11/01/2026
ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಇಂದು ಯಶಸ್ವಿಯಾಗಿ ನಡೆಯಿತು. ಬಿವಿಎಸ್ ರಾಜ್ಯ ಸಂಯೋಜಕರಾದ ಡಾ.ಜಿ.ಶ್ರೀನಿವಾಸ್ ಅವರು " ಒಳಮೀಸಲಾತಿಯ ಒಳಸುಳಿ ಮತ್ತು ಮೀಸಲಾತಿಯ ಮುನ್ನೋಟ" ಎಂಬ ಪ್ರಬಂಧ ಮಂಡಿಸಿದರು. ಅತಿಥಿಗಳಾಗಿ ಆಗಮಿಸಿದ ನಿವೃತ್ತ IAS ಅಧಿಕಾರಿಗಳಾದ ಭೀಮಾಶಂಕರ್ ಅವರು, ನಿವೃತ್ತ KAS ಅಧಿಕಾರಿ ರುದ್ರಯ್ಯ ಅವರು, ಅಲೆಮಾರಿ ಸಮುದಾಯಗಳ ಸಂಘಟನೆಯ ನಾಯಕರಾದ ಶ್ರೀಯುತ ಲೋಹಿತ್ ಅವರು, ಪ್ರೊಫೆಸರ್ ಹರಿರಾಮ್ ಅವರು ಮತ್ತು ಅಧ್ಯಕ್ಷತೆ ವಹಿಸಿಕೊಂಡಿದ್ದ ನ್ಯಾಯವಾದಿಗಳಾದ ಮನೋರಂಜಿನಿ ಮೇಡಂ ಎಲ್ಲಾ ಗಣ್ಯರು ಅರ್ಥಪೂರ್ಣ ವಿಚಾರಗಳನ್ನು ತಮ್ಮ ಭಾಷಣ, ಅಭಿಪ್ರಾಯದಲ್ಲಿ ಹಂಚಕೊಂಡರು. ಬಿವಿಎಸ್ ರಾಮನಗರ ಜಿಲ್ಲೆಯ ಭರತ್ ಕುಮಾರ್ ಅವರು ನಿರ್ಣಯ ಮಂಡಿಸಿದರು. ಬಿವಿಎಸ್ ನಾಯಕರಾದ ಜನಾ ನಾಗಪ್ಪ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು. ಜೈಭೀಮ್
- BVS, ಕರ್ನಾಟಕ