05/06/2026
" #ಪ್ರಿಪೇಡ್ ಮರಣ"
ಬೆಂಗಳೂರಿನ ಬ್ಯಾಟರಾಯನಪುರ. 70 ವರ್ಷದ ನಾರಾಯಣಪ್ಪ. ರಿಟೈರ್ಡ್ ಬಸ್ ಕಂಡಕ್ಟರ್. ಹೆಂಡತಿ ಲಕ್ಷ್ಮಿ 5 ವರ್ಷದ ಹಿಂದೆ ತೀರಿಕೊಂಡಳು. ಇಬ್ಬರು ಮಕ್ಕಳು - ಮಗ ರಮೇಶ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್, ಮಗಳು ಸುಮಾ ದುಬೈನಲ್ಲಿ ನರ್ಸ್.
ನಾರಾಯಣಪ್ಪ ಒಬ್ಬಂಟಿ. ತಿಂಗಳಿಗೆ 18 ಸಾವಿರ (ಪೆನ್ಷನ್ ಮತ್ತು ಇತರ ಆದಾಯ).ಅದರಲ್ಲಿ 8ಸಾವಿರ ಮನೆ ಬಾಡಿಗೆ. ಉಳಿದ 10 ಸಾವಿರದಲ್ಲಿ ಔಷಧಿ, ಊಟ, ಕರೆಂಟ್ ಬಿಲ್.
ಪ್ರತಿ ಭಾನುವಾರ ಮಕ್ಕಳಿಗೆ ವೀಡಿಯೋ ಕಾಲ್. "ಹೇಗಿದ್ದೀರಪ್ಪಾ?" ಅಂತ ಕೇಳಿದರೆ ಇಬ್ಬರೂ ಒಂದೇ ಉತ್ತರ: "ಬ್ಯುಸಿ ಡ್ಯಾಡ್. ಮತ್ತೆ ಮಾತಾಡೋಣ."
ನಾರಾಯಣಪ್ಪನಿಗೆ 2 ವರ್ಷದಿಂದ ಕಿಡ್ನಿ ಪ್ರಾಬ್ಲಮ್. ವಾರಕ್ಕೆ 2 ಸಲ ಡಯಾಲಿಸಿಸ್. ಒಂದು ಸಲಕ್ಕೆ 2 ಸಾವಿರ. ತಿಂಗಳಿಗೆ 16 ಸಾವಿರ ಖರ್ಚು. ಪೆನ್ಷನ್ 18 ಸಾವಿರ ಮಾತ್ರ.
ಡಾಕ್ಟರ್ ಹೇಳಿದರು: "ನಾರಾಯಣಪ್ಪ, ಟ್ರಾನ್ಸ್ಪ್ಲಾಂಟ್ ಮಾಡಿದರೆ ಉಳೀತೀರಿ. 10 ಲಕ್ಷ ಖರ್ಚು."
ನಾರಾಯಣಪ್ಪ ನಕ್ಕ: "ಡಾಕ್ಟ್ರೇ, ನನ್ನ ಜೀವಕ್ಕೆ 10 ಲಕ್ಷ ರೇಟಾ? ನನ್ನ ಮಗ ತಿಂಗಳಿಗೆ 5 ಲಕ್ಷ ಸಂಪಾದನೆ ಮಾಡ್ತಾನೆ. ಆದ್ರೆ ಅವನಿಗೆ 5 ನಿಮಿಷ ಫೋನ್ ಮಾಡೋಕೆ ಟೈಮ್ ಇಲ್ಲ. 10 ಲಕ್ಷ ಎಲ್ಲಿ ಕೊಡ್ತಾನೆ?"
ನಾರಾಯಣಪ್ಪ ಒಂದು ಡಿಸಿಷನ್ ತಗೊಂಡರು. ಡಯಾಲಿಸಿಸ್ ನಿಲ್ಲಿಸಿದರು. ಮಕ್ಕಳಿಗೆ ಹೇಳಲಿಲ್ಲ. "ಸುಮ್ನೆ ಟೆನ್ಷನ್ ಯಾಕೆ?" ಅಂತ.
ಬದಲಾಗಿ ಒಂದು ಡೈರಿ ತಗೊಂಡರು. "ಪ್ರಿಪೇಡ್ ಮರಣ" ಅಂತ ಹೆಸರಿಟ್ಟರು.
