2025

ಮಕ್ಕಳಿಗೆ ಅವರ ಸೃಜನಶೀಲತೆ ಹೆಚ್ಚಿಸುವುದರೊಂದಿಗೆ ಅವರ ಹಕ್ಕುಗಳ ಬಗ್ಗೆಯೂ ತಿಳಿಸುವ ಮಾರ್ಗ ಇದ್ದರೆ ಎಷ್ಟು ಚಂದ ಅಲ್ಲವೇ? ನ್ಯಾಯ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಇದಕ್ಕೊಂದು ಉತ್ತಮ ಅವಕಾಶ ಕಲ್ಪಿಸಿಕೊಡುತ್ತಿದೆ!

ಈ ಮಕ್ಕಳ ದಿನಾಚರಣೆ , ನ್ಯಾಯ "ಪ್ರತಿ ಮಗುವೂ ತಿಳಿದುಕೊಳ್ಳಬೇಕಾದ 18 ಹಕ್ಕುಗಳು" ಎಂಬ ವಿಷಯದ ಕುರಿತು ಬಣ್ಣದ ಪುಸ್ತಕವನ್ನು ಬಿಡುಗಡೆ ಮಾಡುತ್ತಿದೆ - ಮಕ್ಕಳು ತಮ್ಮ ಅಗತ್ಯ ಕಾನೂನು ಹಕ್ಕುಗಳ ಬಗ್ಗೆ ಕನ್ನಡದಲ್ಲಿ ಕಲಿಯಲು ಒಂದು ವಿಶೇಷ ಮಾರ್ಗ.

#ನ್ಯಾಯ #ಮಕ್ಕಳಹಕ್ಕುಗಳು

ನ್ಯಾಯ ಕರ್ನಾಟಕದಲ್ಲಿ 'ಸಂವಿಧಾನ್ ಫೆಲೋಶಿಪ್‌'ನ ಮೂರನೇ ಸಮೂಹಕ್ಕಾಗಿ ಈಗಲೂ ಅರ್ಜಿಗಳನ್ನು  ಆಹ್ವಾನಿಸುತ್ತಿದೆ.ನ್ಯಾಯ ಪಡೆಯಲು ಜನರನ್ನು ಸಶಕ್ತಗೊ...
31/10/2025

ನ್ಯಾಯ ಕರ್ನಾಟಕದಲ್ಲಿ 'ಸಂವಿಧಾನ್ ಫೆಲೋಶಿಪ್‌'ನ ಮೂರನೇ ಸಮೂಹಕ್ಕಾಗಿ ಈಗಲೂ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ನ್ಯಾಯ ಪಡೆಯಲು ಜನರನ್ನು ಸಶಕ್ತಗೊಳಿಸಲು ಮತ್ತು ಸಾಮಾಜಿಕ ಬದಲಾವಣೆಯನ್ನು ತರಲು ಕರ್ನಾಟಕದ ವಕೀಲರಿಗೆ ಇದೊಂದು ಉತ್ತಮ ಅವಕಾಶ!

ಸಂವಿಧಾನ್‌ ಫೆಲೋಶಿಪ್ ಒಂದು ವರ್ಷ ಪೇಯ್ಡ್ ಫೆಲೋಶಿಪ್ ಆಗಿದ್ದು, ಇದು ಕಾನೂನು ಅರಿವು ಮೂಡಿಸಲು ಮತ್ತು ಧನಾತ್ಮಕ ಬದಲಾವಣೆಗೆ ತಳ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ಒದಗಿಸಲು ವಕೀಲರ ಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ. ನೀವು ಕರ್ನಾಟಕದ ಜಿಲ್ಲಾ ನ್ಯಾಯಾಲಯಗಳಲ್ಲಿ ಕನಿಷ್ಠ 3 ವರ್ಷಗಳ ಲಿಟಿಗೇಷನ್ ಅನುಭವ, ಕನ್ನಡದಲ್ಲಿ ಸರಾಗವಾಗಿ ಮಾತನಾಡುವ ಮತ್ತು ನ್ಯಾಯವನ್ನು ತಳಮಟ್ಟದ ಸಮುದಾಯಗಳಿಗೆ ಒದಗಿಸಲು ಬದ್ಧರಾಗಿದ್ದರೆ, ಅರ್ಜಿ ಸಲ್ಲಿಸಿ. ಇಂತಹ 18 ವಕೀಲರನ್ನು ನಾವು ಹುಡುಕುತ್ತಿದ್ದೇವೆ.

ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳು, ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ದಕ್ಷಿಣ ಕನ್ನಡ, ಹಾಸನ, ಹಾವೇರಿ, ಮೈಸೂರು, ರಾಮನಗರ, ರಾಯಚೂರು, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಿಂದ ಅರ್ಜಿಗಳನ್ನು ಪ್ರೋತ್ಸಾಹಿಸಲಾಗುತ್ತದೆ.

