15/08/2025
*ಸ್ವಾತಂತ್ರ್ಯ ದಿನಾಚರಣೆ*
ಕುಲಾಲ ಸಂಘ ಬೆಂಗಳೂರು ವತಿಯಿಂದ ಇಂದು 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಘದ ಆಂದ್ರಹಳ್ಳಿ ಕಛೇರಿಯ ಆವರಣದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಬಿ.ಲೀಲಾ ಸುಂದರ್ ಮಾಸ್ಟರ್ ಮತ್ತು ಶ್ರೀಮತಿ ಉಮಾವತಿ ಈಶ್ವರ ಮೂಲ್ಯರವರು ಸೇರಿರುವ ಗಣ್ಯರ, ಸಂಘದ ಸದಸ್ಯರ ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಲೀಲಾ ಸುಂದರ್ ಮತ್ತು ಉಮಾವತಿ ಈಶ್ವರ್ ರವರನ್ನು ಶಾಲು, ಹಾರ, ಫಲಪುಷ್ಪಗಳೊಂದಿಗೆ ಗೌರವಿಸಲಾಯಿತು. ಅತಿಥಿಗಳು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷರುಗಳಾದ ಕೃಷ್ಣಪ್ಪ ಕಣ್ವತೀರ್ಥ, ಬಿ.ಮಾಧವ ಕುಲಾಲ್, ಜಿ.ಈಶ್ವರ ಮೂಲ್ಯ, ವಿಠಲ್ ಕನೀರ್ ತೋಟ, ಪುರುಷೋತ್ತಮ ಚೇಂಡ್ಲಾ, ಎ.ಎನ್.ಕುಲಾಲ್ ಮಾತನಾಡಿದರು.
ಸಭಿಕರಲ್ಲಿ ಚಿನ್ನಪ್ಪ ಮಡಿಕೇರಿ ಮತ್ತು ಮಹೇಶ್ ಮೂಲ್ಯರವರು ಮಾತನಾಡಿದರು.
ಅಧ್ಯಕ್ಷರಾದ ಶ್ರೀ ದಿವಾಕರ ಮೂಲ್ಯರವರು ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ಸಂಘವು ಹಮ್ಮಿಕೊಂಡಿರುವ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಸಂಘದ ಆಂದ್ರಹಳ್ಳಿಯ ನೋಂದಾಯಿತ ಕಛೇರಿ, ಉತ್ತರ ಹಳ್ಳಿಯ ಶಾಖಾ ಕಛೇರಿಯ ಜೊತೆಗೆ ಈಗ ಸಂಘದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಗರದ ಮಧ್ಯ ಭಾಗದಲ್ಲಿ (ರಾಜಾಜಿನಗರದ 5 ನೇ ಬ್ಲಾಕ್) ನೂತನವಾಗಿ ಆಡಳಿತಾತ್ಮಕ ಕಛೇರಿಯನ್ನು ಆರಂಭಿಸಿರುವುದರ ಬಗ್ಗೆ ತಿಳಿಸಿ, ಸಂಘದ ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ವಿನಂತಿಸಿದರು.
ಮಹಿಳಾ ಘಟಕದ ಸಂಚಾಲಕಿಯರಾದ ಶೀಮತಿ ಅನುಸೂಯ ಕೃಷ್ಣಪ್ಪ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಅನಿತಾ ಹರೀಶ್ ಮತ್ತು ಶ್ರೀಮತಿ ವಿನಯಾ ದಿವಾಕರ್ ರವರು ದೇಶ ಭಕ್ತಿ ಗೀತೆ ಹಾಡಿದರು.
ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಆಶಾನಂದ್ ಕುಲಶೇಖರ ರವರು ಧನ್ಯವಾದಗಳನ್ನು ಸಮರ್ಪಿಸಿದರು.
ಧ್ವಜಾರೋಹಣದ ನಂತರ ಎಲ್ಲರಿಗೂ ಸಿಹಿ ತಿಂಡಿ, ಲಘು ಉಪಹಾರದ ಜೊತೆಗೆ ಆಟಿ (ಆಷಾಡ) ತಿಂಗಳ ವಿಶೇಷ ತಿಂಡಿ ಪತ್ರೊಡೆ ಮತ್ತು ಕಣಿಲೆ ಪಲ್ಯದ ವ್ಯವಸ್ಥೆ ಮಾಡಲಾಯಿತು.
ಇಂದಿನ ಕಾರ್ಯಕ್ರಮಕ್ಕೆ ಸಿಹಿ ತಿಂಡಿಯ ವ್ಯವಸ್ಥೆ ಮಾಡಿದ ಶ್ರೀ ರಮೇಶ್ ಬಂಟ್ವಾಳರವರಿಗೆ, ಪತ್ರೊಡೆ ಮತ್ತು ಕಣಿಲೆ ಪಲ್ಯದ ವ್ಯವಸ್ಥೆ ಮಾಡಿದ ಶ್ರೀಮತಿ ಜ್ಯೋತಿ ಎನ್.ಕುಲಾಲ್ ಮತ್ತು ಶ್ರೀ ಎ.ಎನ್. ಕುಲಾಲ್ ರವರಿಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಮಾಜ ಬಾಂಧವರಿಗೆ,
ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
🙏🙏🙏