ಮೊದಲ ಪುಟದಲ್ಲಿ ಬರೆದರು:
"ನನ್ನ ಸಾವಿಗೆ ನಾನೇ ಅಡ್ವಾನ್ಸ್ ಪೇ ಮಾಡ್ತಿದ್ದೀನಿ. ಜಿಯೋ , ಏರ್ಟೆಲ್ ಥರ ನನ್ನ ಲೈಫ್ಗೂ ರಿಚಾರ್ಜ್ ಬೇಕು. ಆದ್ರೆ ಯಾರೂ ಮಾಡಲ್ಲ. ಹಾಗಾಗಿ ನಾನೇ ಮಾಡ್ಕೋತಿದ್ದೀನಿ."
ಪ್ರತಿದಿನ ಏನಾದ್ರೂ ಒಂದನ್ನು "ಪ್ರಿಪೇಡ್" ಮಾಡೋಕೆ ಶುರು ಮಾಡಿದರು.
ದಿನ 1: ತನ್ನ ಫೋಟೋ ತಗೊಂಡು, ಫ್ರೇಮ್ ಹಾಕಿಸಿ, ಅದಕ್ಕೆ ಹಾರ ತಂದು ಇಟ್ಟರು. ಕೆಳಗೆ ಬರೆದರು - "ಪೇಡ್".
ದಿನ 2: ಸ್ಮಶಾನಕ್ಕೆ ಹೋಗಿ ತನಗಾಗಿ ಜಾಗ ನೋಡಿ ಬಂದರು. ಹುಡುಗನಿಗೆ 500 ಅಡ್ವಾನ್ಸ್ ಕೊಟ್ಟರು. "ಪೇಡ್".
ದಿನ 3: ಹೆಣ ಸುಡೋಕೆ hಕಟ್ಟಿಗೆ ಆರ್ಡರ್ ಮಾಡಿದರು. ₹3000 "ಪೇಡ್ ".
ದಿನ 4: ತಿಥಿಗೆ ಬ್ರಾಹ್ಮಣರಿಗೆ ದಕ್ಷಿಣೆ ಕವರ್ ಮಾಡಿ ಇಟ್ಟರು. "ಪೇಡ್ ".
ದಿನ 5: ಮಕ್ಕಳಿಗೆ ಕೊನೆ ಲೆಟರ್ ಬರೆದರು. ಪೋಸ್ಟ್ ಮಾಡಲಿಲ್ಲ. ಟ್ರಂಕ್ನಲ್ಲಿಟ್ಟರು. "ಪೇಡ್ ".
20 ದಿನ ಕಳೀತು. ನಾರಾಯಣಪ್ಪನ ಸ್ಥಿತಿ ಗಂಭೀರ ಆಯ್ತು. ನೆರೆಮನೆಯ ಪಾಪಣ್ಣ ಆಸ್ಪತ್ರೆಗೆ ಸೇರಿಸಿದ.
ಡಾಕ್ಟರ್ ರಮೇಶನಿಗೆ ಫೋನ್ ಮಾಡಿದರು: "ನಿಮ್ಮ ತಂದೆಗೆ ಲಾಸ್ಟ್ ಸ್ಟೇಜ್. ಕಿಡ್ನಿ ಫೇಲ್. 48 ಗಂಟೆ ಅಷ್ಟೇ. ಬೇಗ ಬನ್ನಿ."
ರಮೇಶ: "ಡಾಕ್ಟರ್, ನಾನು ಪ್ರಾಜೆಕ್ಟ್ ಡೆಲಿವರಿನಲ್ಲಿದ್ದೀನಿ. 3 ವಾರ ಬೇಕು. ವಿಡಿಯೋ ಕಾಲ್ ಮಾಡಿ. ನಾನು ಅವರ ಹತ್ತಿರ ಮಾತನಾಡುತ್ತೇನೆ."
ಡಾಕ್ಟರ್ ಶಾಕ್ ಆದರು. ಸುಮಾಗೆ ಫೋನ್ ಮಾಡಿದರು. ಅವಳೂ ಸೇಮ್: "ಡಾಕ್ಟರ್, ಫ್ಲೈಟ್ ಟಿಕೆಟ್ 1 ಲಕ್ಷ. ಸದ್ಯ ಆಗಲ್ಲ. ಹಣ ಕಳಿಸ್ತೀನಿ. ಒಳ್ಳೆಯ ಟ್ರೀಟ್ಮೆಂಟ್ ಕೊಡಿ."
