14/09/2022
ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ಗಂಗಾವತಿಯ ಎಸ್.ಕೆ.ಎನ್.ಜಿ ಕಾಲೇಜು ಆವರಣದಲ್ಲಿ ಪ್ರತಿಭಟನೆ
>>ಕೊಪ್ಪಳದ ಪ್ರಥಮ ದರ್ಜೆ ಪದವಿ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿ ಒಕ್ಕೂಟ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಭಾಗಿ
ಕೊಪ್ಪಳ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗಂಗಾವತಿಯ ಶ್ರೀ ಕೊಲ್ಲಿನಗೇಶ್ವರ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವು ಹೆಚ್ಚುಗೊಳಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಮನವಿಯನ್ನು ನೀಡಲಾಯಿತು.
ಪರೀಕ್ಷಾ ಶುಲ್ಕವನ್ನು ಮೊದಲು ವಿಶ್ವವಿದ್ಯಾಲಯ 1300 ರೂ. ಕ್ಕೆ ಹೆಚ್ಚಿಸಿದ್ದು ಈಗ ವಿದ್ಯಾರ್ಥಿಗಳು ಪ್ರತಿಭಟಿಸಿದಕ್ಕೆ 100 ರೂ. ಕಡಿತಗೊಳಿಸಿ 1200 ರೂ. ಕಟ್ಟುವಂತೆ ಹೇಳಿದ್ದು ಇರುತ್ತದೆ, ಆದರೆ ಕಳೆದ ಬಾರಿ ಪಡೆದ ಪರೀಕ್ಷಾ ಶುಲ್ಕ 150-200 ರೂ. ರಂತೆಯೇ ಈ ಬಾರಿಯೂ ನಿಗದಿಪಡಿಸಲು ಕೋರಿ ಒತ್ತಾಯಿಸಲಾಯಿತು.
ನಂತರ ಪ್ರಾಂಶುಪಾಲರು ಪ್ರತಿಕ್ರಿಯಿಸಿ ಇಂದು ವಿಶ್ವವಿದ್ಯಾಲಯದಲ್ಲಿ ಸಭೆವಿದ್ದು ಅಲ್ಲಿ ಮಾತನಾಡಿ ಕಡಿಮೆಗೊಳಿಸುವುದರ ಬಗ್ಗೆ ಹೇಳುತ್ತೇನೆ ಎಂದು ಆಶ್ವಾಸನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ಸದಸ್ಯರಾದ ಫೈಸಲ್, ಖದರ್, ಅಷ್ಫಾಕ್, ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.