ಬ್ರಾಹ್ಮಣ ಪ್ರಿಯ - Bramhana priya

  • Home
  • ಬ್ರಾಹ್ಮಣ ಪ್ರಿಯ - Bramhana priya

ಬ್ರಾಹ್ಮಣ ಪ್ರಿಯ - Bramhana priya Brahmana Priya ಧರ್ಮೋ ರಕ್ಷತಿ ರಕ್ಷಿತಃ
(1)

Any reply?
19/04/2025

Any reply?

17/04/2025

ಶಿವಮೊಗ್ಗ ಆದಿಚುಂಚನಗಿರಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು...
ಬ್ರಾಹ್ಮಣರಿಂದ ಪ್ರತಿಭಟನೆ

ತುಳುವ ಪೇಜಿನ ಈ ಅಜ್ಞಾತ ಮೂರ್ಖ ಲೇಖಕನಿಗೆ ನನ್ನದೊಂದು ಓಪನ್ ಚಾಲೆಂಜ್. ತಾಕತ್ತಿದ್ದರೆ ಇದು ನಡೆದ ಘಟನೆಯನ್ನು ಹೆಸರಿನೊಂದಿಗೆ ಉಲ್ಲೇಖಿಸಬೇಕು. ಸ...
19/05/2024

ತುಳುವ ಪೇಜಿನ ಈ ಅಜ್ಞಾತ ಮೂರ್ಖ ಲೇಖಕನಿಗೆ ನನ್ನದೊಂದು ಓಪನ್ ಚಾಲೆಂಜ್.

ತಾಕತ್ತಿದ್ದರೆ ಇದು ನಡೆದ ಘಟನೆಯನ್ನು ಹೆಸರಿನೊಂದಿಗೆ ಉಲ್ಲೇಖಿಸಬೇಕು. ಸುಖಾ ಸುಮ್ಮನೆ ಹೀಗೆ ಕಥೆ ಕಟ್ಟುವುದಾದರೆ ಯಾರಿಗೂ ಕೂಡ ಏನು ಬೇಕಾದರೂ ಕಥೆ ಕಟ್ಟಬಹುದು ನೆನಪಿರಲಿ. ನಿನ್ನಲ್ಲಿ ವೈದಿಕ ಓಡಿದ ಒಂದು ಕಥೆ ಇದ್ದರೆ ಮತ್ತೊಂದು ಬದಿಯಲ್ಲಿ ಕೋಲ ಕಟ್ಟುವವರಿಗೆ ದೈವವೇ ಬಾರದ ಸಾವಿರಾರು ಕಥೆಗಳಿವೆ ಎನ್ನುವುದು ಕೂಡ ಗಮನದಲ್ಲಿರಲಿ.

ಲೇಖನದಲ್ಲಿ ನಿಮ್ಮ ಹೆಸರಿಲ್ಲ, ಇದು ಎಲ್ಲಿ ನಡೆದದ್ದು ಹಾಗೂ ಯಾರಾ ವೈದಿಕರು ಎನ್ನುವ ಸ್ಪಷ್ಟ ಉತ್ತರವಿಲ್ಲ. ಇಂತಹ ಸುಳ್ಳು ಕಥೆಗಳಿಂದ ನಿಮ್ಮ ಮೂಲ ಸಂಸ್ಕೃತಿಯನ್ನು ಉಳಿಸುವ ದುರ್ದೈವ ಬಂತಲ್ಲವೇ ನಿಮಗೆ...

ನಾವು ಅವೈದಿಕರು, ದ್ರಾವಿಡ ಮೂಲ ಪರಂಪರೆಯ ನಮ್ಮ ಆಚರಣೆಗಳನ್ನು ಬ್ರಾಹ್ಮಣರು ಹಾಳುಗೆಡಹುತ್ತಿದ್ದಾರೆ ಎನ್ನುವುದಾಗಿ ಹೊಸದೊಂದು ಹೋರಾಟ ಇತ್ತೀಚಿಗೆ ಭಾರೀ ಜೋರಾಗಿ ನಡೆಯುತ್ತಿದೆ. ಈ ಹೋರಾಟದ ಭಾಗವಾಗಿ ಇಲ್ಲ ಸಲ್ಲದ ಸುಳ್ಳು ಕಥೆಗಳನ್ನು ಹೆಣೆಯುತ್ತಿದ್ದಾರೆ. ಹೀಗೆ ಸುಳ್ಳು ಕಥೆಗಳನ್ನು ಬರೆದು ಆ ಸಂಸ್ಕೃತಿಯನ್ನು ಉಳಿಸುವ ಇವರ ದಯನೀಯ ಪರಿಸ್ಥಿತಿ ಕಂಡಾಗ ಆ ದೈವಕ್ಕೂ ಕೂಡ ಬೇಸರವಾಗದೆ ಇರಲಾರದು.

ಯಾವುದೋ ಚಲನಚಿತ್ರದ ಹಾಡಿಗೆ ಮೈ ಮರೆತು ಕುಣಿಯುವ ದೈವ, ಮಂತ್ರದ ನಾದಕ್ಕೆ ವಿರೋಧಿಸುತ್ತದೆ ಎಂದರೆ ದೈವದ ಹೆಸರಿನಲ್ಲಿ ನೀವಲ್ಲವೇ ದ್ವೇಷ ಕಾರುವುದು. ಕುಡಿಯಬಾರದದ್ದನ್ನು ಕುಡಿದು, ತಿನ್ನಬಾರದದ್ದನ್ನು ತಿಂದು ಅಕ್ರಮವಾಗಿ ದೈವ ಚಾಕರಿಗೆ ಬರುವವನನ್ನು, ತಾಯ್ತನದ ಪ್ರತಿಮೂರ್ತಿಯಾಗಿರುವ ದೈವ ಅಪ್ಪಿ ಒಪ್ಪಿಕೊಂಡಿದೆ. ಅಂಥದ್ದರಲ್ಲಿ ಅದೇ ದೈವ ವೈದಿಕ ಕ್ರಮವನ್ನು ವಿರೋಧಿಸುತ್ತಿದೆ ಎಂದರೆ ನಿಮ್ಮ ಸ್ವಾರ್ಥಕ್ಕೆ ನೀವು ದೈವವನ್ನು ಉಪಯೋಗಿಸಿಕೊಳ್ಳುತ್ತಿದ್ದೀರಿ ಎನ್ನುವುದು ಸ್ಪಷ್ಟ. ದಯವಿಟ್ಟು ತಾಕತ್ತಿದ್ದರೆ ನೇರವಾಗಿ ವಿರೋಧಿಸಿ. ನಿಮ್ಮ ವಿರೋಧವನ್ನು ದೈವದ ತಲೆಗೆ ಕಟ್ಟಬೇಡಿ .

ಹೊರಗಿನಿಂದ ಬಂದ ಬ್ರಿಟಿಷರು ಇಲ್ಲಿ ನೆಲೆ ಪಡೆಯಲು ಹಾಗು ಸುಲಭದಲ್ಲಿ ಆಳಬೇಕು ಎನ್ನುವ ಕಾರಣಕ್ಕಾಗಿ ಉತ್ತರ ಭಾರತದವರು ಹೊರಗಿನಿಂದ ಬಂದವರು ಅವರು ನಿಮ್ಮನ್ನು ಆಳುತ್ತಿದ್ದಾರೆ ಎನ್ನುವ ಒಂದು ಕೆಟ್ಟ ತಪ್ಪು ಕಲ್ಪನೆಯನ್ನು ದಕ್ಷಿಣ ಭಾರತದವರ ತಲೆಗೆ ತುಂಬಿದರು. ಈ ಮೂಲಕ ಮೆಕಾಲೆಯ ಕೆಟ್ಟ ಸಂತಾನ ಭಾರತವನ್ನು ಆರ್ಯ ದ್ರಾವಿಡ ಎಂದು ತುಂಡರಿಸಿದೆ. ಆರ್ಯರನ್ನು ವಿರೋಧಿಸುವ ಭರದಲ್ಲಿ ಈ ಪಾಪಿಗಳು ವಿರೋಧಿಸುವುದು ಭಾರತೀಯರನ್ನು ಎನ್ನುವುದು ಇಡೀ ದೇಶಕ್ಕೆ ಬೇಕಾದಷ್ಟು ಬಾರಿ ಸಾಬೀತಾಗಿದೆ. ದ್ರಾವಿಡರ ಹೋರಾಟಗಳನ್ನು ಒಮ್ಮೆ ಗಮನಿಸಿ ನೋಡಿ. ಬೇರೆ ದೇಶದ, ಬೇರೆ ಮತದ ಯಾವುದೇ ಆಚರಣೆಗಳು ಕೂಡ ಈ ದ್ರಾವಿಡ ಹೋರಾಟಗಾರರಿಗೆ ಅಪಥ್ಯವಾಗುವುದಿಲ್ಲ. ಅವರ ಹೋರಾಟಗಳು ಏನಿದ್ದರೂ ಕೂಡ ಅದು ಭಾರತೀಯ ಆಚರಣೆಗಳ ವಿರುದ್ಧ ಮಾತ್ರ. ಅಂತಹ ಕೆಟ್ಟ ತಳಿಗಳು ನಮ್ಮ ತುಳುನಾಡಿನಲ್ಲಿ ಹುಟ್ಟುತ್ತಿದೆ. ಮೂಲ ಪರಂಪರೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಕೇವಲ ಬ್ರಾಹ್ಮಣರನ್ನು ದೂರಿ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.