ಡಾಕ್ಟರ್ ನಾರಾಯಣಪ್ಪನ ಹತ್ರ ಬಂದು ಹೇಳಿದರು: "ಅಯ್ಯಾ, ನಿಮ್ಮ ಮಕ್ಕಳಿಗೆ ಹೇಳಿದ್ದೀನಿ."
ನಾರಾಯಣಪ್ಪ ನಿಧಾನವಾಗಿ ನಕ್ಕರು. ನರ್ಸ್ಗೆ ಸನ್ನೆ ಮಾಡಿ ಡೈರಿ ತರಿಸಿದರು. ಕೊನೆ ಪುಟ ತೆರೆದರು.
ಬರೆದಿದ್ದರು:
"ಡಯಾಲಿಸಿಸ್ - ನಿಲ್ಲಿಸಿದ್ದೇನೆ . ಪೇಡ್ .
ಮಕ್ಕಳ ನಿರೀಕ್ಷೆ - . ಪೇಡ್ .
ಜೀವ - ಟುಮಾರೋ ಸ್ಟಾಪ್ . ಆಲ್ರೆಡಿ ಪೇಡ್ ."
ಕೆಳಗೆ ಇನ್ನೊಂದು ಸಾಲು:
"ನನ್ನ ಸಾವಿಗೆ ನಾನೇ ರಿಚಾರ್ಜ್ ಮಾಡಿಕೊಂಡೆ. ಮಿಸ್ಸೆಡ್ ಕಾಲ್ ಕೊಡೋರು ಯಾರೂ ಇಲ್ಲ. ಹಾಗಾಗಿ ಫುಲ್ ಟಾಕ್ ಟೈಮ್ ಬಳಸಿ ಬಿಟ್ಟೆ."
ನಾರಾಯಣಪ್ಪ ಅದೇ ರಾತ್ರಿ ತೀರಿಕೊಂಡರು. ಕೈಯಲ್ಲಿ ಡೈರಿ, ಮುಖದಲ್ಲಿ ಸಮಾಧಾನ.
ಪಾಪಣ್ಣ ರಮೇಶನಿಗೆ ಫೋನ್ ಮಾಡಿದ: "ಸಾರ್, ನಿಮ್ಮ ತಂದೆ ಹೋದರು."
"ಓಹ್... ಓಕೆ . ಬಾಡಿ ಅನ್ನು ಮಾರ್ಚರಿಯಲ್ಲಿ ಇಡಿ. ನಾನು 3 ವಾರ ಬಿಟ್ಟು ಬಂದು ಪ್ರೊಸೀಜರ್ ಮಾಡ್ತೀನಿ. ಕ್ರೀಮೆಷನ್ ಪ್ಯಾಕೇಜ್ ಇದ್ದರೆ ಬುಕ್ ಮಾಡಿ. ಮನಿ ಟ್ರಾನ್ಸ್ಫರ್ ಮಾಡ್ತೀನಿ."
ಪಾಪಣ್ಣನಿಗೆ ಕೋಪ ಬಂತು. ಫೋನ್ ಕಟ್ ಮಾಡಿ, ಹಳ್ಳಿಯವರನ್ನು ಕರೆದ. ಎಲ್ಲ ಸೇರಿ ನಾರಾಯಣಪ್ಪನ ಅಂತ್ಯಸಂಸ್ಕಾರ ಮಾಡಿದರು.
ಕಟ್ಟಿಗೆ? ನಾರಾಯಣಪ್ಪನೇ "ಪೇಡ್ " ಮಾಡಿದ್ದರು.
ಜಾಗ? ನಾರಾಯಣಪ್ಪನೇ "ಪೇಡ್ " ಮಾಡಿದ್ದರು.
ಬ್ರಾಹ್ಮಣರ ದಕ್ಷಿಣೆ? ನಾರಾಯಣಪ್ಪನೇ "ಪೇಡ್ " ಮಾಡಿದ್ದರು.
ಒಂದೇ ಒಂದು ರೂಪಾಯಿ ಯಾರೂ ಖರ್ಚು ಮಾಡಲಿಲ್ಲ. "ಪ್ರಿಪೇಡ್ ಮರಣ" - ನಿಜ ಆಯ್ತು.
13ನೇ ದಿನದ ತಿಥಿ ಕೂಡ ಹಳ್ಳಿಯವರೇ ಮಾಡಿದರು. ನಾರಾಯಣಪ್ಪ "ಪೇಡ್ " ಮಾಡಿದ್ದ ಕವರನ್ನೇ ಉಪಯೋಗಿಸಿದರು.
