GRAMS

GRAMS Contact information, map and directions, contact form, opening hours, services, ratings, photos, videos and announcements from GRAMS, Nonprofit Organization, Near GT&TC Collage Opposite Santhe Bazar, Lingsugur.

    WDC 2.0 ದಿನಾಂಕ 28.11.2025 ರಂದು ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ ಭಾಲ್ಕಿ ಹಾಗೂ ಅನುಷ್ಠಾನ ಸಂಸ್ಥೆ ಲಿಂಗಸೂಗುರು  ಸಯೋಗದ ...
01/12/2025

WDC 2.0 ದಿನಾಂಕ 28.11.2025 ರಂದು ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ ಭಾಲ್ಕಿ ಹಾಗೂ ಅನುಷ್ಠಾನ ಸಂಸ್ಥೆ ಲಿಂಗಸೂಗುರು ಸಯೋಗದ ಅಡಿಯಲ್ಲಿ PMKSY WDC 2.0 ಯೋಜನೆ ಅಡಿಯ ವಾಂಜರ್ ಕೇಡ್ ಗ್ರಾಮದಲ್ಲಿ ಜಲಾನಯನ ಮಹೋತ್ಸವ ಕಾರ್ಯಕ್ರಮವನ್ನು ಮಾಡಲಾಯಿತು ಸದರಿ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮಾನ್ಯ ಸಂಸದರು ಬೀದರ್ ಜಿಲ್ಲೆ ಹಾಗೂ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷರು ಹಾಗೂ ಕೃಷಿ ಇಲಾಖೆಯ ಉಪನಿರ್ದೇಶಕರು ಸಹಾಯಕ ಕೃಷಿ ನಿರ್ದೇಶಕರು ಅನುಷ್ಠಾನ ಸಂಸ್ಥೆಯ ಅಧ್ಯಕ್ಷರು ಸಿಇಒ ಗ್ರಾಮದ ಮುಖಂಡರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಇನ್ನಿತರ ಮುಖಂಡರುಗಳು ಹಾಗೂ ಸ್ವಸಹಾಯ ಗುಂಪಿನ ಮಹಿಳೆಯರು ಹಾಗೂ ರೈತರು ಆಗಮಿಸಿದ್ದರು ಮಾನ್ಯ ಸಂಸದರು ಸಸಿ ನೆಡುವುದರ ಮೂಲಕ ಜಲಾನಯನ ಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು.

             ದಿನಾಂಕ 04.11.2025ರಂದು ಬೆಳಿಗ್ಗೆ 11.00 ಗಂಟೆಗೆ ಮಾನವಿ ತಾಲೂಕಿನ ಕಸನದೊಡ್ಡಿ ಬಳ್ಳಟಾಗಿ ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಬ...
05/11/2025