ಬ್ರಾಹ್ಮಣರಲ್ಲಿಯೂ ಬಹುತೇಕ ದೈವರಾಧಕರಿದ್ದಾರೆ. ಬ್ರಾಹ್ಮಣರ ದೈವದ ಗುಡಿ ಹಾಗೂ ನಾಗನ ಸಾನಿಧ್ಯ ಇವತ್ತಿಗೂ ಪ್ರಾಚೀನ ಕಲ್ಪನೆಯಲ್ಲಿಯೇ ಉಳಿದುಕೊಂಡಿದೆ. ಊರಿನವರ ದೈವಕ್ಕೆ ಕಲಶ ಕಟ್ಟುವ ಕ್ರಮ ಇವತ್ತಲ್ಲದೆ ಕನಿಷ್ಠ ಐದು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ದೇವಸ್ಥಾನಗಳಲ್ಲಿ ದೈವದ ಗುಡಿಗಳಿವೆ. ಇವೆಲ್ಲ ಬಿಡಿ, ದೈವ ಬ್ರಾಹ್ಮಣರ ಮೇಲೂ ಬರುತ್ತದೆ. ಅದೆಷ್ಟೋ ಬ್ರಾಹ್ಮಣ ಬೂತಗಳಿವೆ. ಇಲ್ಲೆಲ್ಲೂ ಇಲ್ಲದ ವೈದಿಕ ವಿರೋಧ ಭಾವ ಆ ದೈವಕ್ಕೆ ನಿಮ್ಮ ಜಾಲಿಗೆ ಬಂದಾಗ ಹೇಗೆ ಬರುವುದು. ಇದಕ್ಕೆಲ್ಲ ಇಲ್ಲಿಯ ಮೂಲ ನಿವಾಸಿ ದುರ್ಬುದ್ಧಿಜೀವಿಗಳ ಉತ್ತರ ಏನಿರಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ.

ಇವತ್ತು ನಮ್ಮ ದೈವ ಹೊಸ ಹೊಸ ಬಣ್ಣವನ್ನು ಮೆಚ್ಚಿಕೊಂಡಿದೆ. ಹೊಸ ಹೊಸ ವಾದ್ಯವಿಶೇಷಗಳಿಗೆ ಹೆಜ್ಜೆ ಹಾಕುತ್ತಿದೆ. ಕಣ್ಣು ಕುಕ್ಕುವ ಲೈಟುಗಳನ್ನು ದೈವ ಕಣ್ಣು ಮುಚ್ಚಿಕೊಂಡು ಒಪ್ಪಿಕೊಂಡಿದೆ. ಸಿಮೆಂಟು ಗುಡಿಗಳನ್ನು ಒಪ್ಪಿಕೊಂಡು ಕೂತಿದೆ. ಬ್ರಹ್ಮ ಕಳಶಕ್ಕೆ ಎದೆ ಬಡಿದುಕೊಳ್ಳುವವರು ಇವತ್ತು ದೈವ ರಥದಲ್ಲಿ ತಿರುಗುವುದಕ್ಕೆ ಏನು ಹೇಳುತ್ತಾರೆ. ಇದೆಲ್ಲ ಬಿಡಿ ಇತ್ತೀಚೆಗೆ ದೈವ ಮಂತ್ರವನ್ನು ಹೇಳಿದ ವಿಡಿಯೋಗಳು ತಿರುಗುತ್ತಿತ್ತು. ಇಷ್ಟೆಲ್ಲ ಬದಲಾವಣೆಯನ್ನು ಪಡೆದುಕೊಂಡಿರುವ ದೈವ ವೈದಿಕತೆಗೆ ಇಷ್ಟೊಂದು ವಿರೋಧಿಸುತ್ತದೆ ಎಂದರೆ ಆಶ್ಚರ್ಯವಾಗುವುದಿಲ್ಲವೇ.

ಕೊನೆಯದಾಗಿ ದ್ರಾವಿಡ ಮೂಲ ಪರಂಪರೆಯ ಪ್ರಾಚೀನತೆಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯನ್ನು ಸ್ವಯಂ ಸ್ವೀಕರಿಸಿಕೊಂಡಿರುವ ಹೊಸ ದುರ್ಬುದ್ದಿಜೀವಿ ಹೋರಾಟಗಾರರಲ್ಲಿ ನನ್ನ ವಿನಂತಿ. ಬದಲಾವಣೆಯ ಈ ಕಾಲದಲ್ಲಿ ಪರಂಪರೆಯಿಂದ ಬಂದ ಹೆಸರು ಬದಲಾಗುತ್ತಿದೆ. ತಂದೆ ಮುತ್ತಾತಂದಿರು ಬದುಕಿದ ರೀತಿಯನ್ನು ಮರೆತು ಇವತ್ತಿನ ಮಕ್ಕಳು ಬದುಕುತ್ತಿದ್ದಾರೆ. ಪಾಶ್ಚಾತ್ಯ ವೇಷ ಭೂಷಣಕ್ಕೆ ಮಾರಿಕೊಂಡು ಲುಂಗಿ ಉಡಲು ನಮ್ಮ ಹುಡುಗರು ಹೆಣಗಾಡುತ್ತಿದ್ದಾರೆ. ಕುಲಕಸುಬನ್ನು ಕಾಲ ಕಸಕ್ಕಿಂತ ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಇಂದಿರಾ ಗಾಂಧಿಯ ಕೃಪಾ ಕಟಾಕ್ಷದಿಂದ ಪಡೆದ ಜಮೀನನ್ನು ಇವತ್ತಿನ ಮಕ್ಕಳು ನಾಲ್ಕು ಖಾಸಿಗೆ ಮಾರಿ ಪೇಟೆಗೆ ಓಡಿದ್ದಾರೆ. ಸಂಸ್ಕೃತವನ್ನು ವಿರೋಧಿಸುವ ನೆಲೆಯಲ್ಲಿ ಇಂಗ್ಲಿಷ್ ಮಕ್ಕಳನ್ನು ಸಾಕುತ್ತಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಸಾಗುತ್ತಲೇ ಹೋಗುತ್ತದೆ. ಇಲ್ಲಿ ಯಾವುದರಲ್ಲೂ ಕೂಡ ನಿಮಗೆ ನಿಮ್ಮ ಪ್ರಾಚೀನ ಪದ್ಧತಿ ನೆನಪಿಗೆ ಬರುವುದಿಲ್ಲ. ನಿಮ್ಮ ಊರಿನ ನಿಮ್ಮವರೇ ಆದ ಬ್ರಾಹ್ಮಣರು ಬರುವುದನ್ನು ಕಂಡಾಗ ಹಾಗೂ ಅವರು ಬದುಕುವುದನ್ನು ಕಂಡಾಗ ನಿಮಗೆ ಹೊಟ್ಟೆ ಉರಿಯುತ್ತದೆ ಅಲ್ಲವೇ. ಈ ನಿಮ್ಮೊಳಗಿರುವ ಬ್ರಾಹ್ಮಣ ದ್ವೇಷಕ್ಕೆ ಮದ್ದಿಲ್ಲ ಬಿಡಿ.