3 ವಾರಕ್ಕೆ ಸುರೇಶ್ ಮತ್ತು ಸುಮಾ ಬಂದರು. ಮನೆ ಬೀಗ ಹಾಕಿತ್ತು. ಪಾಪಣ್ಣ ಕೀ ಕೊಟ್ಟ.
ಮನೆ ಒಳಗೆ ಹೋದರೆ ಟೇಬಲ್ ಮೇಲೆ 2 ಕವರ್. ಒಂದು "ರಮೇಶನಿಗೆ", ಇನ್ನೊಂದು "ಸುಮಾಗೆ". ಜೊತೆಗೆ "ಪ್ರಿಪೇಡ್ ಮರಣ" ಡೈರಿ.
ಸುರೇಶ್ ಕವರ್ ತೆರೆದ. ಒಳಗೆ 500 ರೂಪಾಯಿ ಮತ್ತು ಒಂದು ಚೀಟಿ:
"ಮಗನೇ ರಮೇಶ ,
ನೀನು ಅಮೆರಿಕದಿಂದ ಬರೋ ಫ್ಲೈಟ್ ಟಿಕೆಟ್ 1 ಲಕ್ಷ. ನನ್ನ ಹೆಣ ನೋಡೋಕೆ ಅಷ್ಟು ದುಡ್ಡು ವೇಸ್ಟ್ ಮಾಡಬೇಡ ಅಂತ 500 ಇಟ್ಟಿದ್ದೀನಿ. ಇದು ನಿನ್ನ ಬಸ್ ಚಾರ್ಜ್. ನನ್ನ ಸಮಾಧಿಗೆ ಬಂದು 2 ನಿಮಿಷ ನಿಂತು ಹೋಗು. ನಿನ್ನ ಟೈಮ್ಗೆ ನಾನು 'ಪೇಡ್' ಮಾಡಿದ್ದೀನಿ.
ಇಂತಿ, ನಿನ್ನ ಪ್ರಿಪೇಡ್ ಅಪ್ಪ."
ಸುಮಾ ಕವರ್ ತೆರೆದಳು. ಅದರಲ್ಲೂ 500 ರೂಪಾಯಿ ಮತ್ತು ಚೀಟಿ:
"ಮಗಳೇ ಸುಮಾ,
ನೀನು ನರ್ಸ್. ದಿನಾ ನೂರು ಜನರ ಸೇವೆ ಮಾಡ್ತೀಯಾ. ಆದ್ರೆ ನಿನ್ನ ಅಪ್ಪನ ಡಯಾಲಿಸಿಸ್ಗೆ ಬರೋಕೆ ಆಗಲಿಲ್ಲ. ಪರವಾಗಿಲ್ಲ. ಈ 500 ತಗೋ. ನನ್ನ ಸಮಾಧಿ ಮುಂದೆ ಒಂದು ಹಾರ ಹಾಕು. ಡ್ಯೂಟಿ ಮುಗಿದ ಮೇಲೆ ಬಂದರೂ ನಡೆಯುತ್ತೆ. ನಾನು ವೇಟ್ ಮಾಡಲ್ಲ. ಆಲ್ರೆಡಿ 'ಪೇಡ್ ' ಅಂಡ್ ಗಾನ್ .
ಇಂತಿ, ನಿನ್ನ ಪ್ರಿಪೇಡ್ ಅಪ್ಪ."
ನಾರಾಯಣಪ್ಪ
ಇಬ್ಬರೂ ಡೈರಿ ಓದಿದರು. ಕೊನೆ ಪುಟದಲ್ಲಿ ಕೆಂಪು ಅಕ್ಷರದಲ್ಲಿ:
"ಮಕ್ಕಳೇ, ನನ್ನ ಸಾವಿಗೆ ನಾನೇ ರಿಚಾರ್ಜ್ ಮಾಡಿಕೊಂಡೆ. ಯಾಕೆ ಗೊತ್ತಾ?
ನಿಮ್ಮ ಪ್ರೀತಿಗೆ 'ಇನ್ಕಮಿಂಗ್ ಕಾಲ್ ಫ್ರೀ ' ಇತ್ತು. ಆದ್ರೆ ನೀವು ಒಂದು 'ಮಿಸ್ಸೆಡ್ ಕಾಲ್ ' ಕೂಡ ಕೊಡಲಿಲ್ಲ.