ದಿನಾಂಕ 04.11.2025ರಂದು ಬೆಳಿಗ್ಗೆ 11.00 ಗಂಟೆಗೆ ಮಾನವಿ ತಾಲೂಕಿನ ಕಸನದೊಡ್ಡಿ ಬಳ್ಳಟಾಗಿ ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಬರುವ ಮಲ್ಲಟ ಗ್ರಾಮದ ನಾಡ ಕಚೇರಿಯ ಆವರಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಕೃಷಿ ಇಲಾಖೆ ರಾಯಚೂರು ಹಾಗೂ ಗ್ರಾಮ್ಸ್ ಸಂಸ್ಥೆ ಲಿಂಗಸಗೂರು ಇವರ ಸಹಯೋಗದ ಅಡಿಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯ ಕುರಿತು ಗ್ರಾಮ ಸಭೆಯನ್ನು ಮಾಡಲಾಯಿತು.. ಸದರಿ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಕೃಷಿ ಇಲಾಖೆಯ ಎಟಿಎಂ ಅನುಷ್ಠಾನ ಸಂಸ್ಥೆಯ ಸಿಇಓ ಅವರು ಮತ್ತು ಉಪಜಲಾನಯನ ಯೋಜನೆಯ ತಂಡದ ನಾಯಕರು ಐಜಿಎ ಪರಿಣಿತರು ಜಲಾನಯನ ಸಹಾಯಕರು ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು, ಬಳಕೆದಾರ ಗುಂಪಿನ ರೈತ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸದರಿ ಸಭೆಯ ಉದ್ದೇಶ ಯೋಜನೆಯ ಕುರಿತು ಗ್ರಾಮ್ಸ್ ಸಂಸ್ಥೆಯ ಮಹೇಶ್ ಕುಮಾರ್ ಮಾತನಾಡುತ್ತಾ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ 15 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಅದರಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕು ಕೂಡ ಒಂದಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಕಸನದೊಡ್ಡಿ ಬಲ್ಲಟಗಿ ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಸುಮಾರು 2500 ಆಕ್ಟರ್ ಪ್ರದೇಶಗಳಲ್ಲಿ ಯೋಜನೆಯ ಕಾರ್ಯನಿರ್ವಹಿಸುತ್ತದೆ ಸುಮಾರು 9 ಹಳ್ಳಿಗಳು ಈ ಯೋಜನೆ ಅಡಿಯಲ್ಲಿ ಬರುತ್ತದೆ ಮುಖ್ಯವಾಗಿ
1. ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಲು ರೈತರ ಜಮೀನುಗಳಿಗೆ ಉಪಚಾರಗಳನ್ನು ಮಾಡುವುದು ಮಳೆಯ ಹಸಿರುತ ಭೂಮಿಯ ಉತ್ಪಾದಕತೆ ಸಾಮರ್ಥ್ಯವನ್ನು ಹೆಚ್ಚಿಸುವುದು.
2. ಯೋಜನಾ ವ್ಯಾಪ್ತಿಯ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಪುನಶ್ಚೇತನ ಗೊಳಿಸುವುದು ಮತ್ತು ನೀರಿನ ಮಟ್ಟವನ್ನು ಸುಧಾರಣೆಯಾಗುವಂತೆ ಕ್ರಮವಹಿಸುವುದು.
3. ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡುವುದರ ಮುಖಾಂತರ ಮಣ್ಣಿನ ಸವಕಳಿಯನ್ನು ತಡೆಗಟ್ಟುವುದು.
4. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಚಟುವಟಿಕೆಗಳ ಬಳಕೆಗಾಗಿ ಮಳೆ ನೀರು ಕೊಯ್ಲು ರಚನೆಗಳ ಮೂಲಕ ನೀರನ್ನು ಸಂರಕ್ಷಣೆ ಮಾಡುವುದು.
5. ಕೃಷಿ ಉತ್ಪಾದನೆಯನ್ನು ಸುಸ್ಥಿರಗೊಳಿಸುವುದು ಹಾಗೂ ರೈತ ಸಮುದಾಯದ ಜೀವನ ಮಟ್ಟವನ್ನು ಸುಧಾರಣೆ ಮಾಡುವುದು
ಇನ್ನು ಮುಂತಾದ ವಿಷಯಗಳನ್ನು ತಿಳಿಸುತ್ತಾ ಯೋಜನೆ ಅಡಿಯಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡುವುದರ ಮುಖಾಂತರ ಅವರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಕಾರ್ಯವನ್ನು ಈ ಯೋಜನೆ ಮುಖಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು. ತದನಂತರ ಮಾತನಾಡಿದ ಮಂಜುನಾಥ ರಿವಾರ್ಡ್ ಯೋಜನೆಯು ತಂಡದ ನಾಯಕರು ಮಾತನಾಡುತ್ತಾ ಜಲಾನಯನ ಸಮಿತಿಯು ಈ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ದಾಖಲೆಗಳನ್ನು ನಿರ್ವಹಣೆ ಮಾಡಲು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು. ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ (RAWE) ಕುಮಾರಿ. ಸಿಂಧು ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

      ದಿನಾಂಕ 04.11.2025ರಂದು ಬೆಳಿಗ್ಗೆ 11.00 ಗಂಟೆಗೆ ಮಾನವಿ ತಾಲೂಕಿನ ಕಸನದೊಡ್ಡಿ ಬಳ್ಳಟಾಗಿ ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಬರುವ ಮಲ್...
04/11/2025