ಬದಲಾವಣೆ ತರುವುದಿದ್ದರೆ ಎಲ್ಲದರಲ್ಲೂ ಬದಲಾವಣೆಯನ್ನು ತರಬೇಕಲ್ಲವೇ. ಇವತ್ತಿನ ಸಮಾಜ ಹಾಳಾಗುತ್ತಿರುವುದು ನಮ್ಮ ಊರಿನ ನಮ್ಮ ದೇಶದ ಸಂಸ್ಕೃತಿಯಿಂದಲ್ಲ ನೆನಪಿರಲಿ. ವಿರೋಧಿಸುವುದಿದ್ದರೆ ಕುಡಿದು ತೇಲಾಡಿ ಆಚರಿಸುವ ಪದ್ಧತಿಗಳನ್ನು, ಆಡಂಬರಕ್ಕಾಗಿ ಕೋಟಿಗಟ್ಟಲೆ ಖರ್ಚಾಗುವುದನ್ನು,ಮತಾಂತರವನ್ನು,ಜಿಹಾದಿ ಮನಸ್ಥಿತಿಯನ್ನು ವಿರೋಧಿಸಿ. ನಾಳೆ ನಿಮ್ಮ ಮಕ್ಕಳು ಕೂಡ ಒಂದೊಮ್ಮೆ ಬುದ್ಧಿ ಬಂದರೆ ನಿಮ್ಮನ್ನು ಭೇಷ್ ಎನ್ನಬಹುದು. ಅದು ಬಿಟ್ಟು ನಮ್ಮದೇ ಸಂಸ್ಕೃತಿಯ ಒಂದು ಭಾಗವನ್ನು ವಿರೋಧಿಸಿ ನಾಳೆ ಮತ್ತಷ್ಟು ನಮ್ಮ ಮಕ್ಕಳನ್ನು ನಮ್ಮಿಂದ ನಮ್ಮ ಸಂಸ್ಕೃತಿಯಿಂದ,ನಮ್ಮ ಪರಂಪರೆಯಿಂದ ದೂರ ಇಡುವ ಕೆಲಸ ಮಾಡಬೇಡಿ.

|| ✍️|| ಸಂತೋಷ್ ಕುಮಾರ್ ಮುದ್ರಾಡಿ ||

ಆಟೋ ನಂಬರ್ KA05AN5954  ಅರ್ಚಕರು ಅನ್ನುವುದನ್ನು ನೋಡದೆ  ಅರ್ಚಕರ ಮೇಲೆ ಹಲ್ಲೆ ಮಾಡಿ ಹೋಗಿರುವಂತ ವ್ಯಕ್ತಿಯ ಮೇಲೆ ಸೂಕ್ತ ಕ್ರಮ  ಕೈಗೊಳ್ಳುತ್ತ...
16/05/2024

ಆಟೋ ನಂಬರ್ KA05AN5954 ಅರ್ಚಕರು ಅನ್ನುವುದನ್ನು ನೋಡದೆ ಅರ್ಚಕರ ಮೇಲೆ ಹಲ್ಲೆ ಮಾಡಿ ಹೋಗಿರುವಂತ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ. ನಮ್ಮ ಬ್ರಾಹ್ಮಣ ಸಂಘದ ಎಲ್ಲಾ ಪದಾಧಿಕಾರಿಗಳು ನಿಮ್ಮ ನಿಮ್ಮ ಹತ್ತಿರದ ಸ್ಟೇಷನ್ನಲ್ಲಿ ಈ ನಂಬರ್ ಈ ನಂಬರ್ ಮೇಲೆ ಕಂಪ್ಲೇಂಟ್ ಅನ್ನ ಕೊಡಬಹುದು . ಅವರಾಗಿ ಬಂದು ಕ್ಷಮೆಯನ್ನು ಕೇಳಿದರೆ. ಎಲ್ಲರಿಗೂ ಒಳ್ಳೆಯದು.

ವಿಶ್ವ ಪ್ರಸನ್ನ ತೀರ್ಥರ ಗೋಸೇವೆಯ ಫಲಕ್ಕೆ ಇವತ್ತು ಗೋಪ್ರಿಯನಾದ ಶ್ರೀರಾಮ ಒಲಿದದ್ದು...ಗುರುಗಳ ವೇದದ ಮೇಲಿನ ಅಭಿಮಾನಕ್ಕೆ ವೇದವೇದ್ಯ ಶ್ರೀರಾಮ ಒ...
22/01/2024

ವಿಶ್ವ ಪ್ರಸನ್ನ ತೀರ್ಥರ ಗೋಸೇವೆಯ ಫಲಕ್ಕೆ ಇವತ್ತು ಗೋಪ್ರಿಯನಾದ ಶ್ರೀರಾಮ ಒಲಿದದ್ದು...

ಗುರುಗಳ ವೇದದ ಮೇಲಿನ ಅಭಿಮಾನಕ್ಕೆ ವೇದವೇದ್ಯ ಶ್ರೀರಾಮ ಒಲಿದದ್ದು....

ಪ್ರಹ್ಲಾದ ಗುರುಕುಲದ ಮೂಲಕ ಬಾಲಕರ ಸೇವೆ ಮಾಡಿದ ಫಲಕ್ಕೆ ಇವತ್ತು ರಾಮಲಲ್ಲಾ ಒಲಿದದ್ದು...

ಸನಾತನ ಸಂಸ್ಕೃತಿಯನ್ನು ತನ್ನೊಳಗೆ ಆರಾಧಿಸಿಕೊಂಡಿದ್ದಕ್ಕೆ ಇವತ್ತು ಶ್ರೀರಾಮ ಒಲಿದದ್ದು..

ಯೋಗದ ಮೂಲಕ ಮುಖ್ಯಪ್ರಾಣನ ಸೇವೆ ಮಾಡಿದ ಫಲಕ್ಕೆ ಇವತ್ತು ಶ್ರೀರಾಮ ಒಲಿದದ್ದು..

ಕಾಲ್ನಡಿಗೆಯಲ್ಲಿ ಬದರೀ ನಾರಾಯಣನನ್ನು ಕಂಡ ಫಲಕ್ಕೆ ವನವಾಸಕ್ಕೆ ನಡೆದ ಶ್ರೀರಾಮ ಒಲಿದದ್ದು....

ತನ್ನ ಗುರುಗಳು ಹೆಮ್ಮೆಪಡುವಂತೆ ಬದುಕಿದ ಫಲಕ್ಕೆ ಆದರ್ಶ ಪುರುಷ ಶ್ರೀರಾಮ ಒಲಿದದ್ದು..

ಕೊನೆಯ ತನಕವೂ ವಿಶ್ವೇಶತೀರ್ಥ ಗುರುಗಳ ಪಾದ ಸೇವೆ ಮಾಡಿದ ಫಲಕ್ಕೆ ವಸಿಷ್ಠ ಶಿಷ್ಯ ಶ್ರೀರಾಮ ಒಲಿದದ್ದು..

✍️ ಸಂತೋಷ್ ಕುಮಾರ್ ಮುದ್ರಾಡಿ

95 ಪರ್ಸೆಂಟ್ ಅಂಕವನ್ನು ಪಡೆದ ಕೇಶವನಿಗಿಂತ 35% ಅಂಕವನ್ನು ಪಡೆದ ಶಿವಲಿಂಗಪ್ಪ ಜಾತಿಯ ಆಧಾರದಲ್ಲಿ ಐಎಎಸ್ ಕೆಲಸವನ್ನು ಗಿಟ್ಟಿಸಿಕೊಂಡ. ಆತನ ತಮ್ಮ...
06/01/2024

95 ಪರ್ಸೆಂಟ್ ಅಂಕವನ್ನು ಪಡೆದ ಕೇಶವನಿಗಿಂತ 35% ಅಂಕವನ್ನು ಪಡೆದ ಶಿವಲಿಂಗಪ್ಪ ಜಾತಿಯ ಆಧಾರದಲ್ಲಿ ಐಎಎಸ್ ಕೆಲಸವನ್ನು ಗಿಟ್ಟಿಸಿಕೊಂಡ. ಆತನ ತಮ್ಮ ನಿಜಲಿಂಗಪ್ಪ ಇಷ್ಟೇ ಮಾರ್ಕನ್ನು ತೆಗೆದುಕೊಂಡು ಈಗ ಜಡ್ಜ್ ಆಗಿದ್ದಾನೆ. ಮತ್ತೊಬ್ಬ ತಮ್ಮ ಪೊಲೀಸ್ ಆಗಿದ್ದಾನೆ. ಯಾರು ಕೂಡ ಕಲಿತು ಹುದ್ದೆಯನ್ನು ಗಿಟ್ಟಸಿಕೊಂಡವರಲ್ಲ.

