Bgsbss puttur

  • Home
  • Bgsbss puttur

Bgsbss puttur Contact information, map and directions, contact form, opening hours, services, ratings, photos, videos and announcements from Bgsbss puttur, Community Center, .

ಆತ್ಮೀಯರೇ,23/02/1923 ರಲ್ಲಿ ಸ್ಥಾಪನೆಯಾದ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಪುತ್ತೂರು ಪ್ರಸ್ತುತ ಶತಮಾನೋತ್ಸವದ ...
28/01/2025

ಆತ್ಮೀಯರೇ,
23/02/1923 ರಲ್ಲಿ ಸ್ಥಾಪನೆಯಾದ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಪುತ್ತೂರು ಪ್ರಸ್ತುತ ಶತಮಾನೋತ್ಸವದ ಸಂಭ್ರಮದಲ್ಲಿದ್ದು,ಈಗಾಗಲೇ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಮಠ ಕೈವಲ್ಯ ಗುರುವರ್ಯರಾದ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮೀ ಮಹರಾಜ್ ರವರ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಾದದೊಂದಿಗೆ ಪ್ರಾರಂಭವಾದ ಶತಸಂಭ್ರಮ ಕಾರ್ಯಕ್ರಮವು,ಮುಂದೆ ಹಲವಾರು ದೇವಳ,ಸಂಘಸಂಸ್ಥೆಗಳಲ್ಲಿ,ಸಮಾಜದ ಆಸಕ್ತರ ಮನೆಗಳಲ್ಲಿ ಕಾರ್ಯಕ್ರಮಗಳು ನಡೆದಿರುವುದು ತಮಗೆಲ್ಲ ತಿಳಿದಿರುವ ವಿಷಯ.

ದಿನಾಂಕ 23/02/2023 ರಂದು ಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿತ್ತು.ಈ ಸಂದರ್ಭದಲ್ಲಿ ಸಂಘದ ಹಳೆಯ ಕಟ್ಟಡವನ್ನು ಹವಾನಿಯಂತ್ರಿತ ಕಟ್ಟಡವನ್ನಾಗಿ ನವೀಕರಿಸಿ ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಗಿತ್ತು.

ಹಿಂದಿನಿಂದಲೂ ಪ್ರಮುಖ ಬೇಡಿಕೆಯಾದ ಸಂಘಕ್ಕೆ ಖಾಯಂ ನಿವೇಶನಕ್ಕಾಗಿ ದಿನಾಂಕ 09/12/2024 ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರ್ ಎಂಬಲ್ಲಿ 0.48 ಎಕ್ರೆ ಜಾಗವನ್ನು ಖರೀದಿಸಲಾಯಿತು.ಈ ದಿನದಂದು ಜಾಗ ಖರೀದಿಗೆ ಕಾರಣಕರ್ತರಾದ ಎಲ್ಲರೊಂದಿಗೆ ಸಂಭ್ರಮ ಸಮಾರಂಭವನ್ನು ಆಚರಿಸಲಾಯಿತು.ಸದ್ರಿ ಜಾಗದ ಪಕ್ಕದಲ್ಲಿ 0.27 ಎಕ್ರೆ ಜಾಗವು ಸಹಸಂಸ್ಥೆ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪುತ್ತೂರು ಹೆಸರಿನಲ್ಲಿ ಲಭ್ಯವಿದ್ದು ಒಟ್ಟು 0.75 ಎಕ್ರೆ ಜಾಗವು ಸಮಾಜಕ್ಕೆ ಲಭ್ಯವಾದಂತಾಗಿದೆ.

ಪ್ರಸ್ತುತ ದಿನಾಂಕ 23/02/2025 ರಂದು ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ (ರಿ.) ಪುತ್ತೂರು ಇದರ ಕಟ್ಟಡವನ್ನು ಅನಾವರಣಗೊಳಿಸುವ ಸಮಾರಂಭವನ್ನು ಆಚರಿಸುವುದೆಂದು ಎರಡೂ ಸಂಸ್ಥೆಗಳ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.
ಈ ಸಂದರ್ಬದಲ್ಲಿ ಪುತ್ತೂರು ಸಂಘದ ವತಿಯಿಂದ ಸ್ಮರಣ ಸಂಚಿಕೆಯೊಂದನ್ನು ಹೊರತರಲು ಉದ್ದೇಶಿಸಿದ್ದು ಆ ಪ್ರಯುಕ್ತ ಸ್ಮರಣ ಸಂಚಿಕೆಗೆ ಜಾಹಿರಾತು ಒದಗಿಸಿಕೊಟ್ಟು
ಸಹಕಾರಿಸಬೇಕಾಗಿ ಬಯಸುತ್ತಿದ್ದೇವೆ.