ದಿನಾಂಕ 04.11.2025ರಂದು ಬೆಳಿಗ್ಗೆ 11.00 ಗಂಟೆಗೆ ಮಾನವಿ ತಾಲೂಕಿನ ಕಸನದೊಡ್ಡಿ ಬಳ್ಳಟಾಗಿ ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಬರುವ ಮಲ್ಲಟ ಗ್ರಾಮದ ನಾಡ ಕಚೇರಿಯ ಆವರಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಕೃಷಿ ಇಲಾಖೆ ರಾಯಚೂರು ಹಾಗೂ ಗ್ರಾಮ್ಸ್ ಸಂಸ್ಥೆ ಲಿಂಗಸಗೂರು ಇವರ ಸಹಯೋಗದ ಅಡಿಯಲ್ಲಿ *ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2.0* ಯೋಜನೆಯ ಕುರಿತು ಗ್ರಾಮ ಸಭೆಯನ್ನು ಮಾಡಲಾಯಿತು.. ಸದರಿ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಕೃಷಿ ಇಲಾಖೆಯ ಎಟಿಎಂ ಅನುಷ್ಠಾನ ಸಂಸ್ಥೆಯ ಸಿಇಓ ಅವರು ಮತ್ತು ಉಪಜಲಾನಯನ ಯೋಜನೆಯ ತಂಡದ ನಾಯಕರು ಐಜಿಎ ಪರಿಣಿತರು ಜಲಾನಯನ ಸಹಾಯಕರು ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು, ಬಳಕೆದಾರ ಗುಂಪಿನ ರೈತ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸದರಿ ಸಭೆಯ ಉದ್ದೇಶ ಯೋಜನೆಯ ಕುರಿತು ಗ್ರಾಮ್ಸ್ ಸಂಸ್ಥೆಯ ಮಹೇಶ್ ಕುಮಾರ್ ಮಾತನಾಡುತ್ತಾ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ 15 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಅದರಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕು ಕೂಡ ಒಂದಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಕಸನದೊಡ್ಡಿ ಬಲ್ಲಟಗಿ ಉಪಜಲಾನಯನ ಯೋಜನಾ ವ್ಯಾಪ್ತಿಯಲ್ಲಿ ಸುಮಾರು 2500 ಆಕ್ಟರ್ ಪ್ರದೇಶಗಳಲ್ಲಿ ಯೋಜನೆಯ ಕಾರ್ಯನಿರ್ವಹಿಸುತ್ತದೆ ಸುಮಾರು 9 ಹಳ್ಳಿಗಳು ಈ ಯೋಜನೆ ಅಡಿಯಲ್ಲಿ ಬರುತ್ತದೆ ಮುಖ್ಯವಾಗಿ
1. ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಲು ರೈತರ ಜಮೀನುಗಳಿಗೆ ಉಪಚಾರಗಳನ್ನು ಮಾಡುವುದು ಮಳೆಯ ಹಸಿರುತ ಭೂಮಿಯ ಉತ್ಪಾದಕತೆ ಸಾಮರ್ಥ್ಯವನ್ನು ಹೆಚ್ಚಿಸುವುದು.
2. ಯೋಜನಾ ವ್ಯಾಪ್ತಿಯ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಪುನಶ್ಚೇತನ ಗೊಳಿಸುವುದು ಮತ್ತು ನೀರಿನ ಮಟ್ಟವನ್ನು ಸುಧಾರಣೆಯಾಗುವಂತೆ ಕ್ರಮವಹಿಸುವುದು.
3. ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡುವುದರ ಮುಖಾಂತರ ಮಣ್ಣಿನ ಸವಕಳಿಯನ್ನು ತಡೆಗಟ್ಟುವುದು.
4. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಚಟುವಟಿಕೆಗಳ ಬಳಕೆಗಾಗಿ ಮಳೆ ನೀರು ಕೊಯ್ಲು ರಚನೆಗಳ ಮೂಲಕ ನೀರನ್ನು ಸಂರಕ್ಷಣೆ ಮಾಡುವುದು.
5. ಕೃಷಿ ಉತ್ಪಾದನೆಯನ್ನು ಸುಸ್ಥಿರಗೊಳಿಸುವುದು ಹಾಗೂ ರೈತ ಸಮುದಾಯದ ಜೀವನ ಮಟ್ಟವನ್ನು ಸುಧಾರಣೆ ಮಾಡುವುದು
ಇನ್ನು ಮುಂತಾದ ವಿಷಯಗಳನ್ನು ತಿಳಿಸುತ್ತಾ ಯೋಜನೆ ಅಡಿಯಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡುವುದರ ಮುಖಾಂತರ ಅವರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಕಾರ್ಯವನ್ನು ಈ ಯೋಜನೆ ಮುಖಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು. ತದನಂತರ ಮಾತನಾಡಿದ ಮಂಜುನಾಥ ರಿವಾರ್ಡ್ ಯೋಜನೆಯು ತಂಡದ ನಾಯಕರು ಮಾತನಾಡುತ್ತಾ ಜಲಾನಯನ ಸಮಿತಿಯು ಈ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ದಾಖಲೆಗಳನ್ನು ನಿರ್ವಹಣೆ ಮಾಡಲು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು. ಯೋಜನೆಯ ತಂಡದ ನಾಯಕರಾದ ಮುಕಪ್ಪ ಅವರು ಮಾತನಾಡುತ್ತಾ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಜಲಾನಯನ ಕಾರ್ಯಕಾರಿ ಸಮಿತಿಯು ಬಹಳ ಮುಖ್ಯವಾಗಿರುತ್ತದೆ. ಪ್ರತಿ ತಿಂಗಳು ಈ ಒಂದು ಸಮಿತಿಯು ಸಭೆ ಮಾಡುವುದರ ಮುಖಾಂತರ ಇಲಾಖೆಗೆ ಮತ್ತು ಅಧಿಕಾರಿ ವರ್ಗಕ್ಕೆ ಸಹಕಾರ ನೀಡಬೇಕು ಇದರಿಂದ ಯೋಜನೆಯು ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ತದನಂತರ ಗ್ರಾಮ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ ಮಾಡಿ ಯೋಜನಾ ವ್ಯಾಪ್ತಿಯ ಪ್ರದೇಶವನ್ನು ರಂಗೋಲಿ ಮುಖಾಂತರ ಹಾಕಿ ರೈತರಿಗೆ ತಮ್ಮ ಜಮೀನುಗಳಲ್ಲಿ ಉಪಚಾರ ಮಾಡುವುದರ ಕುರಿತು ಯೋಜನೆಯನ್ನು ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿದರು. ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ (RAWE) ಕುಮಾರಿ. ಸಿಂಧು ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