ಭೂ ಮಸೂದೆಯ ಕಾನೂನಿನಡಿಯಲ್ಲಿ 50 ಎಕರೆಯನ್ನು ಕಳೆದುಕೊಂಡ ಕೇಶವ ಜೋಶಿಗಳು 5 ಸೆನ್ಸ್ ಜಾಗದಲ್ಲಿ ಮನೆಯೊಂದಿಗೆ ತಾಗಿಸಿಕೊಂಡು ಅಂಗಡಿಯನ್ನು ಹಾಕಿಕೊಂಡು ಬದುಕುತ್ತಿದ್ದಾರೆ.ಕೊರೋನದ ಸಂದರ್ಭದಲ್ಲಿ ಪರಿಹಾರ ನಿಧಿಗಾಗಿ ಸಾಲಿಗೆ ನಿಂತರೆ ಹತ್ತಿರದ ಮನೆಯ 10 ಮಕ್ಕಳ ತಂದೆ ಅಬ್ದುಲ್ಲನಿಗೆ 10 ಕೆಜಿ ಅಕ್ಕಿಯೊಂದಿಗೆ ಇನ್ನಿತರ ಧಾನ್ಯ ಕಾಳುಗಳೆಲ್ಲವೂ ಉಚಿತ. ಜಾತಿಯ ಆಧಾರದಲ್ಲಿ ಗತಿ ಇಲ್ಲದಿದ್ದರೂ ಜೋಷಿಯ ಹೊಟ್ಟೆಗೆ ತಣ್ಣೀರ ಬಟ್ಟೆ ಮಾತ್ರ.

ಹಗಲು ರಾತ್ರಿ ಓದಿ ಸರ್ಕಾರದ ಕೆಲಸಕ್ಕೆ ಹೇಗಾದರೂ ಮಾಡಿ ಸೇರಬೇಕೆಂದುಕೊಂಡ ರಾಘು,ಕೊನೆಗೂ ತಾಲೂಕು ಆಫೀಸಿನಲ್ಲಿ ಗುಮಾಸ್ತನಾಗಿ ಸೇರಿಕೊಂಡ. ತಹಸಿಲ್ದಾರನಾಗಿ ಬಂದದ್ದು ಇವನ ಬಾಲ್ಯದ ಗೆಳೆಯ ಹನುಮಂತಪ್ಪ. ಪ್ರತಿಯೊಂದು ಕ್ಲಾಸಿನಲ್ಲೂ ಎರಡೆರಡು ಬಾರಿ ಕೂತು ಜಾತಿಯ ಆಧಾರದಲ್ಲಿ ಅಧಿಕಾರವನ್ನು ಹಾಗೂ ಗೌರವವನ್ನು ಪಡೆದುಕೊಂಡ.

ಎಷ್ಟು ಕಲಿತರು ವಿದ್ಯೆಗೆ ಹಾಗೂ ಯೋಗ್ಯತೆಗೆ ಇಲ್ಲಿ ಬೆಲೆಯೇ ಇಲ್ಲ.ಬ್ರಾಹ್ಮಣರಿಗೆ ದುಡಿದು ತಿನ್ನುವ ಎಂದರೆ ಇದ್ದಬದ್ದ ಕೃಷಿ ಜಾಗವೆಲ್ಲ ಈಗಾಗಲೇ ಕಳೆದುಕೊಂಡಾಗಿದೆ. ಪರಂಪರೆಯಿಂದ ಬಂದ ಮಠ ಮಂದಿರಗಳ ಅರ್ಚಕ ಸ್ಥಾನ ಕೂಡ ಪ್ರಮಾಣ ಪತ್ರದ ಆಧಾರದಲ್ಲಿ ಇನ್ನಿತರ ಜಾತಿಯವರಿಗೆ ಹಂಚಿಕೆಯಾಗುತ್ತಿದೆ. ಪಾರಂಪರಿಕವಾಗಿ ಬಂದ ಯಾವ ವೃತ್ತಿಯೂ ಈಗ ಬ್ರಾಹ್ಮಣರಲ್ಲಿ ಉಳಿದಿಲ್ಲ. ಸಾಧ್ಯವಿದ್ದಷ್ಟು ಮಟ್ಟಿಗೆ ಉಳಿಸಿಕೊಂಡು ಬೆಳೆಸಿಕೊಂಡು ಬಂದರೂ ಕೂಡ ಈಗ ಎಲ್ಲವನ್ನು ಕಳೆದುಕೊಳ್ಳುತ್ತಿದೆ ಈ ಸಮಾಜ. ಸಾಮಾಜಿಕವಾಗಿ ಈ ರೀತಿಯಾಗಿ ಪಾರಂಪರಿಕ ವೃತ್ತಿಯನ್ನು ಕಳೆದುಕೊಂಡ ಯಾವ ಜಾತಿಯು ಇರಲಿಕ್ಕಿಲ್ಲ. ಬ್ರಾಹ್ಮಣರಲ್ಲಿ ಬುದ್ಧಿವಂತಿಕೆಯುಳ್ಳವ ಹೇಗಾದರೂ ಬದುಕಿಕೊಳ್ಳುತ್ತಿದ್ದಾನೆ. ಇನ್ನು ಹಣವಂತರು ಸ್ವಂತ ಉದ್ಯಮವನ್ನು ಕಟ್ಟಿಕೊಂಡಿದ್ದಾರೆ. ಸಾಮಾನ್ಯರ ಬದುಕು ಈ ಜಾತಿಯಾಧಾರಿತ ಮೀಸಲಾತಿಯ ನಡುವಲ್ಲಿ ಸಿಕ್ಕಿ ನೀರಿನಿಂದ ಮೇಲೆ ಬಂದ ಮೀನಿನಂತೆ ಒದ್ದಾಡುತ್ತಿದೆ. ಅತ್ತ ನೀರಿಗೆ ಹೋಗಲು ದಾರಿಯಲ್ಲ. ಇತ್ತ ನೀರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ.

ಒಕ್ಕಲು ಮಸೂದೆಯಲ್ಲಿ ಕೃಷಿ ಜಾಗವನ್ನು ಪಡೆದುಕೊಂಡವರು ಈಗೇನು ಕೃಷಿ ಮಾಡುತ್ತಿದ್ದಾರೆಯೇ. ಎಲ್ಲಾ ಮಾರಿ ತಿಂದು ದೂರದ ಪಟ್ಟಣಗಳಲ್ಲಿ ಮನೆ ಮಾಡಿಕೊಂಡು ಹಾಯಾಗಿದ್ದಾರೆ. ಸರಕಾರದಿಂದ ಪೇಟೆಗಳಲ್ಲಿ ಸಿಗುವ ಮಾಡ ಎನ್ನುವ ಮನೆಗಳನ್ನು ಸುತಾರಾಂ ಮಾರಲು ಸಾಧ್ಯವಿಲ್ಲ.ಮನೆಯನ್ನು ತೆಗೆದುಕೊಂಡವರಿಗೆ ಸರ್ಕಾರ ಅಂತಹ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಮಾಡಿದೆ. ಅದೇ ಸರ್ಕಾರಕ್ಕೆ ಊಳುವವನೆ ಹೊಲದ ಒಡೆಯ ಎಂದಾಗ ಊಳದಿದ್ದಲ್ಲಿ ಒಡೆಯನಿಗೆ ಆ ಹೊಲ ಸೇರುತ್ತದೆ ಎಂದು ಹೇಳಲು ಬಾಯಿ ಬಂದಿರಲಿಲ್ಲ. ಏಕೆಂದರೆ ಸರಕಾರಕ್ಕೆ ಯಾವಾಗಲೂ ಬ್ರಾಹ್ಮಣರನ್ನು ಹೇಗಾದರೂ ಮಾಡಿ ಗುಂಡಿ ಮಾಡಿ ಹೂತು ಹಾಕಬೇಕು ಎನ್ನುವ ಕೆಟ್ಟ ಯೋಚನೆಯೇ ಇರುತ್ತದೆ.

ಉತ್ತರ ಭಾರತದ ಬ್ರಾಹ್ಮಣರಿಗೆ ಹೋಲಿಸಿದರೆ ದಕ್ಷಿಣ ಭಾರತದ ಬ್ರಾಹ್ಮಣರು ಸ್ವಲ್ಪ ಸ್ಥಿತಿವಂತರಂತೆ ಕಾಣುತ್ತಾರೆ.ಆದರೆ ಈ ಸ್ಥಿತಿ ಇನ್ನು ಬಹುಕಾಲ ಉಳಿಯುವುದಿಲ್ಲ. ಸಾಮಾಜಿಕವಾಗಿ ಎಲ್ಲದರಲ್ಲೂ ಸೋಲುತ್ತಿರುವ ಬ್ರಾಹ್ಮಣ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದು ಕಷ್ಟ. ಜಾತಿಯಾಧಾರಿತ ಮೀಸಲಾತಿಯಿರುವ ತನಕ ಯಾವ ವ್ಯವಸ್ಥೆಯಲ್ಲೂ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ಅಸಾಮಾನ್ಯನಾದವ ಹೇಗಾದರೂ ಬದುಕಿಕೊಳ್ಳುತ್ತಾನೆ. ಆದ್ದರಿಂದ ಇಲ್ಲಿಯ ಬ್ರಾಹ್ಮಣರು ಕೂಡ ಇನ್ನು ಮುಂದೆ ಉತ್ತರ ಭಾರತದ ಬ್ರಾಹ್ಮಣರಂತೆ ಗಾರೆ ಕೆಲಸವನ್ನು ಮಾಡಿಕೊಂಡು, ರಿಕ್ಷಾ ಓಡಿಸಿಕೊಂಡು, ಟಾಯ್ಲೆಟ್ ಬಾತ್ರೂಮುಗಳನ್ನು ಕ್ಲೀನ್ ಮಾಡಿಕೊಂಡು ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.