ಅರ್ಜಿಗೆ ಕೊನೆಯ ದಿನಾಂಕ: 10 November 2025
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು, ಬಯೋ ಅಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ

#ನ್ಯಾಯ #ಸಂವಿಧಾನಫೇಲೋಷಿಪ್

ನಮ್ಮ ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಡಿ ಕೆ ಸಂದರ್ಶಿನಿ ಅವರು ಡಿಡಿ ಚಂದನ ವಾಹಿನಿಯ 'ಹಲೋ ಗೆಳೆಯರೇ ' ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ...
23/10/2025

ನಮ್ಮ ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಡಿ ಕೆ ಸಂದರ್ಶಿನಿ ಅವರು ಡಿಡಿ ಚಂದನ ವಾಹಿನಿಯ 'ಹಲೋ ಗೆಳೆಯರೇ ' ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡಿ, ನೋಡುಗರ ಕಾನೂನು ಪ್ರಶ್ನೆಗಳಿಗೆ ಉತ್ತರಿಸಿದರು.

#ಡಿಡಿಚಂದನ #ಹಲೋಗೆಳೆಯರೇ

🌟 Applications Open! 🌟Nyaaya is bringing another cohort of the Samvidhaan Fellowship to Karnataka!📌 18 lawyers. One visi...
16/10/2025

🌟 Applications Open! 🌟
Nyaaya is bringing another cohort of the Samvidhaan Fellowship to Karnataka!

📌 18 lawyers. One vision. To strengthen access to justice at the grassroots level in Karnataka.

If you have:
⚖️ 3+ years of litigation experience
👩‍⚖️ Expertise in gender rights, child rights, or community justice
🗣️ Proficiency in Kannada (spoken & written)
💡 Commitment to legal awareness and social justice

Then this Fellowship is for YOU! ✨

🗓️Early applications encouraged before 31st October, 2025.

🔗Apply now: https://nyaaya.org/access-to-justice-network/samvidhaan-fellowship/

ಕಾನೂನು ಅರಿವು ಮೂಡಿಸಲು, ಕಾನೂನು ಸಮಸ್ಯೆಗೆ ಪರಿಹಾರವನ್ನು ನೀಡಿ ಮತ್ತು ನಾಗರಿಕರು ಮತ್ತು ನ್ಯಾಯ ವ್ಯವಸ್ಥೆಯ ನಡುವಿನ ಕೊನೆಯ ಮೈಲಿ ಅಂತರವನ್ನು ...
24/09/2025

ಕಾನೂನು ಅರಿವು ಮೂಡಿಸಲು, ಕಾನೂನು ಸಮಸ್ಯೆಗೆ ಪರಿಹಾರವನ್ನು ನೀಡಿ ಮತ್ತು ನಾಗರಿಕರು ಮತ್ತು ನ್ಯಾಯ ವ್ಯವಸ್ಥೆಯ ನಡುವಿನ ಕೊನೆಯ ಮೈಲಿ ಅಂತರವನ್ನು ಕಡಿಮೆ ಮಾಡಲು ' ನ್ಯಾಯ ' ಮತ್ತೊಮ್ಮೆ 'ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ' (KSLSA) ದೊಂದಿಗೆ ಕೈಜೋಡಿಸಿದೆ ಎಂದು ಘೋಷಿಸುವುದು ನಮಗೆ ಸಂತೋಷದ ವಿಚಾರ. ಪ್ಯಾರಾ-ಲೀಗಲ್ ವಾಲಂಟಿಯರ್ (PLV) ಯೋಜನೆಯ ಅನುಷ್ಠಾನದಲ್ಲಿ ನಾವು ಅವರೊಂದಿಗೆ ಕೂಡಿ ಕೆಲಸ ಮಾಡುತ್ತಿದ್ದೇವೆ. ಇದರ ಮೂಲಕ, ಕರ್ನಾಟಕದಾದ್ಯಂತ ರಚನಾತ್ಮಕ ಮತ್ತು ಸುಸ್ಥಿರ PLV ತರಬೇತಿ ಮತ್ತು ನಿಯೋಜನೆ ಕಾರ್ಯಕ್ರಮಕ್ಕೆ ನಾವು ಕೊಡುಗೆ ನೀಡುತ್ತೇವೆ - ಕಾನೂನು ಸಂಸ್ಥೆಗಳೊಂದಿಗೆ ಸಮುದಾಯಗಳನ್ನು ಸಂಪರ್ಕಿಸುವ ಮತ್ತು ಎಲ್ಲರಿಗೂ ನ್ಯಾಯ ಪಡೆದುಕೊಳ್ಳುವ ಅವಕಾಶ ಸೃಷ್ಟಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆ. PLV ತರಬೇತಿಗಳ ಪ್ರಾರಂಭವನ್ನು ಘೋಷಿಸುವ ಪತ್ರಿಕಾಗೋಷ್ಠಿಯನ್ನು KSLSA ನಡೆಸಿತು.

