GIMS Kannada Balaga

GIMS Kannada Balaga ಜಿಮ್ಸ್ ಕನ್ನಡ ಬಳಗ ಕನ್ನಡಿಗರ ಹೆಮ್ಮೆ

ಕವಿತಾ ಕಲಾ ತಂಡ, ಮೈಸೂರು ಹಾಗೂ ಕೆ. ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಹೆಮ್ಮೆಯ ಕನ್ನಡ ಬಳಗದ ಸಹಯೋಗದೊಂದಿಗೆ ಶ್ರೀ ಗಣೇಶ ಅಮೀ...
14/07/2026

ಕವಿತಾ ಕಲಾ ತಂಡ, ಮೈಸೂರು ಹಾಗೂ ಕೆ. ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಹೆಮ್ಮೆಯ ಕನ್ನಡ ಬಳಗದ ಸಹಯೋಗದೊಂದಿಗೆ ಶ್ರೀ ಗಣೇಶ ಅಮೀನಗಡ ಅವರ “ಕೌದಿ” ನಾಟಕ ಪ್ರದರ್ಶನ ದಿನಾಂಕ ೧೪.೦೭.೨೦೨೬ ರಂದು ಜರುಗಿತು. ಶ್ರೀಮತಿ ಭಾಗ್ಯಶ್ರೀ ಪಾಳಾ ಅವರ ಅಭಿನಯ ಎಲ್ಲರ ಮನ ಮುಟ್ಟುವಂತಿತ್ತು. ಇಂದಿನ ಆಧುನಿಕ ಜಗತ್ತಿನಲ್ಲಿ ಕೌದಿ ತಯಾರಿಸುವವರ ಬದುಕು ಬವಣೆಯ ಬಗ್ಗೆ ಸುಂದರವಾಗಿ ನಾಟಕ ಮೂಡಿ ಬಂದಿತು. ಕಾರ್ಯಕ್ರಮದಲ್ಲಿ ನಗರದ ಖ್ಯಾತ ಸಾಹಿತಿಗಳಾದ ಪ್ರೊ. ಚಂದ್ರಶೇಖರ ವಸ್ತ್ರದ ಸರ್, ನಮ್ಮ ಸಂಸ್ಥೆಯ ನಿರ್ದೇಶಕರಾದ ಡಾ. ಬಸವರಾಜ ಬೊಮ್ಮನಹಳ್ಳಿ ಸರ್, ವೈದ್ಯಕೀಯ ಅಧೀಕ್ಷಕರಾದ ಡಾ. ವಿನಾಯಕ ಪಂಚಗಾರ ಸರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಬಿ. ಸಿ. ಕರಿಗೌಡರ ಸರ್, ಪ್ರಭಾರ ಪ್ರಾಂಶುಪಾಲರಾದ ಡಾ. ಅರವಿಂದ ಕೆ. ಸರ್, ಕನ್ನಡ ಬಳಗದ ಅಧ್ಯಕ್ಷರಾದ ಡಾ. ಶಂಭು ಪುರದ ಸರ್, ಉಪಾಧ್ಯಕ್ಷರಾದ ಡಾ. ಶಕುಂತಲಾ ಅರಮನಿ ಮೇಡಂ ಹಾಗೂ ಕಾರ್ಯದರ್ಶಿಗಳಾದ ಕು. ಪ್ರಮೋದ, ಕು. ಅರ್ಚನಾ ಸೇರಿದಂತೆ ಅನೇಕ ವೈದ್ಯರುಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.

ಗದುಗಿನ ಕೆ. ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಕನ್ನಡ ಬಳಗ ಆಯೋಜಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್...
22/02/2026

ಗದುಗಿನ ಕೆ. ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಕನ್ನಡ ಬಳಗ ಆಯೋಜಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ರಾಘವೇಂದ್ರ ಆಚಾರ್ಯ ಅವರು ಆಗಮಿಸಿದ್ದರು. ಇನ್ನೋರ್ವ ಅತಿಥಿಗಳಾಗಿ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಡಾ. ಸುರೇಶ ವಿ. ನಾಡಗೌಡರ ಸರ್ ಅವರು ಆಗಮಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಬಸವರಾಜ ಬೊಮ್ಮನಹಳ್ಳಿ ಅವರು, ವೈದ್ಯಕೀಯ ಅಧೀಕ್ಷಕರಾದ ಡಾ. ರೇಖಾ ಸೋನಾವನೆ ಅವರು, ಕನ್ನಡ ಬಳಗದ ಕಾರ್ಯಾಧ್ಯಕ್ಷರಾದ ಡಾ. ಶಂಭು ಪುರದ ಅವರು, ಉಪಾಧ್ಯಕ್ಷರಾದ ಡಾ. ಶಕುಂತಲಾ ಅರಮನಿ ಅವರು, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕು. ರೋಹನ, ಕು. ಅಪೂರ್ವ, ಕನ್ನಡ ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಕು. ಪ್ರಮೋದ, ಕು. ಅರ್ಚನಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 💛❤️