ಘಜ್ನಿ ಘೋರಿಗಳಂತೆ ಎಲ್ಲಿಯೂ ಕೊಲೆ ಸುಲಿಗೆಗಳನ್ನು ನಡೆಸಲಿಲ್ಲ. ಕ್ಸೇವಿಯರ್ನಂತೆ ಎಲ್ಲಿಯೂ ಕೂಡ ಸಾರ್ವತ್ರಿಕವಾಗಿ ಮತಾಂತರವನ್ನು ಮಾಡಲಿಲ್ಲ.ಇತಿಹಾಸದ ಉದ್ದಗಲಕ್ಕೂ ಕೂಡ ಸಾಮಾಜಿಕವಾದ ಎಲ್ಲ ಬದಲಾವಣೆಯನ್ನು ಕೂಡ ತಾನೇ ಮುಂದೆ ನಿಂತು ಮಾಡಿದ ಒಂದು ಪರಂಪರೆ,ಕಾಲ ಕಸವಾಗಿ ಹೋಗುತ್ತಿದೆ. ಬುದ್ಧ,ಬಸವಣ್ಣ,ಅಂಬೇಡ್ಕರ್,ನಾರಾಯಣ ಗುರು ಯಾರೇ ಆಗಲಿ ಬ್ರಾಹ್ಮಣರ ಮೂಲದಿಂದಲೇ ಬಂದದ್ದು ಎನ್ನುವುದು ಹತ್ತಿರದ ಮನೆಯ ಬ್ರಾಹ್ಮಣನನ್ನು ಕಂಡಾಗ ಯಾರಿಗೂ ಎಣಿಸುವುದೇ ಇಲ್ಲ.ಇಲ್ಲಸಲ್ಲದ ಮೇಲ್ವರ್ಗದ ದಬ್ಬಾಳಿಕೆ ಎನ್ನುವ ಹಳೆ ಕಾಲದ ಅಜ್ಜಿ ಕಥೆಯನ್ನು ಹೇಳಿಕೊಂಡು ಈಗಲೂ ಬ್ರಾಹ್ಮಣರನ್ನು ದೂರುವವರು ಬೇಕಾದಷ್ಟು ಮಂದಿಯಿದ್ದಾರೆ. ಆದರೆ ದುರಂತ ಅವರೆಲ್ಲರೂ ಕೂಡ ಜಾತಿಯ ಆಧಾರದಲ್ಲಿಯೇ ಸ್ಥಾನಮಾನವನ್ನು ಗಿಟ್ಟಿಸಿಕೊಂಡದ್ದು ಎನ್ನುವುದು ಮರೆತಿದ್ದಾರೆ.

ಯಾವ ಕಾಲಕ್ಕೂ ಬ್ರಾಹ್ಮಣರ ಮೇಧಾ ಶಕ್ತಿಯನ್ನು, ಪ್ರಜ್ಞಾಶಕ್ತಿಯನ್ನು ಅಷ್ಟು ಸುಲಭದಲ್ಲಿ ಕೃಷಿ ಜಾಗವನ್ನು ಅಥವಾ ಇನ್ನಿತರ ಅಧಿಕಾರವನ್ನು ಪಡೆದುಕೊಂಡಂತೆ ಗುತ್ತಿಗೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಕಸ್ತೂರಿಯ ಪರಿಮಳ ಎಷ್ಟು ಒಳಗಿಟ್ಟರು ಬಂದೇ ಬರುತ್ತದೆ. ಹೇಗೆ ತುಳಿದರು ಚೆಂಡಿನಂತೆ ಮತ್ತೆ ಹಳೆಯ ರಭಸಕ್ಕಿಂತಲೂ ಹೆಚ್ಚಾಗಿ ಪುಟ್ಟಿದೇಳುವ ಶಕ್ತಿ ಬ್ರಾಹ್ಮಣರಲ್ಲಿ ಇದ್ದೇ ಇದೆ.

ಅದಕ್ಕೆ ಬೇಕಾದ ಅವಕಾಶವನ್ನು ತಾವು ತಾವುಗಳೇ ಸಂಘಟಿತರಾಗಿ ಮಾಡಿಕೊಳ್ಳಲೇಬೇಕು. ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಇಲ್ಲದಿದ್ದರೆ ಅಂತಹ ಸಂಘ ಸಂಸ್ಥೆಗಳು ಇದ್ದರೂ ಪ್ರಯೋಜನವಿಲ್ಲ.

ಗೋಗ್ರಾಸ.. ..ಆಗದಿರಲಿ ಗೋವಿಗೆ  ಅಂತಿಮ "ಗ್ರಾಸ" !ಎರಡು ಘಟನೆಗಳು ಈ ಲೇಖನ ಬರೆಯಲು ಪ್ರೇರಣೆ. ಮೊದಲನೆಯದು ಪಟ್ಟಣದಲ್ಲಿ ಹಸು ಸಾಕಿದವರೊಬ್ಬರ ಕಥೆ...
03/01/2024

ಗೋಗ್ರಾಸ.. ..ಆಗದಿರಲಿ ಗೋವಿಗೆ ಅಂತಿಮ "ಗ್ರಾಸ" !

ಎರಡು ಘಟನೆಗಳು ಈ ಲೇಖನ ಬರೆಯಲು ಪ್ರೇರಣೆ. ಮೊದಲನೆಯದು ಪಟ್ಟಣದಲ್ಲಿ ಹಸು ಸಾಕಿದವರೊಬ್ಬರ ಕಥೆ. ಅವರ ಮನೆಯಲ್ಲಿ ಒಂದು ಗೋವು. ಅಕ್ಕ ಪಕ್ಕದ ಹತ್ತು ಹಲವು ಮನೆಗಳಲ್ಲಿ ಯಾವುದೇ ಗೋವುಗಳಿಲ್ಲ. ಹಬ್ಬದಲ್ಲಿ ಗೋಗ್ರಾಸ ನೀಡಬೇಕಲ್ಲ? ಇವರೂ ಸೇರಿದಂತೆ ೧೨ ಜನ ಇವರ ಮನೆಯಲ್ಲಿನ ಗೋವಿಗೆ ಯಥಾನುಶಕ್ತಿಯಾಗಿ ಭಕ್ತಿಯಿಂದ "ಗೋಗ್ರಾಸ" ನೀಡಿದರು. ಪರಿಣಾಮ?ಹಸು ಅಡ್ಡ ಬಿತ್ತು, ಹೊಟ್ಟೆಯಲ್ಲಿ ಆಮ್ಲತೆ ಉಕ್ಕಿತು, ಹಸುವಿನ ಕಣ್ಣು ಮೇಲೆ ಸಿಕ್ಕಿದವು, ನಿಶ್ಯಕ್ತವಾದ ಹಸು ಯಾವ ಚಿಕಿತ್ಸೆಗೂ ಬಗ್ಗದೇ ಪ್ರಾಣ ಬಿಟ್ಟಿತು.