    ಇಂದು 31.10.2025 ರಂದು ಮಾನ್ಯ ಜಿಲ್ಲಾಧಿಕಾರಿಗಳ ರಾಯಚೂರು ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಪ್ರತ...
31/10/2025

ಇಂದು 31.10.2025 ರಂದು ಮಾನ್ಯ ಜಿಲ್ಲಾಧಿಕಾರಿಗಳ ರಾಯಚೂರು ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಮಾಡಲಾಯಿತು. ಸಭೆಯಲ್ಲಿ ರೈತ ಉತ್ಪಾದಕರ ಸಂಸ್ಥೆಯು ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಪ್ರಾರಂಭಿಸುವ ಕುರಿತು ಮತ್ತು ಆಸಕ್ತ ರೈತ ಉತ್ಪಾದಕರ ಕಂಪನಿಯ ವಿಷಯದ ಕುರಿತು ಚರ್ಚೆ ಮಾಡಲಾಯಿತು. ಸದರಿ ಸಭೆಯಲ್ಲಿ ಮಾನ್ಯ ಜಂಟಿ ಕುಂಟ ನಿರ್ದೇಶಕರು ರಾಯಚೂರು ಹಾಗೂ ನಬಾರ್ಡ್ ಸಂಸ್ಥೆಯ DDM ಕೃಷಿ ವಿಶ್ವವಿದ್ಯಾಲಯದ ಪ್ರತಿನಿಧಿಗಳು, GRAMS ಸಂಪನ್ಮೂಲ ಸಂಸ್ಥೆಯ ಸಿಇಒ ಮತ್ತು ವಿವಿಧ ರೈತ ಉತ್ಪಾದಕ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.

    PMKSY WDC 2.0 ಯೋಜನೆಯ ಮೂಲಕ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಮಕಂಡಿ ಗ್ರಾಮದಲ್ಲಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ (PRA) ಮಾಡಲಾಯಿತು...
31/10/2025

PMKSY WDC 2.0 ಯೋಜನೆಯ ಮೂಲಕ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಮಕಂಡಿ ಗ್ರಾಮದಲ್ಲಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ (PRA) ಮಾಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮತ್ತು ಕೃಷಿ ಅಧಿಕಾರಿಗಳು ಅನುಷ್ಠಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮದ ಮುಖಂಡರು ಸ್ವಸಹಾಯ ಗುಂಪಿನ ಮಹಿಳೆಯರು ಮತ್ತು ಯೋಜನೆಯ ತಂಡದ ನಾಯಕರು ಆದಾಯ ಉತ್ಪನ್ನ ಚಟುವಟಿಕೆ ಪರಿಣಿತರು ಮತ್ತು ಕಂಪ್ಯೂಟರ್ ಆಪರೇಟರ್ ಜಲಾನಯನ ಸಹಾಯಕರು ಭಾಗವಹಿಸಿದರು.