09/02/2026
*ಕೆ. ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ* ಹೆಮ್ಮೆಯ *ಕನ್ನಡ ಬಳಗ* ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಹಾಗೂ ವೈವಿಧ್ಯತ...
09/02/2026

*ಕೆ. ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ* ಹೆಮ್ಮೆಯ *ಕನ್ನಡ ಬಳಗ* ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಹಾಗೂ ವೈವಿಧ್ಯತೆಯಿಂದ ಕನ್ನಡದ ಹಬ್ಬ
*”ಕಲಾಸ್ಮೃತಿ - ೨೦೨೬”*
*’ಕಲೆ ಮತ್ತು ಸಂಸ್ಕೃತಿಯ ಸಮಾಗಮ’* ಆಯೋಜಿಸಲಾಗಿದೆ.

ಇದೇ ತಿಂಗಳು *ಫೆಬ್ರುವರಿ ೧೧* ರಂದು *ಬುಧವಾರ ಸಂಜೆ ೫ ಗಂಟೆಗೆ* ಸಂಸ್ಥೆಯ *ರಂಗಮಂದಿರ (Amphitheater)* ನಲ್ಲಿ ಕಾರ್ಯಕ್ರಮ ಜರುಗಲಿದೆ.

ಕನ್ನಡದ ಖ್ಯಾತ *ಹಾಸ್ಯ ಕಲಾವಿದರಾದ* ರಾಯಚೂರಿನವರಾದ *ಶ್ರೀ ರಾಘವೇಂದ್ರ ಆಚಾರ್ಯ* ಅವರು ನಮ್ಮನ್ನು ನಕ್ಕು ನಗಿಸಿ ರಂಜಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ *ಪ್ರೊ. ಡಾ. ಸುರೇಶ ವಿ. ನಾಡಗೌಡರ* ಮಾನ್ಯ ಕುಲಪತಿಗಳು, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರು ಆಗಮಿಸಲಿದ್ದಾರೆ.

*ಮಾನ್ಯ ನಿರ್ದೇಶಕರು, ಪ್ರಾಂಶುಪಾಲರು, ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ* ಉಪಸ್ಥಿತಿಯಲ್ಲಿ ಸಮಾರಂಭ ಜರುಗಲಿದೆ.

ಜೊತೆಗೆ *ಸೋಮವಾರ ಹಾಗೂ ಮಂಗಳವಾರ ಸಂಜೆ ೫ ಗಂಟೆಯಿಂದ* *ವಿದ್ಯಾರ್ಥಿಗಳಿಗೆ* ಹಾಗೂ *ಶಿಕ್ಷಕರಿಗೆ* ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

*ಗುರುವಾರದಂದು ಸಂಜೆ ೫ ರಿಂದ* ವಿದ್ಯಾರ್ಥಿಗಳಿಂದ ವಿವಿಧ ಸುಂದರ *ಸಾಂಸ್ಕೃತಿಕ ಕಾರ್ಯಕ್ರಮಗಳು* ಜರುಗಲಿವೆ

ತಾವೆಲ್ಲರೂ ಈ *ಕನ್ನಡ ಹಬ್ಬದಲ್ಲಿ* ಉತ್ಸಾಹದಿಂದ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡಾಭಿಮಾನಿಗಳಲ್ಲಿ ಸವಿನಯ ವಿನಂತಿ.

ಸ್ವಾಗತ ಕೋರುವವರು
*ಕನ್ನಡ ಬಳಗದ ಸರ್ವ ಸದಸ್ಯರು*💛❤️

Address

Gadag Institute Of Medical Sciences
Gadag
582103

Website

Alerts

Be the first to know and let us send you an email when GIMS Kannada Balaga posts news and promotions. Your email address will not be used for any other purpose, and you can unsubscribe at any time.

Contact The Organization

Send a message to GIMS Kannada Balaga:

Shortcuts

Share