ಎರಡನೆಯದು ಬಡ ಗೋಪಾಲಕನೊಬ್ಬನ ಕಥೆ. ಆತನ ಮನೆಯಲ್ಲೊಂದು ಹಸು. ಆ ಊರಿನಲ್ಲಿ ಎಲ್ಲಿಯೇ ಹೊಸ ಮನೆಯ ಗೃಹ ಪ್ರವೇಶವಾಗಲಿ ಅಲ್ಲಿ ಇವರದೇ ಹಸು ಮನೆ ಬೆಳಗುವುದು. ಆ ದಿನ ಹೊಸಮನೆಯಲ್ಲಿ ಮನೆಜನದ ಮೊದಲ ಪ್ರವೇಶ ಹಸುವಿನ ಪಾಲಿಗೆ ಕೊನೆಯ ದಿನವಾಯಿತು. ಹಸು ಮನೆ ಪ್ರವೇಶಿಸಿತಲ್ಲ. ಎಲ್ಲರೂ ಅದಕ್ಕೆ ಇಷ್ಟವಾಗಲೆಂದು "ಗೋಗ್ರಾಸ" ಎಂದು ಅನ್ನ, ಪಾಯಸ, ಮೈಸೂರು ಪಾಕ, ಜಿಲೇಬಿ ರಸ ನೀಡಿದ್ದೇ ನೀಡಿದ್ದು. ಇನ್ನೇನು? ಹಸುವಿನ ಹೊಟ್ಟೆ ತುಂಬೆಲ್ಲಾ ಅನ್ನವೋ ಅನ್ನ, ಜಿಲೇಬಿ ಪಾಕ, ಪಾಯಸ. ಹೇಗೆ ಉಳಿದೀತು ಹಸು?. ಎಸಿಡಿಟಿ ಜಾಸ್ತಿಯಾಗಿ ಯಾವುದೇ ಚಿಕಿತ್ಸೆಗೆ ಬಗ್ಗದೇ ಹಸು ಪ್ರಾಣ ಬಿಟ್ಟು ಆತನ ಜೀವನಾಧಾರವನ್ನೇ ಕಸಿದುಕೊಂಡು ಜನರ ಚರ್ಚೆಗೆ "ಗ್ರಾಸ"ವಾಯಿತು.

"ಗೋಗ್ರಾಸ" ಎಂಬುದು ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ವಿಚಾರ. ಗೋವು ಅನೇಕ ಭಾರತೀಯರ ಜೀವನದಲ್ಲಿ ಹಾಸು ಹೊಕ್ಕು. ಅದರ ಹಾಲು,ಮಜ್ಜಿಗೆ, ತುಪ್ಪ, ಗೊಬ್ಬರ ಉಪಯೋಗಿಸದ ಜನರಿಲ್ಲ. ಕಾರಣ ಅದು ಗೋಮಾತೆ, ಕಾಮಧೇನು. ಅಂತಹ ಗೋವಿಗೆ ನಾವು ಕೊಡುವ "ಗೋಗ್ರಾಸ" ಅತ್ಯಂತ ಅಲ್ಪವೇ ಅಗಿದ್ದರೂ ಅದೇ ಕಲ್ಪವೆಂದು ಭಾವಿಸಿ ನೀಡಬೇಕು ಎಂಬುದು ಪ್ರತೀತಿ. ಗೋಗ್ರಾಸ ರೂಪದಲ್ಲಿ ನೀಡುವ ಆಹಾರ ಅದು ಅದಕ್ಕೆ ಸಂಕಟ ತರಬಾರದು. ಗೋಗ್ರಾಸ ನೀಡುವಾಗ ಸಂಸ್ಕೃತದಲ್ಲಿ ಹೇಳುವ ಶ್ಲೋಕ ಒಂದಿದೆ.

ಸುರಭಿಃ ವೈಷ್ಣವಿ ಮಾತ ಸುರುಲೋಕೆ ಮಹೀಯತೆ।
ಗ್ರಾಸಮುಷ್ಟಿಂ ಮಯಾದತ್ತಂ ಸುರಭಿಃ ಪ್ರತಿಗೃಹ್ಯತಾಮ್॥

ಇದರರ್ಥ.. "ಸುರಭಿಯೇ, ನೀನು ವೈಷ್ಣವಿ ತಾಯಿ, ದೇವಲೋಕದಲ್ಲಿಯೂ ಮತ್ತು ಭೂಮಿಯಲ್ಲೂ ಇದ್ದೀಯ.. ನನ್ನಿಂದ ನಿನಗೆ ಕೊಡಲ್ಪಡುವ ಹಿಡಿ ತುತ್ತು ಆಹಾರವನ್ನು ಸ್ವೀಕರಿಸು. ಇಲ್ಲಿ “ಗ್ರಾಸ” ಅಂದರೆ ತುತ್ತು. "ಮುಷ್ಟಿಂ ಎಂದರೆ ಹಿಡಿ. ಅಂದರೆ ನಾವು ಕೊಡುವ ಆಹಾರ ತುತ್ತಿನ ಪ್ರಮಾಣದ್ದಾಗಿರಬೇಕೇ ಹೊರತು ಯಥೇಚ್ಛತೆಯಿಂದ ಕೂಡಿರಬಾರದು. ಗೋಗ್ರಾಸದಲ್ಲಿ ಇರುವ ಅನ್ನ, ಬೆಲ್ಲ, ಅಕ್ಕಿ ಇತ್ಯಾದಿಗಳು ಒಂದೊಂದು ಮುಷ್ಟಿಯಷ್ಟೇ ಇರಬೇಕು ಎಂದು ಶಾಸ್ತ್ರ ಹೇಳುತ್ತದೆ.

ಬೌದ್ಧರ ಪ್ರಕಾರ "ಗೋಗ್ರಾಸ" ಎಂದರೆ ಆಕಳ ಮುಖ. ಗೋಗ್ರಾಸ ಎಂದರೆ ಎಲೆಗಳು, ಕಾಂಡಗಳು ಮತ್ತು ಧಾನ್ಯಗಳು ಸೇರಿದಂತೆ ಸಸ್ಯ ಸಹಿತವಿರುವ ಮೇವು ಎಂದೂ ಅರ್ಥವಿದೆ.

ಗೋವಿಗೆ ಯಥೇಚ್ಛವಾಗಿ ಆಹಾರ ಕೊಡಬೇಕಾಗಿದ್ದು ಅದರ ನೈಸರ್ಗಿಕ ಆಹಾರವಾದ ಹುಲ್ಲು, ಹಿಂಡಿ, ಬೂಸಾ ಇತ್ಯಾದಿಗಳನ್ನು. "ಗೋಗ್ರಾಸ" ಏನಿದ್ದರೂ ಒಂದು ಹಿಡಿ ಮುಷ್ಟಿಯಷ್ಟಿರಬೇಕು ಎಂದು ಶಿವಮೊಗ್ಗದ ನಾಗಸುಬ್ರಮಣ್ಯ ದೇವಾಲಯದ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ Sandesh Upadya ಅಭಿಪ್ರಾಯ ಪಡುತ್ತಾರೆ.

ಇದಲ್ಲದೇ ಗೋಗ್ರಾಸದ ಬಗ್ಗೆ ಕಡಿರುದ್ಯಾವರದ ಶ್ರಿ ಪ್ರಭಾಕರ ಕಾರಂತ್ ಸಹಾ "ಬಾಳೆ ಎಲೆ ಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು (ಹಾಲು ಮೊಸರು ತುಪ್ಪ ಮೊದಲಾದ ಗವ್ಯ ಹೊರತು ಪಡಿಸಿ) ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಡಬೇಕು. ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ ಅರ್ಥವುಳ್ಳ ವಿವಿಧ ಶ್ಲೋಕಗಳನ್ನು ಹೇಳಬೇಕು. ಎಲ್ಲ ಶ್ಲೋಕಗಳಲ್ಲಿಯೂ ಸಹ " ಗ್ರಾಸಮುಷ್ಟಿ ಪ್ರದಾನೇನ ಸ ಮೇ ವಿಷ್ಣುಃ ಪ್ರಸೀದತು" ಎಂಬ ಆಶಯವಿರುತ್ತದೆ. ಗೋಗ್ರಾಸ ನೀಡಬೇಕಾದರೆ ಒಂದು ಮುಷ್ಟಿಯಷ್ಟನ್ನೇ ನೀಡಬೇಕು ಎನ್ನುವುದು ಮೊದಲಿನಿಂದಲೂ ನಡೆದು ಬಂದ ವಾಡಿಕೆ.

ಇದನ್ನು ತಪ್ಪಾಗಿ ಅರ್ಥೈಸಿದವರು ಹುಲ್ಲು ಮತ್ತು ಹಿಂಡಿಗೂ "ಗ್ರಾಸ ಮುಷ್ಟಿಂ" ಮಾಡಿ ಗೋವು ಬಡಕಲಾಗಿ ನೆಲಹಿಡಿದು ಸಾಯುವಂತೆ ಮಾಡುವುದನ್ನೂ ಸಹ ನೋಡಲಾಗಿದೆ.