    PMKSY WDC-2.0 ಯೋಜನೆ ಅಡಿಯಲ್ಲಿ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನಲ್ಲಿ ವಿತರಣೆ ಮಾಡಲಾಯಿತು.
31/10/2025

PMKSY WDC-2.0 ಯೋಜನೆ ಅಡಿಯಲ್ಲಿ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನಲ್ಲಿ ವಿತರಣೆ ಮಾಡಲಾಯಿತು.

ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ ಮಾನ್ವಿ ಇವರ ಸಹಯೋಗದಡಿಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2....
28/10/2025

ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ ಮಾನ್ವಿ ಇವರ ಸಹಯೋಗದಡಿಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅಡಿಯಲ್ಲಿ ಯೋಜನಾ ವ್ಯಾಪ್ತಿಯ ಗ್ರಾಮಗಳಲ್ಲಿ ರೈತ ಸಮುದಾಯಕ್ಕೆ ಮತ್ತು ಗ್ರಾಮಸ್ಥರಿಗೆ ಯೋಜನೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ಮಾಡಲಾಯಿತು.

ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ ಕುಷ್ಟಗಿ ಸಹಯೋಗದ ಅಡಿಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2.0...
28/10/2025

ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ ಕುಷ್ಟಗಿ ಸಹಯೋಗದ ಅಡಿಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯ ಮೂಲಕ ಯೋಜನಾ ವ್ಯಾಪ್ತಿಯ ಗ್ರಾಮಗಳಲ್ಲಿ ಗೋಡೆ ಬರಹಗಳ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡುವ ಸಲುವಾಗಿ ಗೋಡೆಬರಹವನ್ನು
ಬರೆಯಲಾಯಿತು.

      ಇಂದು ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಯೋಗದ ಅಡಿಯಲ್ಲಿ ಇರುವ ರಿವಾರ್ಡ್ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಸ್ವಸಹಾಯ ಗುಂಪು...
19/08/2025

ಇಂದು ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಯೋಗದ ಅಡಿಯಲ್ಲಿ ಇರುವ ರಿವಾರ್ಡ್ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಸ್ವಸಹಾಯ ಗುಂಪುಗಳಿಗೆ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾನ್ಯ ಉಪ ಕೃಷಿ ನಿರ್ದೇಶಕರು 2, ಇವರ ಅಧ್ಯಕ್ಷತೆಯಲ್ಲಿ ಕ್ರಿಯಾಯೋಜನೆ ತಯಾರಿಸುವ ಸಭೆ ಮಾಡಲಾಯಿತು, ಸದರಿ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು ಎಸ್ ಬಿ ಐ ಬ್ಯಾಂಕಿನ R SETI ಅಧಿಕಾರಿಗಳು ಹಾಗೂ ಅನುಷ್ಠಾನ ಸಂಸ್ಥೆಯ ಸಿಇಒ ಹಾಗೂ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಕೃಷಿ ಅಧಿಕಾರಿಗಳು ತಂಡದ ನಾಯಕರು ತರಬೇತಿ ಸಂಯೋಜಕರು ಹಾಜರಿದ್ದರು.

ಇಂದು ವಾರ್ಡ್ ನಂಬರ್ 12 ಉರುಕುಂದಿ ಈರಣ್ಣ ದೇವಸ್ಥಾನದ ಹತ್ತಿರ ಮಹಾನಗರ ಪಾಲಿಕೆ ರಾಯಚೂರು ಹಾಗೂ ಗ್ರಾಮ್ಸ್ ಸಂಸ್ಥೆ, ರಾಯಚೂರು ವತಿಯಿಂದ  ಘನ ತ್ಯ...
30/07/2025