ಹಾಗಾಗಿ ನಾನೇ 'ಔಟಗೋಯಿಂಗ್' ಆಗಿ ಬಿಟ್ಟೆ. ಬ್ಯಾಲೆನ್ಸ್ ಜೀರೋ . ವ್ಯಾಲಿಡಿಟಿ ಮುಗಿದಿದೆ. ನಂಬರ್ ನಾಟ್ ರಿಚಬಲ್ - ಫೋರೆವೆರ್ ."
ರಮೇಶ ಮತ್ತು ಸುಮಾ ಸಮಾಧಿ ಮುಂದೆ ಬಿದ್ದು ಅತ್ತರು. ಊರವರು ನೋಡಿ ಹೇಳಿದರು: "ಈಗ ಅತ್ತು ಏನ್ ಪ್ರಯೋಜನ? ಅವರು ಬದುಕಿದ್ದಾಗ 5 ನಿಮಿಷ ಟೈಮ್ ಕೊಟ್ಟಿದ್ರೆ, ಈ 500 ರೂಪಾಯಿ ಚೀಟಿ ಬರೆಯೋ ಅವಶ್ಯಕತೆ ಇರಲಿಲ್ಲ."
ರಮೇಶ ಬೆಂಗಳೂರಲ್ಲಿ "ಪ್ರಿಪೇಡ್ ಪಿತೃ ಕೇರ್ " ಅನ್ನೋ NGO ನಡೆಸುತ್ತಾನೆ. ಒಂಟಿ ವಯಸ್ಸಾದವರಿಗೆ ಉಚಿತ ಅರೋಗ್ಯ ತಪಾಸಣೆ, ಉಚಿತ ಊಟ.
NGO ನ ಬೋರ್ಡ್ ಮೇಲೆ ಬರೆದಿದೆ:
"ನಿಮ್ಮ ಅಪ್ಪ-ಅಮ್ಮನ ಜೀವಕ್ಕೆ ರಿಚಾರ್ಜ್ ಮಾಡಿ. ಮಿಸ್ಸೆಡ್ ಕಾಲ್ ಆದರೆ, ಲೈಫಟೈಂ ವ್ಯಾಲಿಡಿಟಿ ಕಳೆದುಹೋಗುತ್ತೆ.
ನಂತರ ಎಷ್ಟೇ ಟಾಪ್ -ಅಪ್ ಮಾಡಿದ್ರೂ ನೆಟ್ವರ್ಕ್ ಸಿಗಲ್ಲ."
ನೀತಿ: ಅಪ್ಪ-ಅಮ್ಮ ಪ್ರಿಪೇಡ್ ಸಿಮ್ ಥರ. ರೀಚಾರ್ಜ್ ಮಾಡದಿದ್ದರೆ ಒಂದು ದಿನ ನಾಟ್ ರೀಚಬಲ್ ಆಗಿ ಬಿಡ್ತಾರೆ. ಆಗ ಸ್ಮಶಾನದಲ್ಲಿ ಟವರ್ ಸಿಗಲ್ಲ.
"ಬ್ಯುಸಿ " ಅನ್ನೋದು ಕಾರಣ ಅಲ್ಲ.. ಇವತ್ತು ನಿಮ್ಮ ಅಪ್ಪ-ಅಮ್ಮಂಗೆ ಒಂದು "ಮಿಸ್ಸೆಡ್ ಕಾಲ್ " ಕೊಡಿ... ಅವರು "ಕಾಲ್ ಬ್ಯಾಕ್ " ಮಾಡೋ ವಯಸ್ಸಲ್ಲಿ ಇದ್ದಾರೆ.
ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರು, ಎಷ್ಟೇ ದುಡೀತಿದ್ದರು ಪೋಷಕರ ಕೊನೆಗಾಲದಲ್ಲಿ ಪ್ರೀತಿಯಿಂದ ನೋಡಿಕೊಳ್ಳುವುದು, ಮುಕ್ತಿಗಾಣಿಸುವುದು ಪ್ರತಿ ಮಕ್ಕಳ ಕರ್ತವ್ಯ.
ಈ ಕಥೆ ನಿಮಗೆ ಇಷ್ಟವಾದರೆ #ಲೈಕ್
#ಕಾಮೆಂಟ್ & #ಶೇರ್ ಮಾಡಿ
#ಸುರೇಶಪಟ್ಟಣಗೆರೆ
ಕೃಪೆ:
kaduru ಅವರ ಫೇಸ್ಬುಕ್ ವಾಲ್ ನಿಂದ ನಕಲಿಸಿದ್ದು.