ಹಾಗೆಂದು ಅಕ್ಕಿ, ಬೇಳೆ ಇತ್ಯಾದಿ ದವಸ ಧಾನ್ಯಗಳನ್ನು ಬೇಕಾದಷ್ಟು ಗೋಮಾತೆಗೆ ನೀಡಿದರೆ ಅದರ ಅಜೀರ್ಣ ಅಥವಾ ಒಮ್ಮೊಮ್ಮೆ ಮರಣವಾಗಿ ಗೋಹತ್ಯಾ ದೋಷ ಬರಲೂಬಹುದು. ಕಾರಣ ಗೋಗ್ರಾಸ ನೀಡಬೇಕಾದರೆ ಹುಶಾರಾಗಿರಬೇಕಾಗಿರುವುದು ವಿಹಿತ.
ಇತ್ತೀಚೆಗೆ ಕೆಲವೊಂದು ಹಸುಗಳು "ಗೋಗ್ರಾಸ" ಜಾಸ್ತಿಯಾಗಿ ಮರಣವನ್ನಪ್ಪಿದ ಘಟನೆಗಳು ಇವೆ. ವಿವಿಧ ಹಬ್ಬಗಳ ಸಮಯದಲ್ಲಿ ಹಸುಗಳಿಗೆ ಗೋಗ್ರಾಸ ನೀಡುವುದು ವಾಡಿಕೆ. ಹಸುಗಳ ಸಂಖ್ಯೆ ಕಡಿಮೆಯಾದ ಈ ಸಮಯದಲ್ಲಿ ಒಂದೇ ಹಸುವಿಗೆ ಅಕ್ಕಿ, ಬೆಲ್ಲ ಇತ್ಯಾದಿ ಶರ್ಕರ ಪಿಷ್ಟ ಹೊಂದಿದ ವಸ್ತುಗಳು ಏಕಕಾಲದಲ್ಲಿ ಉದರಕ್ಕೆ ಸೇರುವ ಸಾಧ್ಯತೆ ಇದೆ. ಹಸುವಿನ ಉದರ ಮನುಷ್ಯರ ಆಹಾರ ಜೀರ್ಣ ಮಾಡಿಕೊಳ್ಳಲು ತಕ್ಕುದಲ್ಲ. ಅದರ ಆಕಾರ ಮತ್ತುವಿನ್ಯಾಸ ಇರುವುದು ಮನುಷ್ಯನಿಗೆ ಬಳಸಲು ಯೋಗ್ಯವಲ್ಲದ ಹುಲ್ಲು ತಿಂದು ಅತ್ಯಂತ ಶ್ರೇಷ್ಟವಾದ ಹಾಲು ನೀಡಲು ಇರುವುದು.

ದನಗಳಿಗೆ ಅಧಿಕ ಆಹಾರ ಬೇಕು. ಜೊತೆಗೆ ಅವು ಒಮ್ಮೆ ತಿಂದ ಆಹಾರವನ್ನು ಬಿಡುವಾದಾಗ ಪುನಃ ಬಾಯಿಗೆ ತಂದುಕೊಂಡು ಮೆಲುಕು ಹಾಕುವ ಮೂಲಕ ಚೆನ್ನಾಗಿ ನುರಿಸಿ ಆಮೇಲೆ ನುಂಗುತ್ತವೆ. ಮನುಷ್ಯರಿಗೆ ಈ ಸೌಲಭ್ಯವಿಲ್ಲ. ಒಮ್ಮೆ ತಿಂದರೆ ಮುಗಿಯಿತು, ಆಹಾರದ ಮುಮ್ಮುಖ ಪ್ರಯಾಣ ಆರಂಭವಾದಂತೆಯೇ. ಆದರೆ ಜಾನುವಾರುಗಳು ಒರಟಾದ ಮತ್ತು ಕಡಿಮೆ ಗುಣಮಟ್ಟದ ಮೇವನ್ನು ತಿಂದು ಜೀರ್ಣಿಸಿಕೊಳ್ಳಲು ವಿಶಿಷ್ಟವಾದ ಜೀರ್ಣಾಂಗವ್ಯೂಹವನ್ನು ಹೊಂದಿವೆ. ಇದರ ರಚನೆ ಮತ್ತು ಕಾರ್ಯವಿಧಾನಗಳು ನಿಜಕ್ಕೂ ಅದ್ಭುತ ಮತ್ತು ಕುತೂಹಲಕರ.
ನಮ್ಮಲ್ಲಿ ಹಿಂದಿನ ಕಾಲದಲ್ಲಿ ದೇಶಿ ತಳಿಗಳನ್ನು ಸಾಕಲಾಗುತ್ತಿತ್ತು. ಸಣ್ಣ ಕರುವಿದ್ದಾಗಲೆ ಅವುಗಳಿಗೆ ಗೋ ಗ್ರಾಸ ನೀಡಿ ಪ್ರೀತಿಯಿಂದ ನೋಡಿಕೊಂಡಾಗ ಮಾತ್ರ ಕರು ಹಾಕಿದಾಗ ಹತ್ತಿರ ಬರಲು, ಹಾಲು ಕರೆಯಲು ಅವಕಾಶ. ಅಪರಿಚಿತರಿಗೆ ಒದೆತವೇ ಗತಿ! ಇವೆಲ್ಲವನ್ನು ತಿಳಿದುಕೊಡು ದಿನಾಲು ಬೆಳಗ್ಗೆ ತಲಾ ಒಂದು ಮುಷ್ಠಿಯಷ್ಟು ಬೆಲ್ಲ ಮತ್ತು ಅಕ್ಕಿಯನ್ನು ಸೇರಿಸಿ ತಾಯಿ ಮಕ್ಕಳಿಗೆ ಕೈ ತುತ್ತು ತಿನ್ನಿಸುವಂತೆ ಸ್ವತಃ ಕೈಯಿಂದಲೇ ನೀಡಿ ಜಾನುವಾರಿನ ಮುಖ ಸವರಿ ನಮಸ್ಕಾರ ಮಾಡುವ ಮುಖಾಂತರ ತಮ್ಮಮನೆಯ ಸದಸ್ಯನಂತೆ ನೋಡಿಕೊಳ್ಳುತ್ತಿದ್ದರು ಎನ್ನುತ್ತಾರೆ ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ: Govind Bhat

ಜಾನುವಾರುಗಳು ಮೇವು, ಹಿಂಡಿ ತಿಂದು ನೀರು ಕುಡಿದು ಬದುಕುತ್ತವೆ. ಮೇಯುವಾಗ ಹಸಿ ಅಥವಾ ಒಣ ಹುಲ್ಲನ್ನು ಆದಷ್ಟು ಗಬಗಬನೆ ಲಗುಬಗೆಯಿಂದ ತಿನ್ನುತ್ತವೆ. ಇದು ಅವು ಹಿಂಸ್ರ ಮೃಗಗಳಿಗೆ ಅಂಜಿ ಮಾಡುವ ಪ್ರಕ್ರಿಯೆ ಇರಬಹುದು. ನಂತರ, ತಿಂದ ಮೇವನ್ನು ವಿರಾಮದ ವೇಳೆಯಲ್ಲಿ ಬಾಯಿಗೆ ಪುನಃ ತಂದು ಜೊಲ್ಲು ಸೇರಿಸಿ ಮೆಲುಕು ಹಾಕುತ್ತವೆ.
ಅವಸರದಲ್ಲಿ ರಾಸು ನುಂಗಿದ ಆಹಾರವು ವಿರಾಮದಲ್ಲಿ ಮೆಲುಕಾಡುವಾಗ ಅಕ್ಕಿ ನೀರು ಒಟ್ಟಿಗೇ ಹಾಕಿ ರುಬ್ಬಿದಂತೆ ಬಾಯಿಯಲ್ಲಿ ಸೃವಿಸುವ ಜೊಲ್ಲುರಸದೊಂದಿಗೆ ಮಿಶ್ರಗೊಳ್ಳುವುದರ ಮೂಲಕ ಜೀರ್ಣಕ್ರಿಯೆ ಆರಂಭಗೊಳ್ಳುತ್ತದೆ. ಹಸುವೊಂದು ದಿನದಲ್ಲಿ 8 ಗಂಟೆಗಳಷ್ಟು ಕಾಲ ಮೆಲುಕುಹಾಕುವುದರಲ್ಲೇ ಕಳೆಯುತ್ತದೆ !. ಆಹಾರ ಸರಿಯಾಗಿ ಜೀರ್ಣವಾಗಬೇಕಾದರೆ ಇದು ಅಗತ್ಯ ಕೂಡಾ. ಈ ಕೆಲಸಕ್ಕಾಗಿ ಬೆಳೆದ ಹಸುವಿನಲ್ಲಿ ದಿನಕ್ಕೆ 150-180 ಲೀಟರಿನಷ್ಟು (4-5 ಬಕೇಟ್) ಜೊಲ್ಲು ಉತ್ಪಾದನೆಯಾಗುತ್ತದೆ. ಹೀಗೆ ಚೆನ್ನಾಗಿ ಅಗಿಯಲ್ಪಟ್ಟ ಜೊಲ್ಲು ಮಿಶ್ರಿತ ಆಹಾರವು ಜಠರದ ನಾಲ್ಕು ಕೋಣೆಗಳಲ್ಲಿ ಮೊದಲನೇ ಹೊಟ್ಟೆಯಾದ ‘ರೂಮೆನ್’ಅಥವಾ " ಮೆಲುಕು ಚೀಲ"ಕ್ಕೆ ಹೋಗುತ್ತದೆ.