ಇಂದು ವಾರ್ಡ್ ನಂಬರ್ 12 ಉರುಕುಂದಿ ಈರಣ್ಣ ದೇವಸ್ಥಾನದ ಹತ್ತಿರ ಮಹಾನಗರ ಪಾಲಿಕೆ ರಾಯಚೂರು ಹಾಗೂ ಗ್ರಾಮ್ಸ್ ಸಂಸ್ಥೆ, ರಾಯಚೂರು ವತಿಯಿಂದ ಘನ ತ್ಯಾಜ್ಯ ವಸ್ತು ನಿರ್ವಹಣೆ, ಸುಸ್ಥಿರ ನೈರ್ಮಲ್ಯ ಮತ್ತು ಬಳಸಿದ ನೀರು ನಿರ್ವಹಣೆ ಕುರಿತು ವೀರಗಾಸೆಯ ಮುಖಾಂತರ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮವನ್ನು ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ, ರಾಯಚೂರು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾನ್ಯ ಆಯುಕ್ತರು ಉರುಕುಂದಿ ಈರಣ್ಣ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ಕುರಿತು ಮಾತನಾಡುತ್ತಾ, ಇಲ್ಲಿರುವ ಕುಟುಂಬ ಸದಸ್ಯರು ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸಬೇಕು ಶೌಚಾಲಯ ಬಳಸದೆ ಇರುವುದರಿಂದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಮತ್ತು ಮನೆಯಲ್ಲಿ ಹಿರಿಯರು ಮಕ್ಕಳು ಇರುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಇದರಿಂದ ಮಕ್ಕಳಿಗೆ ಅಪೌಷ್ಟಿಕತೆ ಮತ್ತು ಸಾಮಾಜಿಕ ಭದ್ರತೆಯ ಕೊರತೆ ಉಂಟಾಗುತ್ತದೆ ಎಂದು ತಿಳಿದರು. ತದನಂತರ ಮಾತನಾಡಿದ ಮಾನ್ಯ ಉಪ ಆಯುಕ್ತರು (ಆಡಳಿತ ಅಭಿವೃದ್ಧಿ) ಶ್ರೀಮತಿ ಮೇನಕಾ ಪಟೆಲ್ ಮಹಾನಗರ ಪಾಲಿಕೆ ಅವರು ಮಾತನಾಡುತ್ತಾ ಇಲ್ಲಿರುವ ಪ್ರತಿಯೊಬ್ಬ ಮಹಿಳೆಯು ಶೌಚಾಲಯವನ್ನು ಬಳಸಬೇಕು ವೈಯಕ್ತಿಕ ಶೌಚಾಲಯ ಇಲ್ಲದಿದ್ದಲ್ಲಿ ಸಮುದಾಯ ಶೌಚಾಲಯವನ್ನು ಬಳಸಿ ಎಂದು ಹೇಳುತ್ತಾ ರಾಯಚೂರು ನಗರವನ್ನು ಸುಂದರ ಹಾಗೂ ಸ್ವಚ್ಛ ನಗರವನ್ನಾಗಿಸಿ ಬದಲಾವಣೆ ಮಾಡಲು ತಿಳಿಸಿದರು. ತದನಂತರ ವೀರಗಾಸೆಯ ಮುಖಾಂತರ ಶೌಚಾಲಯದ ಬಳಕೆಯ ಅನುಕೂಲಗಳು ಬಹಿರುದೆಸೆ ಮಾಡುವುದರ ಮುಖಾಂತರ ಯಾವ ರೀತಿಯಾಗಿ ಕುಟುಂಬ ಸದಸ್ಯರ ಮೇಲೆ ಅದರಲ್ಲೂ ಮಹಿಳೆಯರ ಮೇಲೆ ಹಿರಿಯರ ಮೇಲೆ ಚಿಕ್ಕ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸವಿವರ ವಾದ ಮಾಹಿತಿಯನ್ನು ನಾಟಕದ ಮೂಲಕ ತಿಳಿಸಿದರು ತದನಂತರ ಗಣ ತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಪ್ರಾಥಮಿಕವಾಗಿ ಉತ್ಪಾದನೆಯಾಗುವ ಮನೆಯಲ್ಲಿ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಮಹಾನಗರ ಪಾಲಿಕೆಯ ವಾಹನಕ್ಕೆ ಪ್ರತಿದಿನ ನೀಡುವುದರಿಂದ ತಮ್ಮ ವಾರ್ಡಿನ ಮತ್ತು ಗಲ್ಲಿಯ ಸ್ವಚ್ಛತೆ ಕಾಪಾಡಿಕೊಳ್ಳಬಹುದು ಇದರಿಂದ ಹಲವಾರು ರೋಗರೋಜನೆಗಳನ್ನು ತಡೆಗಟ್ಟಬಹುದು ಮತ್ತು ಒಣ ಕಸವನ್ನು ಬೇರ್ಪಡಿಸಿ ವಾಹನಕ್ಕೆ ನೀಡುವುದರಿಂದ ಅದನ್ನು ಮರುಬಳಕೆ ಮಾಡಬಹುದು ಇದರಿಂದ ಸಹ ಪರಿಸರ ಸುಚಿತ್ವಕ್ಕೆ ನಾವೆಲ್ಲರೂ ಕೈಜೋಡಿಸಿದಂತಾಗುತ್ತದೆ ಎಂದು ವೀರಗಾಸೆ ಬೀದಿ ನಾಟಕದ ಮುಖಾಂತರ ಸಾರ್ವಜನಿಕರಿಗೆ ಮನಮುಟ್ಟುವಂತೆ ಮಾಹಿತಿಯನ್ನು ತಿಳಿಸಿದರು. ತದನಂತರ ಮಾತನಾಡಿದ ಗ್ರಾಮ್ಸ್ ಸಂಸ್ಥೆಯ ಮಹೇಶ್ ಕುಮಾರ್ ಇವರು ಪ್ರತಿಯೊಂದು ಕುಟುಂಬವು ನೀರನ್ನು ಮಿತವಾಗಿ ಬಳಸಬೇಕು ನೀರನ್ನು ಯಥೇಚ್ಛವಾಗಿ ಹಾಳುಮಾಡಬಾರದು. ಪ್ರತಿಯೊಬ್ಬರು ಶೌಚಾಲಯಕ್ಕೆ ಹೋಗಿ ಬಂದ ನಂತರ ಮತ್ತು ಊಟಕ್ಕಿಂತ ಮುಂಚೆ ಸೋಪಿನಿಂದ ಕಡ್ಡಾಯವಾಗಿ ಕೈ ತೊಳೆಯಬೇಕು ಇದರಿಂದ ರೋಗಗಳನ್ನು ತಡೆಗಟ್ಟಬಹುದು ಎಂದು ವಿವರವಾಗಿ ತಿಳಿಸಿದರು. ಸದರಿ ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರರು ಮತ್ತು ಆರೋಗ್ಯ ನಿರೀಕ್ಷಕರು ಮೇಲ್ವಿಚಾರಕರು, ವಾರ್ಡಿನ ಪ್ರಮುಖರು ಸಮುದಾಯದ ಜನರು ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Honorable Director, Watershed Development Department, Bangalore, visited the Jana Shikshan Sansthan Yadgir project offic...
07/05/2025