KSLSA ಜೊತೆ ನಮ್ಮ ಈ ನ್ಯಾಯದ ಕಡೆ ಹೆಜ್ಜೆಗೆ ನಾವು ಎದುರು ನೋಡುತ್ತಿದ್ದೇವೆ.

Photo (ಫೋಟೊದಲ್ಲಿ ): (ಪತ್ರಿಕಾ ಸಭೆ) ಶ್ರೀ ಎಚ್ ಶಶಿಧರ ಶೆಟ್ಟಿ, ಜಿಲ್ಲಾ ನ್ಯಾಯಾಧೀಶರು, ಸದಸ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು; ಶ್ರೀ ಶ್ರೀಧರ್ ಎಂ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಉಪ ಕಾರ್ಯದರ್ಶಿ, KSLSA; ಶ್ರೀ ಬಾಲಸುಬ್ರಮಣಿ, PRO, KSLSA, ಅನಿಶಾ ಗೋಪಿ, ಟೀಮ್ ಲೀಡ್, ನ್ಯಾಯ, ಶಿರೀಷ ಬಿ ರೆಡ್ಡಿ, ಕಾರ್ಯಕ್ರಮ ವ್ಯವಸ್ಥಾಪಕರು, ನ್ಯಾಯ ಕನ್ನಡ ಮತ್ತು ಪತ್ರಿಕಾ ಸದಸ್ಯರು ಮತ್ತು ಇತರ NGOಗಳು.



#

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಮನೋಹರ್ ಅವರು ಮಹಾಋಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟಿನ ವಸತಿ ನಿಲಯದ ಬಾಲಕರಿಗೆ ಡಿಜಿಟಲ್ ದಾಖ...
21/09/2025

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಮನೋಹರ್ ಅವರು ಮಹಾಋಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟಿನ ವಸತಿ ನಿಲಯದ ಬಾಲಕರಿಗೆ ಡಿಜಿಟಲ್ ದಾಖಲಾತಿ ಗಳ ಬಗ್ಗೆ ಅರಿವಿನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

#ನ್ಯಾಯ #ಕನ್ನಡ #ಸಂವಿಧಾನಫೇಲೋಷಿಪ್

ನಮ್ಮ ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಸಂದರ್ಶಿನಿ ಅವರು ಹಸಿರುದಳ ಸಂಸ್ಥೆ ಜೊತೆ ಸೇರಿ ಮಹಿಳೆಯರಿಗೆ ಕೌಟುಂಬಿಕ ಹಿಂಸೆಗೆ  ಸಂಬಂಧಿಸಿದ ಕಾನ...
13/09/2025

ನಮ್ಮ ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಸಂದರ್ಶಿನಿ ಅವರು ಹಸಿರುದಳ ಸಂಸ್ಥೆ ಜೊತೆ ಸೇರಿ ಮಹಿಳೆಯರಿಗೆ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಕಾನೂನು ಬಗ್ಗೆ ತಿಳಿಸಿ ಕೊಟ್ಟು ಅವರ ಕಾನೂನು ಪ್ರಶ್ನೆಗಳನ್ನು ಉತ್ತರಿಸಿದರು.

#ಕಾನೂನು #ನ್ಯಾಯ

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಮನೋಹರ್ ಅವರು ಡಿಡಿ ಚಂದನ ವಾಹಿನಿಯ ಹಲೋ ಗೆಳೆಯರೇ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕು ಬಗ್ಗೆ...
30/08/2025

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಮನೋಹರ್ ಅವರು ಡಿಡಿ ಚಂದನ ವಾಹಿನಿಯ ಹಲೋ ಗೆಳೆಯರೇ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕು ಬಗ್ಗೆ ತಿಳಿಸಿಕೊಟ್ಟರು.

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಪ್ರಿಯ ಪೈಕ  ಅವರು ಪುತ್ತೂರು ತಾಲ್ಲೂಕಿನ ಧರ್ಮಸ್ಥಳ ಸಂಘ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರ ಹಕ್ಕುಗಳ...
21/08/2025

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಪ್ರಿಯ ಪೈಕ ಅವರು ಪುತ್ತೂರು ತಾಲ್ಲೂಕಿನ ಧರ್ಮಸ್ಥಳ ಸಂಘ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಕಾನೂನು ಮಾಹಿತಿ ನೀಡಿದರು.

#ನ್ಯಾಯ #ಕನ್ನಡ #ಕಾನೂನು #ಅರಿವು

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಪ್ರಿಯಾ ಪಿವಿ ಅವರು ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯಿದೆಯ ...
08/08/2025

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಪ್ರಿಯಾ ಪಿವಿ ಅವರು ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯಿದೆಯ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ನಡೆಸಿದರು.

Address

Bangalore

Alerts

Be the first to know and let us send you an email when Nyaaya Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nyaaya Kannada:

Share