ಇದೊಂದು ದೊಡ್ಡ ಉಗ್ರಾಣವಿದ್ದಂತೆ. ತಿಂದಷ್ಟೂ ಹಿಗ್ಗುವ ಚರ್ಮದ ಚೀಲ. ತಿಂದ ಆಹಾರವು 10-12 ತಾಸುಗಳ ಕಾಲ ಇಲ್ಲಿದ್ದು ಸೂಕ್ಷ್ಮಾಣುಗಳಿಂದ ಭಾಗಶಃ ಜೀರ್ಣಗೊಂಡು ಮುಂದೆ ಸಾಗುತ್ತದೆ. ಇಲ್ಲಿ ತಂಗಿರುವಾಗ ಈ ಸೂಕ್ಷ್ಮಾಣುಗಳು ಅದನ್ನು ತಿಂದು ಜೀರ್ಣಿಸುತ್ತವೆ. ಈ ಸೂಕ್ಷ್ಮಾಣುಗಳು ನಿರುಪದ್ರವಿಗಳು. ಜೀರ್ಣಕ್ರಿಯೆಗೆ ಸಹಕಾರಿಗಳು. ಅವುಗಳ ಸಹಾಯದಿಂದಲೇ ಜಾನುವಾರುಗಳು ನಾರು ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯ.

ಹಸು ತನ್ನ ಹೊಟ್ಟೆಯಲ್ಲಿ ಈ ಸೂಕ್ಷ್ಮಾಣುಗಳಿಗೆ ಜಾಗ ನೀಡಿ ಅವುಗಳ ವೃದ್ಧಿಗೆ ಬೇಕಾದ ಆಹಾರವನ್ನು ಕೊಡುತ್ತದೆ. ಬದಲಾಗಿ ಸೂಕ್ಷ್ಮಾಣುಗಳು ಹಸುಗಳ ಆಹಾರವನ್ನು ಶೇ.70 ರಷ್ಟು ಜೀರ್ಣಗೊಳಿಸುತ್ತವೆ. ಅಷ್ಟೇ ಅಲ್ಲದೇ ಇವುಗಳಿಂದ ದೇಹಕ್ಕೆ ಬೇಕಾದ ಪ್ರೋಟೀನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಇನ್ನಿತರ ಪೋಷಕಾಂಶಗಳು ತಯಾರಾಗುತ್ತವೆ. ಹೀಗಾಗಿ ಹಸು ಮತ್ತು ಈ ಸೂಕ್ಷ್ಮಾಣುಜೀವಿಗಳು ಪರಸ್ಪರರ ಉಳಿವಿಗಾಗಿ ಪೂರಕ ಸಂಬಂಧ ಹೊಂದಿವೆ. ಇದಕ್ಕೆ ಒಂದು ರೀತಿಯ ಸಹಬಾಳ್ವೆಯ "ಕೂಡು ಜೀವನ" (ಸಿಂಬಯಾಸಿಸ್) ಅನ್ನಬಹುದು.

ಹಸುವಿನ ಹೊಟ್ಟೆಯಲ್ಲಿ ಮನುಷ್ಯನ ಆಹಾರವಾದ ಅನ್ನ, ಪಾಯಸ, ಜಿಲೇಬಿ ಪಾಕ ಇತ್ಯಾದಿ ಜಾಸ್ತಿ ನೀಡಿದಲ್ಲಿ ಆಮ್ಲೀಯತೆ ಹಠಾತ್ತನೆ ಜಾಸ್ತಿಯಾದರೆ ಈ ಸೂಕ್ಷ್ಮಾಣುಜೀವಿಗಳು ಅವು ಸತ್ತು ಹೋಗುತ್ತವೆ.
ಹಸುವಿಗೆ ಅನೇಕರು ಏಕಕಾಲದಲ್ಲಿ "ಗೋಗ್ರಾಸ" ನೀಡಿದಾಗ ಅಥವಾ ಗೃಹ ಪ್ರವೇಶ ಸಂದರ್ಭದಲ್ಲಿ ಗೋಗ್ರಾಸ ನೀಡುವಾಗ ಒಂದಿಷ್ಟು ಮುಷ್ಟಿ ಗಾತ್ರದಲ್ಲಿ ಶಾಸ್ತ್ರಕ್ಕೆ ತಕ್ಕ ಹಾಗೆ ನೀಡಬೇಕು.

ಗೃಹ ಪ್ರವೇಶದ ಸಂದರ್ಭದಲ್ಲಿ ಹಣ ನೀಡುವುದರ ಜೊತೆ ಹಸುವಿಗಾಗಿ ಒಂದು ಚೀಲ ಹಿಂಡಿ ಮತ್ತು ಒಳ್ಳೆಯ ಹುಲ್ಲು ಕೊಡಿಸಿದಲ್ಲಿ ಗೋಪಾಲಕರು ಗೋವಿಗೆ ಅದನ್ನು ಹಾಕಿಯೇ ಹಾಕುತ್ತಾರೆ. ಹಸುಗಳು ನಗರಗಳಲ್ಲಿ ಮನೆ ಬಾಗಿಲಿಗೆ ಬಂದಾಗ ಅವುಗಳಿಗೆ ಮನೆಯಲ್ಲಿ ಉಳಿದ ಅನ್ನ, ಪಾಯಸ, ಕೊಳೆತ ಹಣ್ಣುಗಳು ಇವುಗಳನ್ನು ಹಾಕುವುದು ಸಹ ಬಹಳ ಸಾಮಾನ್ಯ. ಇದಕ್ಕೆ ಒಗ್ಗಿಕೊಂಡ ಹಸುಗಳು ಜೀರ್ಣಿಸಿಕೊಳ್ಳುತ್ತವೆ. ಇಲ್ಲದಿದ್ದರೆ ಅವುಗಳ ಜೀವಕ್ಕೆ ತೊಂದರೆ.

ಕಾರಣ "ಗೋಗ್ರಾಸ" ಮಾತ್ರ ಹಿಡಿಮುಷ್ಟಿಯಷ್ಟೇ ಇರಲಿ. ಗೋವಿಗೆ ಮಾತ್ರ ಅದರದೇ ನೈಸರ್ಗಿಕ ಆಹಾರವಾದ ಸಾಕಷ್ಟು ಹಸಿರು ಮತ್ತು ಒಣ ಹುಲ್ಲು, ಸಮತೋಲ ಪಶು ಆಹಾರ, ಹಿಂಡಿ, ಬೂಸಾ ಹಾಕಿ ಸಾಕಿ ಅದರ ಕೃಪೆಗೆ ಪಾತ್ರರಾದರೆ ಅದೇ "ಗೋಗ್ರಾಸ"ದ ಆಚರಣೆಯ ಸಾರ್ಥಕಥೆಯಾದೀತು.

ಪ್ರೊ (ಡಾ:) ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

ಅಪಘಾತದಲ್ಲಿ ಗಾಯಗೊಂಡು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನಂದ ಭಟ್ ಹೆಬ್ರಿ ಇವರ ಚಿಕಿತ್ಸೆಗೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್...
20/11/2023

ಅಪಘಾತದಲ್ಲಿ ಗಾಯಗೊಂಡು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನಂದ ಭಟ್ ಹೆಬ್ರಿ ಇವರ ಚಿಕಿತ್ಸೆಗೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ 10,000₹ ಚೆಕ್ ನೋಡಿ ಸಕಾಲದಲ್ಲಿ ಸ್ಪಂದನೆ ನೀಡಲಾಯಿತು.

Click here to contribute : https://rzp.Io/l/hasthapradhacti

Address

Udupi

576101

Telephone

+918660685034

Website

Alerts

Be the first to know and let us send you an email when ಬ್ರಾಹ್ಮಣ ಪ್ರಿಯ - Bramhana priya posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Non Profit Organization?

Share