28/12/2025
ಪರಿಶ್ರಮ ವಾರ್ತೆ: ಬಾಗಲಕೋಟೆ
ಗುರುಬಸವ ಪಬ್ಲಿಕ್ ಸ್ಕೂಲ್ ಸೀಮಿಕೇರಿ ಪು.ಕೆ. ದಲ್ಲಿ ಎಂ. ಎಂ. ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಸರ್ಚ್ ಸಂಸ್ಥೆ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಸರ್ಚ್ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್ ಮುಖೆ ಮೊಬೈಲ್ ಬಿಡಿ, ತರಕಾರಿ ತಿನ್ನಿರಿ, ದೃಷ್ಟಿ ದೋಷದಿಂದ ಪರಿಹಾರ ಕಂಡುಕೊಳ್ಳಿ ಎಂದು ಮಾತನಾಡಿದರು ಡಾ. ಮೇಘಾ ಉದಪುಡಿ, ಡಾ. ಮಂಜುಳಾ ಮುಖೆ, ಮೈಲಾರಪ್ಪ ಗಾಣಿಗೇರ, ದುಂಡಪ್ಪ ಭಜಂತ್ರಿ, ಪ್ರಾಚಾರ್ಯ ನೀಲಪ್ಪ ಗಾಣಿಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಭಿನಯ ಹುನಗುಂದ ಸ್ವಾಗತಿಸಿದರು, ಸೌಜನ್ಯ ಕಂದಕೂರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಬಿಯಾ ಮಕಾನದಾರ್ ವಂದಿಸಿದರು.