Honorable Director, Watershed Development Department, Bangalore, visited the Jana Shikshan Sansthan Yadgir project office being implemented by GRAMS and received information about the programs under the project. At this time, Joint Agriculture Director, Deputy Agriculture Director, Jana Shikshan Sansthan President, GRAMS CEO, Project Officers, Assistant Agriculture Director and Technical Officers were present..

ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಬಳ್ಳಾರಿ ಹಾಗೂ ಗ್ರಾಮ್ಸ್ ಸಂಸ್ಥೆಯ ಮುಖಾಂತರ ಬಳ್ಳಾರಿ ಜಿಲ್ಲೆಯ ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗ...
13/03/2025

ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಬಳ್ಳಾರಿ ಹಾಗೂ ಗ್ರಾಮ್ಸ್ ಸಂಸ್ಥೆಯ ಮುಖಾಂತರ ಬಳ್ಳಾರಿ ಜಿಲ್ಲೆಯ ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ (CEPMIZ)ಬಳ್ಳಾರಿ ಹಾಗೂ ಸಂಡೂರ ತಾಲೂಕಿನ ಯೋಜನಾ ವ್ಯಾಪ್ತಿಯ ಗ್ರಾಮಗಳಲ್ಲಿ ಹರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಯಿತು. ಸದರಿ ಕಾರ್ಯಕ್ರಮಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿ ವರ್ಗದವರು ಹಾಗೂ ಅನುಷ್ಠಾನ ಸಂಸ್ಥೆಯ ಸಿಬ್ಬಂದಿಗಳು ಗ್ರಾಮದ ಪ್ರಮುಖ ಜನ ಪ್ರತಿನಿಧಿಗಳು ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Address

Near GT&TC Collage Opposite Santhe Bazar
Lingsugur
584122

Opening Hours

10am - 5am

Alerts

Be the first to know and let us send you an email when GRAMS posts news and promotions. Your email address will not be used for any other purpose, and you can unsubscribe at any time.

Contact The Organization

Send a message to GRAMS:

Share