. ಪುತ್ತೂರು ಸಂಘ ದ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವನ್ನು ಶ್ರೀಯುತ ಪುರುಷೋತ್ತಮ್ ಪ್ರಭು.ಮುಂಡಕೊಚ...
25/01/2025

. ಪುತ್ತೂರು ಸಂಘ ದ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವನ್ನು ಶ್ರೀಯುತ ಪುರುಷೋತ್ತಮ್ ಪ್ರಭು.ಮುಂಡಕೊಚ್ಚಿ.ಪುತ್ತೂರು.ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ವೇದಿಕೆಯಲ್ಲಿ ಸರಸ್ವತಿ ಸಹಕಾರಿಯ DGM ಶ್ರೀಮತಿ ಭವಾನಿ ಪ್ರಭು. ಪುತ್ತೂರು. .ಪುತ್ತೂರು ಸಂಘದ ಅಧ್ಯಕ್ಷರು ಆದ ಶ್ರೀ ಬಾಲಕೃಷ್ಣ ನಾಯಕ್. ತೆಂಕಿಲ. ಸಂಘದ ಹಿರಿಯ ನಿರ್ದೇಶಕರು ಅದ ಶುಭಕರ್. BR.ಉಪಸ್ಥಿತರಿದ್ದರು.

*ಬಾಲಾವಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು* ಇದರ *101ನೇ ವಾರ್ಷಿಕ ಮಹಾಸಭೆಯಲ್ಲಿ ಗೌರವರ್ಪಣೆ ಮಾಡಿದಂತ ಶ್ರೀ ಯುತ S.R....
29/09/2024

*ಬಾಲಾವಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು* ಇದರ *101ನೇ ವಾರ್ಷಿಕ ಮಹಾಸಭೆಯಲ್ಲಿ ಗೌರವರ್ಪಣೆ ಮಾಡಿದಂತ ಶ್ರೀ ಯುತ S.R.ನಾಯಕ್* ಇವರ ಕಿರು ಪರಿಚಯ
ಶ್ರೀಯುತ ಸುಳ್ಳಿ ರಾಧಾಕೃಷ್ಣ ನಾಯಕ್ ಇವರು ಸುಳ್ಯ ತಾಲೂಕು ನೆಲ್ಲೂರುಕೆಮ್ರಾಜೆ ಗ್ರಾಮದ ಕೃಷಿ ಕುಟುಂಬದ ಶ್ರೀಮತಿ ಲಕ್ಷ್ಮೀ ನಾಯಕ್ ಮತ್ತು ಶ್ರೀ ವಾಸುದೇವ ನಾಯಕ್ ದಂಪತಿಗಳ ಪ್ರಥಮ ಪುತ್ರರಾಗಿ ದಿನಾಂಕ 15-06-1948ರಂದು ಜನಿಸಿರುತ್ತಾರೆ. ಇವರು ದಿನಾಂಕ 26-04-1974ರಂದು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಾಮೆತ್ತಡ್ಕ ಶ್ರೀಮತಿ ಸುಮಿತ್ರ ನಾಯಕ್ ಮತ್ತು ಶ್ರೀ ಜಯಂತ್ ನಾಯಕ್ ಇವರ ಸುಪುತ್ರಿಯಾದ ಶ್ರೀಮತಿ ಸುಮನ್ ನಾಯಕ್ ಇವರನ್ನು ವಿವಾಹವಾಗಿರುತ್ತಾರೆ. ಶ್ರೀಮತಿ ಸುಮನ್ ನಾಯಕ್ ಇವರು ವಿವೇಕಾನಂದ ಪದವಿ ಕಾಲೇಜಿನ ಪ್ರಥಮ ಸಾಲಿನ ವಿದ್ಯಾರ್ಥಿಯಾಗಿದ್ದು ತಮ್ಮ ಬಿ.ಎಡ್ ವಿದ್ಯಾಭ್ಯಾಸವನ್ನು ಮಣಿಪಾಲ ಕಾಲೇಜ್ ಆಫ್ ಎಡ್ಯುಕೇಶನ್ ಉಡುಪಿಯಲ್ಲಿ ಪಡೆದಿರುತ್ತಾರೆ. ಶ್ರೀಯುತ ರಾಧಾಕೃಷ್ಣ ನಾಯಕ್ ಇವರು ಇಂಗ್ಲಿಷ್ ಲಿಟರೇಚರ್ನಲ್ಲಿ ಪದವಿ ಹಾಗೂ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಬ್ಯಾಂಕರ್ಸ್ ಮುಂಬಯಿನಿಂದ CA IIB ಪದವಿಯನ್ನು ಹೊಂದಿರುತ್ತಾರೆ. ಇವರು ಜನತಾ ಹಿರಿಯ ಪ್ರಾರ್ಥಮಿಕ ಶಾಲೆ ಹುಡಿಕೇರಿಯಲ್ಲಿ ಸೇವೆ ಸಲ್ಲಿಸಿದ್ದು 1969ರಲ್ಲಿ ಕಾರ್ಪರೇಷನ್ ಬ್ಯಾಂಕ್ ನಲ್ಲಿ ಉದ್ಯೋಗವನ್ನು ಪ್ರಾರಂಭಿಸಿ ಮುಂದೆ 1975ರಲ್ಲಿ ಬ್ಯಾಂಕ್ ಅಧಿಕಾರಿಯಾಗಿ ಬಡ್ತಿ ಹೊಂದಿ 1980ರಲ್ಲಿ ಮ್ಯಾನೇಜರ್ ಆಗಿ ಬಡ್ತಿ ಹೊಂದಿ 2000ರಲ್ಲಿ ಹಿರಿಯ ಪ್ರಬಂಧಕರಾಗಿ ಮುಂಬಡ್ತಿ ಹೊಂದಿ 2003ರಲ್ಲಿ ನಿವೃತ್ತರಾಗುತ್ತಾರೆ.
ಇವರು ಪ್ರಸ್ತುತ ತಮ್ಮ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಇವರು ಇಬ್ಬರು ಪುತ್ರ ಹಾಗು ಒಬ್ಬ ಪುತ್ರಿಯನ್ನು ಹೊಂದ್ದಿದು, ಹಿರಿಯ ಪುತ್ರ ಕಿರಣ್ (BE ICWA MBA) ಟೊಯೊಟೊ ಕಂಪೆನಿ ಬಿಡದಿಯಲ್ಲಿ ಉಪಮಹಾಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಿರಿಯ ಮಗ ಹರ್ಷವರ್ಧನ್ ಇವರು ಜರ್ಮನಿಯ ಸ್ಟಾಕ್ ಎಕ್ಸಚೇಂಚ್ Deutsche Bank ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಪ್ರಸ್ತುತ Frankfurt ಜರ್ಮನಿಯಲ್ಲಿ ವಾಸವಾಗಿರುತ್ತಾರೆ. ಪುತ್ರಿ ಸೌಮ್ಯ ಇಂಡಿಗೊ ಏರ್ ಲೈನ್ಸನಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರೀಯುತರು ಉದ್ಯೋಗ ಸಂದರ್ಭದಲ್ಲಿಅಖಿಲ ಭಾರತ ಕಾರ್ಪರೇಷನ್ ಬ್ಯಾಂಕ್ ನ ನೌಕರರ ಸಂಘದ ಕಾರ್ಯದರ್ಶಿಯಾಗಿ ನಂತರ ಅಧಿಕಾರಿಗಳ ಸಂಘದ ಮಲ್ನಾಡು ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.
2005ರಿಂದ 2007ರವರೆಗೆ ಶ್ರೀ ಸರಸ್ವತಿ ಸೌಹಾರ್ದ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿ, 2005ರಿಂದ 2023ರವರೆಗೆ ಸರಸ್ವತಿ ಎಜ್ಯುಕೇಶನ್ ಟ್ರಸ್ಟನ ಕೋಶಾಧಿಕಾರಿಯಾಗಿ ಸೇವೆಸಲ್ಲಿಸಿರುತ್ತಾರೆ. ನಮ್ಮ ಸಮಾಜದ ಮುಖವಾಣಿಯಾದ “ಸಾರಸ್ವತ ಸೌರಭ” ದಲ್ಲಿ 2010ರಿಂದ ಈ ವರೆಗೂ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುತ್ತೂರು ಸಂಘಕ್ಕೆ ನಿರಂತರ ಸಹಕಾರಗಳನ್ನು ನೀಡಿ ಮಾರ್ಗದರ್ಶನ ಮಾಡುತ್ತಿರುವ ಶ್ರೀಯುತರು ಪತ್ನಿಯೊಂದಿಗೆ ಪ್ರಸ್ತುತ ಮುಕ್ರುಂಪಾಡಿಯಲ್ಲಿ ಸಾಮಾಜಿಕ ಚಟುವಟಿಕೆಗಳೊಂದಿಗೆ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಶ್ರೀಯುತರಿಗೆ ಹಾಗು ಅವರ ಕುಟುಂಬಸ್ತರಿಗೆ ಶ್ರೀ ದೇವಿಯು ಆಯುರಾರೋಗ್ಯ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

Address


Website

Alerts

Be the first to know and let us send you an email when Bgsbss puttur posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Non Profit Organization?

Share